ETV Bharat / state

ಅಮಾಯಕನ ವಿರುದ್ಧ ಸುಳ್ಳು ಕೇಸ್ ಆರೋಪ: ಇನ್ಸ್​​ಸ್ಪೆಕ್ಟರ್, ಸಬ್‌ಇನ್ಸ್​​ಸ್ಪೆಕ್ಟರ್ ವಿರುದ್ಧ ದೂರು

author img

By

Published : Jul 22, 2021, 6:53 PM IST

ಬೀದಿಬದಿ ವ್ಯಾಪಾರಿ ಮೇಲೆ ಪೊಲೀಸರು ಇಲ್ಲಸಲ್ಲದ ಆರೋಪ ಮಾಡಿ ಸುಳ್ಳು ಕೇಸ್​ ದಾಖಲಿಸಿದ್ದ ಹಿನ್ನೆಲೆಯಲ್ಲಿ ಆ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ ಆರ್​​ಎಂಸಿ ಯಾರ್ಡ್ ಠಾಣೆಯ ಸಬ್‌ಇನ್ಸ್​​ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ಅವರ ವಿರುದ್ಧ ದೂರು ದಾಖಲಾಗಿದೆ.

inspector
ಸಬ್ ಇನ್ಸ್​​ಸ್ಪೆಕ್ಟರ್ ವಿರುದ್ಧ ದೂರು

ಬೆಂಗಳೂರು: ಕಾನೂನು ಪಾಲಿಸಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಆರೋಪ ಕೇಳಿ ಬಂದಿದೆ. ಆರ್​​ಎಂಸಿ ಯಾರ್ಡ್ ಠಾಣೆಯ ಸಬ್‌ಇನ್ಸ್​​ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ವಿರುದ್ಧ ಗಂಭೀರ ಆಪಾದನೆ ಮಾಡಲಾಗಿದೆ. ಮತ್ತೊಂದೆಡೆ ಸುಳ್ಳು ಕೇಸಿಗೆ ಹೆದರಿದ ಬೀದಿ ಬದಿ ವ್ಯಾಪಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ಶಿವರಾಜ್​

ಈ ಸಂಬಂಧ ಮಾಹಿತಿ ಸಂಗ್ರಹಿಸಿದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಆಂತರಿಕ ತನಿಖೆ ನಡೆಸಿ ಇಂದು ಅಥವಾ ನಾಳೆಯೊಳಗೆ ಪೊಲೀಸ್ ಕಮಿಷನರ್ ಕಮಲ್‌ ಪಂತ್​ ಅವರಿಗೆ ವರದಿ ನೀಡಲಿದ್ದಾರೆ. ಮೇಲ್ನೋಟಕ್ಕೆ ಆರೋಪ ಸಾಬೀತಾದರೆ ಇಬ್ಬರನ್ನೂ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ.

ಪೊಲೀಸರ ವಿರುದ್ಧ ಗಂಭೀರ ಆರೋಪ

ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಕಳೆದ‌ ಶನಿವಾರ ಮನೆ ಮುಂದೆ ಸ್ನೇಹಿತರೊಂದಿಗೆ ಮೊಬೈಲ್​​ನಲ್ಲಿ ಲೂಡೊ ಗೇಮ್‌ ಆಡುವಾಗ ರೌಂಡ್ಸ್​​ಗೆ ಬಂದಿದ್ದ ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ಗಾಂಜಾ ಸೇವನೆ ಆರೋಪ ಹೊರಿಸಿ ಆತನನ್ನು ಠಾಣೆಗೆ ಕರೆತಂದಿದ್ದಾರೆ. ಪಿಎಸ್ಐ ಆಂಜಿನಪ್ಪ ವಿಚಾರಣೆ ವೇಳೆ ಶಿವರಾಜ್​​ಗೆ ಸಿಗರೇಟಿನಲ್ಲಿ ಗಾಂಜಾ ಸೇವಿಸುವಂತೆ ಒತ್ತಡ ಹಾಕಿದ್ದಾರೆ‌.‌ ಸಿಗರೇಟು ಸೇದಿದರೆ ಬಿಡುವುದಾಗಿ ಆಮಿಷವೊಡ್ಡಿ ಸೇದುವಂತೆ ಮಾಡಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಮಾದಕ ವಸ್ತು ಸೇವನೆ ಆರೋಪ ಹೊರಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಪೊಲೀಸರ ನಡತೆಯಿಂದ ಬೇಸರಗೊಂಡು ಸಮಾಜಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಮನೆಯವರು ಆಸ್ಪತ್ರೆ ಸೇರಿಸಿದ್ದಾರೆ‌. ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್, ನಡೆದ ಘಟನೆಗಳ ಬಗ್ಗೆ ಮಾತನಾಡಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಟುಂಬಸ್ಥರು, ಗಾಂಜಾ ಸೇವನೆ ಆರೋಪದಡಿ ಸುಳ್ಳು ಕೇಸ್ ಹಾಕಿದ್ದಾರೆ‌ ಎಂದು ಆರೋಪಿಸಿದ್ದಾರೆ.

ವಿಚಾರಣೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಮಾಡಿದ ಪಿಎಸ್ಐ:

ಆರ್​ಎಂಸಿ ಯಾರ್ಡ್ ಪೊಲೀಸರ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಆಂತರಿಕ ತನಿಖೆ ನಡೆಸಿದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸುಳ್ಳು ಕೇಸ್ ಬಗ್ಗೆ ಕಂಡುಕೊಂಡಿದ್ದಾರೆ. ಪಿಎಸ್ಐ ಅಂಜಿನಪ್ಪ ಅವರನ್ನು‌ ಕಚೇರಿಗೆ ಕರೆಸಿ ಮಾಹಿತಿ ಪಡೆಯುವಾಗ ಅನುಮಾನಾಸ್ಪದ ವರ್ತನೆ ತೋರಿದ್ದರಿಂದ ಅನುಮಾನಗೊಂಡು ಬೇರೆ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ವಿಚಾರಣೆ ವೇಳೆ‌ ಮೊಬೈಲ್​ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಬಯಲಿಗೆ ಬಂದಿದೆ‌.

ಇನ್ಸ್​​ಸ್ಪೆಕ್ಟರ್ ವಿರುದ್ಧ 12 ಲಕ್ಷ ವಸೂಲಿ ಆರೋಪ:

ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ವಿಚಾರಣೆ ವೇಳೆ ಉದ್ಯಮಿಯಿಂದ 12 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌. ಡ್ರೈ ಫ್ರೂಟ್ ಉದ್ಯಮಿಗೆ ಕಲಬೆರಕೆ ದಂಧೆ ನಡೆಸುತ್ತಿದ್ದೀಯಾ ಎಂದು ಹೆದರಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ‌. ಸದ್ಯ ಆರ್ ಎಂಸಿ ಯಾರ್ಡ್ ಇನ್ಸ್​​ಸ್ಪೆಕ್ಟರ್ ಹಾಗು ಸಿಬ್ಬಂದಿ ವಿರುದ್ಧದ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಡಿಸಿಪಿ ನೀಡಲಿದ್ದಾರೆ.

ಇದನ್ನೂ ಓದಿ: ಪೊಲೀಸರ ಮೇಲೆ ಕಿರುಕುಳ ಆರೋಪ ಹೊರಿಸಿ ವ್ಯಕ್ತಿ ಆತ್ಮಹತ್ಯೆ ಯತ್ನ: ಮಾಡದ ತಪ್ಪಿಗೆ ಕೇಸ್​?

ಬೆಂಗಳೂರು: ಕಾನೂನು ಪಾಲಿಸಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಆರೋಪ ಕೇಳಿ ಬಂದಿದೆ. ಆರ್​​ಎಂಸಿ ಯಾರ್ಡ್ ಠಾಣೆಯ ಸಬ್‌ಇನ್ಸ್​​ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ವಿರುದ್ಧ ಗಂಭೀರ ಆಪಾದನೆ ಮಾಡಲಾಗಿದೆ. ಮತ್ತೊಂದೆಡೆ ಸುಳ್ಳು ಕೇಸಿಗೆ ಹೆದರಿದ ಬೀದಿ ಬದಿ ವ್ಯಾಪಾರಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ಶಿವರಾಜ್​

ಈ ಸಂಬಂಧ ಮಾಹಿತಿ ಸಂಗ್ರಹಿಸಿದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಆಂತರಿಕ ತನಿಖೆ ನಡೆಸಿ ಇಂದು ಅಥವಾ ನಾಳೆಯೊಳಗೆ ಪೊಲೀಸ್ ಕಮಿಷನರ್ ಕಮಲ್‌ ಪಂತ್​ ಅವರಿಗೆ ವರದಿ ನೀಡಲಿದ್ದಾರೆ. ಮೇಲ್ನೋಟಕ್ಕೆ ಆರೋಪ ಸಾಬೀತಾದರೆ ಇಬ್ಬರನ್ನೂ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ.

