ETV Bharat / sports

ಉಪ ನಾಯಕತ್ವ ಪಟ್ಟ: 'ಇದು ಕನಸೇ ಎಂದು ಅರೆಕ್ಷಣ ನನ್ನನ್ನೇ ಕೇಳಿಕೊಂಡಿದ್ದೆ': ಸೂರ್ಯಕುಮಾರ್

author img

By

Published : Dec 29, 2022, 4:41 PM IST

Updated : Dec 29, 2022, 5:46 PM IST

ಪ್ರತಿಯೊಬ್ಬ ಕ್ರಿಕೆಟ್‌ ಆಟಗಾರನಿಗೂ ತನ್ನ ದೇಶದ ತಂಡದ ನಾಯಕ ಅಥವಾ ಉಪನಾಯಕನಾಗುವುದು ಹೆಮ್ಮೆಯ ವಿಷಯ. ಇಂತಹ ಅದೃಷ್ಟ ಸೂರ್ಯಕುಮಾರ್ ಯಾದವ್ ಅವರನ್ನು ಹುಡುಕಿಕೊಂಡು ಬಂದಿದೆ. ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ ಸರಣಿಗೆ ಟೀಂ ಇಂಡಿಯಾದ ಉಪ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಅವರು ಮಾತನಾಡಿದರು.

suryakumar-yadav-reaction-after-getting-vice-captaincy-of-team-india
ಟಿಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್

ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ ಸರಣಿಗೆ ಟೀಂ ಇಂಡಿಯಾದ ಉಪ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್, ಕ್ರಿಕೆಟ್​ನಲ್ಲಿ ತಮ್ಮ ಹೊಸ ಇನ್ನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಪ್ರಕ್ರಿಯಿಸಿರುವ ಪ್ರತಿಭಾನ್ವಿತ ಬ್ಯಾಟರ್​, ಭಾರತೀಯ ತಂಡದ ಉಪನಾಯಕನಾಗಿ ಆಯ್ಕೆ ಆಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ 'ಸ್ಕೈ' ಖ್ಯಾತಿಯ ಸೂರ್ಯಕುಮಾರ್ ಯಾದವ್, ಜನವರಿ 3ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿಗೆ ಉಪನಾಯಕನಾಗಿ ನೇಮಕವಾಗಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುನ್ನಡೆಸುವರು.

ಇದನ್ನೂ ಓದಿ: ಸೂರ್ಯಕುಮಾರ್‌ರನ್ನು ಬಿಗ್‌ ಬ್ಯಾಷ್‌ಗೆ ಕರೆತರುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್

ಸೌರಾಷ್ಟ್ರ-ಮುಂಬೈ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕುಮಾರ್, ನಾನು ಇದನ್ನು (ಉಪನಾಯಕ ಸ್ಥಾನ) ನಿರೀಕ್ಷಿಸಿರಲಿಲ್ಲ. ಆದರೆ, ಹೊಸ ಜವಾಬ್ದಾರಿಯನ್ನು ಹೆಚ್ಚುವರಿ ಹೊರೆಯಾಗಿಯೂ ತೆಗೆದುಕೊಳ್ಳುವುದಿಲ್ಲ. ತನ್ನ ಸಹಜ ಆಟವನ್ನು ಮುಂದುವರಿಸುತ್ತೇನೆ ಎಂದರು.

ಬ್ಯಾಟಿಂಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲ: ಈ ವರ್ಷ ನಾನು ಬ್ಯಾಟಿಂಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲದ ರೀತಿಯಲ್ಲಿ ಉಪನಾಯಕತ್ವ ಸಿಕ್ಕಿದೆ ಎಂದು ನಾನು ಹೇಳಬಲ್ಲೆ. ಇದು ನಿಜವಾಗಿಯೂ ಒಳ್ಳೆಯದು ಮತ್ತು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದೂ 'ಮಿಸ್ಟರ್​ 360' ಖ್ಯಾತಿಯ ಆಟಗಾರ​ ಹೇಳಿದ್ದಾರೆ.

