ETV Bharat / state

ಕುಖ್ಯಾತ ಅಂತಾ​ರಾಜ್ಯ ಕಳ್ಳನ ಬಂಧನ.. ಕೆಜಿಗಟ್ಟಲೆ ಚಿನ್ನಾಭರಣ ವಶ..

author img

By

Published : Oct 15, 2019, 10:21 PM IST

ಅಕ್ಟೋಬರ್ 2ನೇ ತಾರೀಖು ತಮಿಳುನಾಡು ತಿರುಚಿಯ ಪ್ರತಿಷ್ಠಿತ ಲಲಿತ ಜ್ಯುವೆಲ್ಲರಿಯಲ್ಲಿ ಕಳ್ಳತನ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾದ ಗಣೇಶ್ ಮತ್ತು ಸತೀಶ್ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆದರೆ, ಮುರುಗನ್ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದು ಅಕ್ಟೋಬರ್ 11ರಂದು ಮೇಯೋ ಹಾಲ್‌ನ 11ನೇ ಎಸಿಎಂಎಂ ಕೋರ್ಟ್​ಗೆ ಶರಣಾಗಿದ್ದ. ನಂತರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿ ಮುರುಗನ್​ ವಶಕ್ಕೆ ಪಡೆದಿದ್ದರು.

ಪೊಲೀಸರು ಮಾಹಿತಿ ನೀಡಿದರು

ಬೆಂಗಳೂರು: ಕುಖ್ಯಾತ ಅಂತಾರಾಜ್ಯ ಕಳ್ಳನ ಬಂಧನ ಮಾಡಿ ಸಿಲಿಕಾನ್ ಸಿಟಿಯಲ್ಲೇ ಮೊದಲ ಬಾರಿಗೆ ಸುಮಾರು 12 ಕೆಜಿ ತೂಕದ ಚಿನ್ನ ವಜ್ರ ಫ್ಲಾಟಿನಂ ಆಭರಣ ವಶಪಡಿಸಿಕೊಳ್ಳುವಲ್ಲಿ ಆಗ್ನೇಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಮುರುಗನ್ ಅಲಿಯಾಸ್ ಬಾಲ ಮುರುಗನ್ ಉರುಫ್ ಶಿವಕುಮಾರ್ ಬಂಧಿತ ಆರೋಪಿ.

ಅಕ್ಟೋಬರ್ 2ನೇ ತಾರೀಖು ತಮಿಳುನಾಡು ತಿರುಚಿಯ ಪ್ರತಿಷ್ಠಿತ ಲಲಿತ ಜ್ಯುವೆಲ್ಲರಿಯಲ್ಲಿ ಕಳ್ಳತನ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾದ ಗಣೇಶ್ ಮತ್ತು ಸತೀಶ್ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆದರೆ, ಮುರುಗನ್ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದು ಅಕ್ಟೋಬರ್ 11ರಂದು ಮೇಯೋ ಹಾಲ್‌ನ 11ನೇ ಎಸಿಎಂಎಂ ಕೋರ್ಟ್​ಗೆ ಶರಣಾಗಿದ್ದ. ನಂತರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿ ಮುರುಗನ್​ನ ವಶಕ್ಕೆ ಪಡೆದಿದ್ದರು.

ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿ ಇತರ ವಸ್ತುಗಳು..

