ETV Bharat / state

ಅಂಗಡಿ ಮಾಲೀಕನಿಗೆ ವಂಚಿಸಲು ಅಡ್ಡದಾರಿ: ಕಳ್ಳ ಸಹೋದರರನ್ನು ಬಂಧಿಸಿದ ಪೊಲೀಸರು

author img

By

Published : Jul 4, 2023, 3:15 PM IST

Updated : Jul 4, 2023, 5:53 PM IST

ಅಂಗಡಿ ಮಾಲೀಕನನ್ನು ನಂಬಿಸಿ, 5.25 ಲಕ್ಷ ರೂ. ಹಣ ಮತ್ತು ದ್ವಿಚಕ್ರ ವಾಹನ ದೋಚಿದ್ದ ಕಳ್ಳ ಸಹೋದರರನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

thief brothers
ಬ್ಯಾಟರಾಯನಪುರ ಪೊಲೀಸರ ಅತಿಥಿಗಳಾದ ಸಹೋದರರು
ಅಂಗಡಿ ಮಾಲೀಕ ಅಬೂಬಕ್ಕರ್​ ಮಾತನಾಡುತ್ತಿರುವುದು

ಬೆಂಗಳೂರು: ಹೋಲ್​ ಸೇಲ್​ ಮೊಬೈಲ್​ ಅಂಗಡಿಯಿಂದ ಮೊಬೈಲ್​ ಫೋನ್​ಗಳನ್ನು ಡೆಲಿವರಿ ಕೊಟ್ಟು ವಾಪಸ್​ ಬರುತ್ತಿರುವ ವೇಳೆ ಸಂಚು ರೂಪಿಸಿ 5.25 ಲಕ್ಷ ರೂ. ಹಣ ಮತ್ತು ದ್ವಿಚಕ್ರ ವಾಹನ ದೋಚಿದ್ದ ಕಳ್ಳ ಸಹೋದರರನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜೀಜ್​ ಹಾಗೂ ಶಹಬಾದ್​ ಬಂಧಿತ ಆರೋಪಿಗಳು.

ಘಟನೆ ಏನು?: ಅಬೂಬಕ್ಕರ್​ ಎಂಬುವವರು ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಹೋಲ್ ಸೇಲ್​ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದರು. ಇದೇ ಅಂಗಡಿಯಲ್ಲಿ ಶಹಬಾದ್​ ಕೆಲಸ ಮಾಡಿಕೊಂಡಿದ್ದ. ಜೂನ್​ 28 ರಂದು ಕೆ ಆರ್​ ಪುರಂನ ಮೂರು ವಿವಿಧ ಅಂಗಡಿಗಳಿಂದ ಮೊಬೈಲ್​ ಫೋನ್​ಗಳಿಗೆ ಆರ್ಡರ್​ ಬಂದಿತ್ತು. ಮೊಬೈಲ್​ ಫೋನ್​ಗಳನ್ನು ಡೆಲಿವರಿ ಮಾಡಲು ಹೇಳಿ, ಹಣ ತರುವ ಕೆಲಸವನ್ನು ಅಂಗಡಿ ಮಾಲೀಕ ಅಬೂಬಕ್ಕರ್​ ಅವರು, ಶಹಬಾದ್ ಹಾಗೂ ಮೊಹಮ್ಮದ್ ಎಂಬಾತನಿಗೆ ವಹಿಸಿದ್ದರು.

