ETV Bharat / state

"ಸ್ವಾವಲಂಬಿ ಭಾರತ" ಯೋಜನೆಯಿಂದ ಮುಂಚೂಣಿ ದೇಶಗಳ ಸಾಲಿಗೆ ಭಾರತ: ಡಿ.ವಿ.ಸದಾನಂದಗೌಡ

ಮಹಾಮಾರಿ ಕೊರೊನಾ ಹಿನ್ನೆಲೆ ಕೇಂದ್ರ ಸರ್ಕಾರ ಘೋಷಿಸಿರುವ "ಸ್ವಾವಲಂಬಿ ಭಾರತ" ಯೋಜನೆಯನ್ನು ಹಾಡಿ ಹೊಗಳಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಇದು ಒಂದು "ಐತಿಹಾಸಿಕ ಯೋಜನೆ"ಯಾಗಿ ದೇಶದ ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.

author img

By

Published : May 15, 2020, 9:27 PM IST

DV Sadananda Gowda reaction about Atmanirbhar Bharat project
ಸಂಗ್ರಹ ಚಿತ್ರ

ಬೆಂಗಳೂರು/ನವದೆಹಲಿ: ಜಾಗತಿಕ ಮಹಾಮಾರಿ ಕೊರೊನಾ ಎಸೆದ ಸವಾಲನ್ನು ವರವಾಗಿ ಪರಿವರ್ತಿಸಲು ಕೇಂದ್ರ ದೂರದೃಷ್ಟಿಯ ಯೋಜನೆಗಳೊಂದಿಗೆ ಹೆಜ್ಜೆ ಹಾಕುತ್ತಿದೆ. 20 ಲಕ್ಷ ಕೋಟಿ ರೂಪಾಯಿಯ "ಸ್ವಾವಲಂಬಿ ಭಾರತ" ಯೋಜನೆಯು ಮುಂಬರುವ ದಿನಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯ ಹೀಗೆ. ಸಮಾಜದ ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಕೊಂಡು "ಸ್ವಾವಲಂಬಿ ಭಾರತ" ಯೋಜನೆಯನ್ನು ರೂಪಿಸಲಾಗಿದೆ ಎಂದಿದ್ದಾರೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೃಷಿ ನಂತರ ಅತಿಹೆಚ್ಚು ಉದ್ಯೋಗಾವಕಾಶವನ್ನ ನೀಡುವ ವಲಯವಾಗಿದೆ. ಹಾಗಾಗಿ 'ಸ್ವಾವಲಂಬಿ ಭಾರತ' ಯೊಜನೆ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸುಲಭ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅ. 31ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇಎಂಐ ತುಂಬಬೇಕಾಗಿಲ್ಲ.

ಎರಡನೇ ವರ್ಷದಿಂದ ಸಾಲಮರುಪಾವತಿ ಆರಂಭವಾಗುತ್ತದೆ. ಸಾಲ ತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ. ಇನ್ನು ಸಾಲ ತೀರಿಸಲಾಗದೇ ಅನುತ್ಪಾದಕಗೊಂಡಿರುವ ಸುಮಾರು 2 ಲಕ್ಷ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕೇಂದ್ರವು 20 ಸಾವಿರ ಕೋಟಿ ರೂ. ನೆರವು ಘೋಷಿಸಿದೆ. ಹಾಗೆಯೇ ಸಣ್ಣ ಕೈಗಾರಿಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂ. ಆರಂಭಿಕ ನಿಧಿಯೊಂದಿಗೆ 50 ಸಾವಿರ ಕೋಟಿ ರೂ. 'ಫಂಡ್ ಆಫ್ ಫಂಡ್' ಸ್ಥಾಪಿಸಿದೆ. ಈ ಎಲ್ಲ ಕ್ರಮಗಳು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ಹೊಸ ಶಕೆಯನ್ನ ಆರಂಭಿಸಲಿವೆ ಎಂದು ಸಚಿವರು ಹೇಳಿದ್ದಾರೆ.

