ETV Bharat / state

ಪೌರತ್ವ ಕಾಯಿದೆ ಕುರಿತು ಬಿಜೆಪಿ ವಿಶೇಷ ಸಭೆ: ಕಾಯ್ದೆಯ ಲಾಭ ತಿಳಿಸಿಕೊಡಲು ಮುಖಂಡರಿಗೆ‌ ಕಟೀಲ್‌ ಕರೆ

ಪೌರತ್ವ ಕಾಯ್ದೆಯ ಮಹತ್ವ, ಲಾಭ ಸೇರಿದಂತೆ ಎಲ್ಲವನ್ನೂ ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು. ರಾಜ್ಯದ ಗ್ರಾಮ ಗ್ರಾಮಗಳಿಗೆ ತೆರಳಿ ಈ ವಿಚಾರಧಾರೆಗಳನ್ನು ತಿಳಿಸುವ ಕೆಲಸವಾಗಬೇಕು ಎಂದು ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

author img

By

Published : Dec 24, 2019, 1:24 PM IST

bjp-special-meeting-on-citizenship-amendment-act-
ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಬಿಜೆಪಿ ವಿಶೇಷ ಸಭೆ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ಮಹತ್ವ, ಲಾಭ ಸೇರಿದಂತೆ ಎಲ್ಲವನ್ನೂ ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು. ರಾಜ್ಯದ ಗ್ರಾಮ, ಗ್ರಾಮಗಳಿಗೆ ತೆರಳಿ ಈ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಬಿಜೆಪಿ ವಿಶೇಷ ಸಭೆ

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ನಂತರ ಮಾತನಾಡಿದ ಕಟೀಲ್, ನಾನು‌ ಮೂರು ಬಾರಿ ಸಂಸದನಾಗಿ ಆಯ್ಕೆ ಆಗಿದ್ದೇನೆ. ಸಂವಿಧಾನದ 370ನೇ ವಿಧಿ‌ ರದ್ದು, ರಾಮ ಮಂದಿರ ನಿರ್ಮಾಣ, ಎನ್‌ಆರ್‌ಸಿ ಈ ಮೂರು ವಿಚಾರಗಳಿಗೆ ನಮ್ಮ ಪರವಾಗಿ ಜನ ಮತದಾನ ಮಾಡಿರೋದಕ್ಕೆ ಹೆಮ್ಮೆ ಆಗುತ್ತೆ. ಆದ್ರೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಾಗಲೆಲ್ಲಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಆರೋಪಿಸಿದರು.

ಪಾಕಿಸ್ತಾನವನ್ನ ತುಂಡು ಮಾಡಿ ಇಬ್ಬಾಗ ಮಾಡಿದ್ದೇ ಇವತ್ತಿನ ಎಲ್ಲಾ ಹೋರಾಟಕ್ಕೆ ಕಾರಣ. ಭಾರತದಲ್ಲಿ ಪ್ರಮುಖ ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಸ್ಪೀಕರ್, ಮುಖ್ಯಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಭಾರತ ನೀಡಿದೆ. ಆಗ ಯಾರೊಬ್ಬ ಬಹುಸಂಖ್ಯಾತರೂ ಕೂಡಾ ವಿರೋಧ ವ್ಯಕ್ತಪಡಿಸಿಲ್ಲ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿ ಬಂದ್ರು, ಸಿಐಡಿ ತನಿಖೆಗೆ ಆದೇಶಿಸಿದರು, ಆದರೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಆಗ್ರಹಿಸಿದರು. ಇದೆಲ್ಲದಕ್ಕೂ ಮಿಗಿಲಾಗಿ ಇವತ್ತು ಎಲ್ಲವೂ ಬಯಲಾಗಿದೆ. ಘಟನೆಗೆ ಕಾರಣ ಏನು ಅನ್ನೋದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್‌ ನಾಯಕರ ಕುತಂತ್ರವೇ ಕಾರಣ. ಕಾಂಗ್ರೆಸ್, ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಹೇಗಾದರೂ ‌ಮಾಡಿ ಅಧಿಕಾರ ಪಡೆಯಬೇಕು, ಮುಸ್ಲೀಮರ ಮತವನ್ನ ಪಡೆಯಬೇಕು ಎಂದು ಈ ರೀತಿ ಮಾಡ್ತಿದೆ ಎಂದು ಆರೋಪಿಸಿದರು.