ಜೊತೆಗೆ ಅವರು ಹೋಗಲೆಂದು ದ್ವಿಚಕ್ರ ವಾಹನವನ್ನು ನೀಡಿ ಕಳುಹಿಸಿದ್ದರು. ಆದರೆ, ರಾತ್ರಿ ಗಾಬರಿಯಿಂದ ಬಂದಿದ್ದ ಶಹಬಾದ್ ಹಾಗೂ‌ ಮೊಹಮ್ಮದ್, 'ಕಸ್ತೂರಬಾ ನಗರದ 1ನೇ ಕ್ರಾಸ್​ನಲ್ಲಿ ತಮ್ಮನ್ನು ಅಡ್ಡಗಟ್ಟಿದ್ದ ಇಬ್ಬರು ವ್ಯಕ್ತಿಗಳು, ಸ್ಕೂಟರ್​ನಲ್ಲಿ ಗಾಂಜಾ ಇರುವುದಾಗಿ ಹೇಳಿ ಪರಿಶೀಲಿಸಿದ್ದರು. ಬಳಿಕ ನಮ್ಮನ್ನು ಹೆದರಿಸಿ ಹಣವಿದ್ದ ಸ್ಕೂಟರ್ ಸಮೇತ ಪರಾರಿಯಾದರು' ಎಂದು ಹೇಳಿದ್ದರು. ಕೆಲಸಗಾರರ ಮಾತನ್ನು ನಿಜ ಎಂದು ನಂಬಿದ್ದ ಮಾಲೀಕ ಅಬೂಬಕ್ಕರ್ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ.. ಪೊಲೀಸ್​​ ಠಾಣೆ ಮೇಲೆಯೂ ದಾಳಿ: ಪುಂಡಾಟಿಕೆಗೆ ಕಡಿವಾಣ ಹಾಕಲು ಪೊಲೀಸರಿಂದ ಹರಸಾಹಸ

ಅಡ್ಡದಾರಿ' ಹಿಡಿದು ಸಿಕ್ಕಿಬಿದ್ದ ಕಳ್ಳರು: ಪ್ರಕರಣ ದಾಖಲಿಸಿಕೊಂಡ ಪೊಲೀಸರು 'ಮೈಸೂರು ರಸ್ತೆಯ ಮೇಲ್ಸೇತುವೆ ಇಳಿದ ನಂತರ ಮುಖ್ಯರಸ್ತೆಯಲ್ಲೇ ಇದ್ದ ಅಂಗಡಿಗೆ ಬರಲು ಕೆಲಸಗಾರರು ಅಡ್ಡ ರಸ್ತೆ ಬಳಸಿದ್ದೇಕೆ?' ಎಂದು ಅನುಮಾನಗೊಂಡು ತನಿಖೆ ಆರಂಭಿಸಿದ್ದರು. ಇಬ್ಬರು ಕೆಲಸಗಾರರನ್ನು ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಶಹಬಾದ್​ ಕಳ್ಳಾಟ ಬಯಲಾಗಿತ್ತು.

ಕೆಲಸಗಾರರ ಪೈಕಿ‌ ಕೇರಳ ಮೂಲದವನಾದ ಮೊಹಮ್ಮದ್​ಗೆ ಬೆಂಗಳೂರು ಅಷ್ಟಾಗಿ ಪರಿಚಯವಿರಲಿಲ್ಲ. ಅದನ್ನೇ ಸರಿಯಾಗಿ ಬಳಸಿಕೊಂಡಿದ್ದ ಶಹಬಾದ್, ಮೊಬೈಲ್ ಡೆಲಿವರಿ ಕೊಟ್ಟು ಹಣ ತರುವ ಮುನ್ನ, ತನ್ನ ಸಹೋದರ ಅಜೀಜ್​ಗೆ ಕರೆ ಮಾಡಿದ್ದ. ತಾನು ಬರುವ ಮಾರ್ಗ ಯಾವುದು, ಎಲ್ಲಿ ಹಣ ದೋಚಬಹುದು ಎಂದೆಲ್ಲ ಸಹೋದರನಿಗೆ ಮೊದಲೇ ಸೂಚನೆ ಕೊಟ್ಟಿದ್ದ. ಅದರಂತೆ ತನ್ನಿಬ್ಬರು ಸಹಚರರೊಂದಿಗೆ ಕಾದು ಕುಳಿತಿದ್ದ ಅಜೀಜ್, ಹಣ, ಹಾಗೂ ದ್ವಿಚಕ್ರ ವಾಹನ ದೋಚಿ ಪರಾರಿಯಾಗಿದ್ದ.