DV Sadananda Gowda reaction about Atmanirbhar Bharat project
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ (ಸಂಗ್ರಹ ಚಿತ್ರ)

ಕೈಗಾರಿಗಳು ಅಗತ್ಯ ಭೂಮಿ ಪಡೆಯುವಲ್ಲಿದ್ದ ಕಾನೂನಾತ್ಮಕ ಅಡಚಣೆಗಳನ್ನು ತೊಡೆದು ಹಾಕಲಾಗಿದೆ. ಇನ್ನಷ್ಟು ಆಡಳಿತಾತ್ಮಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಸ್ವದೇಶಿ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು, ಉದ್ಯೋಗಾವಕಾಶ ಸಹಜವಾಗಿಯೇ ಹೆಚ್ಚಲಿದೆ. 21ನೇ ಶತಮಾನವು ಭಾರತಕ್ಕೆ ಸೇರಿದ್ದು, ಜಾಗತಿಕ ಸರಬರಾಜು ವ್ಯವಸ್ಥೆಯ ಪ್ರಮುಖ ಭಾಗವಾಗೋಣ ಎಂಬ ಪ್ರಧಾನಿಯವರ ಕರೆಯನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನೇ ಖರೀದಿಸೋಣ.

ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ. ಇನ್ನು ಮುಂದೆ 200 ಕೋಟಿ ರೂ. ಮೌಲ್ಯದವರೆಗಿನ ಕೆಲಸ, ಸೇವೆ, ಸರಕು ‌ಸರಂಜಾಮುಗಳಿಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದಿಲ್ಲ. ಸ್ವದೇ‌ಶಿ ಕಂಪನಿಗಳು, ಗುತ್ತಿಗೆದಾರರು, ಸರಬರಾಜುದಾರರನ್ನು ಉತ್ತೇಜಿಸಲು ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಗುಡಿ ಕೈಗಾರಿಕೆ, ಸ್ಥಳೀಯ ಉತ್ಪನ್ನಗಳ ಪ್ಯಾಕೆಜಿಂಗ್‌, ಬ್ರಾಂಡಿಂಗ್‌ ಮತ್ತು ರಫ್ತು ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂ. ಘೋಷಿಸಲಾಗಿದೆ. ಜನ ಇದರ ಉಪಯೋಗ ಪಡೆಯಬೇಕು ಎಂದು ಕರೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮಾರುಕಟ್ಟೆ ಪಡೆಯುವಂತಾಗಬೇಕು. "ಮೇಕ್‌ ಇನ್‌ ಇಂಡಿಯಾ" ವಸ್ತುಗಳು ವಿಶ್ವಾದ್ಯಂತ ರಾರಾಜಿಸಬೇಕು ಎಂದು ಅವರು ಹೇಳಿದರು.

ರೈತರಿಗೆ ಈಗಾಗಲೇ ಮೂರು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸುಲಭ ಸಾಲ ಸೌಲಭ್ಯವನ್ನು ಘೋಷಿಸಲಾಗಿದ್ದು, ಇಂದು ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಕ್ಷೇತ್ರದ ಮೂಲ ಸೌಲಭ್ಯಗಳಿಗಾಗಿ ನೆರವು ಪ್ರಕಟಿಸಲಾಗಿದೆ. ಸಂಸ್ಕರಣಾ ಘಟಕಗಳು, ಶೀತಲ ಸ್ಟೋರೇಜ್‌ ಕೇಂದ್ರಗಳು, ಗೋದಾಮುಗಳು, ಶೀತಲ ವ್ಯವಸ್ಥೆಯುಳ್ಳ ಸಾಗಣೆ ವ್ಯವಸ್ಥೆ, ಸಾಗಣೆ, ಸುಲಭ ಮಾರುಕಟ್ಟೆ ವ್ಯವಸ್ಥೆ - ಇವೇ ಮುಂತಾದ ಸೌಲಭ್ಯಗಳು ಇದರಲ್ಲಿ ಸೇರಿವೆ. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಹಾಗೂ ಉತ್ತಮ ಮೌಲ್ಯ (ಬೆಲೆ) ಪಡೆಯಲು ಅನುಕೂಲವಾಗಲಿದೆ.

