ETV Bharat / state

ಬಾದಾಮಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಚಿವ ಸಿ ಟಿ ರವಿ ಸಂಕಲ್ಪ.. - ಬಾಗಲಕೋಟೆಯಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸಿ.ಟಿ ರವಿ ಸಭೆ

ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಚಿವ ಸಿ ಟಿ ರವಿ ಮುಂದಾಗಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಮಾರಕಗಳ ಮುಂದೆ ಇರುವ ಮನೆಗಳನ್ನು ಸ್ಥಳಾಂತರ ಮಾಡಿಸಿ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಕೈ‌ಬೀಸಿ ಕರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಸಚಿವ ಸಿ.ಟಿ ರವಿ
author img

By

Published : Oct 21, 2019, 10:46 PM IST

ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ತವರು ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಚಿವ ಸಿ ಟಿ ರವಿ ಮುಂದಾಗಿದ್ದಾರೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಮಾರಕಗಳ ಮುಂದೆ ಇರುವ ಮನೆಗಳನ್ನು ಸ್ಥಳಾಂತರ ಮಾಡಿಸಿ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಕೈ‌ ಬೀಸಿ ಕರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸಿ ಟಿ ರವಿ ಸಭೆ..

ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಸಂಸದ ಪಿ ಸಿ ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಸಿ.ಟಿ ರವಿ,ಅಭಿವೃದ್ಧಿಗೆ ಒತ್ತು‌ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮಗಳನ್ನು ಸ್ಥಳಾಂತರ ಮಾಡಿ, ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಸಮಗ್ರ ಸ್ಥಳಾಂತರ ಹಾಗೂ ವೆಚ್ಚ ಆಗುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಪತ್ರ ಬರೆದು ಕೊಡಿ. ಅದಕ್ಕೆ ಬೇಕಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಬಾದಾಮಿ ಸ್ಮಾರಕಗಳ ಮುಂದೆ ಇರುವ 93 ಮನೆಗಳನ್ನು ಸ್ಥಳಾಂತರ ಮಾಡಬೇಕಾದರೆ, ಯುಕೆಪಿ ಮಾದರಿಯಲ್ಲಿ ಪರಿಹಾರ ಧನ ಮತ್ತು ಮನೆ ಕಟ್ಟಿಕೊಡುವಂತೆ ಅಲ್ಲಿನ ನಿವಾಸಿಗಳು ಕೇಳುತ್ತಿದ್ದಾರೆ ಎಂದು ಬಾದಾಮಿ ಪುರಸಭೆ ಆಯುಕ್ತ ಸಚಿವರಿಗೆ ತಿಳಿಸಿದರು. ಆಗ ಸಚಿವರು ಮಾತನಾಡಿ, ಮೊದಲು ಮಾನವೀಯತೆಯಿಂದ ಪರಿಹಾರ ಧನ ಹಾಗೂ ನಿವೇಶನ ನೀಡಿ, ನಂತರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಏಕೆಂದರೆ ಬಾದಾಮಿ‌ ನಗರವು 1947 ರಲ್ಲಿ ಹೇಗೆ ಇತ್ತು ಎಂಬುದು ಬ್ರಿಟಿಷರು ಫೋಟೋಗ್ರಫಿ ಮಾಡಿರುವ ಫೋಟೋಗಳಿವೆ. ಅವುಗಳ ಮೂಲಕ ಕ್ರಮ ಜರುಗಿಸಿ ಎಂದರು.

ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ತವರು ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಚಿವ ಸಿ ಟಿ ರವಿ ಮುಂದಾಗಿದ್ದಾರೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಮಾರಕಗಳ ಮುಂದೆ ಇರುವ ಮನೆಗಳನ್ನು ಸ್ಥಳಾಂತರ ಮಾಡಿಸಿ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಕೈ‌ ಬೀಸಿ ಕರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸಿ ಟಿ ರವಿ ಸಭೆ..

ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಸಂಸದ ಪಿ ಸಿ ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಸಿ.ಟಿ ರವಿ,ಅಭಿವೃದ್ಧಿಗೆ ಒತ್ತು‌ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮಗಳನ್ನು ಸ್ಥಳಾಂತರ ಮಾಡಿ, ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಸಮಗ್ರ ಸ್ಥಳಾಂತರ ಹಾಗೂ ವೆಚ್ಚ ಆಗುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಪತ್ರ ಬರೆದು ಕೊಡಿ. ಅದಕ್ಕೆ ಬೇಕಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಬಾದಾಮಿ ಸ್ಮಾರಕಗಳ ಮುಂದೆ ಇರುವ 93 ಮನೆಗಳನ್ನು ಸ್ಥಳಾಂತರ ಮಾಡಬೇಕಾದರೆ, ಯುಕೆಪಿ ಮಾದರಿಯಲ್ಲಿ ಪರಿಹಾರ ಧನ ಮತ್ತು ಮನೆ ಕಟ್ಟಿಕೊಡುವಂತೆ ಅಲ್ಲಿನ ನಿವಾಸಿಗಳು ಕೇಳುತ್ತಿದ್ದಾರೆ ಎಂದು ಬಾದಾಮಿ ಪುರಸಭೆ ಆಯುಕ್ತ ಸಚಿವರಿಗೆ ತಿಳಿಸಿದರು. ಆಗ ಸಚಿವರು ಮಾತನಾಡಿ, ಮೊದಲು ಮಾನವೀಯತೆಯಿಂದ ಪರಿಹಾರ ಧನ ಹಾಗೂ ನಿವೇಶನ ನೀಡಿ, ನಂತರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಏಕೆಂದರೆ ಬಾದಾಮಿ‌ ನಗರವು 1947 ರಲ್ಲಿ ಹೇಗೆ ಇತ್ತು ಎಂಬುದು ಬ್ರಿಟಿಷರು ಫೋಟೋಗ್ರಫಿ ಮಾಡಿರುವ ಫೋಟೋಗಳಿವೆ. ಅವುಗಳ ಮೂಲಕ ಕ್ರಮ ಜರುಗಿಸಿ ಎಂದರು.