ಇದು ಕನಸೇ ಎಂದು ನನ್ನನ್ನೇ ಕೇಳಿಕೊಂಡೆ: ಮೊದಲಿಗೆ, ನನ್ನನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದ ವಿಚಾರ ಕೇಳಿ ಅರೆಕ್ಷಣ ನನಗೇ ನಂಬಲು ಸಾಧ್ಯವಾಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನನ್ನ ತಂದೆಯಿಂದ ಮೊದಲು ಈ ವಿಷಯ ತಿಳಿದುಕೊಂಡಿದ್ದೆ. ತಂಡದ ಆಟಗಾರರ ಪಟ್ಟಿಯನ್ನು ಅವರು ನನಗೆ ಕಳುಹಿಸಿದಾಗಲೇ ಸಂಗತಿ ಗೊತ್ತಾಗಿದ್ದು. ಆಗ ನಾನು ಒಂದು ಕ್ಷಣ ಕಣ್ಮುಚ್ಚಿ, ಇದು ಕನಸೇ ಎಂದು ನನ್ನನ್ನೇ ಕೇಳಿಕೊಂಡಿದ್ದೆ. ಏನಿದ್ದರೂ ಅದೊಂದು ಅದ್ಭುತ ಕ್ಷಣವಾಗಿತ್ತು ಎಂದು ಸೂರ್ಯಕುಮಾರ್ ಖುಷಿ ಕ್ಷಣ ಹಂಚಿಕೊಂಡರು.

ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಒಪ್ಪಂದ: ಸೂರ್ಯಕುಮಾರ್​​, ಹಾರ್ದಿಕ್​ಗೆ ಬಂಪರ್​ : ರಹಾನೆ, ಇಶಾಂತ್ ಔಟ್​?

ನನ್ನ ತಂದೆ ನನಗೆ ತಂಡದ ಪಟ್ಟಿಯೊಂದಿಗೆ ಸಂಕ್ಷಿಪ್ತವಾದ ಸಂದೇಶವನ್ನೂ ಕಳುಹಿಸಿದ್ದರು. ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡ. ನಿನ್ನ ಬ್ಯಾಟಿಂಗ್​ ಅನ್ನು ನೀನು ಆನಂದಿಸಬೇಕು ಎಂದು ಸಲಹೆ ನೀಡಿದ್ದರು ಎಂದು 'ಸ್ಕೈ' ಸ್ಮರಿಸಿದರು.

ಸೀಮಿತ ಓವರ್‌ಗಳ ತಂಡದಲ್ಲಿ ಭಾರತದ ಆಯ್ಕೆಗಾರರು ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡಿಲ್ಲ. ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿ ಮತ್ತು ನ್ಯೂಜಿಲೆಂಡ್​ ವಿರುದ್ಧ ಸರಣಿಯಲ್ಲೂ ಅವರು ಅದ್ಭುತ​ ಫಾರ್ಮ್‌​ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಟಿ20ಗೆ ಹಾರ್ದಿಕ್​ ಪಾಂಡ್ಯ, ಏಕದಿನಕ್ಕೆ ರೋಹಿತ್​ ಸಾರಥ್ಯ: ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ

ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್​ ಸರಣಿಗೆ ಟೀಂ ಇಂಡಿಯಾದ ಉಪ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್, ಕ್ರಿಕೆಟ್​ನಲ್ಲಿ ತಮ್ಮ ಹೊಸ ಇನ್ನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಪ್ರಕ್ರಿಯಿಸಿರುವ ಪ್ರತಿಭಾನ್ವಿತ ಬ್ಯಾಟರ್​, ಭಾರತೀಯ ತಂಡದ ಉಪನಾಯಕನಾಗಿ ಆಯ್ಕೆ ಆಗುತ್ತೇನೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ 'ಸ್ಕೈ' ಖ್ಯಾತಿಯ ಸೂರ್ಯಕುಮಾರ್ ಯಾದವ್, ಜನವರಿ 3ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿಗೆ ಉಪನಾಯಕನಾಗಿ ನೇಮಕವಾಗಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಆಲ್​ರೌಂಡರ್​​ ಹಾರ್ದಿಕ್ ಪಾಂಡ್ಯ ನಾಯಕರಾಗಿ ಮುನ್ನಡೆಸುವರು.

ಇದನ್ನೂ ಓದಿ: ಸೂರ್ಯಕುಮಾರ್‌ರನ್ನು ಬಿಗ್‌ ಬ್ಯಾಷ್‌ಗೆ ಕರೆತರುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್

ಸೌರಾಷ್ಟ್ರ-ಮುಂಬೈ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೂರ್ಯಕುಮಾರ್, ನಾನು ಇದನ್ನು (ಉಪನಾಯಕ ಸ್ಥಾನ) ನಿರೀಕ್ಷಿಸಿರಲಿಲ್ಲ. ಆದರೆ, ಹೊಸ ಜವಾಬ್ದಾರಿಯನ್ನು ಹೆಚ್ಚುವರಿ ಹೊರೆಯಾಗಿಯೂ ತೆಗೆದುಕೊಳ್ಳುವುದಿಲ್ಲ. ತನ್ನ ಸಹಜ ಆಟವನ್ನು ಮುಂದುವರಿಸುತ್ತೇನೆ ಎಂದರು.