ನಮ್ಮ ರಾಜ್ಯದ ರಾಗಿಯೂ ಅಂತಾರಾಷ್ಟ್ರೀಯ ಬ್ರಾಂಡಿಂಗ್‌ ಒಂದಿಗೆ ವಿಶ್ವಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಪಶುಸಂಗೋಪನೆ, ಹಾಲು ಸಂಗ್ರಹಣೆ ಮತ್ತು ಸಂಸ್ಕರಣೆ, ಡೇರಿ ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಲು 23 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಘೋಷಿಸಲಾಗಿದೆ. ಇದರಿಂದ 2 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ. ಮತ್ಸೋದ್ಯಮವನ್ನು ಪ್ರೋತ್ಸಾಹಿಸಲು 20 ಸಾವಿರ ಕೋಟಿ ರೂಪಾಯಿಯ "ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ"ಯನ್ನು ರೂಪಿಸಲಾಗಿದೆ. ಇದರಿಂದ 70 ಲಕ್ಷ ಟನ್‌ ಹೆಚ್ಚುವರಿ ಮೀನು ಲಭ್ಯವಾಗಲಿದೆ. ದೇಶದ ಮೀನು ರಫ್ತು ದ್ವಿಗುಣಗೊಂಡು 1 ಲಕ್ಷ ಕೋಟಿ ಮೌಲ್ಯವನ್ನು ತಲುಪಲಿದೆ. ಸುಮಾರು 55 ಲಕ್ಷ ಜನಕ್ಕೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು "ಒಂದು ದೇಶ - ಒಂದು ಪಡಿತರ ಚೀಟಿ" ಎಂಬ ಕ್ರಾಂತಿಕಾರಕ ಆಡಳಿತಾತ್ಮಕ ಸುಧಾರಣೆಗೆ ಕೈಹಾಕಿದೆ. ಇದು ದೇಶಾದ್ಯಂತ ಮಾನ್ಯವಾಗುವ ಪಡಿತರ ಚೀಟಿ. ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಇಂಥ ಪಡಿತರ ಚೀಟಿಗಳನ್ನು ದೇಶದ ಎಲ್ಲ ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು. ವಲಸಿಗರು, ಕಾರ್ಮಿಕರು ಸೇರಿದಂತೆ ಈ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ರಾಜ್ಯಕ್ಕೆ ವಲಸೆ ಹೋದರೂ ಇದೇ ಚೀಟಿ ಬಳಸಿ ಪಡಿತರಧಾನ್ಯ ಪಡೆಯಬಹುದು. ವಲಸಿಗರ ಬಹುವರ್ಷಗಳ ಸಮಸ್ಯೆಗೆ ಈ ವ್ಯವಸ್ಥೆ ಪರಿಹಾರ ಒದಗಿಸಲಿದೆ. ಇದರಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ. "ಸ್ವಾವಲಂಬಿ ಭಾರತ" ಯೋಜನೆಯನ್ನು ರೂಪಿಸುವಾಗ ಜನ ಸಾಮಾನ್ಯರ ತಾತ್ಕಾಲಿಕ ಅವಶ್ಯಕತೆಗಳ ಬಗ್ಗೆಯೂ ಗಮನ ನೀಡಲಾಗಿದೆ.