ಸದ್ಯ ಶಹಬಾದ್​ನ ಅಸಲಿಯತ್ತು ತಿಳಿದ ಬಳಿಕ ಮೊಹಮ್ಮದ್ ಹಾಗೂ ಅಂಗಡಿ ಮಾಲೀಕ ಅಬೂಬಕ್ಕರ್ ದಂಗಾಗಿದ್ದಾರೆ. ಅಜೀಜ್ ಹಾಗೂ ಶಹಬಾದ್​ನನ್ನು ಬಂಧಿಸಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ

ಅಂಗಡಿ ಮಾಲೀಕ ಅಬೂಬಕ್ಕರ್​ ಮಾತನಾಡುತ್ತಿರುವುದು

ಬೆಂಗಳೂರು: ಹೋಲ್​ ಸೇಲ್​ ಮೊಬೈಲ್​ ಅಂಗಡಿಯಿಂದ ಮೊಬೈಲ್​ ಫೋನ್​ಗಳನ್ನು ಡೆಲಿವರಿ ಕೊಟ್ಟು ವಾಪಸ್​ ಬರುತ್ತಿರುವ ವೇಳೆ ಸಂಚು ರೂಪಿಸಿ 5.25 ಲಕ್ಷ ರೂ. ಹಣ ಮತ್ತು ದ್ವಿಚಕ್ರ ವಾಹನ ದೋಚಿದ್ದ ಕಳ್ಳ ಸಹೋದರರನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಜೀಜ್​ ಹಾಗೂ ಶಹಬಾದ್​ ಬಂಧಿತ ಆರೋಪಿಗಳು.

ಘಟನೆ ಏನು?: ಅಬೂಬಕ್ಕರ್​ ಎಂಬುವವರು ಮೈಸೂರು ರಸ್ತೆಯ ಕಸ್ತೂರಬಾ ನಗರದಲ್ಲಿ ಹೋಲ್ ಸೇಲ್​ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದರು. ಇದೇ ಅಂಗಡಿಯಲ್ಲಿ ಶಹಬಾದ್​ ಕೆಲಸ ಮಾಡಿಕೊಂಡಿದ್ದ. ಜೂನ್​ 28 ರಂದು ಕೆ ಆರ್​ ಪುರಂನ ಮೂರು ವಿವಿಧ ಅಂಗಡಿಗಳಿಂದ ಮೊಬೈಲ್​ ಫೋನ್​ಗಳಿಗೆ ಆರ್ಡರ್​ ಬಂದಿತ್ತು. ಮೊಬೈಲ್​ ಫೋನ್​ಗಳನ್ನು ಡೆಲಿವರಿ ಮಾಡಲು ಹೇಳಿ, ಹಣ ತರುವ ಕೆಲಸವನ್ನು ಅಂಗಡಿ ಮಾಲೀಕ ಅಬೂಬಕ್ಕರ್​ ಅವರು, ಶಹಬಾದ್ ಹಾಗೂ ಮೊಹಮ್ಮದ್ ಎಂಬಾತನಿಗೆ ವಹಿಸಿದ್ದರು.

ಜೊತೆಗೆ ಅವರು ಹೋಗಲೆಂದು ದ್ವಿಚಕ್ರ ವಾಹನವನ್ನು ನೀಡಿ ಕಳುಹಿಸಿದ್ದರು. ಆದರೆ, ರಾತ್ರಿ ಗಾಬರಿಯಿಂದ ಬಂದಿದ್ದ ಶಹಬಾದ್ ಹಾಗೂ‌ ಮೊಹಮ್ಮದ್, 'ಕಸ್ತೂರಬಾ ನಗರದ 1ನೇ ಕ್ರಾಸ್​ನಲ್ಲಿ ತಮ್ಮನ್ನು ಅಡ್ಡಗಟ್ಟಿದ್ದ ಇಬ್ಬರು ವ್ಯಕ್ತಿಗಳು, ಸ್ಕೂಟರ್​ನಲ್ಲಿ ಗಾಂಜಾ ಇರುವುದಾಗಿ ಹೇಳಿ ಪರಿಶೀಲಿಸಿದ್ದರು. ಬಳಿಕ ನಮ್ಮನ್ನು ಹೆದರಿಸಿ ಹಣವಿದ್ದ ಸ್ಕೂಟರ್ ಸಮೇತ ಪರಾರಿಯಾದರು' ಎಂದು ಹೇಳಿದ್ದರು. ಕೆಲಸಗಾರರ ಮಾತನ್ನು ನಿಜ ಎಂದು ನಂಬಿದ್ದ ಮಾಲೀಕ ಅಬೂಬಕ್ಕರ್ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ.. ಪೊಲೀಸ್​​ ಠಾಣೆ ಮೇಲೆಯೂ ದಾಳಿ: ಪುಂಡಾಟಿಕೆಗೆ ಕಡಿವಾಣ ಹಾಕಲು ಪೊಲೀಸರಿಂದ ಹರಸಾಹಸ

