ETV Bharat / state

ಗೆಲುವಿನತ್ತ ಅಭ್ಯರ್ಥಿಗಳ ಚಿತ್ತ.... ಪ್ರಚಾರದಲ್ಲಿ ಎಲ್ಲರೂ ಬ್ಯುಸಿ! - ನಂದಿನಿ ಲೇಔಟ್​ನ ನಾನಾ ವಾರ್ಡ್

ಮಹಾಲಕ್ಷ್ಮೀ ಲೇಔಟ್​​ನಲ್ಲಿ ಬಿರುಸಿನ ಪ್ರಚಾರ ಮುಂದುವರೆದಿದೆ. ಸಮಯವನ್ನ ಲೆಕ್ಕಿಸದೇ ಅಭ್ಯರ್ಥಿಗಳು ಬೆಳ್ಳಂ ಬೆಳಗ್ಗೆ ಮತಯಾಚನೆಗೆ ಮುಂದಾಗಿದ್ದಾರೆ. ಇದರೊಂದಿಗೆ ಇಂದು ನಾಮಪತ್ರ ಹಿಂಪಡೆಯಲು ಸಹ ಕೊನೆಯ ದಿನವಾಗಿತ್ತು.

ಮಹಾಲಕ್ಷ್ಮೀ ಲೇಔಟ್​​ನಲ್ಲಿ ಬಿರುಸಿನ ಪ್ರಚಾರ
author img

By

Published : Nov 21, 2019, 7:28 PM IST

Updated : Nov 21, 2019, 7:44 PM IST

ಬೆಂಗಳೂರು: ವಿಧಾನಸಭಾ ಉಪಚುನಾವಣೆ ಕಾವು ಹೆಚ್ಚುತ್ತಿದೆ. ಏನಾದರೂ ಮಾಡಿ, ಈ ಉಪಚುನಾವಣೆ ಗೆದ್ದರೆ ಸಾಕು ಅಂತ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.‌ ಸಮಯವನ್ನೂ ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ. ‌ಇಂದೂ ಕೂಡಾ ಮೂರು ಪಕ್ಷದ ಅಭ್ಯರ್ಥಿಗಳು ಬೆಳಗ್ಗೆ 6 ಗಂಟೆಯಿಂದಲ್ಲೇ ಮತಪ್ರಚಾರದಲ್ಲಿ ತೊಡಗಿದ್ರು.

ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ, ನಟಿ ತಾರಾ ಚುನಾವಣಾ ಪ್ರಚಾರದಲ್ಲಿ ತೊಡಗಿದರು. ನಂದಿನಿ ಲೇಔಟ್​ನ ನಾನಾ ವಾರ್ಡ್​ಗಳಿಗೆ ತೆರಳಿ, ಗೋಪಾಲಯ್ಯಗೆ ಮತ ಹಾಕುವಂತೆ ಪ್ರಚಾರ ಮಾಡಿದರು. ಇನ್ನು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ‌ ನಾಶಿ ಕೂಡ ವಿವಿಧ ವಾರ್ಡ್​ಗಳಿಗೆ ತೆರಳಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು, ಮಹಾಲಕ್ಷ್ಮೀಪುರಂ ವಾರ್ಡ್​ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ. ಕಮಲಮ್ಮನಗುಂಡಿಯಿಂದ ಮತಯಾಚನೆ ಮಾಡಿದ್ರು.

ಮಹಾಲಕ್ಷ್ಮೀ ಲೇಔಟ್​​ನಲ್ಲಿ ಬಿರುಸಿನ ಪ್ರಚಾರ

ಇನ್ನು ನಾಮಪತ್ರ ವಾಪಾಸ್​​ ಪಡೆಯಲು ಇಂದು ಕೊನೆಯ ದಿನವಾಗಿತ್ತು. ‌ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಹದಿಮೂರು ಅಭ್ಯರ್ಥಿಗಳ ಪೈಕಿ, ಒಬ್ಬ ಪಕ್ಷೇತರರ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಡಾ. ರಾಜಣ್ಣ ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಹನ್ನೆರೆಡು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.‌

ಕಾಂಗ್ರೆಸ್​ನಿಂದ ಎಮ್. ಶಿವರಾಜ್, ಜೆಡಿಎಸ್​ನಿಂದ- ಡಾ. ಗಿರೀಶ್.ಕೆ ನಾಶಿ, ಬಿಜೆಪಿಯಿಂದ - ಗೋಪಾಲಯ್ಯ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ - ವಾಟಾಳ್ ನಾಗರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ- ಆಶಾರಾಣಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ- ಪಿ. ಗಿರೀಶ್, ಜೈ ವಿಜಯ ಭಾರತಿ ಪಕ್ಷದಿಂದ- ನಾರಾಯಣ ಸ್ವಾಮಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಕಣದಲ್ಲಿದ್ದಾರೆ.