ಲಾಕ್​ಡೌನ್​ ಕಾರಣದಿಂದ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ತಾತ್ಕಾಲಿಕ ವಸತಿ & ಮೂರು ಹೊತ್ತಿನ ಊಟಕ್ಕಾಗಿ ಕೇಂದ್ರ ಸರ್ಕಾರವು ಇದುವರೆಗೆ 11000 ಕೋಟಿ ರೂ. ವೆಚ್ಚ ಮಾಡಿದೆ. ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಚೀಟಿ ಇರಲಿ ಅಥವಾ ಇರದಿರಲಿ ತಲಾ 5 KG ಅಕ್ಕಿ/ಗೋಧಿ ಮತ್ತು ಕುಟುಂಬಕ್ಕೆ 1 KG ಬೇಳೆಯನ್ನು ಉಚಿತವಾಗಿ ವಿತರಿಸುತ್ತಿದೆ. ಕಳೆದೆರಡು ತಿಂಗಳಿಂದ ನಡೆದಿರುವ ಈ ಉಚಿತ ರೇಷನ್ ವಿತರಣೆ ಜೂನ್ ವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 80 ಲಕ್ಷ ಕ್ವಿಂಟಲ್ ಅಕ್ಕಿ/ಗೋಧಿ 5 ಲಕ್ಷ ಕ್ವಿಂಟಲ್ ದ್ವಿದಳ ಧಾನ್ಯ (ಬೇಳೆ) ಒದಗಿಸುತ್ತಿದೆ. ಇವೆಲ್ಲದರ ಹೊರತಾಗಿ ಮದ್ಯಮ ವರ್ಗ ಹಾಗೂ ಸಮಾಜದ ಎಲ್ಲರಿಗೂ ಅನುಕೂಲವಾಗುವಂತಹ ಅನೇಕ ಕ್ರಮಗಳು "ಸ್ವಾವಲಂಬಿ ಭಾರತ" ಯೋಜನೆಯು ಒಳಗೊಂಡಿದೆ.

ಒಟ್ಟಿನಲ್ಲಿ ಇದು ಒಂದು "ಐತಿಹಾಸಿಕ ಯೋಜನೆ"ಯಾಗಿ ದೇಶದ ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.

ಬೆಂಗಳೂರು/ನವದೆಹಲಿ: ಜಾಗತಿಕ ಮಹಾಮಾರಿ ಕೊರೊನಾ ಎಸೆದ ಸವಾಲನ್ನು ವರವಾಗಿ ಪರಿವರ್ತಿಸಲು ಕೇಂದ್ರ ದೂರದೃಷ್ಟಿಯ ಯೋಜನೆಗಳೊಂದಿಗೆ ಹೆಜ್ಜೆ ಹಾಕುತ್ತಿದೆ. 20 ಲಕ್ಷ ಕೋಟಿ ರೂಪಾಯಿಯ "ಸ್ವಾವಲಂಬಿ ಭಾರತ" ಯೋಜನೆಯು ಮುಂಬರುವ ದಿನಗಳಲ್ಲಿ ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ಸ್ವಾವಲಂಬಿಯನ್ನಾಗಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಸ್ಥಾನ ಪಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಡವರು, ದಿನಗೂಲಿ ಕಾರ್ಮಿಕರು, ವಲಸಿಗರು, ನಿರ್ಗತಿಕರು, ರೈತರು, ಸ್ವಯಂ ಉದ್ಯೋಗಿಗಳು, ಬೀದಿಬದಿ ವ್ಯಾಪಾರಿಗಳು, ಸಣ್ಣ, ಅತಿಸಣ್ಣ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ಉತ್ಪಾದಕ ಹಾಗೂ ಸೇವಾ ವಲಯ ಹೀಗೆ. ಸಮಾಜದ ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಕೊಂಡು "ಸ್ವಾವಲಂಬಿ ಭಾರತ" ಯೋಜನೆಯನ್ನು ರೂಪಿಸಲಾಗಿದೆ ಎಂದಿದ್ದಾರೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೃಷಿ ನಂತರ ಅತಿಹೆಚ್ಚು ಉದ್ಯೋಗಾವಕಾಶವನ್ನ ನೀಡುವ ವಲಯವಾಗಿದೆ. ಹಾಗಾಗಿ 'ಸ್ವಾವಲಂಬಿ ಭಾರತ' ಯೊಜನೆ ಮೂಲಕ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಸುಲಭ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅ. 31ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇಎಂಐ ತುಂಬಬೇಕಾಗಿಲ್ಲ.

