ETV Bharat / state

ಕಾವೇರಿ ಬಡಾವಣೆಯಲ್ಲಿ ಬಾರ್​​ ತೆರೆಯದಂತೆ ನಿವಾಸಿಗಳ ಆಗ್ರಹ: ಡಿಸಿಗೆ ಮನವಿ

author img

By

Published : Jul 27, 2019, 5:29 AM IST

ಕಳೆದ 20 ವರ್ಷಗಳಿಂದ ದೊಡ್ಡಬಳ್ಳಾಪುರ: ನಗರದ ಹೊರವಲಯದ ಕಾವೇರಿ ಬಡಾವಣೆಯಲ್ಲಿ ಶಿಕ್ಷಕರು, ಉಪನ್ಯಾಸಕರು, ಇಂಜಿನಿಯರ್​ಗಳೇ ವಾಸವಾದ್ದಾರೆ.  ಆದರೆ ಆರಂಭಗೊಳ್ಳಲು ಸಿದ್ಧವಾಗಿರುವ ಬಾರ್​ನಿಂದಾಗಿ ಎಲ್ಲಿ ನಮ್ಮ ನೆಮ್ಮದಿಗೆ ಭಂಗವಾಗುತ್ತದೋ ಎಂಬ ಆತಂಕ ಬಡಾವಣೆ ನಿವಾಸಿಗಳಲ್ಲಿ ಮನೆ ಮಾಡಿದೆ.

ಕಾವೇರಿ ಬಡಾವಣೆ

ದೊಡ್ಡಬಳ್ಳಾಪುರ: ನಗರದ ಹೊರವಲಯದ ಕಾವೇರಿ ಬಡಾವಣೆಯಲ್ಲಿ ತಲೆ ಎತ್ತುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆಗ್ರಹಿಸಿರುವ ಬಡಾವಣೆ ನಿವಾಸಿಗಳು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ಶಿಕ್ಷಕರು, ಉಪನ್ಯಾಸಕರು, ಇಂಜಿನಿಯರ್​ಗಳೇ ವಾಸವಾಗಿರುವ ಈ ಬಡವಾಣೆ ಪ್ರಶಾಂತವಾಗಿದೆ. ಆದರೆ ಆರಂಭಗೊಳ್ಳಲು ಸಿದ್ಧವಾಗಿರುವ ಬಾರ್​ನಿಂದಾಗಿ ಎಲ್ಲಿ ನಮ್ಮ ನೆಮ್ಮದಿಗೆ ಭಂಗವಾಗುತ್ತದೋ ಎಂಬ ಆತಂಕ ಬಡಾವಣೆ ನಿವಾಸಿಗಳಲ್ಲಿ ಮನೆ ಮಾಡಿದೆ.

ಕಾವೇರಿ ಬಡಾವಣೆಯಲ್ಲಿ ಬಾರ್​ಗೆ ವಿರೋಧ

ಅಲ್ಲದೆ, ಬಾರ್​ ಸನಿಹದಲ್ಲಿ ಮುತ್ಯಾಲಮ್ಮ ದೇವಸ್ಥಾನ, ಜಾಲಪ್ಪ ಕಾಲೇಜ್, ಜ್ಞಾನ ಗಂಗಾ ಪ್ರೈಮರಿ ಮತ್ತು ಹೈಸ್ಕೂಲ್ ಸಹ ಇದೆ. ಇದೇ ರಸ್ತೆಯಲ್ಲಿ ನಿತ್ಯ ಹಲವಾರು ಹೆಣ್ಣು ಮಕ್ಕಳು ಓಡಾಡುತ್ತಿದ್ದಾರೆ. ಒಂದು ವೇಳೆ ಬಾರ್ ಶುರುವಾದರೆ ಕುಡುಕರ ಹಾವಳಿಯಿಂದ ಇಲ್ಲಿನ ಸುಂದರ ವಾತಾವರಣ ಹಾಳಾಗುತ್ತದೆ ಎಂಬುದು ಬಡಾವಣೆ ನಿವಾಸಿಗಳ ವಾದ.

