ETV Bharat / state

ಮನೆಯ ಗೇಟ್​ಗೆ ತಗಡಿನ ಶೀಟ್​ನಿಂದ ಸೀಲ್​ಡೌನ್​... ಬಿಬಿಎಂಪಿ ಮತ್ತೊಂದು ಎಡವಟ್ಟು!

author img

By

Published : Jul 24, 2020, 4:12 PM IST

Updated : Jul 24, 2020, 6:33 PM IST

ಕೊರೊನಾ ಸೋಂಕು ತಡೆಗಟ್ಟುವ ಭರದಲ್ಲಿ ಬಿಬಿಎಂಪಿ ದಿನಕ್ಕೊಂದು ಎಡವಟ್ಟು ಮಾಡಿಕೊಳ್ತಿದೆ. ನಿನ್ನೆಯಷ್ಟೇ ಸೋಂಕಿತರ ಮನೆಗೆ ಶೀಟ್ ಮೂಲಕ ಸೀಲ್​​​ಡೌನ್ ಮಾಡಿ ಎಡವಟ್ಟು ಮಾಡಿಕೊಂಡಿದ್ದ ಅಧಿಕಾರಿಗಳು, ಬಳಿಕ ತೆರವುಗೊಳಿಸಿದ್ದರು. ಇದೀಗ ವಿವೇಕ ನಗರ ಬಡಾವಣೆಯಲ್ಲಿ ಇಂತಹ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

BBMP used Sheets to seal down corona infected house in Bangalore
ಸೀಲ್​​​ಡೌನ್​ ವೇಳೆ ಬಿಬಿಎಂಪಿ ಮತ್ತೆ ಎಡವಟ್ಟು...ಮನೆಯ ಗೇಟ್​​ಗೆ​ ಶಿಟ್​ ಬಳಿಸಿ ಸೀಲ್​​​​​​ಡೌನ್​​

ಬೆಂಗಳೂರು: ನಿನ್ನೆಯಷ್ಟೇ ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​​​​ ಬಳಸಿ ಸೀಲ್​ಡೌನ್​ ಮಾಡಿ ಬಿಬಿಎಂಪಿ ಎಡವಟ್ಟು ಮಾಡಿಕೊಂಡಿತ್ತು. ಬಳಿಕ ಈ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶೀಟ್ ತೆರವುಗೊಳಿಸಲಾಗಿತ್ತು.

BBMP used Sheets to seal down corona infected house in Bangalore
ಶಾಂತಿನಗರದಲ್ಲಿ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​​​​ ಬಳಸಿ ಸೀಲ್​ಡೌನ್​ ಮಾಡಿದ್ದ ಬಿಬಿಎಂಪಿ

ಆದರೆ ಇಂದು ಕಾರ್ಯಪಾಲಕ ಅಭಿಯಂತರ ರಾಧಾಕೃಷ್ಣ, ವಿವೇಕನಗರದಲ್ಲೂ ಒಂದು ಕಟ್ಟಡದ ಗೇಟ್​​​ಗೆ ತಗಡಿನ ಶೀಟ್ ಹಾಕಿ ಸೀಲ್​ ಡೌನ್ ಮಾಡಿ ಅದೇ ಎಡವಟ್ಟು ಮಾಡಿದ್ದಾರೆ. 100 ಮೀಟರ್ ದೂರದಲ್ಲಿ ರಸ್ತೆಯನ್ನೂ ಸೀಲ್ ಡೌನ್​ ಮಾಡಿದ್ದಾರೆ.

ಬೆಂಗಳೂರಿನ ವನ್ನಾರ್ ಪೇಟೆ ವಾರ್ಡ್​ನ ವಿವೇಕನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಭಾನುವಾರದಿಂದ ಮನೆಯ ಗೇಟ್​​​ಗೆ ಶೀಟ್ ಹಾಕಿ ಸೀಲ್ ಮಾಡಿದ್ದು, ಕಟ್ಟಡದಲ್ಲಿ ಏನಾದರೂ ತುರ್ತು ಪರಿಸ್ಥಿತಿ ಏರ್ಪಟ್ಟರೆ, ಹೊರಗೆ ಬರಲು ಹೇಗೆ ಸಾಧ್ಯ, ಬೆಂಕಿ ಅವಘಡ ಸಂಭವಿಸಿದರೆ ತಪ್ಪಿಸಿಕೊಳ್ಳೋದು ಹೇಗೆ ಎಂದು ಒಳಗಡೆ ಮಂದಿ ಚಿಂತೆಯಲ್ಲಿದ್ದಾರೆ.