ಪೊಲೀಸರು ಆರೋಪಿಯ ವಿಚಾರಣೆ ನಡೆಸಿದಾಗ ಲಲಿತಾ ಜ್ಯವೆಲ್ಲರಿ ಕಳ್ಳತನ, ನಗರದ ಅಮೃತಹಳ್ಳಿ, ಮಡಿವಾಳ ಹಾಗೂ ಬಾಣಸವಾಡಿಯಲ್ಲಿ ಕಳ್ಳತನ ಮಾಡಿದ ವಿಚಾರ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ತಮಿಳುನಾಡಿನ ತಿರುಚಿಯ ನದಿದಂಡೆಗೆ ತೆರಳಿದ ಪೊಲೀಸರಿಗೆ ಪೊದೆಯ ಒಳಗೆ ಹಳ್ಳದಲ್ಲಿ ಹೂತಿಟ್ಟಿದ್ದ ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರಿಗೆ ತೋರಿಸಿದ್ದಾನೆ. ಆರೋಪಿ ಮುರುಗನ್ ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದ. ಆದರೆ, ತನ್ನ ಹಳೆ ಚಾಳಿಯನ್ನು ಬಿಡದೆ ಮತ್ತದೇ ಕೆಲಸ ಮುಂದುವರೆಸಿ ನಗರದ ಹೊರವಲಯ ನೆಲಮಂಗಲ ಹಾಗೂ ಅನೇಕಲ್‌ನಲ್ಲಿ ಕಳ್ಳತನ ಮಾಡಿದ್ದ. ಬಳಿಕ ತಮಿಳುನಾಡಿಗೆ ತೆರಳಿ ದೊಡ್ಡ ದೊಡ್ಡ ಬ್ಯಾಂಕ್ ಹಾಗೂ ಚಿನ್ನಾಭರಣ ಮಳಿಗೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಈ ಬಗ್ಗೆ ಎಳೆ ಎಳೆಯಾಗಿ ಮುರುಗನ್ ಆಗ್ನೇಯ ಪೊಲೀಸರ ಎದುರು ಸತ್ಯ ಬಿಚ್ಚಿಟ್ಟಿದ್ದಾನೆ.

ಬೆಂಗಳೂರು: ಕುಖ್ಯಾತ ಅಂತಾರಾಜ್ಯ ಕಳ್ಳನ ಬಂಧನ ಮಾಡಿ ಸಿಲಿಕಾನ್ ಸಿಟಿಯಲ್ಲೇ ಮೊದಲ ಬಾರಿಗೆ ಸುಮಾರು 12 ಕೆಜಿ ತೂಕದ ಚಿನ್ನ ವಜ್ರ ಫ್ಲಾಟಿನಂ ಆಭರಣ ವಶಪಡಿಸಿಕೊಳ್ಳುವಲ್ಲಿ ಆಗ್ನೇಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ಮುರುಗನ್ ಅಲಿಯಾಸ್ ಬಾಲ ಮುರುಗನ್ ಉರುಫ್ ಶಿವಕುಮಾರ್ ಬಂಧಿತ ಆರೋಪಿ.

ಅಕ್ಟೋಬರ್ 2ನೇ ತಾರೀಖು ತಮಿಳುನಾಡು ತಿರುಚಿಯ ಪ್ರತಿಷ್ಠಿತ ಲಲಿತ ಜ್ಯುವೆಲ್ಲರಿಯಲ್ಲಿ ಕಳ್ಳತನ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಗಳಾದ ಗಣೇಶ್ ಮತ್ತು ಸತೀಶ್ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆದರೆ, ಮುರುಗನ್ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದು ಅಕ್ಟೋಬರ್ 11ರಂದು ಮೇಯೋ ಹಾಲ್‌ನ 11ನೇ ಎಸಿಎಂಎಂ ಕೋರ್ಟ್​ಗೆ ಶರಣಾಗಿದ್ದ. ನಂತರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿ ಮುರುಗನ್​ನ ವಶಕ್ಕೆ ಪಡೆದಿದ್ದರು.

ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣ ಸೇರಿ ಇತರ ವಸ್ತುಗಳು..

