ETV Bharat / state

ಲೇಟ್​ ಆಗಿ ಅರುಣ್ ಸಿಂಗ್ ಆಗಮನ; ಬಿಜೆಪಿ ಉಸ್ತುವಾರಿ ಆಗಮನಕ್ಕೂ ಮುನ್ನ ಬಣಗುಟ್ಟಿದ ಕುಮಾರ ಕೃಪಾ

author img

By

Published : Jan 13, 2021, 12:42 PM IST

ಇಂದು ಸಂಜೆ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ದಾರೆ. ವಿಮಾನ ಒಂದು ಗಂಟೆ ತಡವಾಗಿ ಬಂದ ಕಾರಣ ಅವರು ಕುಮಾರಕೃಪಾ ಅತಿಥಿಗೃಹ ತಲುಪುವುದು ತಡವಾಯ್ತು.

arun singh arrives late  to kumarkrupa guset house
ಕುಮಾರ ಕೃಪಾ ಅತಿಥಿಗೃಹ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾಗಿಯಾಗಲು ಇಂದು ನಗರಕ್ಕೆ ಆಗಮಿಸಬೇಕಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರುವುದು ವಿಳಂಬವಾದ ಹಿನ್ನೆಲೆ ಕುಮಾರ ಕೃಪಾ ಅತಿಥಿಗೃಹ ಬಿಕೋ ಎನ್ನುತ್ತಿತ್ತು.

ಕುಮಾರ ಕೃಪಾ ಅತಿಥಿಗೃಹ

ಇಂದು ಸಂಜೆ 3 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೂತನ ಸಚಿವರ ನೇಮಕ ಆಗಲಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಿಮಾನ ಒಂದು ಗಂಟೆ ತಡವಾಗಿ ತಲುಪಿರುವ ಹಿನ್ನೆಲೆ ಅರುಣ್ ಸಿಂಗ್ ಬರುವುದು ಲೇಟ್​ ಆಯಿತು.

ಸಂಜೆ 3 ಗಂಟೆಗೆ ರಾಜಭವನಕ್ಕೆ ತೆರಳುವ ಮುನ್ನ ಅವರು ಇಲ್ಲಿ ಕೆಲ ನಾಯಕರ ಜೊತೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಗಮಿಸಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ನಾಯಕರು ಹಾಗೂ ಕೆಲ ಅತೃಪ್ತ ನಾಯಕರು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಬೆಳಗ್ಗೆ 10 ಗಂಟೆಗೆ ಕುಮಾರಕೃಪಾ ಅತಿಥಿ ಗೃಹ ತಲುಪಬೇಕಿದ್ದ ಅರುಣ್ ಸಿಂಗ್ ಬರುವುದು ತಡವಾದ ಕಾರಣ ಯಾವುದೇ ನಾಯಕರು ಕುಮಾರಕೃಪಾ ಅತಿಥಿ ಗೃಹ ದತ್ತ ಸುಳಿದಿರಲಿಲ್ಲ.

ಇದನ್ನೂ ಓದಿ: ಸಚಿವ ನಾಗೇಶ್​ಗೆ ಕೋಕ್.. ಬಿಎಸ್​ವೈ ಸಂಪುಟ ಸೇರಿದ ಸಪ್ತ ಸಚಿವರು..

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾಗಿಯಾಗಲು ಇಂದು ನಗರಕ್ಕೆ ಆಗಮಿಸಬೇಕಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರುವುದು ವಿಳಂಬವಾದ ಹಿನ್ನೆಲೆ ಕುಮಾರ ಕೃಪಾ ಅತಿಥಿಗೃಹ ಬಿಕೋ ಎನ್ನುತ್ತಿತ್ತು.

ಕುಮಾರ ಕೃಪಾ ಅತಿಥಿಗೃಹ

ಇಂದು ಸಂಜೆ 3 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೂತನ ಸಚಿವರ ನೇಮಕ ಆಗಲಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಿಮಾನ ಒಂದು ಗಂಟೆ ತಡವಾಗಿ ತಲುಪಿರುವ ಹಿನ್ನೆಲೆ ಅರುಣ್ ಸಿಂಗ್ ಬರುವುದು ಲೇಟ್​ ಆಯಿತು.

ಸಂಜೆ 3 ಗಂಟೆಗೆ ರಾಜಭವನಕ್ಕೆ ತೆರಳುವ ಮುನ್ನ ಅವರು ಇಲ್ಲಿ ಕೆಲ ನಾಯಕರ ಜೊತೆ ಚರ್ಚಿಸಲಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಗಮಿಸಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ನಾಯಕರು ಹಾಗೂ ಕೆಲ ಅತೃಪ್ತ ನಾಯಕರು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಬೆಳಗ್ಗೆ 10 ಗಂಟೆಗೆ ಕುಮಾರಕೃಪಾ ಅತಿಥಿ ಗೃಹ ತಲುಪಬೇಕಿದ್ದ ಅರುಣ್ ಸಿಂಗ್ ಬರುವುದು ತಡವಾದ ಕಾರಣ ಯಾವುದೇ ನಾಯಕರು ಕುಮಾರಕೃಪಾ ಅತಿಥಿ ಗೃಹ ದತ್ತ ಸುಳಿದಿರಲಿಲ್ಲ.

ಇದನ್ನೂ ಓದಿ: ಸಚಿವ ನಾಗೇಶ್​ಗೆ ಕೋಕ್.. ಬಿಎಸ್​ವೈ ಸಂಪುಟ ಸೇರಿದ ಸಪ್ತ ಸಚಿವರು..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.