ಹೀಗಾಗಿ ಬಾರ್ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದೆಂದು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಮಾಡಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಬಾರ್ ತೆಗೆಯಲು ಅನುಮತಿ ನೀಡಿದ್ದೇ ಆದಲ್ಲಿ ಬಾರ್ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ದೊಡ್ಡಬಳ್ಳಾಪುರ: ನಗರದ ಹೊರವಲಯದ ಕಾವೇರಿ ಬಡಾವಣೆಯಲ್ಲಿ ತಲೆ ಎತ್ತುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆಗ್ರಹಿಸಿರುವ ಬಡಾವಣೆ ನಿವಾಸಿಗಳು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ಶಿಕ್ಷಕರು, ಉಪನ್ಯಾಸಕರು, ಇಂಜಿನಿಯರ್​ಗಳೇ ವಾಸವಾಗಿರುವ ಈ ಬಡವಾಣೆ ಪ್ರಶಾಂತವಾಗಿದೆ. ಆದರೆ ಆರಂಭಗೊಳ್ಳಲು ಸಿದ್ಧವಾಗಿರುವ ಬಾರ್​ನಿಂದಾಗಿ ಎಲ್ಲಿ ನಮ್ಮ ನೆಮ್ಮದಿಗೆ ಭಂಗವಾಗುತ್ತದೋ ಎಂಬ ಆತಂಕ ಬಡಾವಣೆ ನಿವಾಸಿಗಳಲ್ಲಿ ಮನೆ ಮಾಡಿದೆ.

ಕಾವೇರಿ ಬಡಾವಣೆಯಲ್ಲಿ ಬಾರ್​ಗೆ ವಿರೋಧ

ಅಲ್ಲದೆ, ಬಾರ್​ ಸನಿಹದಲ್ಲಿ ಮುತ್ಯಾಲಮ್ಮ ದೇವಸ್ಥಾನ, ಜಾಲಪ್ಪ ಕಾಲೇಜ್, ಜ್ಞಾನ ಗಂಗಾ ಪ್ರೈಮರಿ ಮತ್ತು ಹೈಸ್ಕೂಲ್ ಸಹ ಇದೆ. ಇದೇ ರಸ್ತೆಯಲ್ಲಿ ನಿತ್ಯ ಹಲವಾರು ಹೆಣ್ಣು ಮಕ್ಕಳು ಓಡಾಡುತ್ತಿದ್ದಾರೆ. ಒಂದು ವೇಳೆ ಬಾರ್ ಶುರುವಾದರೆ ಕುಡುಕರ ಹಾವಳಿಯಿಂದ ಇಲ್ಲಿನ ಸುಂದರ ವಾತಾವರಣ ಹಾಳಾಗುತ್ತದೆ ಎಂಬುದು ಬಡಾವಣೆ ನಿವಾಸಿಗಳ ವಾದ.

ಹೀಗಾಗಿ ಬಾರ್ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದೆಂದು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಮಾಡಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಬಾರ್ ತೆಗೆಯಲು ಅನುಮತಿ ನೀಡಿದ್ದೇ ಆದಲ್ಲಿ ಬಾರ್ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