ಬೆಂಗಳೂರು: ವಿಧಾನಸಭಾ ಉಪಚುನಾವಣೆ ಕಾವು ಹೆಚ್ಚುತ್ತಿದೆ. ಏನಾದರೂ ಮಾಡಿ, ಈ ಉಪಚುನಾವಣೆ ಗೆದ್ದರೆ ಸಾಕು ಅಂತ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.‌ ಸಮಯವನ್ನೂ ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ. ‌ಇಂದೂ ಕೂಡಾ ಮೂರು ಪಕ್ಷದ ಅಭ್ಯರ್ಥಿಗಳು ಬೆಳಗ್ಗೆ 6 ಗಂಟೆಯಿಂದಲ್ಲೇ ಮತಪ್ರಚಾರದಲ್ಲಿ ತೊಡಗಿದ್ರು.

ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ, ನಟಿ ತಾರಾ ಚುನಾವಣಾ ಪ್ರಚಾರದಲ್ಲಿ ತೊಡಗಿದರು. ನಂದಿನಿ ಲೇಔಟ್​ನ ನಾನಾ ವಾರ್ಡ್​ಗಳಿಗೆ ತೆರಳಿ, ಗೋಪಾಲಯ್ಯಗೆ ಮತ ಹಾಕುವಂತೆ ಪ್ರಚಾರ ಮಾಡಿದರು. ಇನ್ನು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ‌ ನಾಶಿ ಕೂಡ ವಿವಿಧ ವಾರ್ಡ್​ಗಳಿಗೆ ತೆರಳಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು, ಮಹಾಲಕ್ಷ್ಮೀಪುರಂ ವಾರ್ಡ್​ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ. ಕಮಲಮ್ಮನಗುಂಡಿಯಿಂದ ಮತಯಾಚನೆ ಮಾಡಿದ್ರು.

ಮಹಾಲಕ್ಷ್ಮೀ ಲೇಔಟ್​​ನಲ್ಲಿ ಬಿರುಸಿನ ಪ್ರಚಾರ

ಇನ್ನು ನಾಮಪತ್ರ ವಾಪಾಸ್​​ ಪಡೆಯಲು ಇಂದು ಕೊನೆಯ ದಿನವಾಗಿತ್ತು. ‌ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಹದಿಮೂರು ಅಭ್ಯರ್ಥಿಗಳ ಪೈಕಿ, ಒಬ್ಬ ಪಕ್ಷೇತರರ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಡಾ. ರಾಜಣ್ಣ ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಹನ್ನೆರೆಡು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.‌

ಕಾಂಗ್ರೆಸ್​ನಿಂದ ಎಮ್. ಶಿವರಾಜ್, ಜೆಡಿಎಸ್​ನಿಂದ- ಡಾ. ಗಿರೀಶ್.ಕೆ ನಾಶಿ, ಬಿಜೆಪಿಯಿಂದ - ಗೋಪಾಲಯ್ಯ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ - ವಾಟಾಳ್ ನಾಗರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ- ಆಶಾರಾಣಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ- ಪಿ. ಗಿರೀಶ್, ಜೈ ವಿಜಯ ಭಾರತಿ ಪಕ್ಷದಿಂದ- ನಾರಾಯಣ ಸ್ವಾಮಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಕಣದಲ್ಲಿದ್ದಾರೆ.

Intro:ಲೋಕಷನ್: ಮಹಾಲಕ್ಷ್ಮಿ ಲೇಔಟ್-ಬೆಂಗಳೂರು

ಪ್ಯಾಕೇಜ್: ಮನೆ ಮನೆ ಪ್ರಚಾರ

ಹೆಡ್ ಲೈನ್: ಮನೆ ಮನೆ ಪ್ರಚಾರದಲ್ಲಿ ಮುಳುಗಿದ ಅಭ್ಯರ್ಥಿಗಳು; ನಾಮಪತ್ರ ಹಿಂಪಡೆಯಲು ಇಂದು ಕಡೆ ದಿನ...‌

ವೆಬ್ ಲೀಡ್: ಮಹಾಲಕ್ಷ್ಮೀ ಲೇಔಟ್ ನಲ್ಲಿ ಬಿರುಸಿನ ಪ್ರಚಾರ ಮುಂದುವರೆದಿದೆ.. ಸಮಯವನ್ನ ಲೆಕ್ಕಿಸದೇ ಅಭ್ಯರ್ಥಿಗಳು ಇಂದು ಬೆಳ್ಳಂ ಬೆಳಗ್ಗೆ ಮತಯಾಚನೆಗೆ ಮುಂದಾಗಿದರು.. ಇದರೊಂದಿಗೆ ಇಂದು ನಾಮಪತ್ರ ಹಿಂಪಡೆಯಲು ಸಹ ಕೊನೆಯ ದಿನವಾಗಿತ್ತು.. ಎಷ್ಟು ಅಭ್ಯರ್ಥಿಗಳು ಹಿಂಪಡೆದ್ರು?? ಹೇಗಿತ್ತು ಇವತ್ತಿನ ಪ್ರಚಾರ, ಯಾರೆಲ್ಲ ಭಾಗಿಯಾಗಿದ್ದರು ಅನ್ನೋ ಮಾಹಿತಿ ಇಲ್ಲಿದೆ..‌

ಲುಕ್..