ಎರಡನೇ ವರ್ಷದಿಂದ ಸಾಲಮರುಪಾವತಿ ಆರಂಭವಾಗುತ್ತದೆ. ಸಾಲ ತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ. ಇನ್ನು ಸಾಲ ತೀರಿಸಲಾಗದೇ ಅನುತ್ಪಾದಕಗೊಂಡಿರುವ ಸುಮಾರು 2 ಲಕ್ಷ ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕೇಂದ್ರವು 20 ಸಾವಿರ ಕೋಟಿ ರೂ. ನೆರವು ಘೋಷಿಸಿದೆ. ಹಾಗೆಯೇ ಸಣ್ಣ ಕೈಗಾರಿಗಳ ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂ. ಆರಂಭಿಕ ನಿಧಿಯೊಂದಿಗೆ 50 ಸಾವಿರ ಕೋಟಿ ರೂ. 'ಫಂಡ್ ಆಫ್ ಫಂಡ್' ಸ್ಥಾಪಿಸಿದೆ. ಈ ಎಲ್ಲ ಕ್ರಮಗಳು ಭಾರತದಲ್ಲಿ ಔದ್ಯೋಗಿಕ ಕ್ರಾಂತಿಯ ಹೊಸ ಶಕೆಯನ್ನ ಆರಂಭಿಸಲಿವೆ ಎಂದು ಸಚಿವರು ಹೇಳಿದ್ದಾರೆ.

DV Sadananda Gowda reaction about Atmanirbhar Bharat project
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ (ಸಂಗ್ರಹ ಚಿತ್ರ)

ಕೈಗಾರಿಗಳು ಅಗತ್ಯ ಭೂಮಿ ಪಡೆಯುವಲ್ಲಿದ್ದ ಕಾನೂನಾತ್ಮಕ ಅಡಚಣೆಗಳನ್ನು ತೊಡೆದು ಹಾಕಲಾಗಿದೆ. ಇನ್ನಷ್ಟು ಆಡಳಿತಾತ್ಮಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಸ್ವದೇಶಿ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದ್ದು, ಉದ್ಯೋಗಾವಕಾಶ ಸಹಜವಾಗಿಯೇ ಹೆಚ್ಚಲಿದೆ. 21ನೇ ಶತಮಾನವು ಭಾರತಕ್ಕೆ ಸೇರಿದ್ದು, ಜಾಗತಿಕ ಸರಬರಾಜು ವ್ಯವಸ್ಥೆಯ ಪ್ರಮುಖ ಭಾಗವಾಗೋಣ ಎಂಬ ಪ್ರಧಾನಿಯವರ ಕರೆಯನ್ನು ನಾವೆಲ್ಲರೂ ಬೆಂಬಲಿಸಬೇಕಿದೆ. ಸ್ಥಳೀಯವಾಗಿ ತಯಾರಾಗುವ ವಸ್ತುಗಳನ್ನೇ ಖರೀದಿಸೋಣ.

ಸ್ವದೇಶಿ ಕೈಗಾರಿಕೆಗಳನ್ನು ಉತ್ತೇಜಿಸೋಣ. ಇನ್ನು ಮುಂದೆ 200 ಕೋಟಿ ರೂ. ಮೌಲ್ಯದವರೆಗಿನ ಕೆಲಸ, ಸೇವೆ, ಸರಕು ‌ಸರಂಜಾಮುಗಳಿಗಾಗಿ ಜಾಗತಿಕ ಟೆಂಡರ್ ಕರೆಯಲಾಗುವುದಿಲ್ಲ. ಸ್ವದೇ‌ಶಿ ಕಂಪನಿಗಳು, ಗುತ್ತಿಗೆದಾರರು, ಸರಬರಾಜುದಾರರನ್ನು ಉತ್ತೇಜಿಸಲು ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಗುಡಿ ಕೈಗಾರಿಕೆ, ಸ್ಥಳೀಯ ಉತ್ಪನ್ನಗಳ ಪ್ಯಾಕೆಜಿಂಗ್‌, ಬ್ರಾಂಡಿಂಗ್‌ ಮತ್ತು ರಫ್ತು ಉತ್ತೇಜನಕ್ಕಾಗಿ 10 ಸಾವಿರ ಕೋಟಿ ರೂ. ಘೋಷಿಸಲಾಗಿದೆ. ಜನ ಇದರ ಉಪಯೋಗ ಪಡೆಯಬೇಕು ಎಂದು ಕರೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ತಯಾರಾದ ವಸ್ತುಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ಮಾರುಕಟ್ಟೆ ಪಡೆಯುವಂತಾಗಬೇಕು. "ಮೇಕ್‌ ಇನ್‌ ಇಂಡಿಯಾ" ವಸ್ತುಗಳು ವಿಶ್ವಾದ್ಯಂತ ರಾರಾಜಿಸಬೇಕು ಎಂದು ಅವರು ಹೇಳಿದರು.

