ಬಾಗಲಕೋಟೆ: ವಿಘ್ನ ವಿನಾಶಕನ ಮೂರ್ತಿಗಳನ್ನು ಭಗ್ನಗೊಳಿಸಿ, ಬೇಕಾಬಿಟ್ಟಿ ಎಸೆದು ಅಪಮಾನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನವನಗರದ 38ನೇ ಸೆಕ್ಟರ್ನಲ್ಲಿ ಘಟನೆ ನಡೆದಿದ್ದು, ಚರಂಡಿ ಪಕ್ಕದಲ್ಲಿ ಭಗ್ನಗೊಂಡ ಮೂರ್ತಿಗಳನ್ನು ಅನಾಮಿಕರು ಎಸೆದಿದ್ದಾರೆ. ಯಾರು ಈ ಕೃತ್ಯ ಎಸಗಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈ ಸುದ್ದಿ ತಿಳಿದ ಪೊಲೀಸರು ಹಾಗೂ ಬಾಗಲಕೋಟೆ ನಗರಸಭೆ ಸಿಬ್ಬಂದಿ, ಬೇಕಾಬಿಟ್ಟಿ ಎಸೆದಿದ್ದ ಭಗ್ನಗೊಂಡ ಮೂರ್ತಿಗಳನ್ನು ಟಂಟಂನಲ್ಲಿ ಹೊತ್ತೊಯ್ದು ಬಾಗಲಕೋಟೆ ನಗರದ ಸಮೀಪ ಇರುವ ಘಟಪ್ರಭಾ ನದಿಯಲ್ಲಿ ನಿಮಜ್ಜನ ಮಾಡಿದ್ದಾರೆ. ಅಲ್ಲದೆ ಮೂರ್ತಿ ಭಗ್ನಗೊಳಿಸಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಣೇಶ ಹಬ್ಬ ಮುಗಿಯುವ ಹೊತ್ತಲ್ಲೇ ಈ ರೀತಿಯ ಅವಾಂತರ ಆಗಿದ್ದು, ಭಕ್ತರಿಗೆ ನೋವುಂಟು ಮಾಡಿದೆ. ಗಣೇಶನಿಗೆ ಅಪಮಾನ ಮಾಡಿದ್ದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.