ವಾ/ಓ: ವಿಧಾನಸಭಾ ಉಪಚುನಾವಣೆ ಕಾವು ಹೆಚ್ಚುತ್ತಿದೆ.. ಏನಾದರೂ ಮಾಡಿ, ಈ ಉಪಚುನಾವಣೆ ಗೆದ್ದರೆ ಸಾಕು ಅಂತ ಹರಸಾಹಸ ಪಡುತ್ತಿದ್ದಾರೆ..‌ ಬೆಳ್ಳಂ ಬೆಳಗ್ಗೆ ಅನ್ನದೇ ಸಂಜೆ ಅನ್ನದೇ, ಜೊತೆಗೆ ಮಳೆಯನ್ನು ಲೆಕ್ಕಿಸದೇ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ..‌ಇಂದು ಕೂಡ ಮೂರು ಪಕ್ಷದ ಅಭ್ಯರ್ಥಿಗಳು ಬೆಳಗ್ಗೆ 6 ಗಂಟೆಯಿಂದಲ್ಲೇ ಮತಪ್ರಚಾರದಲ್ಲಿ ತೊಡಗಿದರು..‌

ಫ್ಲೋ...

ವಾ/ಒ: ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ, ನಟಿ ತಾರ ಚುನಾವಣಾ ಪ್ರಚಾರದಲ್ಲಿ ತೊಡಗಿದರು.. ನಂದಿನಿ ಲೇಔಟ್ನಾ ನಾನಾ ವಾರ್ಡ್ ಗಳಿಗೆ ತೆರಳಿ, ಗೋಪಾಲಯ್ಯಗೆ ಮತ ಹಾಕುವಂತೆ ಪ್ರಚಾರ ಮಾಡಿದರು.. ಇನ್ನು ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ‌ ನಾಶಿ ಕೂಡ ವಿವಿಧ ವಾರ್ಡ್ ಗಳಿಗೆ ತೆರಳಿ ಮತ ಹಾಕುವಂತೆ ಮನೆ ಮನೆ ಪ್ರಚಾರ ಮಾಡಿದರು..‌ ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು, ಮಹಾಲಕ್ಷ್ಮೀಪುರಂ ವಾರ್ಡ್ ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ. ಕಮಲಮ್ಮನಗುಂಡಿಯಿಂದ ಮತಯಾಚನೆ ಮಾಡಿದರು..‌

ಫ್ಲೋ...‌

ವಾ/ಓ: ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು ತೊಡಗಿದ್ದರೆ, ಇತ್ತ ಇಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿತ್ತು..‌ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಹದಿಮೂರು ಅಭ್ಯರ್ಥಿಗಳ ಪೈಕಿ, ಒಬ್ಬ ಪಕ್ಷೇತರರ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ.. ಪಕ್ಷೇತರ ಅಭ್ಯರ್ಥಿ ಡಾ. ರಾಜಣ್ಣ ಹಿಂಪಡೆದಿದ್ದು, ಅಂತಿಮವಾಗಿ ಹನ್ನೆರಡು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ..‌

ಫ್ಲೋ...

ವಾ/ಓ: ಕಾಂಗ್ರೆಸ್ ನಿಂದ ಎಮ್.ಶಿವರಾಜ್, ಜೆಡಿಎಸ್ ನಿಂದ- ಡಾ. ಗಿರೀಶ್.ಕೆ ನಾಶಿ, ಬಿಜೆಪಿಯಿಂದ - ಗೋಪಾಲಯ್ಯ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ - ವಾಟಾಳ್ ನಾಗರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ-ಆಶಾರಾಣಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ- ಪಿ. ಗಿರೀಶ್ , ಜೈ ವಿಜಯ ಭಾರತಿ ಪಕ್ಷದಿಂದ- ನಾರಾಯಣ ಸ್ವಾಮಿ ಸೇರಿದಂತೆ ಪಕ್ಷೇತರ ಅಭ್ಯರ್ಥಿ ಗಳು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಬೈ ಎಲೆಕ್ಷನ್ ಕಣದಲ್ಲಿದ್ದಾರೆ..

ಫ್ಲೋ...‌

ವಾ/ಓ: ಮಹಾಲಕ್ಷ್ಮಿ ಲೇಔಟ್ ಕಣದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ ಇದ್ದು,,, ಯಾವ ಅಭ್ಯರ್ಥಿಯ ಕೈ ಹಿಡಿತ್ತಾರೆ ಮತದಾರರು ಕಾದು ನೋಡಬೇಕು. .‌ ಅಲ್ಲಿವರೆಗೂ ಪ್ರಚಾರ ಗುಂಗಿನಲ್ಲಿ ಅಭ್ಯರ್ಥಿಗಳು ಇರಲಿದ್ದಾರೆ..

ಈ ಟಿವಿ ಭಾರತ, ಬೆಂಗಳೂರು

KN_BNG_3_MANE_MANE_PRACHARA_SCRIPT_OVERALL_PKG_7201801



Body:..Conclusion:..
Last Updated : Nov 21, 2019, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.