ರೈತರಿಗೆ ಈಗಾಗಲೇ ಮೂರು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸುಲಭ ಸಾಲ ಸೌಲಭ್ಯವನ್ನು ಘೋಷಿಸಲಾಗಿದ್ದು, ಇಂದು ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಕ್ಷೇತ್ರದ ಮೂಲ ಸೌಲಭ್ಯಗಳಿಗಾಗಿ ನೆರವು ಪ್ರಕಟಿಸಲಾಗಿದೆ. ಸಂಸ್ಕರಣಾ ಘಟಕಗಳು, ಶೀತಲ ಸ್ಟೋರೇಜ್‌ ಕೇಂದ್ರಗಳು, ಗೋದಾಮುಗಳು, ಶೀತಲ ವ್ಯವಸ್ಥೆಯುಳ್ಳ ಸಾಗಣೆ ವ್ಯವಸ್ಥೆ, ಸಾಗಣೆ, ಸುಲಭ ಮಾರುಕಟ್ಟೆ ವ್ಯವಸ್ಥೆ - ಇವೇ ಮುಂತಾದ ಸೌಲಭ್ಯಗಳು ಇದರಲ್ಲಿ ಸೇರಿವೆ. ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ಹಾಗೂ ಉತ್ತಮ ಮೌಲ್ಯ (ಬೆಲೆ) ಪಡೆಯಲು ಅನುಕೂಲವಾಗಲಿದೆ.

ನಮ್ಮ ರಾಜ್ಯದ ರಾಗಿಯೂ ಅಂತಾರಾಷ್ಟ್ರೀಯ ಬ್ರಾಂಡಿಂಗ್‌ ಒಂದಿಗೆ ವಿಶ್ವಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಪಶುಸಂಗೋಪನೆ, ಹಾಲು ಸಂಗ್ರಹಣೆ ಮತ್ತು ಸಂಸ್ಕರಣೆ, ಡೇರಿ ತಂತ್ರಜ್ಞಾನ ಮೇಲ್ದರ್ಜೆಗೆ ಏರಿಸಲು 23 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಘೋಷಿಸಲಾಗಿದೆ. ಇದರಿಂದ 2 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ. ಮತ್ಸೋದ್ಯಮವನ್ನು ಪ್ರೋತ್ಸಾಹಿಸಲು 20 ಸಾವಿರ ಕೋಟಿ ರೂಪಾಯಿಯ "ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ"ಯನ್ನು ರೂಪಿಸಲಾಗಿದೆ. ಇದರಿಂದ 70 ಲಕ್ಷ ಟನ್‌ ಹೆಚ್ಚುವರಿ ಮೀನು ಲಭ್ಯವಾಗಲಿದೆ. ದೇಶದ ಮೀನು ರಫ್ತು ದ್ವಿಗುಣಗೊಂಡು 1 ಲಕ್ಷ ಕೋಟಿ ಮೌಲ್ಯವನ್ನು ತಲುಪಲಿದೆ. ಸುಮಾರು 55 ಲಕ್ಷ ಜನಕ್ಕೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು "ಒಂದು ದೇಶ - ಒಂದು ಪಡಿತರ ಚೀಟಿ" ಎಂಬ ಕ್ರಾಂತಿಕಾರಕ ಆಡಳಿತಾತ್ಮಕ ಸುಧಾರಣೆಗೆ ಕೈಹಾಕಿದೆ. ಇದು ದೇಶಾದ್ಯಂತ ಮಾನ್ಯವಾಗುವ ಪಡಿತರ ಚೀಟಿ. ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಇಂಥ ಪಡಿತರ ಚೀಟಿಗಳನ್ನು ದೇಶದ ಎಲ್ಲ ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು. ವಲಸಿಗರು, ಕಾರ್ಮಿಕರು ಸೇರಿದಂತೆ ಈ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ರಾಜ್ಯಕ್ಕೆ ವಲಸೆ ಹೋದರೂ ಇದೇ ಚೀಟಿ ಬಳಸಿ ಪಡಿತರಧಾನ್ಯ ಪಡೆಯಬಹುದು. ವಲಸಿಗರ ಬಹುವರ್ಷಗಳ ಸಮಸ್ಯೆಗೆ ಈ ವ್ಯವಸ್ಥೆ ಪರಿಹಾರ ಒದಗಿಸಲಿದೆ. ಇದರಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ. "ಸ್ವಾವಲಂಬಿ ಭಾರತ" ಯೋಜನೆಯನ್ನು ರೂಪಿಸುವಾಗ ಜನ ಸಾಮಾನ್ಯರ ತಾತ್ಕಾಲಿಕ ಅವಶ್ಯಕತೆಗಳ ಬಗ್ಗೆಯೂ ಗಮನ ನೀಡಲಾಗಿದೆ.

