ETV Bharat / sports

ಶಹ್ಬಾಜ್ ಪ್ರದರ್ಶನದ ಮೂಲಕವೇ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ: ಸಿರಾಜ್

author img

By

Published : Apr 15, 2021, 6:53 PM IST

ಅಹ್ಮದ್​ ತಮ್ಮ 17ನೇ ಓವರ್​ನಲ್ಲಿ ಜಾನಿ ಬೈರ್​ಸ್ಟೋವ್, ಮನೀಶ್ ಪಾಂಡೆ ಮತ್ತು ಅಬ್ದುಲ್ ಸಮದ್​ ವಿಕೆಟ್​ ಪಡೆದು ಕೈಯಲ್ಲಿದ್ದ ಗೆಲುವನ್ನು ಆರ್​ಸಿಬಿ ಕಡೆಗೆ ಬದಲಾಯಿಸಿದ್ದರು. ಆದರೆ ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಶಹ್ಬಾಜ್​ಗೆ ಚೆಂಡು ನೀಡಿದ್ದರ ಹಿಂದಿದ್ದ ಯೋಜನೆಯನ್ನು ಸಿರಾಜ್ ಹೇಳಿದ್ದಾರೆ.

ಶಬ್ಜಾಜ್ ಅಹ್ಮದ್ ಮತ್ತು ಸಿರಾಜ್
ಶಬ್ಜಾಜ್ ಅಹ್ಮದ್ ಮತ್ತು ಸಿರಾಜ್

ಚೆನ್ನೈ: ಮೊದಲ ಪಂದ್ಯದ ವೈಫಲ್ಯದ ನಂತರವೂ 2ನೇ ಪಂದ್ಯದಲ್ಲಿ ಅವಕಾಶ ಪಡೆದ ಶಹ್ಬಾಜ್ ತಮ್ಮ ಆಯ್ಕೆಯನ್ನು ಪ್ರದರ್ಶನದ ಮೂಲಕ ಸಮರ್ಥಿಸಿಕೊಂಡಿದ್ದಾರೆ ಎಂದು ಆರ್​ಸಿಬಿಯ ಉದಯೋನ್ಮುಖ ತಾರೆ ಮೊಹಮ್ಮದ್ ಸಿರಾಜ್​ ಹೇಳಿದ್ದಾರೆ.

ಶಹ್ಬಾಜ್ ಅಹ್ಮದ್ 17ನೇ ಓವರ್​ನಲ್ಲಿ 3 ವಿಕೆಟ್ ಪಡೆದು ಪಂದ್ಯದಲ್ಲಿ ಅದ್ಭುತವಾಗಿ ತಿರುಗಿ ಬೀಳಲು ಕಾರಣರಾಗಿದ್ದರು. ಜೊತೆಗೆ ಈ ಪಂದ್ಯದಲ್ಲಿ ಅಹ್ಮದ್,​ ಮ್ಯಾಕ್ಸ್​ವೆಲ್ ಮತ್ತು ಎಬಿಡಿಗೂ ಮೊದಲೇ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದರು. ಉತ್ತಮ ಆರಂಭ ಪಡೆದ ಅವರು, ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು.

"ಶಹ್ಬಾಜ್ ಮತ್ತು ರಜತ್ ಅಭ್ಯಾಸ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದರು. ಅಹ್ಮದ್​ ಒಬ್ಬ ಆಲ್​ರೌಂಡರ್​, ಅವರ ಸೇರ್ಪಡೆಯಿಂದ ತಂಡದಲ್ಲಿ ಸ್ಪಿನ್​ ವಿಭಾಗಕ್ಕೆ ಹೆಚ್ಚುವರಿ ಆಯ್ಕೆ ತೆರೆಯುತ್ತದೆ. ಅಲ್ಲದೆ ಇಂತಹ ಸ್ಲೋ ಪಿಚ್​ ಅವರಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುತ್ತದೆ. ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ" ಎಂದು ಸಿರಾಜ್ ಪಂದ್ಯದ ನಂತರ ತಿಳಿಸಿದ್ದಾರೆ.

