ETV Bharat / state

ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರಲ್ಲ: ಮುರುಗೇಶ ನಿರಾಣಿ

author img

By

Published : Dec 4, 2022, 7:25 AM IST

Updated : Dec 4, 2022, 12:02 PM IST

ನಮ್ಮಿಬ್ಬರನ್ನು ಬಿಟ್ಟು ಮೂರನೆಯವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡುತ್ತೇನೆ ಎಂದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮುರುಗೇಶ ನಿರಾಣಿ ಹೇಳಿದರು.

Industries Minister Murugesha Nirani
ಕೈಗಾರಿಕಾ ಸಚಿವ ಮುರುಗೇಶ ನಿರಾಣಿ

ಬಾಗಲಕೋಟೆ: ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರಲ್ಲ. ಅವನಿಗೆ ಆಸಕ್ತಿಯೂ ಇಲ್ಲ. ನಾನು ಕರೆದರೂ ಆತ ಬರಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಮ್ಮ ಕುಟುಂಬದಲ್ಲಿ ಮುರುಗೇಶ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ರಾಜಕಾರಣದಲ್ಲಿ ಇರುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಮೂರನೆಯವರು ಸ್ಪರ್ಧೆ ಮಾಡಿಲ್ಲ. ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡುತ್ತೇನೆ ಎಂದರೆ ನಾನು ನಿವೃತ್ತಿ ಹೊಂದುವೆ ಎಂದರು.

ನನಗೂ ಇಪ್ಪತ್ತು ವರ್ಷ ಜನರು ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ. ಸಂಗಮೇಶ (ಸಹೋದರ) ನಿರಾಣಿ ಬೇಕಿದ್ರೆ ಸ್ಪರ್ಧೆ ಮಾಡಲಿ. ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ. ದೇಶ, ವಿದೇಶಗಳಲ್ಲಿ ಆತಕೈಗಾರಿಕೋದ್ಯಮಗಳು, ವಿದ್ಯಾರ್ಥಿಗಳಿಗೆ ಉದ್ದಿಮೆ ಬಗ್ಗೆ ಉಪನ್ಯಾಸ ಮಾಡುತ್ತಾನೆ. ಅವನಿಗೆ ಒಂದು ಗುರಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರಂತೆ ದೇಶದಲ್ಲಿ 101 ಕಾರ್ಖಾನೆ ಸ್ಥಾಪಿಸುವ ಕನಸಿದೆ. ಈಗ ನನ್ನ ಅವಧಿಯಲ್ಲಿ 50 ಮಾಡಿಕೊಡಿ. ಉಳಿದಿದ್ದು ನಾನು ಮಾಡುತ್ತೇನೆ ಅಂತಾನೆ. ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದು. ಸದ್ಯ ಆತ ನಿರಾಣಿ ಗ್ರೂಪ್​ಗೆ ಎಂಡಿ ಆಗಿದ್ದಾನೆ ಎಂದು ತಿಳಿಸಿದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ

ಮಗ ದುಬೈನಲ್ಲಿ ಆಮದು-ರಫ್ತು ವಹಿವಾಟು ಶುರು ಮಾಡಿದ್ದಾನೆ. ನಮ್ಮ ಕಾರ್ಖಾನೆ ಜೊತೆ ಬೇರೆಯವರಿಂದಲೂ ಶುಗರ್ ಖರೀದಿ ಮಾಡುತ್ತಿದ್ದಾನೆ. ನಿರಾಣಿ ಗ್ರೂಪ್‌ ಆಮದು-ರಫ್ತು ಎಲ್ಲವನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಔದ್ಯೋಗಿಕವಾಗಿ ಬೆಳೆಯುತ್ತಿರುವ ಪುತ್ರ ವಿಜಯ ಅವರ ಬಗ್ಗೆ ಖುಷಿಯಿಂದ ಹೇಳಿಕೊಂಡರು.

ಇದೇ ಸಮಯದಲ್ಲಿ ರೌಡಿಗಳಿಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಕುತ್ತಿದೆಯಾ? ಹಿಂದೆಲ್ಲ ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಿಜೆಪಿವರು ಈಗ ಮಾಡುತ್ತಿರುವುದೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದು ಸಲ ಕೆಟ್ಟವರಿಗೂ ಜ್ಞಾನೋದಯ ಆಗುತ್ತದೆ. ತಾವು ಮಾಡಿದ ಕೆಟ್ಟದರ ಬಗ್ಗೆ ಜ್ಞಾನೋದಯ ಆದವರನ್ನು ಮಾತ್ರ ಕ್ಷಮಿಸಿ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ ಎಂದರು.