Intro:Anchor


Body:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕ್ಷೇತ್ರವಾಗಿರುವ ಬಾದಾಮಿ ಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಚಿವರಾದ ಸಿ.ಟಿ ರವಿ ಮುಂದಾಗಿದ್ದಾರೆ.ಹಲವು ವರ್ಷಗಳಿಂದ ನೆನೆಗುದ್ದಗೆ ಬಿದ್ದಿರುವ ಸ್ಮಾರಕಗಳ ಮುಂದೆ ಇರುವ ಮನೆಗಳನ್ನು ಸ್ಥಳಾಂತರ ಮಾಡಿಸಿ,ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಕೈ‌ ಬಿಸಿ ಕರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ.
ಅವರು ಬಾಗಲಕೋಟೆ ಜಿಲ್ಲಾಡಳಿತ ಭವನ ದಲ್ಲಿ ಸಂಸದರಾದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ,ಅಭಿವೃದ್ಧಿ ಒತ್ತು‌ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮಗಳು ಸ್ಥಳಾಂತರ ಮಾಡಿ,ಸ್ಮಾರಕಗಳ ನ್ನು ಅಭಿವೃದ್ಧಿ ಪಡಿಸಬೇಕು,ಇದಕ್ಕೆ ಬೇಕಾದ ಅನುದಾನ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ನೀಡಲಾಗುವುದು.ಈ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ,ಸಮಗ್ರ ಸ್ಥಳಾಂತರ ಹಾಗೂ ವೆಚ್ಚ ಆಗುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಪತ್ರ ಬರೆದು ಕೊಡಿ ಅದಕ್ಕೆ ಬೇಕಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಬಾದಾಮಿ ಸ್ಮಾರಕಗಳ ಮುಂದೆ ಇರುವ 93 ಮನೆಗಳನ್ನು ಸ್ಥಳಾಂತರ ಮಾಡಬೇಕಾದರೆ,ಯುಕೆಪಿ ಮಾದರಿಯಲ್ಲಿ ಪರಿಹಾರ ಧನ ಮತ್ತು ಮನೆ ಕಟ್ಟಿಕೊಡುವಂತೆ ಅಲ್ಲಿನ ನಿವಾಸಿಗಳು ಕೇಳುತ್ತಿದ್ದಾರೆ ಎಂದು ಬಾದಾಮಿ ಪುರಸಭೆ ಆಯುಕ್ತ ಸಚಿವರಿಗೆ ತಿಳಿಸಿದರು. ಆಗ ಸಚಿವರು ಮಾತನಾಡಿ, ಮೊದಲು ಮಾನವೀಯತೆ ಯಿಂದ ಪರಿಹಾರ ಧನ ಹಾಗೂ ನಿವೇಶನ ನೀಡಿ,ನಂತರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಏಕೆಂದರೆ ಬಾದಾಮಿ‌ ನಗರವು 1947 ರಲ್ಲಿ ಹೇಗೆ ಇತ್ತು ಎಂಬುದು ಬ್ರಿಟಿಷ್ ಪೋಟೋಗ್ರಾಫಿ ಮಾಡಿರುವ ಪೋಟೋ ಇವೆ.ಅವುಗಳ ಮೂಲಕ ಕ್ರಮ ಜರುಗಿಸಿ,ನಾವು ಓಟಗಾಗಿ ರಾಜಕೀಯ ಮಾಡುತ್ತೇವೆ.ಇದರ ಬಗ್ಗೆ ಯಾರೇ ಏನೇ ಅಂದರೂ ಗಮನ ಹರಿಸದೆ,ಚುನಾವಣೆ ಇದ್ದಾಗ ನಮ್ಮನ್ನು ಹೇಗೆ ನೋಡುತ್ತೀರಾ.ಅದೇ ಮಾದರಿಯಲ್ಲಿ ನೋಡಿ ಎಂದು

ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮಾತು ಸಹ ಕೇಳದೆ,ಅಭಿವೃದ್ಧಿ ಗೆ ಒತ್ತು‌ ನೀಡಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ನವರ ಹೆಸರು ತೆಗೆದುಕೊಳ್ಳದೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು‌ ನಾಳೆ,ಅಂದರೆ ಮಂಗಳವಾರ, ಬುಧುವಾರ ಬಾದಾಮಿ ಮತಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ.ಆದರೆ ಇತ್ತ‌ಕಡೆಗೆ ಬಾದಾಮಿ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದು ಗ್ರಾಸವಾಗಿದೆ.

ಬೈಟ್-- ಸಿ.ಟಿ.ರವಿ( ಪ್ರವಾಸೋದ್ಯಮ ಸಚಿವ)



Conclusion:ಈ ಟಿ ವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.