ಸೀಲ್​​​ಡೌನ್​ ವೇಳೆ ಬಿಬಿಎಂಪಿ ಮತ್ತೆ ಎಡವಟ್ಟು...ಮನೆಯ ಗೇಟ್​​ಗೆ​ ಶಿಟ್​ ಬಳಿಸಿ ಸೀಲ್​​​​​​ಡೌನ್​​

ಆಯುಕ್ತರು, ಮೇಲಧಿಕಾರಿಗಳು ಇನ್ನಾದಾರೂ ಗಮನಹರಿಸಿ ಮಾರ್ಗಸೂಚಿಯಂತೆ ಸೀಲ್​​​ಡೌನ್ ಮಾಡುವಂತೆ ಸೂಚಿಸಬೇಕಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು: ನಿನ್ನೆಯಷ್ಟೇ ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​​​​ ಬಳಸಿ ಸೀಲ್​ಡೌನ್​ ಮಾಡಿ ಬಿಬಿಎಂಪಿ ಎಡವಟ್ಟು ಮಾಡಿಕೊಂಡಿತ್ತು. ಬಳಿಕ ಈ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಶೀಟ್ ತೆರವುಗೊಳಿಸಲಾಗಿತ್ತು.

BBMP used Sheets to seal down corona infected house in Bangalore
ಶಾಂತಿನಗರದಲ್ಲಿ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಶೀಟ್​​​​ ಬಳಸಿ ಸೀಲ್​ಡೌನ್​ ಮಾಡಿದ್ದ ಬಿಬಿಎಂಪಿ

ಆದರೆ ಇಂದು ಕಾರ್ಯಪಾಲಕ ಅಭಿಯಂತರ ರಾಧಾಕೃಷ್ಣ, ವಿವೇಕನಗರದಲ್ಲೂ ಒಂದು ಕಟ್ಟಡದ ಗೇಟ್​​​ಗೆ ತಗಡಿನ ಶೀಟ್ ಹಾಕಿ ಸೀಲ್​ ಡೌನ್ ಮಾಡಿ ಅದೇ ಎಡವಟ್ಟು ಮಾಡಿದ್ದಾರೆ. 100 ಮೀಟರ್ ದೂರದಲ್ಲಿ ರಸ್ತೆಯನ್ನೂ ಸೀಲ್ ಡೌನ್​ ಮಾಡಿದ್ದಾರೆ.

ಬೆಂಗಳೂರಿನ ವನ್ನಾರ್ ಪೇಟೆ ವಾರ್ಡ್​ನ ವಿವೇಕನಗರದ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಭಾನುವಾರದಿಂದ ಮನೆಯ ಗೇಟ್​​​ಗೆ ಶೀಟ್ ಹಾಕಿ ಸೀಲ್ ಮಾಡಿದ್ದು, ಕಟ್ಟಡದಲ್ಲಿ ಏನಾದರೂ ತುರ್ತು ಪರಿಸ್ಥಿತಿ ಏರ್ಪಟ್ಟರೆ, ಹೊರಗೆ ಬರಲು ಹೇಗೆ ಸಾಧ್ಯ, ಬೆಂಕಿ ಅವಘಡ ಸಂಭವಿಸಿದರೆ ತಪ್ಪಿಸಿಕೊಳ್ಳೋದು ಹೇಗೆ ಎಂದು ಒಳಗಡೆ ಮಂದಿ ಚಿಂತೆಯಲ್ಲಿದ್ದಾರೆ.

ಸೀಲ್​​​ಡೌನ್​ ವೇಳೆ ಬಿಬಿಎಂಪಿ ಮತ್ತೆ ಎಡವಟ್ಟು...ಮನೆಯ ಗೇಟ್​​ಗೆ​ ಶಿಟ್​ ಬಳಿಸಿ ಸೀಲ್​​​​​​ಡೌನ್​​

ಆಯುಕ್ತರು, ಮೇಲಧಿಕಾರಿಗಳು ಇನ್ನಾದಾರೂ ಗಮನಹರಿಸಿ ಮಾರ್ಗಸೂಚಿಯಂತೆ ಸೀಲ್​​​ಡೌನ್ ಮಾಡುವಂತೆ ಸೂಚಿಸಬೇಕಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

Last Updated : Jul 24, 2020, 6:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.