ETV Bharat / state

ಬಿಬಿಎಂಪಿ: ಹಸಿಕಸ ವಿಲೇವಾರಿಗೆ ಪ್ರತ್ಯೇಕ ಟೆಂಡರ್ ಜಾರಿಗೆ ತರುವ ಸಾಧ್ಯತೆ!

author img

By

Published : Aug 6, 2020, 4:16 AM IST

ನಗರದ 45 ವಾರ್ಡ್​ಗಳಲ್ಲಿ ಹಸಿ ಮತ್ತು ಒಣಕಸ ಪ್ರತ್ಯೇಕ ಟೆಂಡರ್​ಗೆ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ನಿಂದನೆ ಆಗದಂತೆ ಹಳೆಯ ಟೆಂಡರ್ ಅನ್ನೇ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

BBMP
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತದ ಕೊನೆಯ ಅವಧಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಎನ್​ಜಿಟಿ ನಿಯಮ ಅನುಸರಿಸಿ, ಮಿಶ್ರ ತ್ಯಾಜ್ಯದ ಪ್ರಮಾಣ ತಗ್ಗಿಸಲು ಹಸಿ ಕಸ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಬಿಜೆಪಿ ಆಡಳಿತ ಇರುವುದರಿಂದ ಈ ಟೆಂಡರ್ ಅನ್ನ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದು ಪ್ರಯೋಗಿಕವಾಗಿ ಜಾರಿಗೆ ತಂದು ಇಂದೋರ್ ಮಾದರಿಯ ಕಸ ಸಂಗ್ರಹವೂ ಯಶಸ್ವಿಯಾಗದೆ ಅರ್ಧಕ್ಕೆ ನಿಂತಿದೆ.

ಇದೀಗ ನಗರದ 45 ವಾರ್ಡ್​ಗಳಲ್ಲಿ ಹಸಿ ಮತ್ತು ಒಣಕಸ ಪ್ರತ್ಯೇಕ ಟೆಂಡರ್​ಗೆ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ನಿಂದನೆ ಆಗದಂತೆ ಹಳೆಯ ಟೆಂಡರ್ ಅನ್ನೇ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಉಳಿದ 105 ವಾರ್ಡ್​​ಗಳಲ್ಲೂ ಈ ಹಿಂದೆ ಕರೆದಿದ್ದ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸೂಚಿಸಲಾಗುವುದು. ಈ ಬಗ್ಗೆ ಆಗಸ್ಟ್ 10ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡನೆ ಮಾಡಿ, ಅನುಮೋದನೆ ಪಡೆಯಲಾಗುವುದು ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದರು.

ಈ ಬಗ್ಗೆ ಹೊಸ ನಿಯಮ ರೂಪಿಸಿ ಟೆಂಡರ್ ಕರೆದಿದ್ದ ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಈ ಹಿಂದೆ ಕರೆಯಲಾಗಿದ್ದ ಟೆಂಡರ್​ಗೆ ಕಾರ್ಯಾದೇಶ ನೀಡದೆ ಇರುವ ಬಗ್ಗೆ ಹೈಕೋರ್ಟ್​​ನಿಂದ ಬಿಬಿಎಂಪಿಗೆ ನ್ಯಾಯಾಂಗ ನಿಂದನೆ ನೋಟೀಸ್ ಬಂದಿದೆ. ಸದ್ಯದ ಪರಿಸ್ಥಿತಿ ಏನಿದೆ, ಕೋರ್ಟ್​ಗೆ ಏನು ಮಾಹಿತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.

ಪಾಲಿಕೆಯ ಇತ್ತೀಚಿನೆ ಬೆಳವಣಿಗೆಯಿಂದ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹಸಿಕಸದ ಟೆಂಡರ್​ಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ.

ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತದ ಕೊನೆಯ ಅವಧಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಎನ್​ಜಿಟಿ ನಿಯಮ ಅನುಸರಿಸಿ, ಮಿಶ್ರ ತ್ಯಾಜ್ಯದ ಪ್ರಮಾಣ ತಗ್ಗಿಸಲು ಹಸಿ ಕಸ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಬಿಜೆಪಿ ಆಡಳಿತ ಇರುವುದರಿಂದ ಈ ಟೆಂಡರ್ ಅನ್ನ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದು ಪ್ರಯೋಗಿಕವಾಗಿ ಜಾರಿಗೆ ತಂದು ಇಂದೋರ್ ಮಾದರಿಯ ಕಸ ಸಂಗ್ರಹವೂ ಯಶಸ್ವಿಯಾಗದೆ ಅರ್ಧಕ್ಕೆ ನಿಂತಿದೆ.

ಇದೀಗ ನಗರದ 45 ವಾರ್ಡ್​ಗಳಲ್ಲಿ ಹಸಿ ಮತ್ತು ಒಣಕಸ ಪ್ರತ್ಯೇಕ ಟೆಂಡರ್​ಗೆ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಾಂಗ ನಿಂದನೆ ಆಗದಂತೆ ಹಳೆಯ ಟೆಂಡರ್ ಅನ್ನೇ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಉಳಿದ 105 ವಾರ್ಡ್​​ಗಳಲ್ಲೂ ಈ ಹಿಂದೆ ಕರೆದಿದ್ದ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸೂಚಿಸಲಾಗುವುದು. ಈ ಬಗ್ಗೆ ಆಗಸ್ಟ್ 10ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡನೆ ಮಾಡಿ, ಅನುಮೋದನೆ ಪಡೆಯಲಾಗುವುದು ಎಂದು ದೂರವಾಣಿ ಮೂಲಕ ಮಾಹಿತಿ ನೀಡಿದರು.

ಈ ಬಗ್ಗೆ ಹೊಸ ನಿಯಮ ರೂಪಿಸಿ ಟೆಂಡರ್ ಕರೆದಿದ್ದ ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಈ ಹಿಂದೆ ಕರೆಯಲಾಗಿದ್ದ ಟೆಂಡರ್​ಗೆ ಕಾರ್ಯಾದೇಶ ನೀಡದೆ ಇರುವ ಬಗ್ಗೆ ಹೈಕೋರ್ಟ್​​ನಿಂದ ಬಿಬಿಎಂಪಿಗೆ ನ್ಯಾಯಾಂಗ ನಿಂದನೆ ನೋಟೀಸ್ ಬಂದಿದೆ. ಸದ್ಯದ ಪರಿಸ್ಥಿತಿ ಏನಿದೆ, ಕೋರ್ಟ್​ಗೆ ಏನು ಮಾಹಿತಿ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎಂದರು.

ಪಾಲಿಕೆಯ ಇತ್ತೀಚಿನೆ ಬೆಳವಣಿಗೆಯಿಂದ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹಸಿಕಸದ ಟೆಂಡರ್​ಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.