ಬೆಂಗಳೂರು: ವರ್ಗಾವಣೆಯಾದರೂ ರಿಪೋರ್ಟ್ ಮಾಡಿಕೊಳ್ಳದ 38 ಇನ್ಸ್ಪೆಕ್ಟರ್ಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲೇ ಮತ್ತೆ 37 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
37 ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಈ ಹಿಂದೆ ವರ್ಗಾವಣೆಯಾದರೂ ಠಾಣೆ ಬಿಟ್ಟು ತೆರಳದ ಇನ್ಸ್ಪೆಕ್ಟರ್ಗಳಿಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಮತ್ತೆ 37 ಇನ್ಸ್ಪೆಕ್ಟರ್ಗಳ ವರ್ಗಾವಣೆಯಾಗಿದೆ.
![37 ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ 37 Police Inspectors transferred](https://etvbharatimages.akamaized.net/etvbharat/prod-images/768-512-15301626-1108-15301626-1652704271077.jpg?imwidth=3840)
ಕಳೆದ 15 ದಿನಗಳಿಂದ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಲವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆಯಾದರೂ ನಿಯುಕ್ತಿಗೊಂಡ ಸ್ಥಾನಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಆದೇಶ ಪಾಲನೆ ಮಾಡದ 38 ಇನ್ಸ್ಪೆಕ್ಟರ್ಗಳಿಗೆ ಈ ಬಗ್ಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಮತ್ತೆ 37 ಇನ್ಸ್ಪೆಕ್ಟರ್ಗಳ ವರ್ಗಾವಣೆಯಾಗಿದೆ.
ಇನ್ಸ್ಪೆಕ್ಟರ್ ಅಂಬರೀಷ್ -ಹೊಸಕೋಟೆ ಬೆಸ್ಕಾಂ, ಶಿವನಗೌಡ -ತೀರ್ಥಹಳ್ಳಿ ಪೊಲೀಸ್ ಠಾಣೆ, ಕೊಟ್ರೇಶ್ -ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ವೆಂಕಟಾಚಲಯ್ಯ -ಜಾಲಹಳ್ಳಿ ಪೊಲೀಸ್ ಠಾಣೆ, ಸತ್ಯನಾರಾಯಣ ಸಿಟಿ -ಕೆಪಿಸಿಟಿ ಎಸ್ಬಿ ಬೆಂಗಳೂರು ಸೇರಿ 37 ಜನರನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ವರ್ಗಾವಣೆಯಾದರೂ ರಿಪೋರ್ಟ್ ಮಾಡಿಕೊಳ್ಳದ 38 ಇನ್ಸ್ಪೆಕ್ಟರ್ಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲೇ ಮತ್ತೆ 37 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಕಳೆದ 15 ದಿನಗಳಿಂದ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಲವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆಯಾದರೂ ನಿಯುಕ್ತಿಗೊಂಡ ಸ್ಥಾನಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಆದೇಶ ಪಾಲನೆ ಮಾಡದ 38 ಇನ್ಸ್ಪೆಕ್ಟರ್ಗಳಿಗೆ ಈ ಬಗ್ಗೆ ಏಳು ದಿನದೊಳಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿತ್ತು. ಈ ಬೆಳವಣಿಗೆ ನಡುವೆಯೇ ಮತ್ತೆ 37 ಇನ್ಸ್ಪೆಕ್ಟರ್ಗಳ ವರ್ಗಾವಣೆಯಾಗಿದೆ.
ಇನ್ಸ್ಪೆಕ್ಟರ್ ಅಂಬರೀಷ್ -ಹೊಸಕೋಟೆ ಬೆಸ್ಕಾಂ, ಶಿವನಗೌಡ -ತೀರ್ಥಹಳ್ಳಿ ಪೊಲೀಸ್ ಠಾಣೆ, ಕೊಟ್ರೇಶ್ -ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ವೆಂಕಟಾಚಲಯ್ಯ -ಜಾಲಹಳ್ಳಿ ಪೊಲೀಸ್ ಠಾಣೆ, ಸತ್ಯನಾರಾಯಣ ಸಿಟಿ -ಕೆಪಿಸಿಟಿ ಎಸ್ಬಿ ಬೆಂಗಳೂರು ಸೇರಿ 37 ಜನರನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.