ETV Bharat / state

ಮೋದಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೆ ಆಹ್ವಾನವಿಲ್ಲ: ದೇವನಹಳ್ಳಿ ಶಾಸಕರಿಗೆ ಅಗೌರವ ಆರೋಪ

author img

By

Published : Nov 11, 2022, 6:04 PM IST

Updated : Nov 11, 2022, 6:55 PM IST

ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿಯವರಿಗೆ ಆಹ್ವಾನ ನೀಡಿಲ್ಲ. ಹಾಗಾಗಿ ಇದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

Kempegowda's bronze statue unveiled
ದೇವನಹಳ್ಳಿ ಶಾಸಕರಿಗೆ ಅಗೌರವ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರುವ 108 ಆಡಿಗಳ ಕೆಂಪೇಗೌಡರ ಕಂಚಿನ ಪ್ರತಿಮೆ ಇಂದು ಮೋದಿಯವರಿಂದ ಲೋಕಾರ್ಪಣೆಯಾಗಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿಯವರಿಗೆ ಆಹ್ವಾನ ನೀಡದೇ ಇದ್ದದ್ದು, ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವಿಚಾರಕ್ಕೆ ದೇವನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಜಾತ್ಯತೀತ ನಾಯಕರಾಗಿದ್ದರು. ಕಸುಬು ಆಧಾರಿತ ಜಾತಿಗಳಿಗೆ ಪೇಟೆಗಳನ್ನ ಕಟ್ಟಿ ಅವರ ಅಭಿವೃದ್ಧಿಗೆ ಶ್ರಮಿಸಿದವರು.

ಶಾಸಕ ನಿಸರ್ಗ ನಾರಾಯಣ ಸ್ವಾಮಿ

ಅತಂಹ ಮಹಾನ್ ವ್ಯಕ್ತಿಯ 108 ಅಡಿಗಳ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ, ಇಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತಿರುವುದು ಸಂತಸ ಪಡುವ ಕೆಲಸವಾಗಿದೆ. ಆದರೆ ಪತ್ರಿಯೊಬ್ಬರು ಹಬ್ಬದಂತೆ ಮಾಡಬೇಕಾದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ.

ಕೆಂಪೇಗೌಡರ ಪ್ರತಿಮೆ ಶಂಕುಸ್ಥಾಪನೆ ಮತ್ತು ಥೀಮ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ನನ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ, ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನ ಆಹ್ವಾನಿಸದೇ ಶಾಸಕ ಸ್ಥಾನಕ್ಕೆ ಅಗೌರವ ತರುವ ಕೆಲಸ ಮಾಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವೈಫಲವೇ ಕಾರಣವಾಗಿದೆ.

ಇದನ್ನೂ ಓದಿ: ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?

ಬಿಜೆಪಿ ಪಕ್ಷಕ್ಕೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರಲ್ಲಿ ನಂಬಿಕೆ ಇಲ್ಲ. ಇವರದ್ದೇ ಸ್ವಂತ ಅಂಜೆಡಾದಲ್ಲಿ ಕಾರ್ಯಕ್ರಮ ಮಾಡುತ್ತಾರೆ ಮತ್ತು ವಿರೋಧ ವ್ಯಕ್ತವಾದರೆ ಈ ಮೊದಲೇ ಹೇಗೆ ಸಮರ್ಥನೆ ಮಾಡಬೇಕೆಂಬುದನ್ನ ತೀರ್ಮಾನ ಮಾಡಿರುತ್ತಾರೆ.

ಸರ್ಕಾರಿ ಹಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ಸರ್ಕಾರದಲ್ಲಿ ನಾನು ಸಹ ಒಬ್ಬ ಶಾಸಕ, ಒಬ್ಬ ಶಾಸಕನಿಗೆ ಹೇಗೆ ಅವಮಾನ ಮಾಡಬೇಕು. ಆನಂತರ ಹೇಗೆ ಸಮರ್ಥನೆ ಮಾಡಿಕೊಳ್ಳ ಬೇಕೆಂಬುದರ ಬಗ್ಗೆ ಮೊದಲೇ ತೀರ್ಮಾನಿಸಿರುತ್ತಾರೆ.

