ETV Bharat / sports

ನಾನೆಂದೂ ಇಶಾನ್ ಕಿಶನ್​ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಂಡಿರಲಿಲ್ಲ: ರೋಹಿತ್​ ಶರ್ಮಾ

author img

By

Published : Oct 6, 2021, 3:44 PM IST

ಮುಂಬರುವ ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್​ ರಾಜಸ್ಥಾನ್ ರಾಯಲ್ಸ್​​ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್​ಗಳ ನೆರವಿನಿಂದ ಅಜೇಯ 50 ರನ್​ಗಳಿಸಿ ರಾಯಲ್ಸ್ ನೀಡಿದ್ದ 91 ರನ್​ಗಳ ಗುರಿಯನ್ನು 8.2 ಓವರ್​ಗಳಲ್ಲಿ ಮುಗಿಸಲು ನೆರವಾಗಿದ್ದರು.

Rohit Sharma-Ishan Kishan
ರೋಹಿತ್ ಶರ್ಮಾ- ಇಶಾನ್ ಕಿಶನ್

ಶಾರ್ಜಾ: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮುಂಬೈಗೆ ದೊಡ್ಡ ಗೆಲುವು ತಂದುಕೊಟ್ಟ ಇಶಾನ್​ ಕಿಶನ್​ರನ್ನು ನಂಬಿಕಾರ್ಹ ಹುಡುಗ ಎಂದಿದ್ದು, ಆತನ ಸಾಮರ್ಥ್ಯ ಮೇಲೆ ಎಂದಿಗೂ ತಾವೂ ನಂಬಿಕೆ ಕಳೆದುಕೊಂಡಿರಲಿಲ್ಲ ಎಂದು ಮುಬೈ ಇಂಡಿಯನ್ಸ್ ನಾಯಕ ರೋಹಿತ್​ ಶರ್ಮಾ ​ ಹೇಳಿದ್ದಾರೆ.

ಮುಂಬರುವ ಟಿ-20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್​ ರಾಜಸ್ಥಾನ್ ರಾಯಲ್ಸ್​​ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್​ಗಳ ನೆರವಿನಿಂದ ಅಜೇಯ 50 ರನ್​ಗಳಿಸಿ ರಾಯಲ್ಸ್ ನೀಡಿದ್ದ 91 ರನ್​ಗಳ ಗುರಿಯನ್ನು 8.2 ಓವರ್​ಗಳಲ್ಲಿ ಮುಗಿಸಲು ನೆರವಾಗಿದ್ದರು.

"ನಮಗೆ ಎರಡು ಪಾಯಿಂಟ್‌ಗಳು ನಮಗೆ ಬಹಳ ನಿರ್ಣಾಯಕವಾಗಿದ್ದವು. ನಾವು ಅವರನ್ನು (ರಾಜಸ್ಥಾನ ರಾಯಲ್ಸ್) 90 ರನ್‌ಗಳಿಗೆ ಆಲೌಟ್ ಮಾಡಿದ್ದೆವು. ಹಾಗಾಗಿ ಆ ಗುರಿಯನ್ನು ಬೇಗ ಮುಗಿಸಲು ನಮಗೆ ಅವಕಾಶವಿತ್ತು. ಅಲ್ಲದೇ ಹಾಗೆ ಬೇಗ ಪಂದ್ಯವನ್ನು ವಶಪಡಿಸಿಕೊಳ್ಳುವುದು ಬಹಳ ಮುಖ್ಯ ಕೂಡ ಆಗಿತ್ತು. ಆದ್ದರಿಂದ ನಾವು ಮೈದಾನಕ್ಕೆ ಬಂದು ಮುಕ್ತವಾಗಿ ಬ್ಯಾಟ್ ಮಾಡಬೇಕಾಗಿತ್ತು.

ಅದರಂತೆಯೇ ನಾವು ಉತ್ತಮವವಾಗಿ ಆರಂಭಿಸಿದ್ದೆವು. ಮೊದಲ ಓವರ್‌ನಲ್ಲಿ 14-15 ರನ್ ಗಳಿಸಿದ್ದೆವು ಮತ್ತು ರನ್ - ರೇಟ್ ಅನ್ನು ಕ್ರಮವಾಗಿ ಪಡೆಯುವ ಆಲೋಚನೆಯನ್ನು ಹೊಂದಿದ್ದೆವು. ಕೊನೆಗೆ ನಮ್ಮಯೋಜನೆಯಂತೆ ಆಯಿತು. ಇದು ನಮಗೆ ಒಂದು ಪರಿಪೂರ್ಣ ಪಂದ್ಯವಾಗಿತ್ತು "ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.

ಇಶಾನ್​ ಒಂದೆರಡು ಪಂದ್ಯಗಳ ನಂತರ ಆಡುತ್ತಿದ್ದ. ಹಾಗಾಗು ನಾನೇ ರಿಸ್ಕ್​ ತೆಗೆದುಕೊಳ್ಳಲು ಸಿದ್ಧನಾಗಿದ್ದೆ. ನಮಗೆ ಅವನ ಸಾಮರ್ಥ್ಯ ಗೊತ್ತಿದೆ. ಆತ ಕೆಲವು ಸಮಯ ಕ್ರೀಸ್​ನಲ್ಲಿ ಕಳೆಯುವುದನ್ನು ನಾವು ಬಯಸಿದ್ದೆವು ಮತ್ತು ಅದನ್ನು ಯತವತ್ತಾಗಿ ಇಶಾನ್ ಮಾಡಿದ ಎಂದು ತಿಳಿಸಿದರು.