ಪೊಲೀಸರು ಆರೋಪಿಯ ವಿಚಾರಣೆ ನಡೆಸಿದಾಗ ಲಲಿತಾ ಜ್ಯವೆಲ್ಲರಿ ಕಳ್ಳತನ, ನಗರದ ಅಮೃತಹಳ್ಳಿ, ಮಡಿವಾಳ ಹಾಗೂ ಬಾಣಸವಾಡಿಯಲ್ಲಿ ಕಳ್ಳತನ ಮಾಡಿದ ವಿಚಾರ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ತಮಿಳುನಾಡಿನ ತಿರುಚಿಯ ನದಿದಂಡೆಗೆ ತೆರಳಿದ ಪೊಲೀಸರಿಗೆ ಪೊದೆಯ ಒಳಗೆ ಹಳ್ಳದಲ್ಲಿ ಹೂತಿಟ್ಟಿದ್ದ ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರಿಗೆ ತೋರಿಸಿದ್ದಾನೆ. ಆರೋಪಿ ಮುರುಗನ್ ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದ. ಆದರೆ, ತನ್ನ ಹಳೆ ಚಾಳಿಯನ್ನು ಬಿಡದೆ ಮತ್ತದೇ ಕೆಲಸ ಮುಂದುವರೆಸಿ ನಗರದ ಹೊರವಲಯ ನೆಲಮಂಗಲ ಹಾಗೂ ಅನೇಕಲ್‌ನಲ್ಲಿ ಕಳ್ಳತನ ಮಾಡಿದ್ದ. ಬಳಿಕ ತಮಿಳುನಾಡಿಗೆ ತೆರಳಿ ದೊಡ್ಡ ದೊಡ್ಡ ಬ್ಯಾಂಕ್ ಹಾಗೂ ಚಿನ್ನಾಭರಣ ಮಳಿಗೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಈ ಬಗ್ಗೆ ಎಳೆ ಎಳೆಯಾಗಿ ಮುರುಗನ್ ಆಗ್ನೇಯ ಪೊಲೀಸರ ಎದುರು ಸತ್ಯ ಬಿಚ್ಚಿಟ್ಟಿದ್ದಾನೆ.

Intro:ನದಿಯ ದಡದ ಪೊದೆಯಲ್ಲಿ ಬಚ್ಚಿಟ್ಟ 12ಕೆ.ಜಿ ಆಭರಣ
ಪೊಲೀಸರ ತನೀಕೆಯಲ್ಲಿ ಬಾಯಿ ಬಿಟ್ಟ ರೋಚಕ ಕಹಾನಿ mojo ವಿಶುವಲ್

ಕುಖ್ಯಾತ ಅಂತರ್ ರಾಜ್ಯ ಕಳ್ಳನ ಬಂಧನ ಮಾಡಿ ಸಿಲಿಕಾನ್ ಸಿಟಿಯಲ್ಲೇ ಮೊದಲ ಬಾರಿಗೆ ಸುಮಾರು 12.ಕೆ.ಜಿ ತೂಕದ ಚಿನ್ನ ವಜ್ರ ಫ್ಲಾಟಿನಂ ಆಭರಣ ವಶಪಡಿಸುವಲ್ಲಿ ಆಗ್ನೆಯ ವಿಭಾಗ ಪೊಲಿಸರು ಯಶಸ್ವಿಯಾಗಿದ್ದಾರೆ

ಹೆಸ್ರು ಮುರುಗನ್ ಅಲಿಯಾಸ್ ಬಾಲ ಮುರುಗನ್ ಉರುಫ್ ಶಿವಕುಮಾರ್ ಮೂಲತ; ತಮಿಳುನಾಡು ರಾಜ್ಯದವನು.