ಬ್ಯಾಟಿಂಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲ: ಈ ವರ್ಷ ನಾನು ಬ್ಯಾಟಿಂಗ್​ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಪ್ರತಿಫಲದ ರೀತಿಯಲ್ಲಿ ಉಪನಾಯಕತ್ವ ಸಿಕ್ಕಿದೆ ಎಂದು ನಾನು ಹೇಳಬಲ್ಲೆ. ಇದು ನಿಜವಾಗಿಯೂ ಒಳ್ಳೆಯದು ಮತ್ತು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದೂ 'ಮಿಸ್ಟರ್​ 360' ಖ್ಯಾತಿಯ ಆಟಗಾರ​ ಹೇಳಿದ್ದಾರೆ.

ಇದು ಕನಸೇ ಎಂದು ನನ್ನನ್ನೇ ಕೇಳಿಕೊಂಡೆ: ಮೊದಲಿಗೆ, ನನ್ನನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದ ವಿಚಾರ ಕೇಳಿ ಅರೆಕ್ಷಣ ನನಗೇ ನಂಬಲು ಸಾಧ್ಯವಾಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನನ್ನ ತಂದೆಯಿಂದ ಮೊದಲು ಈ ವಿಷಯ ತಿಳಿದುಕೊಂಡಿದ್ದೆ. ತಂಡದ ಆಟಗಾರರ ಪಟ್ಟಿಯನ್ನು ಅವರು ನನಗೆ ಕಳುಹಿಸಿದಾಗಲೇ ಸಂಗತಿ ಗೊತ್ತಾಗಿದ್ದು. ಆಗ ನಾನು ಒಂದು ಕ್ಷಣ ಕಣ್ಮುಚ್ಚಿ, ಇದು ಕನಸೇ ಎಂದು ನನ್ನನ್ನೇ ಕೇಳಿಕೊಂಡಿದ್ದೆ. ಏನಿದ್ದರೂ ಅದೊಂದು ಅದ್ಭುತ ಕ್ಷಣವಾಗಿತ್ತು ಎಂದು ಸೂರ್ಯಕುಮಾರ್ ಖುಷಿ ಕ್ಷಣ ಹಂಚಿಕೊಂಡರು.

ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಒಪ್ಪಂದ: ಸೂರ್ಯಕುಮಾರ್​​, ಹಾರ್ದಿಕ್​ಗೆ ಬಂಪರ್​ : ರಹಾನೆ, ಇಶಾಂತ್ ಔಟ್​?

ನನ್ನ ತಂದೆ ನನಗೆ ತಂಡದ ಪಟ್ಟಿಯೊಂದಿಗೆ ಸಂಕ್ಷಿಪ್ತವಾದ ಸಂದೇಶವನ್ನೂ ಕಳುಹಿಸಿದ್ದರು. ಯಾವುದೇ ಒತ್ತಡವನ್ನು ತೆಗೆದುಕೊಳ್ಳಬೇಡ. ನಿನ್ನ ಬ್ಯಾಟಿಂಗ್​ ಅನ್ನು ನೀನು ಆನಂದಿಸಬೇಕು ಎಂದು ಸಲಹೆ ನೀಡಿದ್ದರು ಎಂದು 'ಸ್ಕೈ' ಸ್ಮರಿಸಿದರು.

ಸೀಮಿತ ಓವರ್‌ಗಳ ತಂಡದಲ್ಲಿ ಭಾರತದ ಆಯ್ಕೆಗಾರರು ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ನೀಡಿಲ್ಲ. ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿ ಮತ್ತು ನ್ಯೂಜಿಲೆಂಡ್​ ವಿರುದ್ಧ ಸರಣಿಯಲ್ಲೂ ಅವರು ಅದ್ಭುತ​ ಫಾರ್ಮ್‌​ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಟಿ20ಗೆ ಹಾರ್ದಿಕ್​ ಪಾಂಡ್ಯ, ಏಕದಿನಕ್ಕೆ ರೋಹಿತ್​ ಸಾರಥ್ಯ: ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ

Last Updated : Dec 29, 2022, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.