ಅಡ್ಡದಾರಿ' ಹಿಡಿದು ಸಿಕ್ಕಿಬಿದ್ದ ಕಳ್ಳರು: ಪ್ರಕರಣ ದಾಖಲಿಸಿಕೊಂಡ ಪೊಲೀಸರು 'ಮೈಸೂರು ರಸ್ತೆಯ ಮೇಲ್ಸೇತುವೆ ಇಳಿದ ನಂತರ ಮುಖ್ಯರಸ್ತೆಯಲ್ಲೇ ಇದ್ದ ಅಂಗಡಿಗೆ ಬರಲು ಕೆಲಸಗಾರರು ಅಡ್ಡ ರಸ್ತೆ ಬಳಸಿದ್ದೇಕೆ?' ಎಂದು ಅನುಮಾನಗೊಂಡು ತನಿಖೆ ಆರಂಭಿಸಿದ್ದರು. ಇಬ್ಬರು ಕೆಲಸಗಾರರನ್ನು ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಶಹಬಾದ್​ ಕಳ್ಳಾಟ ಬಯಲಾಗಿತ್ತು.

ಕೆಲಸಗಾರರ ಪೈಕಿ‌ ಕೇರಳ ಮೂಲದವನಾದ ಮೊಹಮ್ಮದ್​ಗೆ ಬೆಂಗಳೂರು ಅಷ್ಟಾಗಿ ಪರಿಚಯವಿರಲಿಲ್ಲ. ಅದನ್ನೇ ಸರಿಯಾಗಿ ಬಳಸಿಕೊಂಡಿದ್ದ ಶಹಬಾದ್, ಮೊಬೈಲ್ ಡೆಲಿವರಿ ಕೊಟ್ಟು ಹಣ ತರುವ ಮುನ್ನ, ತನ್ನ ಸಹೋದರ ಅಜೀಜ್​ಗೆ ಕರೆ ಮಾಡಿದ್ದ. ತಾನು ಬರುವ ಮಾರ್ಗ ಯಾವುದು, ಎಲ್ಲಿ ಹಣ ದೋಚಬಹುದು ಎಂದೆಲ್ಲ ಸಹೋದರನಿಗೆ ಮೊದಲೇ ಸೂಚನೆ ಕೊಟ್ಟಿದ್ದ. ಅದರಂತೆ ತನ್ನಿಬ್ಬರು ಸಹಚರರೊಂದಿಗೆ ಕಾದು ಕುಳಿತಿದ್ದ ಅಜೀಜ್, ಹಣ, ಹಾಗೂ ದ್ವಿಚಕ್ರ ವಾಹನ ದೋಚಿ ಪರಾರಿಯಾಗಿದ್ದ.

ಸದ್ಯ ಶಹಬಾದ್​ನ ಅಸಲಿಯತ್ತು ತಿಳಿದ ಬಳಿಕ ಮೊಹಮ್ಮದ್ ಹಾಗೂ ಅಂಗಡಿ ಮಾಲೀಕ ಅಬೂಬಕ್ಕರ್ ದಂಗಾಗಿದ್ದಾರೆ. ಅಜೀಜ್ ಹಾಗೂ ಶಹಬಾದ್​ನನ್ನು ಬಂಧಿಸಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ

Last Updated : Jul 4, 2023, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.