ETV Bharat / sports

WTC ಫೈನಲ್​ನಲ್ಲಿ ಎದುರಾಳಿ ಕಟ್ಟಿಹಾಕಲು ವೇಗದ ಬೌಲಿಂಗ್​ ಬಗ್ಗೆ ಹೆಚ್ಚಿನ ಗಮನ: ವಿಲಿಯಮ್ಸನ್​

author img

By

Published : Jun 18, 2021, 3:26 PM IST

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನ್ಯೂಜಿಲ್ಯಾಂಡ್​ ಕ್ಯಾಪ್ಟನ್​ ಮಾತನಾಡಿದ್ದು, ತಮ್ಮ ತಂಡದ ಸಾಮರ್ಥ್ಯ ಯಾವುದು ಎಂಬುದರ ಮಾಹಿತಿ ಹೊರಹಾಕಿದ್ದಾರೆ.

Williamson
Williamson

ಸೌತಾಂಪ್ಟನ್: ಭಾರತ - ನ್ಯೂಜಿಲ್ಯಾಂಡ್ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇದಕ್ಕೆ ಮಳೆಯ ಕಾಟ ಶುರುವಾಗಿದ್ದು, ಇದೇ ಕಾರಣಕ್ಕಾಗಿ ಟಾಸ್​​ನಲ್ಲಿ ವಿಳಂಬವಾಗಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್​ ತಂಡದ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​, ಎದುರಾಳಿ ತಂಡ ಕಟ್ಟಿಹಾಕುವ ಉದ್ದೇಶದಿಂದ ಫೈನಲ್ ಪಂದ್ಯದಲ್ಲಿ ನಾವು ವೇಗದ ಬೌಲಿಂಗ್​ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದಿದ್ದಾರೆ.

ಕೇನ್​ ವಿಲಿಯಮ್ಸನ್​ ಮಾತನಾಡಿರುವ ವಿಡಿಯೋ ತುಣಕವೊಂದನ್ನ ಐಸಿಸಿ ವೆಬ್​ಸೈಟ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ನಾವು ಆಡುವ ಕ್ರಿಕೆಟ್​​ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಈ ಸೆಷನ್​ ಆನಂದಿಸುವುದು ನಮ್ಮ ತಂಡಕ್ಕೆ ಮುಖ್ಯವಾಗಿದೆ. ಕಳೆದ ಕೆಲ ದಿನಳಿಂದ ನಮ್ಮ ಪ್ಲೇಯರ್ಸ್​​ ಚೆನ್ನಾಗಿ ಬ್ಯಾಟಿಂಗ್​ ಮಾಡ್ತಿದ್ದು, ಬೌಲರ್ಸ್​ ಕೂಡ ಉತ್ತಮ ಕೊಡುಗೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್​ ವೇಗದ ಬೌಲಿಂಗ್​ ವಿಭಾಗ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಬೌಲಿಂಗ್​ ವಿಭಾಗ ಚೆನ್ನಾಗಿರುವ ಕಾರಣ ಅದು ನಮಗೆ ಟ್ರಂಪ್ ಕಾರ್ಡ್​. ಎದುರಾಳಿ ತಂಡ ಕಟ್ಟಿಹಾಕುವಲ್ಲಿ ಅದು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ವಿಲಿಯಮ್ಸನ್​ ತಿಳಿಸಿದ್ದಾರೆ.

ಇದನ್ನೂ ಓದಿರಿ: WTC ಫೈನಲ್ ಪಂದ್ಯಕ್ಕೆ ಮಳೆ ಕಾಟ: ಮೊದಲ ಸೆಷನ್ ರದ್ದು

ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ನಾವು ಗೆಲುವು ಸಾಧಿಸಲು ಬೌಲಿಂಗ್ ವಿಭಾಗ ಸಹಾಯ ಮಾಡಿದ್ದು, ಭಾರತದ ಎದುರು ಸಹ ಅದೇ ರೀತಿಯ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮನ್​ ಕಾನ್ವೇ ದ್ವಿಶತಕ ಬಾರಿಸಿದ್ರೆ, ಥಿಮ್​ ಸೌಥಿ ಪ್ರಥಮ ಇನ್ನಿಂಗ್ಸ್​ನಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು. ಎರಡನೇ ಟೆಸ್ಟ್​​ ಪಂದ್ಯದಲ್ಲಿ ಬೌಲ್ಟ್​, ಹೆನ್ರಿ ಕೂಡ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ ಎಂದರು.

ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು. ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ಎರಡು ತಂಡಗಳು ಸಾಧ್ಯವಾದಷ್ಟು ಯೋಜನೆ ರೂಪಿಸಿಕೊಂಡಿವೆ. ಕ್ರಿಕೆಟ್​ನಲ್ಲಿ ಇದು ಕೂಡ ಒಂದು ಪಂದ್ಯವಾಗಿದೆ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ.

ಸೌತಾಂಪ್ಟನ್: ಭಾರತ - ನ್ಯೂಜಿಲ್ಯಾಂಡ್ ನಡುವೆ ಇಂದಿನಿಂದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಆರಂಭಗೊಳ್ಳಲಿದೆ. ಆದರೆ, ಇದಕ್ಕೆ ಮಳೆಯ ಕಾಟ ಶುರುವಾಗಿದ್ದು, ಇದೇ ಕಾರಣಕ್ಕಾಗಿ ಟಾಸ್​​ನಲ್ಲಿ ವಿಳಂಬವಾಗಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್​ ತಂಡದ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​, ಎದುರಾಳಿ ತಂಡ ಕಟ್ಟಿಹಾಕುವ ಉದ್ದೇಶದಿಂದ ಫೈನಲ್ ಪಂದ್ಯದಲ್ಲಿ ನಾವು ವೇಗದ ಬೌಲಿಂಗ್​ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದಿದ್ದಾರೆ.

ಕೇನ್​ ವಿಲಿಯಮ್ಸನ್​ ಮಾತನಾಡಿರುವ ವಿಡಿಯೋ ತುಣಕವೊಂದನ್ನ ಐಸಿಸಿ ವೆಬ್​ಸೈಟ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ನಾವು ಆಡುವ ಕ್ರಿಕೆಟ್​​ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಈ ಸೆಷನ್​ ಆನಂದಿಸುವುದು ನಮ್ಮ ತಂಡಕ್ಕೆ ಮುಖ್ಯವಾಗಿದೆ. ಕಳೆದ ಕೆಲ ದಿನಳಿಂದ ನಮ್ಮ ಪ್ಲೇಯರ್ಸ್​​ ಚೆನ್ನಾಗಿ ಬ್ಯಾಟಿಂಗ್​ ಮಾಡ್ತಿದ್ದು, ಬೌಲರ್ಸ್​ ಕೂಡ ಉತ್ತಮ ಕೊಡುಗೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್​ ವೇಗದ ಬೌಲಿಂಗ್​ ವಿಭಾಗ ಭಾರತಕ್ಕೆ ಕಠಿಣ ಸ್ಪರ್ಧೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಬೌಲಿಂಗ್​ ವಿಭಾಗ ಚೆನ್ನಾಗಿರುವ ಕಾರಣ ಅದು ನಮಗೆ ಟ್ರಂಪ್ ಕಾರ್ಡ್​. ಎದುರಾಳಿ ತಂಡ ಕಟ್ಟಿಹಾಕುವಲ್ಲಿ ಅದು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ವಿಲಿಯಮ್ಸನ್​ ತಿಳಿಸಿದ್ದಾರೆ.

ಇದನ್ನೂ ಓದಿರಿ: WTC ಫೈನಲ್ ಪಂದ್ಯಕ್ಕೆ ಮಳೆ ಕಾಟ: ಮೊದಲ ಸೆಷನ್ ರದ್ದು

ಕಳೆದ ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ನಾವು ಗೆಲುವು ಸಾಧಿಸಲು ಬೌಲಿಂಗ್ ವಿಭಾಗ ಸಹಾಯ ಮಾಡಿದ್ದು, ಭಾರತದ ಎದುರು ಸಹ ಅದೇ ರೀತಿಯ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಲಾರ್ಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮನ್​ ಕಾನ್ವೇ ದ್ವಿಶತಕ ಬಾರಿಸಿದ್ರೆ, ಥಿಮ್​ ಸೌಥಿ ಪ್ರಥಮ ಇನ್ನಿಂಗ್ಸ್​ನಲ್ಲಿ ಆರು ವಿಕೆಟ್ ಪಡೆದು ಮಿಂಚಿದ್ದರು. ಎರಡನೇ ಟೆಸ್ಟ್​​ ಪಂದ್ಯದಲ್ಲಿ ಬೌಲ್ಟ್​, ಹೆನ್ರಿ ಕೂಡ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ ಎಂದರು.

ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು. ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ಎರಡು ತಂಡಗಳು ಸಾಧ್ಯವಾದಷ್ಟು ಯೋಜನೆ ರೂಪಿಸಿಕೊಂಡಿವೆ. ಕ್ರಿಕೆಟ್​ನಲ್ಲಿ ಇದು ಕೂಡ ಒಂದು ಪಂದ್ಯವಾಗಿದೆ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.