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ಮಹತ್ವ, ಲಾಭ ಸೇರಿದಂತೆ ಎಲ್ಲವನ್ನೂ ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು. ರಾಜ್ಯದ ಗ್ರಾಮ, ಗ್ರಾಮಗಳಿಗೆ ತೆರಳಿ ಈ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಬಿಜೆಪಿ ವಿಶೇಷ ಸಭೆ

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ನಂತರ ಮಾತನಾಡಿದ ಕಟೀಲ್, ನಾನು‌ ಮೂರು ಬಾರಿ ಸಂಸದನಾಗಿ ಆಯ್ಕೆ ಆಗಿದ್ದೇನೆ. ಸಂವಿಧಾನದ 370ನೇ ವಿಧಿ‌ ರದ್ದು, ರಾಮ ಮಂದಿರ ನಿರ್ಮಾಣ, ಎನ್‌ಆರ್‌ಸಿ ಈ ಮೂರು ವಿಚಾರಗಳಿಗೆ ನಮ್ಮ ಪರವಾಗಿ ಜನ ಮತದಾನ ಮಾಡಿರೋದಕ್ಕೆ ಹೆಮ್ಮೆ ಆಗುತ್ತೆ. ಆದ್ರೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಾಗಲೆಲ್ಲಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಆರೋಪಿಸಿದರು.

ಪಾಕಿಸ್ತಾನವನ್ನ ತುಂಡು ಮಾಡಿ ಇಬ್ಬಾಗ ಮಾಡಿದ್ದೇ ಇವತ್ತಿನ ಎಲ್ಲಾ ಹೋರಾಟಕ್ಕೆ ಕಾರಣ. ಭಾರತದಲ್ಲಿ ಪ್ರಮುಖ ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಸ್ಪೀಕರ್, ಮುಖ್ಯಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಭಾರತ ನೀಡಿದೆ. ಆಗ ಯಾರೊಬ್ಬ ಬಹುಸಂಖ್ಯಾತರೂ ಕೂಡಾ ವಿರೋಧ ವ್ಯಕ್ತಪಡಿಸಿಲ್ಲ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿ ಬಂದ್ರು, ಸಿಐಡಿ ತನಿಖೆಗೆ ಆದೇಶಿಸಿದರು, ಆದರೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಆಗ್ರಹಿಸಿದರು. ಇದೆಲ್ಲದಕ್ಕೂ ಮಿಗಿಲಾಗಿ ಇವತ್ತು ಎಲ್ಲವೂ ಬಯಲಾಗಿದೆ. ಘಟನೆಗೆ ಕಾರಣ ಏನು ಅನ್ನೋದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್‌ ನಾಯಕರ ಕುತಂತ್ರವೇ ಕಾರಣ. ಕಾಂಗ್ರೆಸ್, ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಹೇಗಾದರೂ ‌ಮಾಡಿ ಅಧಿಕಾರ ಪಡೆಯಬೇಕು, ಮುಸ್ಲೀಮರ ಮತವನ್ನ ಪಡೆಯಬೇಕು ಎಂದು ಈ ರೀತಿ ಮಾಡ್ತಿದೆ ಎಂದು ಆರೋಪಿಸಿದರು.

Intro:



