ಅಹಮದಾಬಾದ್ (ಗುಜರಾತ್): ವಿರಾಟ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಎರಡು ವರ್ಷಗಳಿಂದ ಟೀಕೆಗಳು ಕೇಳಿ ಬರುತ್ತಿದ್ದವು. ಟಿ 20 ವಿಶ್ವ ಕಪ್ ನಂತರ ಚುಟುಕು ಹಾಗೂ ಸೀಮಿತ ಓವರ್ಗಳ ಪಂದ್ಯದಲ್ಲಿ ವಿರಾಟ್ ಫಾರ್ಮ್ಗೆ ಮರಳಿದ್ದರು. ಟೆಸ್ಟ್ನಲ್ಲಿ ಅವರ ರನ್ ಬರ ಮುಂದುವರೆದಿತ್ತು. ಈ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದವು. ಈ ವರ್ಷದ ಬಾರ್ಡರ್ ಗವಾಸ್ಕರ್ ಟ್ರೊಫಿಯಲ್ಲೂ ಸತತ ಮೂರು ಪಂದ್ಯಗಳಿಂದ ಬೃಹತ್ ರನ್ ಗಳಿಸಲು ಪರದಾಡಿದ್ದರು.
ಕೊನೆಯ ಪಂದ್ಯದಲ್ಲಿ ವಿರಾಟ್ ಶತಕ ಗಳಿಸಿ ಮೂರಂಕಿಯ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸಿಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನ 28ನೇ ಶತಕ ದಾಖಲಿಸಿದರು. 3.5 ವರ್ಷಗಳ ನಂತರ ವಿರಾಟ್ ಬ್ಯಾಟ್ನಿಂದ ಬಂದ ಶತಕ ಇದಾಗಿತ್ತು.
ಮೂರು ವರ್ಷಗಳಿಂದ ದೊಡ್ಡ ಮೊತ್ತದ ಸ್ಕೋರ್ ಮಾಡುವಲ್ಲಿ ವಿಫಲವಾಗುತ್ತಿರುವ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಅವರಿಗೇ ಬೇಸರ ಇತ್ತೆಂದು ಅವರೇ ಹೇಳಿಕೊಂಡಿದ್ದಾರೆ. ಬಿಸಿಸಿಐ ಟಿವಿಗಾಗಿ ಕೋಚ್ ರಾಹುಲ್ ದ್ರಾವಿಡ್ ಮಾಡಿದ ಸಂದರ್ಶನದಲ್ಲಿ ಮಾತನಾಡಿದ ವಿರಾಟ್, ಈ ವಿಚಾರವನ್ನು ಹೊರಹಾಕಿದ್ದಾರೆ. ಹಾಗೇ ಶತಕದಾಟದ ಬಗ್ಗ ಮುಕ್ತವಾಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶತಕ ಗಳಿಸದಿದ್ದಾಗ ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿತ್ತು ಎಂದು ರಾಹುಲ್ ದ್ರಾವಿಡ್ ಕೇಳಿದ ಪ್ರಶ್ನೆಗೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬೃಹತ್ ಮೊತ್ತವನ್ನು ತಂಡಕ್ಕೆ ಕೊಡಲಾಗುತ್ತಿಲ್ಲ ಎಂಬ ಬೇಸರ ನನ್ನಲ್ಲಿಯೂ ಇತ್ತು. ಒಬ್ಬ ಬ್ಯಾಟರ್ಗೆ ತಾನು ರನ್ ಗಳಿಸುತ್ತಿಲ್ಲ ಎಂಬ ಅರಿವು ಆಗುತ್ತದೆ. ನಾನು ಮೂರಂಕಿ ತಲುಪುವಲ್ಲಿ ಎಡವುತ್ತಿದ್ದ ಬಗ್ಗೆ ನನಗೆ ಬೇಸರ ಇತ್ತು. 40-45 ರನ್ಗಳಿಗೆ ಔಟ್ ಆಗುತ್ತಿದ್ದಾಗ ತಂಡಕ್ಕೆ ಅಗತ್ಯ ಸಮಯದಲ್ಲಿ ರನ್ ಕೊಡುಗೆ ನೀಡಲಾಗುತ್ತಿಲ್ಲ ಎಂಬ ಹತಾಶೆ ನನ್ನಲ್ಲಿ ಮೂಡಿತ್ತು. ಈ ಕ್ರೀಸ್ಗೆ ಬಂದಾಗ 150+ ರನ್ ಮಾಡಬಹುದು ಎಂಬ ಭರವಸೆ ನನಗೆ ಬಂದಿತ್ತು ಹಾಗೂ ಅದು ಸಾಧ್ಯವಾಯಿತು ಎಂದು ವಿರಾಟ್ ಹೇಳಿಕೊಂಡಿದ್ದಾರೆ.