Intro:ಪ್ರಶಾಂತವಾದ ಬಡಾವಣೆಗೆ ಬಾರ್ ಆಂಡ್ ರೆಸ್ಟೋರೆಂಟ್ ಆಗಮನ

ಮದ್ಯ ಅಂಗಡಿ ಮುಚ್ಚಿಸಲು ಒಂದಾದ ಬಡಾವಣೆ ನಿವಾಸಿಗಳು
Body:ದೊಡ್ಡಬಳ್ಳಾಪುರ : ನಗರದ ಹೊರವಲಯದ ಪ್ರಶಾಂತ ವಾತಾವರಣದಲ್ಲಿನ ಬಡಾವಣೆ ಅದು. ಆ ಪ್ರದೇಶದಲ್ಲಿ ಸದ್ದು ಗದ್ದಲವಿಲ್ಲದೆ ಬಾರ್ ಅಂಡ್ ರೆಸ್ಟೋರೆಂಟ್ ಶುರುವಾಗುತ್ತಿದೆ. ಮದ್ಯದ ಅಂಗಡಿಯಿಂದ ಆತಂಕಕ್ಕೆ ಒಳಗಾಗಿರುವ ಬಡಾವಣೆ ನಿವಾಸಿಗಳು ಬಾರ್ ಮುಚ್ಚಿಸುವ ಕಾರಣಕ್ಕಾಗಿ ಜಿಲ್ಲಾಧಿಕಾರಿಯನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ಧಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಹೊರವಲಯದ ಕಾವೇರಿ ಬಡಾವಣೆ. ನಗರದ ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣದಲ್ಲಿ ಬಡಾವಣೆ ಇದ್ದು. ಕಳೆದ 20 ವರ್ಷಗಳಿಂದ ಶಿಕ್ಷಕರು, ಉಪನ್ಯಾಸಕರು, ಇಂಜಿನಿಯರ್ ವಾಸವಾಗಿದ್ದಾರೆ. ನೆಮ್ಮದಿಯಿಂದ ಇಲ್ಲಿನ ನಿವಾಸಿಗಳಿಗೆ ಬಡಾವಣೆಯಲ್ಲಿ ಪ್ರಾರಂಭವಾಗುತ್ತಿರುವ ದೊಡ್ಡ ಪ್ರಮಾಣದ ಬಾರ್ ಅಂಡ್ ರೆಸ್ಟೋರೆಂಟ್ ಆತಂಕಕ್ಕೆ ಕಾರಣವಾಗಿದೆ.

ಅಂದಹಾಗೆ ಬಾರ್ ಪ್ರಾರಂಭವಾಗುತ್ತಿರುವ ಸನಿಹದಲ್ಲಿಯೇ ಮುತ್ಯಾಲಮ್ಮ ದೇವಸ್ಥಾನ, ಜಾಲಪ್ಪ ಕಾಲೇಜ್, ಜ್ಞಾನ ಗಂಗಾ ಪ್ರೈಮರಿ ಮತ್ತು ಹೈಸ್ಕೂಲ್ ಇದೆ. ಶಾಲಾ ಕಾಲೇಜ್ ಗಾಗಿ ನಿತ್ಯ ಸಾವಿರಾರು ಹೆಣ್ಣು ಮಕ್ಕಳು ಬಾರ್ ಮುಂದೆಯೇ ಓಡಾಡಬೇಕಿದೆ. ಒಂದು ವೇಳೆ ಬಾರ್ ಶುರುವಾದರೆ ಕುಡುಕರಿಂದ ಇಲ್ಲಿನ ವಾತಾವರಣ ಕೇಡುತ್ತದೆ. ಹೆಣ್ಣು ಮಕ್ಕಳು ಗೌರವದಿಂದ ಇಲ್ಲಿ ಓಡಾಡುವುದಕ್ಕು ಹೆದರಬೇಕಾಗುತ್ತದೆ. ಕುಡುಕರ ಅವಾಚ್ಯ ಬೈಗುಳಿಂದ ಬಡಾವಣೆಗೆ ಕೆಟ್ಪ ಹೆಸರು ಬರುತ್ತದೆ. ಸಂಸಾರಸ್ಥರು ಇಲ್ಲಿ ವಾಸ ಮಾಡಲು ಅಸಾಧ್ಯವಾಗುತ್ತದೆ. ಬಾರ್ ಸ್ಥಾಪನೆ ಅವಕಾಶ ಕೊಡಬಾರದೆಂದು ಒಂದಾಗಿರುವ ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿ ಕರೀಗೌಡರನ್ನು ಭೇಟಿ ನೀಡಿ ಮನವಿ ಮಾಡಿದ್ದಾರೆ. ಜೊತೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಒಂದು ಬಾರ್ ತೆಗೆಯಲು ಅನುಮತಿ ನೀಡಿದ್ದಾರೆ ಬಾರ್ ಮುಂದೆಯೇ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.



Conclusion:null

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.