ಇದನ್ನು ಓದಿ:IPL: ಹಳೆಯ ಬ್ಯಾಟಿಂಗ್ ವಿಡಿಯೋ ನೋಡಿ ಫಾರ್ಮ್​​​ಗೆ ಮರಳಿದೆ- ಇಶಾನ್ ಕಿಶನ್​

ಶಾರ್ಜಾ: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮುಂಬೈಗೆ ದೊಡ್ಡ ಗೆಲುವು ತಂದುಕೊಟ್ಟ ಇಶಾನ್​ ಕಿಶನ್​ರನ್ನು ನಂಬಿಕಾರ್ಹ ಹುಡುಗ ಎಂದಿದ್ದು, ಆತನ ಸಾಮರ್ಥ್ಯ ಮೇಲೆ ಎಂದಿಗೂ ತಾವೂ ನಂಬಿಕೆ ಕಳೆದುಕೊಂಡಿರಲಿಲ್ಲ ಎಂದು ಮುಬೈ ಇಂಡಿಯನ್ಸ್ ನಾಯಕ ರೋಹಿತ್​ ಶರ್ಮಾ ​ ಹೇಳಿದ್ದಾರೆ.

ಮುಂಬರುವ ಟಿ-20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್​ ರಾಜಸ್ಥಾನ್ ರಾಯಲ್ಸ್​​ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್​ಗಳ ನೆರವಿನಿಂದ ಅಜೇಯ 50 ರನ್​ಗಳಿಸಿ ರಾಯಲ್ಸ್ ನೀಡಿದ್ದ 91 ರನ್​ಗಳ ಗುರಿಯನ್ನು 8.2 ಓವರ್​ಗಳಲ್ಲಿ ಮುಗಿಸಲು ನೆರವಾಗಿದ್ದರು.

"ನಮಗೆ ಎರಡು ಪಾಯಿಂಟ್‌ಗಳು ನಮಗೆ ಬಹಳ ನಿರ್ಣಾಯಕವಾಗಿದ್ದವು. ನಾವು ಅವರನ್ನು (ರಾಜಸ್ಥಾನ ರಾಯಲ್ಸ್) 90 ರನ್‌ಗಳಿಗೆ ಆಲೌಟ್ ಮಾಡಿದ್ದೆವು. ಹಾಗಾಗಿ ಆ ಗುರಿಯನ್ನು ಬೇಗ ಮುಗಿಸಲು ನಮಗೆ ಅವಕಾಶವಿತ್ತು. ಅಲ್ಲದೇ ಹಾಗೆ ಬೇಗ ಪಂದ್ಯವನ್ನು ವಶಪಡಿಸಿಕೊಳ್ಳುವುದು ಬಹಳ ಮುಖ್ಯ ಕೂಡ ಆಗಿತ್ತು. ಆದ್ದರಿಂದ ನಾವು ಮೈದಾನಕ್ಕೆ ಬಂದು ಮುಕ್ತವಾಗಿ ಬ್ಯಾಟ್ ಮಾಡಬೇಕಾಗಿತ್ತು.

ಅದರಂತೆಯೇ ನಾವು ಉತ್ತಮವವಾಗಿ ಆರಂಭಿಸಿದ್ದೆವು. ಮೊದಲ ಓವರ್‌ನಲ್ಲಿ 14-15 ರನ್ ಗಳಿಸಿದ್ದೆವು ಮತ್ತು ರನ್ - ರೇಟ್ ಅನ್ನು ಕ್ರಮವಾಗಿ ಪಡೆಯುವ ಆಲೋಚನೆಯನ್ನು ಹೊಂದಿದ್ದೆವು. ಕೊನೆಗೆ ನಮ್ಮಯೋಜನೆಯಂತೆ ಆಯಿತು. ಇದು ನಮಗೆ ಒಂದು ಪರಿಪೂರ್ಣ ಪಂದ್ಯವಾಗಿತ್ತು "ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.

ಇಶಾನ್​ ಒಂದೆರಡು ಪಂದ್ಯಗಳ ನಂತರ ಆಡುತ್ತಿದ್ದ. ಹಾಗಾಗು ನಾನೇ ರಿಸ್ಕ್​ ತೆಗೆದುಕೊಳ್ಳಲು ಸಿದ್ಧನಾಗಿದ್ದೆ. ನಮಗೆ ಅವನ ಸಾಮರ್ಥ್ಯ ಗೊತ್ತಿದೆ. ಆತ ಕೆಲವು ಸಮಯ ಕ್ರೀಸ್​ನಲ್ಲಿ ಕಳೆಯುವುದನ್ನು ನಾವು ಬಯಸಿದ್ದೆವು ಮತ್ತು ಅದನ್ನು ಯತವತ್ತಾಗಿ ಇಶಾನ್ ಮಾಡಿದ ಎಂದು ತಿಳಿಸಿದರು.

ಇದನ್ನು ಓದಿ:IPL: ಹಳೆಯ ಬ್ಯಾಟಿಂಗ್ ವಿಡಿಯೋ ನೋಡಿ ಫಾರ್ಮ್​​​ಗೆ ಮರಳಿದೆ- ಇಶಾನ್ ಕಿಶನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.