-
A conversation full of calmness, respect & inspiration written all over it! 😊 🙌
— BCCI (@BCCI) March 14, 2023 " class="align-text-top noRightClick twitterSection" data="
A special post series-win chat with #TeamIndia Head Coach Rahul Dravid & @imVkohli at the Narendra Modi Stadium, Ahmedabad 👍 👍 - By @RajalArora
FULL INTERVIEW 🔽 #INDvAUShttps://t.co/nF0XfltRg2 pic.twitter.com/iHU1jZ1CKG
">A conversation full of calmness, respect & inspiration written all over it! 😊 🙌
— BCCI (@BCCI) March 14, 2023
A special post series-win chat with #TeamIndia Head Coach Rahul Dravid & @imVkohli at the Narendra Modi Stadium, Ahmedabad 👍 👍 - By @RajalArora
FULL INTERVIEW 🔽 #INDvAUShttps://t.co/nF0XfltRg2 pic.twitter.com/iHU1jZ1CKGA conversation full of calmness, respect & inspiration written all over it! 😊 🙌
— BCCI (@BCCI) March 14, 2023
A special post series-win chat with #TeamIndia Head Coach Rahul Dravid & @imVkohli at the Narendra Modi Stadium, Ahmedabad 👍 👍 - By @RajalArora
FULL INTERVIEW 🔽 #INDvAUShttps://t.co/nF0XfltRg2 pic.twitter.com/iHU1jZ1CKG
ನಮ್ಮ ಬ್ಯಾಟ್ನಿಂದ ಸ್ಕೋರ್ ಬರದಿದ್ದಾಗ ಹೋಟೆಲ್ ರೋಮ್ ನಿಂದ ಹೊರಬರಲು ಕಷ್ಟವಾಗುತ್ತದೆ. ಹೊರಗಿನ ಜನರು, ನಮ್ಮ ಬಸ್ ಡ್ರೈವರ್, ಲಿಫ್ಟ್ ಹುಡುಗ ಎಲ್ಲರೂ ಎಂದು ಶತಕ ಮಾಡುತ್ತೀರಿ ಎಂದು ಕೇಳುತ್ತಾರೆ. ಇವೆಲ್ಲವೂ ಒತ್ತಡದ ರೀತಿ ನಮಗೆ ಭಾಸವಾಗುತ್ತದೆ. ಆದರೆ ಅವರ ನಿರೀಕ್ಷೆಯೂ ತಪ್ಪಲ್ಲ. ಈ ಒತ್ತಡದಿಂದ ಹೊರಬರಲು ಪಿಚ್ನಲ್ಲಿ ಹೆಚ್ಚು ಹೊತ್ತು ಕಳೆಯಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ನಾನು ಎಂದಿಗೂ ದಾಖಲೆಗಳಿಗೋಸ್ಕರ ಆಡುವುದಿಲ್ಲ. ಬಹಳಷ್ಟು ಜನರು ನನ್ನನ್ನು ಕೇಳುತ್ತಾರೆ - ನೀವು ಶತಕಗಳನ್ನು ಹೇಗೆ ಗಳಿಸುತ್ತೀರಿ? ಎಂದು, ತಂಡಕ್ಕಾಗಿ ರನ್ ಮಾಡುವಾಗ ದಾಖಲೆಗಳು ತಾನೇ ತಾನಾಗಿ ಆಗುತ್ತವೆ. ತಂಡಕ್ಕಾಗಿ ಬ್ಯಾಟಿಂಗ್ ಮಾಡಬೇಕು, ಆಗ ರನ್ ಸಲೀಸಾಗಿ ಪಡೆಯಬಹುದು. ನಾನು ಯಾವಾಗಲೂ ತಂಡಕ್ಕಾಗಿ ಸಾಕಷ್ಟು ರನ್ ಗಳಿಸಲು ಪ್ರಯತ್ನಿಸುತ್ತೇನೆ. ಮೈಲಿಗಲ್ಲು ಎಂದಿಗೂ ನನ್ನ ಗಮನ ಅಲ್ಲ ಎಂದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಮುನ್ನ ಶತಕ ದಾಖಲಿಸಿರುವುದು ನನಗೆ ಭರವಸೆ ತಂದಿದೆ. ನಾನು ಈ ಶತಕದಿಂದ ತುಂಬಾ ನಿರಾಳನಾಗಿದ್ದೇನೆ ಮತ್ತು ಫೈನಲ್ನಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: WTC 2023: ಭಾರತೀಯ ಆಟಗಾರರ ಪ್ರದರ್ಶನ ಹೀಗಿದೆ..