ಬೆಂಗಳೂರು: ಪೌರತ್ವ ಕಾಯ್ದೆ ಮಹತ್ವ, ಲಾಭ ಸೇರಿದಂತೆ ಎಲ್ಲವನ್ನೂ ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು
ರಾಜ್ಯದ ಗ್ರಾಮ ಗ್ರಾಮಗಳಿಗೆ ತೆರಳಿ ಈ ವಿಚಾರಧಾರೆಗಳನ್ನು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಬಿಜೆಪಿ ವಿಶೇಷ ಸಭೆ ನಡೆಸಿತು.ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಕಟೀಲ್,ನಾನು‌ ಮೂರು ಬಾರಿ ಸಂಸದನಾಗಿ ಆಯ್ಕೆ ಆಗಿದ್ದೇನೆ ಸಂಸದನಾಗಿ ಮೂರು ವಿಷಯಗಳಿಗೆ‌ ಮತದಾನ ಆಗಿದೆ ಸಂವಿಧಾನದ 371 ವಿಧಿ‌ ರದ್ದು, ರಾಮ ಮಂದಿರ, ಎನ್‌ಆರ್‌ಸಿ ಪರವಾಗಿ ಮತದಾನ ಮಾಡಿರೋದಕ್ಕೆ ಹೆಮ್ಮೆ ಆಗುತ್ತದೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಾಗಲೆಲ್ಲಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಈ ದೇಶದಲ್ಲಿ ಮೊದಲಿಗೆ ವಂದೇ ಮಾತರಂ ವಿಭಜನೆ ಮಾಡಲಾಯ್ತು.ಪಾಕಿಸ್ತಾನವನ್ನ ತುಂಡು ಮಾಡಿ ಇಬ್ಬಾಗ ಮಾಡಿದ್ದೇ ಇವತ್ತಿನ ಎಲ್ಲಾ ಹೋರಾಟಕ್ಕೆ ಕಾರಣ ಭಾರತದಲ್ಲಿ ಅಲ್ಪ ಸಂಖ್ಯಾತರು ರಾಷ್ಟ್ರಪತಿ ಆಗಿದ್ದಾರೆ.ಸ್ಪೀಕರ್, ಮುಖ್ಯಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಸ್ಥಾನವನ್ನ ಅಲ್ಪ ಸಂಖ್ಯಾತರಿಗೆ ಭಾರತ ಕೊಟ್ಟಿದೆ ಆಗ ಯಾರೊಬ್ಬ ಬಹುಸಂಖ್ಯಾತರು ವಿರೋಧ ವ್ಯಕ್ತಪಡಿಸಿಲ್ಲ ಆಶ್ರಯ ಕೇಳಿ ಬಂದವರಿಗೆ ರಕ್ಷಣೆ ನೀಡುವುದು ಭಾರತ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇರೋರಿಗೆ ಪೌರತ್ವ ಸಿಗುತ್ತೆ. ಆಗಿದ್ದರೂ ಕಾಂಗ್ರೆಸ್ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದು ಮುಖಂಡರ ಕಾರ್ಯಕರ್ತರಿಗೆ ಕರೆ ನೀಡಿದರು.

ನಂತರ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ,
ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿ ಬಂದರು ಸಿಐಡಿ ತನಿಖೆಗೆ ಆದೇಶಿಸಿದರು ಆದರೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಆಗ್ರಹಿಸಿದರು ಇದೆಲ್ಲವುದಕ್ಕೂ ಮಿಗಿಲಾಗಿ ಇವತ್ತು ಎಲ್ಲವೂ ಬಯಲಾಗಿದೆ ಘಟನೆಗೆ ಬಿಜೆಪಿ ಕಾರಣ ಅಲ್ಲ, ರಾಜ್ಯ ಸರ್ಕಾರ ಕಾರಣ ಅಲ್ಲ ಘಟನೆಗೆ ಕಾರಣ ಏನು ಅನ್ನೋದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದೆ ಕಾಂಗ್ರೆಸ್‌ನಾ ಕುತಂತ್ರವೇ ಕಾರಣ.ಕಾಂಗ್ರೆಸ್ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ ಹೇಗಾದರೂ ‌ಮಾಡಿ ಅಧಿಕಾರ ಪಡೆಯಬೇಕು, ಮುಸ್ಲಿಮರ ಮತವನ್ನ ಪಡೆಯಬೇಕು ಎಂದು ಈ ರೀತಿ ಮಾಡ್ತೀದೆ ಬ್ರೀಟಿಷರ‌ ರೀತಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ನರೇಂದ್ರ ಮೋದಿ ಹೊರಟ್ಟಿದ್ದಾರೆ ಆದರೆ ಯಾವುದೇ ಕಾರಣಕ್ಕೂ ಮುಸ್ಲಿಮರನ್ನ ಬಿಡಬಾರದು, ನಮ್ಮತ್ರನೇ ಇಟ್ಕೋಬೇಕು ಎಂದು ಕಾಂಗ್ರೆಸ್ ಈ ರೀತಿ ಮಾಡ್ತಿದೆ ಹೇಗಾದರೂ ಮಾಡಿ ಗಲಭೆ ಸೃಷ್ಟಿಸಬೇಕು ಅಂತಾ ಕಾಂಗ್ರೆಸ್ ಇದೆ ಎಂದು ವಾಗ್ದಾಳಿ ನಡೆಸಿದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.