ಈತ ಇದೇ ತಿಂಗಳ 2ನೇ ತಾರೀಖು ತಿರುಚಿಯಲ್ಲಿನ ಪ್ರತಿಷ್ಟಿತ ಲಲಿತ ಜ್ಯುವೆಲರಿಯಲ್ಲಿ ಕಳ್ಳತನ ಮಾಡಿದ್ದ ನಂತ್ರ ಲಲಿತ ಜ್ಯುವೆಲ್ಸ್ ನ ಕಳ್ಳತನ ಪ್ರಕರಣದಲ್ಲಿ ಈತನ ಸಂಬಂಧಿಗಳಾದ ಗಣೇಶ್ ಮತ್ತು ಸತೀಶ್ ರನ್ನ ತಮಿಳು ನಾಡು ಪೊಲಿಸರು ಬಂಧನ ಮಾಡಿದ್ರು. ಆದ್ರೆ ಮುರುಗನ್ ತಮಿಳುನಾಡಿನಿಂದ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದು ಈತ ಇದೇ ತಿಂಗಳ 11ನೇ ತಾರೀಖು ಮೇಯೋ ಹಾಲ್ ನ 11ನೇ ಎಸಿಎಂಎಂ ಕೋರ್ಟ್ ಹಾಲ್ ನಲ್ಲಿ ಶರಣಾಗಿದ್ದ ನಂತ್ರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದಿದ್ದರು.

ಇನ್ನು ಈತನ ಬೆನ್ನು ಬಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಅದೊಂದು ಕಾವೇರಿ ತೀರದ ಕಥೆ ಬಿಚ್ಚಿಟ್ಟಿದ್ದ.. ಅದರ ಬೆನ್ನು ಬಿದ್ದು ತಮಿಳುನಾಡಿನ ತಿರುಚಿಯ ನದಿ ದಂಡೆಗೆ ತೆರಳಿದ ಪೊಲೀಸರಿಗೆ ಅದೊಂದು ಪೊದೆಯ ಒಳಗಿನ ಹಳ್ಳದಲ್ಲಿ ಹೂತಿಟ್ಟಿದ್ದ ಬಿಳಿ ಕವರ್ ತೊರಿಸಿದ್ದ.. ಅದರೊಳಗಿನ ಬ್ಯಾಗ್ ತೆರದ ಮುರುಗನ್ ಕೆಜಿಗಟ್ಟಲೆ ಚಿನ್ನವನ್ನ ಪೊಲೀಸರಿಗೆ ನೀಡಿದ್ದು ತಮಿಳುನಾಡಿನ ಲಲಿತಾ ಜ್ಯವೆಲರಿ ಕಳ್ಳತನ ಹಾಗೆ ನಗರದ ಅಮೃತಹಳ್ಳಿ, ಮಡಿವಾಳ ಹಾಗೂ ಬಾಣಸವಾಡಿಯಲ್ಲಿ ಕಳ್ಳತನ ಮಾಡಿದ ವಿಚಾರ ಬಾಯಿ ಬಿಟ್ಟಿದ್ದಾನೆ.

ಇನ್ನು ಈತ ಈ ಹಿಂದೆ ಜೈಲಿಗೆ ಕೂಡ ಹೊಗಿ ನಂತ್ರ ಹೊರಬಂದವನು ತಾನ್ನ ಚಾಳಿಯನ್ನು ಬಿಡದೇ ಮತ್ತದೇ ಕೆಲಸ ಮುಂದುವರೆಸಿ ನಗರದ ಹೊರವಲಯವಾದ ನೆಲಮಂಗಲ ಹಾಗೂ ಅನೇಕಲ್ ನಲ್ಲಿ ಕಳ್ಳತನ ಮಾಡಿ ಬಳಿಕ ಇಲ್ಲೇನಿದೆ ಅಂತ ತಮಿಳು ನಾಡಿಗೆ ಹೊಗಿ ಅಲ್ಲಿ ದೊಡ್ಡ ದೊಡ್ಡ ಬ್ಯಾಂಕ್ ಹಾಗೂ ಚಿನ್ನಾಭರಣ ಮಳಿಗೆಗಳನ್ನೇ ಟಾರ್ಗೆಟ್ ಮಾಡಿ ಆಗ್ನೇಯ ಪೊಲೀಸರ ಎದುರು ಸತ್ಯಾ ಬಿಚ್ಚಿಟ್ಟಿದ್ದಾನೆ


.Body:KN_bNG_11_GOLD THEFT_7204498Conclusion:KN_bNG_11_GOLD THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.