ಹಲಕುರ್ಕಿಯಲ್ಲಿ ಸರ್ಕಾರದ 2,000 ಎಕರೆ ಜಮೀನು‌ ಖರೀದಿಸಿ ಸುಮಾರು 15 ಸಾವಿರ ಕೋಟಿ ಬಂಡವಾಳ ಹೂಡಲು ಖಾಸಗಿ ಕಂಪನಿಗಳು ಮುಂದೆ‌ ಬಂದಿವೆ. ಬಾಗಲಕೋಟೆ ಜಿಲ್ಲೆಯ 25 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುತ್ತದೆ. ವಿಮಾನ ‌ನಿಲ್ದಾಣ ಸೇರಿದಂತೆ ಇತರ ಕೈಗಾರಿಕೆಗಳು ಬರುತ್ತದೆ. ಹಲಕುರ್ಕಿ ರೈತರು 900 ಎಕರೆ ಜಮೀನು‌ ಕೊಡಲು ಮುಂದೆ‌ ಬಂದಿದ್ದಾರೆ. ಆದರೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿ ಏಕರೆಗೆ 19 ಲಕ್ಷ‌ ಕೊಡುತ್ತೇವೆ ಎಂದು ತಿಳಿಸಿದ್ದೇವೆ. ರೈತರು ಜಮೀನು‌ ನೀಡಲು ಮುಂದಾದರೆ, ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​​ ಸುಮ್ಮನೆ ಆರೋಪಗಳನ್ನು ಮಾಡಿ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತದೆ: ಮುರುಗೇಶ್​ ನಿರಾಣಿ

ಬಾಗಲಕೋಟೆ: ಯಾವುದೇ ಕಾರಣಕ್ಕೂ ನನ್ನ ಮಗ ರಾಜಕಾರಣಕ್ಕೆ ಬರಲ್ಲ. ಅವನಿಗೆ ಆಸಕ್ತಿಯೂ ಇಲ್ಲ. ನಾನು ಕರೆದರೂ ಆತ ಬರಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಮ್ಮ ಕುಟುಂಬದಲ್ಲಿ ಮುರುಗೇಶ ನಿರಾಣಿ ಮತ್ತು ಹನಮಂತ ನಿರಾಣಿ ಮಾತ್ರ ರಾಜಕಾರಣದಲ್ಲಿ ಇರುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಮೂರನೆಯವರು ಸ್ಪರ್ಧೆ ಮಾಡಿಲ್ಲ. ಮನೆಯಲ್ಲಿ ಯಾರಾದರೂ ಸ್ಪರ್ಧೆ ಮಾಡುತ್ತೇನೆ ಎಂದರೆ ನಾನು ನಿವೃತ್ತಿ ಹೊಂದುವೆ ಎಂದರು.

ನನಗೂ ಇಪ್ಪತ್ತು ವರ್ಷ ಜನರು ಆಶೀರ್ವಾದ ಮಾಡಿದ್ದಾರೆ. ನಾನು ಫ್ಯಾಕ್ಟರಿ ನೋಡಿಕೊಂಡು ಹೋಗುತ್ತೇನೆ. ಸಂಗಮೇಶ (ಸಹೋದರ) ನಿರಾಣಿ ಬೇಕಿದ್ರೆ ಸ್ಪರ್ಧೆ ಮಾಡಲಿ. ನನ್ನ ಮಗ ಮಾತ್ರ ರಾಜಕಾರಣಕ್ಕೆ ಬರಲ್ಲ. ದೇಶ, ವಿದೇಶಗಳಲ್ಲಿ ಆತಕೈಗಾರಿಕೋದ್ಯಮಗಳು, ವಿದ್ಯಾರ್ಥಿಗಳಿಗೆ ಉದ್ದಿಮೆ ಬಗ್ಗೆ ಉಪನ್ಯಾಸ ಮಾಡುತ್ತಾನೆ. ಅವನಿಗೆ ಒಂದು ಗುರಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರಂತೆ ದೇಶದಲ್ಲಿ 101 ಕಾರ್ಖಾನೆ ಸ್ಥಾಪಿಸುವ ಕನಸಿದೆ. ಈಗ ನನ್ನ ಅವಧಿಯಲ್ಲಿ 50 ಮಾಡಿಕೊಡಿ. ಉಳಿದಿದ್ದು ನಾನು ಮಾಡುತ್ತೇನೆ ಅಂತಾನೆ. ಅದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ಕೊಡಬಹುದು. ಸದ್ಯ ಆತ ನಿರಾಣಿ ಗ್ರೂಪ್​ಗೆ ಎಂಡಿ ಆಗಿದ್ದಾನೆ ಎಂದು ತಿಳಿಸಿದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ

ಮಗ ದುಬೈನಲ್ಲಿ ಆಮದು-ರಫ್ತು ವಹಿವಾಟು ಶುರು ಮಾಡಿದ್ದಾನೆ. ನಮ್ಮ ಕಾರ್ಖಾನೆ ಜೊತೆ ಬೇರೆಯವರಿಂದಲೂ ಶುಗರ್ ಖರೀದಿ ಮಾಡುತ್ತಿದ್ದಾನೆ. ನಿರಾಣಿ ಗ್ರೂಪ್‌ ಆಮದು-ರಫ್ತು ಎಲ್ಲವನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಔದ್ಯೋಗಿಕವಾಗಿ ಬೆಳೆಯುತ್ತಿರುವ ಪುತ್ರ ವಿಜಯ ಅವರ ಬಗ್ಗೆ ಖುಷಿಯಿಂದ ಹೇಳಿಕೊಂಡರು.

ಇದೇ ಸಮಯದಲ್ಲಿ ರೌಡಿಗಳಿಗೆ ಬಿಜೆಪಿ ರೆಡ್ ಕಾರ್ಪೆಟ್ ಹಾಕುತ್ತಿದೆಯಾ? ಹಿಂದೆಲ್ಲ ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಿಜೆಪಿವರು ಈಗ ಮಾಡುತ್ತಿರುವುದೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದು ಸಲ ಕೆಟ್ಟವರಿಗೂ ಜ್ಞಾನೋದಯ ಆಗುತ್ತದೆ. ತಾವು ಮಾಡಿದ ಕೆಟ್ಟದರ ಬಗ್ಗೆ ಜ್ಞಾನೋದಯ ಆದವರನ್ನು ಮಾತ್ರ ಕ್ಷಮಿಸಿ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ ಎಂದರು.

ಹಲಕುರ್ಕಿಯಲ್ಲಿ ಸರ್ಕಾರದ 2,000 ಎಕರೆ ಜಮೀನು‌ ಖರೀದಿಸಿ ಸುಮಾರು 15 ಸಾವಿರ ಕೋಟಿ ಬಂಡವಾಳ ಹೂಡಲು ಖಾಸಗಿ ಕಂಪನಿಗಳು ಮುಂದೆ‌ ಬಂದಿವೆ. ಬಾಗಲಕೋಟೆ ಜಿಲ್ಲೆಯ 25 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುತ್ತದೆ. ವಿಮಾನ ‌ನಿಲ್ದಾಣ ಸೇರಿದಂತೆ ಇತರ ಕೈಗಾರಿಕೆಗಳು ಬರುತ್ತದೆ. ಹಲಕುರ್ಕಿ ರೈತರು 900 ಎಕರೆ ಜಮೀನು‌ ಕೊಡಲು ಮುಂದೆ‌ ಬಂದಿದ್ದಾರೆ. ಆದರೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದು, ಪ್ರತಿ ಏಕರೆಗೆ 19 ಲಕ್ಷ‌ ಕೊಡುತ್ತೇವೆ ಎಂದು ತಿಳಿಸಿದ್ದೇವೆ. ರೈತರು ಜಮೀನು‌ ನೀಡಲು ಮುಂದಾದರೆ, ಹಲಕುರ್ಕಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​​ ಸುಮ್ಮನೆ ಆರೋಪಗಳನ್ನು ಮಾಡಿ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತದೆ: ಮುರುಗೇಶ್​ ನಿರಾಣಿ

Last Updated : Dec 4, 2022, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.