ಇದು ಒಬ್ಬ ಶಾಸಕನಿಗೆ ಮಾಡಿದ ಅವಮಾನವಲ್ಲ, 224 ಶಾಸಕರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಿರುವ 108 ಆಡಿಗಳ ಕೆಂಪೇಗೌಡರ ಕಂಚಿನ ಪ್ರತಿಮೆ ಇಂದು ಮೋದಿಯವರಿಂದ ಲೋಕಾರ್ಪಣೆಯಾಗಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ನಿಸರ್ಗ ನಾರಾಯಣ ಸ್ವಾಮಿಯವರಿಗೆ ಆಹ್ವಾನ ನೀಡದೇ ಇದ್ದದ್ದು, ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವಿಚಾರಕ್ಕೆ ದೇವನಹಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಜಾತ್ಯತೀತ ನಾಯಕರಾಗಿದ್ದರು. ಕಸುಬು ಆಧಾರಿತ ಜಾತಿಗಳಿಗೆ ಪೇಟೆಗಳನ್ನ ಕಟ್ಟಿ ಅವರ ಅಭಿವೃದ್ಧಿಗೆ ಶ್ರಮಿಸಿದವರು.

ಶಾಸಕ ನಿಸರ್ಗ ನಾರಾಯಣ ಸ್ವಾಮಿ

ಅತಂಹ ಮಹಾನ್ ವ್ಯಕ್ತಿಯ 108 ಅಡಿಗಳ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ, ಇಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತಿರುವುದು ಸಂತಸ ಪಡುವ ಕೆಲಸವಾಗಿದೆ. ಆದರೆ ಪತ್ರಿಯೊಬ್ಬರು ಹಬ್ಬದಂತೆ ಮಾಡಬೇಕಾದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕೇವಲ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿದೆ.

ಕೆಂಪೇಗೌಡರ ಪ್ರತಿಮೆ ಶಂಕುಸ್ಥಾಪನೆ ಮತ್ತು ಥೀಮ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ನನ್ನ ಅಧ್ಯಕ್ಷತೆಯಲ್ಲಿ ನಡೆಯಿತು. ಆದರೆ, ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನ ಆಹ್ವಾನಿಸದೇ ಶಾಸಕ ಸ್ಥಾನಕ್ಕೆ ಅಗೌರವ ತರುವ ಕೆಲಸ ಮಾಡಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವೈಫಲವೇ ಕಾರಣವಾಗಿದೆ.

ಇದನ್ನೂ ಓದಿ: ಖಡ್ಗದ ತೂಕವೇ 4 ಸಾವಿರ ಕೆಜಿ! ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಶೇಷತೆಗಳೇನು?

ಬಿಜೆಪಿ ಪಕ್ಷಕ್ಕೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರಲ್ಲಿ ನಂಬಿಕೆ ಇಲ್ಲ. ಇವರದ್ದೇ ಸ್ವಂತ ಅಂಜೆಡಾದಲ್ಲಿ ಕಾರ್ಯಕ್ರಮ ಮಾಡುತ್ತಾರೆ ಮತ್ತು ವಿರೋಧ ವ್ಯಕ್ತವಾದರೆ ಈ ಮೊದಲೇ ಹೇಗೆ ಸಮರ್ಥನೆ ಮಾಡಬೇಕೆಂಬುದನ್ನ ತೀರ್ಮಾನ ಮಾಡಿರುತ್ತಾರೆ.

ಸರ್ಕಾರಿ ಹಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ಸರ್ಕಾರದಲ್ಲಿ ನಾನು ಸಹ ಒಬ್ಬ ಶಾಸಕ, ಒಬ್ಬ ಶಾಸಕನಿಗೆ ಹೇಗೆ ಅವಮಾನ ಮಾಡಬೇಕು. ಆನಂತರ ಹೇಗೆ ಸಮರ್ಥನೆ ಮಾಡಿಕೊಳ್ಳ ಬೇಕೆಂಬುದರ ಬಗ್ಗೆ ಮೊದಲೇ ತೀರ್ಮಾನಿಸಿರುತ್ತಾರೆ.

ಇದು ಒಬ್ಬ ಶಾಸಕನಿಗೆ ಮಾಡಿದ ಅವಮಾನವಲ್ಲ, 224 ಶಾಸಕರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Nov 11, 2022, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.