ETV Bharat / state

ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಕಾರು ಚಾಲಕನ ಬರ್ಬರ ಕೊಲೆ - ತಮಿಳುನಾಡಿನ ಥಳಿ ತಾಲೂಕಿನ ಪಿನ್ನಮಂಗಲಂ

ಮಾರಕಾಸ್ತ್ರಗಳಿಂದ ಕೊಚ್ಚಿ ಕರ್ನಾಟಕ ಮೂಲದ ಕಾರು ಚಾಲಕನ ಹತ್ಯೆ. ತಮಿಳುನಾಡಿನ ಥಳಿ ತಾಲೂಕಿನ ಪಿನ್ನಮಂಗಲಂ ಎಲೆ ಚಂದ್ರಂ ಸರೋವರದ ರಸ್ತೆಯಲ್ಲಿ ಘಟನೆ.

Representative image
ಸಾಂದರ್ಭಿಕ ಚಿತ್ರ
author img

By

Published : Nov 26, 2022, 11:06 AM IST

ಆನೇಕಲ್(ಬೆಂಗಳೂರು): ಕರ್ನಾಟಕ ಮೂಲದ ಕಾರು ಚಾಲಕನನ್ನು ತಮಿಳುನಾಡಿನ ಬಳಿ ಹತ್ಯೆಗೈಯಲಾಗಿದೆ. ಶಾಂತ್ ಕುಮಾರ್(30) ಕೊಲೆಯಾಗಿರುವ ಚಾಲಕ. ತಮಿಳುನಾಡಿನ ಥಳಿ ತಾಲೂಕಿನ ಪಿನ್ನಮಂಗಲಂ ಎಲೆ ಚಂದ್ರಂ ಸರೋವರದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ತೋಟಗೂರು ಮೂಲದವನಾದ ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 10 ದಿನಗಳ ಹಿಂದೆ ಬಾರ್‌ನಲ್ಲಿ ಪಾನಮತ್ತರಾಗಿ ಜಗಳ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಇದೇ ವೈಷಮ್ಯದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಥಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ

ಆನೇಕಲ್(ಬೆಂಗಳೂರು): ಕರ್ನಾಟಕ ಮೂಲದ ಕಾರು ಚಾಲಕನನ್ನು ತಮಿಳುನಾಡಿನ ಬಳಿ ಹತ್ಯೆಗೈಯಲಾಗಿದೆ. ಶಾಂತ್ ಕುಮಾರ್(30) ಕೊಲೆಯಾಗಿರುವ ಚಾಲಕ. ತಮಿಳುನಾಡಿನ ಥಳಿ ತಾಲೂಕಿನ ಪಿನ್ನಮಂಗಲಂ ಎಲೆ ಚಂದ್ರಂ ಸರೋವರದ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ತೋಟಗೂರು ಮೂಲದವನಾದ ಈತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ 10 ದಿನಗಳ ಹಿಂದೆ ಬಾರ್‌ನಲ್ಲಿ ಪಾನಮತ್ತರಾಗಿ ಜಗಳ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಇದೇ ವೈಷಮ್ಯದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಥಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.