ಅಹ್ಮದ್​ ತಮ್ಮ 17ನೇ ಓವರ್​ನಲ್ಲಿ ಜಾನಿ ಬೈರ್​ಸ್ಟೋವ್, ಮನೀಶ್ ಪಾಂಡೆ ಮತ್ತು ಅಬ್ದುಲ್ ಸಮದ್​ ವಿಕೆಟ್​ ಪಡೆದು ಕೈಯಲ್ಲಿದ್ದ ಗೆಲುವನ್ನು ಆರ್​ಸಿಬಿ ಕಡೆಗೆ ಬದಲಾಯಿಸಿದ್ದರು. ಆದರೆ ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಶಹ್ಬಾಜ್​ಗೆ ಚೆಂಡು ನೀಡಿದರ ಹಿಂದಿದ್ದ ಯೋಜನೆಯನ್ನು ಸಿರಾಜ್ ಹೇಳಿದ್ದಾರೆ.

ನಮಗೆ ಈ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಅವರ ಓವರ್‌ ಕೂಡ ಉಳಿದಿತ್ತು. ಆದರೆ ಕ್ರೀಸ್‌ನಲ್ಲಿ ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಇದ್ದ ಕಾರಣ ಎಡಗೈ ಸ್ಪಿನ್ನರ್‌ನನ್ನು ಕಣಕ್ಕಿಳಿಸುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಇದು ಪಂದ್ಯದ ಗತಿಯನ್ನು ಬದಲಿಸಿತು. ಅಲ್ಲದೆ ಅವರು ತಮ್ಮ ಮೊದಲ ಓವರ್​ನಲ್ಲೇ ಮನೀಶ್ ಪಾಂಡೆ ವಿಕೆಟ್ ಪಡೆಯುವ ಅವಕಾಶವನ್ನು ಸೃಷ್ಟಿಸಿದ್ದರು. ಹಾಗಾಗಿ ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇಡಲಾಯಿತು" ಎಂದು 4 ಓವರ್​ಗಳಲ್ಲಿ 25 ರನ್​ ನೀಡಿ 2 ವಿಕೆಟ್​ ಪಡೆದಿದ್ದ ಸಿರಾಜ್ ವಿವರಿಸಿದ್ದಾರೆ.

ಇದನ್ನು ಓದಿ: Watch: ಆರ್​​ಸಿಬಿಗೆ ಪಂದ್ಯ ಗೆಲ್ಲಿಸಿಕೊಟ್ಟ ಶಹ್ಬಾಜ್ ಅಹ್ಮದ್ ಎಸೆದ 17ನೇ ಓವರ್ ಹೇಗಿತ್ತು ನೋಡಿ!

ಚೆನ್ನೈ: ಮೊದಲ ಪಂದ್ಯದ ವೈಫಲ್ಯದ ನಂತರವೂ 2ನೇ ಪಂದ್ಯದಲ್ಲಿ ಅವಕಾಶ ಪಡೆದ ಶಹ್ಬಾಜ್ ತಮ್ಮ ಆಯ್ಕೆಯನ್ನು ಪ್ರದರ್ಶನದ ಮೂಲಕ ಸಮರ್ಥಿಸಿಕೊಂಡಿದ್ದಾರೆ ಎಂದು ಆರ್​ಸಿಬಿಯ ಉದಯೋನ್ಮುಖ ತಾರೆ ಮೊಹಮ್ಮದ್ ಸಿರಾಜ್​ ಹೇಳಿದ್ದಾರೆ.

ಶಹ್ಬಾಜ್ ಅಹ್ಮದ್ 17ನೇ ಓವರ್​ನಲ್ಲಿ 3 ವಿಕೆಟ್ ಪಡೆದು ಪಂದ್ಯದಲ್ಲಿ ಅದ್ಭುತವಾಗಿ ತಿರುಗಿ ಬೀಳಲು ಕಾರಣರಾಗಿದ್ದರು. ಜೊತೆಗೆ ಈ ಪಂದ್ಯದಲ್ಲಿ ಅಹ್ಮದ್,​ ಮ್ಯಾಕ್ಸ್​ವೆಲ್ ಮತ್ತು ಎಬಿಡಿಗೂ ಮೊದಲೇ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದ್ದರು. ಉತ್ತಮ ಆರಂಭ ಪಡೆದ ಅವರು, ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು.