ಲಾಕ್​ಡೌನ್​ ಕಾರಣದಿಂದ ದೇಶದ ವಿವಿಧೆಡೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರ ತಾತ್ಕಾಲಿಕ ವಸತಿ & ಮೂರು ಹೊತ್ತಿನ ಊಟಕ್ಕಾಗಿ ಕೇಂದ್ರ ಸರ್ಕಾರವು ಇದುವರೆಗೆ 11000 ಕೋಟಿ ರೂ. ವೆಚ್ಚ ಮಾಡಿದೆ. ವಲಸೆ ಕಾರ್ಮಿಕರು ಹಾಗೂ ಬಡವರಿಗೆ ಪಡಿತರ ಚೀಟಿ ಇರಲಿ ಅಥವಾ ಇರದಿರಲಿ ತಲಾ 5 KG ಅಕ್ಕಿ/ಗೋಧಿ ಮತ್ತು ಕುಟುಂಬಕ್ಕೆ 1 KG ಬೇಳೆಯನ್ನು ಉಚಿತವಾಗಿ ವಿತರಿಸುತ್ತಿದೆ. ಕಳೆದೆರಡು ತಿಂಗಳಿಂದ ನಡೆದಿರುವ ಈ ಉಚಿತ ರೇಷನ್ ವಿತರಣೆ ಜೂನ್ ವರೆಗೆ ಮುಂದುವರಿಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ 80 ಲಕ್ಷ ಕ್ವಿಂಟಲ್ ಅಕ್ಕಿ/ಗೋಧಿ 5 ಲಕ್ಷ ಕ್ವಿಂಟಲ್ ದ್ವಿದಳ ಧಾನ್ಯ (ಬೇಳೆ) ಒದಗಿಸುತ್ತಿದೆ. ಇವೆಲ್ಲದರ ಹೊರತಾಗಿ ಮದ್ಯಮ ವರ್ಗ ಹಾಗೂ ಸಮಾಜದ ಎಲ್ಲರಿಗೂ ಅನುಕೂಲವಾಗುವಂತಹ ಅನೇಕ ಕ್ರಮಗಳು "ಸ್ವಾವಲಂಬಿ ಭಾರತ" ಯೋಜನೆಯು ಒಳಗೊಂಡಿದೆ.

ಒಟ್ಟಿನಲ್ಲಿ ಇದು ಒಂದು "ಐತಿಹಾಸಿಕ ಯೋಜನೆ"ಯಾಗಿ ದೇಶದ ಇತಿಹಾಸ ಪುಟಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.