ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಹಿನ್ನೆಲೆ ಕೇಂದ್ರ ಸರ್ಕಾರ ಕೊನೆಗೂ ಪರಿಹಾರ ಘೋಷಿಸಿದೆ.
ಕೇಂದ್ರ ಸರ್ಕಾರದಿಂದ ರಾಜ್ಯ ಬರ ಪರಿಹಾರಕ್ಕೆ ಘೋಷಣೆಯಾದ ಹಣವೆಷ್ಟು ಗೊತ್ತೆ?
ಕೇಂದ್ರ ಸರ್ಕಾರವು ರಾಜ್ಯದ ಬರ ಪರಿಹಾರಕ್ಕೆ ₹ 1029 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಈ ಹಿಂದೆ ಉಂಟಾದ ಭೀಕರ ಬರಕ್ಕೆ ಕೇಂದ್ರದಿಂದ ನೆರವು ಘೋಷಣೆ ಮಾಡಲಾಗಿದೆ.
![ಕೇಂದ್ರ ಸರ್ಕಾರದಿಂದ ರಾಜ್ಯ ಬರ ಪರಿಹಾರಕ್ಕೆ ಘೋಷಣೆಯಾದ ಹಣವೆಷ್ಟು ಗೊತ್ತೆ?](https://etvbharatimages.akamaized.net/etvbharat/prod-images/768-512-4188478-thumbnail-3x2-bgl.jpg?imwidth=3840)
ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ₹1,029 ಕೋಟಿ ಘೋಷಿಸಿದ್ದು, ಈ ಹಣ ತುಂಬಾ ಕಡಿಮೆ ಆಯಿತು ಎಂದು ಹಾಗೂ ಕೇಂದ್ರ ಮತ್ತೆ ಮಲತಾಯಿ ಧೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕರು ದೂರುದ್ದಾರೆ.
ಕಳೆದ ವರ್ಷ ಹಿಂಗಾರು ಅವಧಿಯಲ್ಲಿ ಸಂಭವಿಸಿದ ಬರಕ್ಕೆ ಕೇಂದ್ರ ಸರ್ಕಾರ ಈಗ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕದಂತೆ ಒಡಿಶಾ ಕೂಡ ಬರಕ್ಕೆ ತುತ್ತಾಗಿತ್ತು. ಆದರೆ, ಒಡಿಶಾಗೆ ಕೇಂದ್ರ ಸರ್ಕಾರ ಬರೋಬ್ಬರಿ ₹ 3,338 ಕೋಟಿ ನೀಡಿದೆ. ಈ ಹಿನ್ನೆಲೆ ರಾಜ್ಯದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಲತಾಯಿ ದೋರಣೆ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಹಿನ್ನೆಲೆ ಕೇಂದ್ರ ಸರ್ಕಾರ ಕೊನೆಗೂ ಪರಿಹಾರ ಘೋಷಿಸಿದೆ.
ರಾಜ್ಯದ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ₹1,029 ಕೋಟಿ ಘೋಷಿಸಿದ್ದು, ಈ ಹಣ ತುಂಬಾ ಕಡಿಮೆ ಆಯಿತು ಎಂದು ಹಾಗೂ ಕೇಂದ್ರ ಮತ್ತೆ ಮಲತಾಯಿ ಧೋರಣೆ ತೋರಿದೆ ಎಂದು ಪ್ರತಿಪಕ್ಷ ನಾಯಕರು ದೂರುದ್ದಾರೆ.
ಕಳೆದ ವರ್ಷ ಹಿಂಗಾರು ಅವಧಿಯಲ್ಲಿ ಸಂಭವಿಸಿದ ಬರಕ್ಕೆ ಕೇಂದ್ರ ಸರ್ಕಾರ ಈಗ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕದಂತೆ ಒಡಿಶಾ ಕೂಡ ಬರಕ್ಕೆ ತುತ್ತಾಗಿತ್ತು. ಆದರೆ, ಒಡಿಶಾಗೆ ಕೇಂದ್ರ ಸರ್ಕಾರ ಬರೋಬ್ಬರಿ ₹ 3,338 ಕೋಟಿ ನೀಡಿದೆ. ಈ ಹಿನ್ನೆಲೆ ರಾಜ್ಯದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಲತಾಯಿ ದೋರಣೆ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ 17 ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಹಿನ್ನೆಲೆ ಆಗಿರುವ ನಷ್ಟಕ್ಕೆ ಕೇಂಸ್ರ ಸರ್ಕಾರ ಕೊನೆಗೂ ಪರಿಹಾರ ಘೋಷಿಸಿದೆ.
ರಾಜ್ಯ ಬಿಜೆಪಿ ಸರ್ಕಾರ ಹಾಗೂ ಪ್ರತಿಪಕ್ಷದ ನಾಯಕರು ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರದಿಂದ ಮನ್ನಣೆ ಸಿಕ್ಕಿಲ್ಲ. ರಾಜ್ಯದ ಅತಿವೃಷ್ಟಿಯಿಂದಾಗಿ ಒಟ್ಟು ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹಾನಿಯಾಗಿದೆ. ಕೇಂದ್ರ ಸರ್ಕಾರ ತಕ್ಷಣ 5 ರಿಂದ 6 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಸಾವಿರ ಕೋಟಿ ರೂ ಬಿಡುಗಡೆ ಮಾಡುವ ಮೂಲಕ ಕೇಂದ್ರ ರಾಜ್ಯದ ಮನವಿಯನ್ನು ಪೂರ್ಣಪ್ರಮಾಣದಲ್ಲಿ ಸಮ್ಮತಿಸಿಲ್ಲ.
ಮುಂದುವರೆದ ತಾರತಮ್ಯ
ಕರ್ನಾಟಕದ ರೀತಿಯಲ್ಲಿ ಅತಿವೃಷ್ಟಿಯಿಂದ ಸಮಸ್ಯೆಗೆ ಒಳಗಾದ ಒರಿಸ್ಸಾಗೆ ನೀಡಿದ್ದು ಬರೋಬ್ಬರಿ 3338 ಕೋಟಿ ರೂ. ನೀಡಲಾಗಿದೆ. ಕಳೆದ ವರ್ಷ ಕೊಡಗು ಜಿಲ್ಲೆಯ ಭಾರಿ ನಷ್ಟಕ್ಕೂ ಕೆಲ ಸರ್ಕಾರ ಕಡಿಮೆ ಮತದ ಪರಿಹಾರ ನೀಡಿತ್ತು. ಇದಕ್ಕೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು. ಈಸಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಹಿನ್ನೆಲೆ ಹೆಚ್ಚಿನ ಮತ್ತು ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ.
ಉನ್ನತ ಮಟ್ಟದ ಸಮಿತಿ ನಿರ್ಧಾರ
ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ತೀವ್ರ ನೆರೆ ಸಮಸ್ಯೆಗೆ ತುತ್ತಾದ ಭಾಗಗಳಿಗೆ ಹೆಚ್ಚುವರಿ ಮತವಾಗಿ ಕೇಂದ್ರ ಸರ್ಕಾರ ನಿನ್ನೆ ನಡೆದ ಸಭೆಯಲ್ಲಿ4432.10 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ 1029 ಕೋಟಿ ರೂ., ಓರಿಸ್ಸಾಗೆ 3338.22 ಕೋಟಿ ರೂ. ಹಾಗೂ ಹಿಮಾಚಲ ಪ್ರದೇಶಕ್ಕೆ 64.49 ಕೋಟಿ ರೂ ನೀಡಲಾಗಿದೆ.Conclusion:news