"ಶಹ್ಬಾಜ್ ಮತ್ತು ರಜತ್ ಅಭ್ಯಾಸ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದರು. ಅಹ್ಮದ್​ ಒಬ್ಬ ಆಲ್​ರೌಂಡರ್​, ಅವರ ಸೇರ್ಪಡೆಯಿಂದ ತಂಡದಲ್ಲಿ ಸ್ಪಿನ್​ ವಿಭಾಗಕ್ಕೆ ಹೆಚ್ಚುವರಿ ಆಯ್ಕೆ ತೆರೆಯುತ್ತದೆ. ಅಲ್ಲದೆ ಇಂತಹ ಸ್ಲೋ ಪಿಚ್​ ಅವರಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುತ್ತದೆ. ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ" ಎಂದು ಸಿರಾಜ್ ಪಂದ್ಯದ ನಂತರ ತಿಳಿಸಿದ್ದಾರೆ.

ಅಹ್ಮದ್​ ತಮ್ಮ 17ನೇ ಓವರ್​ನಲ್ಲಿ ಜಾನಿ ಬೈರ್​ಸ್ಟೋವ್, ಮನೀಶ್ ಪಾಂಡೆ ಮತ್ತು ಅಬ್ದುಲ್ ಸಮದ್​ ವಿಕೆಟ್​ ಪಡೆದು ಕೈಯಲ್ಲಿದ್ದ ಗೆಲುವನ್ನು ಆರ್​ಸಿಬಿ ಕಡೆಗೆ ಬದಲಾಯಿಸಿದ್ದರು. ಆದರೆ ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಶಹ್ಬಾಜ್​ಗೆ ಚೆಂಡು ನೀಡಿದರ ಹಿಂದಿದ್ದ ಯೋಜನೆಯನ್ನು ಸಿರಾಜ್ ಹೇಳಿದ್ದಾರೆ.

ನಮಗೆ ಈ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಅವರ ಓವರ್‌ ಕೂಡ ಉಳಿದಿತ್ತು. ಆದರೆ ಕ್ರೀಸ್‌ನಲ್ಲಿ ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಇದ್ದ ಕಾರಣ ಎಡಗೈ ಸ್ಪಿನ್ನರ್‌ನನ್ನು ಕಣಕ್ಕಿಳಿಸುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಇದು ಪಂದ್ಯದ ಗತಿಯನ್ನು ಬದಲಿಸಿತು. ಅಲ್ಲದೆ ಅವರು ತಮ್ಮ ಮೊದಲ ಓವರ್​ನಲ್ಲೇ ಮನೀಶ್ ಪಾಂಡೆ ವಿಕೆಟ್ ಪಡೆಯುವ ಅವಕಾಶವನ್ನು ಸೃಷ್ಟಿಸಿದ್ದರು. ಹಾಗಾಗಿ ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇಡಲಾಯಿತು" ಎಂದು 4 ಓವರ್​ಗಳಲ್ಲಿ 25 ರನ್​ ನೀಡಿ 2 ವಿಕೆಟ್​ ಪಡೆದಿದ್ದ ಸಿರಾಜ್ ವಿವರಿಸಿದ್ದಾರೆ.

ಇದನ್ನು ಓದಿ: Watch: ಆರ್​​ಸಿಬಿಗೆ ಪಂದ್ಯ ಗೆಲ್ಲಿಸಿಕೊಟ್ಟ ಶಹ್ಬಾಜ್ ಅಹ್ಮದ್ ಎಸೆದ 17ನೇ ಓವರ್ ಹೇಗಿತ್ತು ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.