ಪೊಲೀಸರ ವಿರುದ್ಧ ಗಂಭೀರ ಆರೋಪ

ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಕಳೆದ‌ ಶನಿವಾರ ಮನೆ ಮುಂದೆ ಸ್ನೇಹಿತರೊಂದಿಗೆ ಮೊಬೈಲ್​​ನಲ್ಲಿ ಲೂಡೊ ಗೇಮ್‌ ಆಡುವಾಗ ರೌಂಡ್ಸ್​​ಗೆ ಬಂದಿದ್ದ ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ಗಾಂಜಾ ಸೇವನೆ ಆರೋಪ ಹೊರಿಸಿ ಆತನನ್ನು ಠಾಣೆಗೆ ಕರೆತಂದಿದ್ದಾರೆ. ಪಿಎಸ್ಐ ಆಂಜಿನಪ್ಪ ವಿಚಾರಣೆ ವೇಳೆ ಶಿವರಾಜ್​​ಗೆ ಸಿಗರೇಟಿನಲ್ಲಿ ಗಾಂಜಾ ಸೇವಿಸುವಂತೆ ಒತ್ತಡ ಹಾಕಿದ್ದಾರೆ‌.‌ ಸಿಗರೇಟು ಸೇದಿದರೆ ಬಿಡುವುದಾಗಿ ಆಮಿಷವೊಡ್ಡಿ ಸೇದುವಂತೆ ಮಾಡಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಮಾದಕ ವಸ್ತು ಸೇವನೆ ಆರೋಪ ಹೊರಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಯಾಗಿರುವ ಶಿವರಾಜ್ ಪೊಲೀಸರ ನಡತೆಯಿಂದ ಬೇಸರಗೊಂಡು ಸಮಾಜಕ್ಕೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಮನೆಯವರು ಆಸ್ಪತ್ರೆ ಸೇರಿಸಿದ್ದಾರೆ‌. ಚಿಕಿತ್ಸೆ ಪಡೆಯುತ್ತಿರುವ ಶಿವರಾಜ್, ನಡೆದ ಘಟನೆಗಳ ಬಗ್ಗೆ ಮಾತನಾಡಿ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಟುಂಬಸ್ಥರು, ಗಾಂಜಾ ಸೇವನೆ ಆರೋಪದಡಿ ಸುಳ್ಳು ಕೇಸ್ ಹಾಕಿದ್ದಾರೆ‌ ಎಂದು ಆರೋಪಿಸಿದ್ದಾರೆ.

ವಿಚಾರಣೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಮಾಡಿದ ಪಿಎಸ್ಐ:

ಆರ್​ಎಂಸಿ ಯಾರ್ಡ್ ಪೊಲೀಸರ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಆಂತರಿಕ ತನಿಖೆ ನಡೆಸಿದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸುಳ್ಳು ಕೇಸ್ ಬಗ್ಗೆ ಕಂಡುಕೊಂಡಿದ್ದಾರೆ. ಪಿಎಸ್ಐ ಅಂಜಿನಪ್ಪ ಅವರನ್ನು‌ ಕಚೇರಿಗೆ ಕರೆಸಿ ಮಾಹಿತಿ ಪಡೆಯುವಾಗ ಅನುಮಾನಾಸ್ಪದ ವರ್ತನೆ ತೋರಿದ್ದರಿಂದ ಅನುಮಾನಗೊಂಡು ಬೇರೆ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ವಿಚಾರಣೆ ವೇಳೆ‌ ಮೊಬೈಲ್​ನಲ್ಲಿ ರೆಕಾರ್ಡ್ ಮಾಡುತ್ತಿರುವುದು ಬಯಲಿಗೆ ಬಂದಿದೆ‌.

ಇನ್ಸ್​​ಸ್ಪೆಕ್ಟರ್ ವಿರುದ್ಧ 12 ಲಕ್ಷ ವಸೂಲಿ ಆರೋಪ:

ಇನ್ಸ್​​ಸ್ಪೆಕ್ಟರ್ ಪಾರ್ವತಮ್ಮ ವಿಚಾರಣೆ ವೇಳೆ ಉದ್ಯಮಿಯಿಂದ 12 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ‌. ಡ್ರೈ ಫ್ರೂಟ್ ಉದ್ಯಮಿಗೆ ಕಲಬೆರಕೆ ದಂಧೆ ನಡೆಸುತ್ತಿದ್ದೀಯಾ ಎಂದು ಹೆದರಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ‌. ಸದ್ಯ ಆರ್ ಎಂಸಿ ಯಾರ್ಡ್ ಇನ್ಸ್​​ಸ್ಪೆಕ್ಟರ್ ಹಾಗು ಸಿಬ್ಬಂದಿ ವಿರುದ್ಧದ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಡಿಸಿಪಿ ನೀಡಲಿದ್ದಾರೆ.

ಇದನ್ನೂ ಓದಿ: ಪೊಲೀಸರ ಮೇಲೆ ಕಿರುಕುಳ ಆರೋಪ ಹೊರಿಸಿ ವ್ಯಕ್ತಿ ಆತ್ಮಹತ್ಯೆ ಯತ್ನ: ಮಾಡದ ತಪ್ಪಿಗೆ ಕೇಸ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.