ETV Bharat / sports

ಫಿಟ್​ನೆಸ್ ಸಾಬೀತು ಪಡಿಸಿದ​ ಅಯ್ಯರ್.. ಐಪಿಎಲ್​ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಕಮ್​ಬ್ಯಾಕ್

author img

By

Published : Aug 11, 2021, 8:09 PM IST

ಶ್ರೇಯಸ್​ ಅಯ್ಯರ್ ಭಾರತದ ಪರ 22 ಏಕದಿನ ಮತ್ತು 29 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತದ ಸೀಮಿತ ಓವರ್​ಗಳ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಗಿರುವ ಅವರು ಟಿ-20 ವಿಶ್ವಕಪ್​ ವೇಳೆ ತಂಡಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ..

NCA clears Shreyas Iyer for competitive games
ಶ್ರೇಯಸ್ ಅಯ್ಯರ್

ಬೆಂಗಳೂರು: ಇಂಗ್ಲೆಂಡ್​​ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೊಳಗಾಗಿ ಅಯ್ಯರ್​ ಸಂಪೂರ್ಣ ಚೇತರಿಸಿಕೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಾಗಿ, ಯುಎಇಯಲ್ಲಿ ಮುಂದಿನ ತಿಂಗಳಿನಿಂದ ಪುನಾರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಲಿದ್ದಾರೆ.

26 ವರ್ಷದ ಬ್ಯಾಟ್ಸ್​ಮನ್​ ಮಾರ್ಚ್​ನಲ್ಲಿ ಇಂಗ್ಲೆಂಡ್ ​ವಿರುದ್ಧ ನಡೆದಿದ್ದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ಐಪಿಎಲ್​​ನಿಂದಲೂ ಹೊರಗುಳಿದಿದ್ದರು. ಹಾಗಾಗಿ, ಡೆಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಕಮ್‌​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ಗೆ ವಹಿಸಲಾಗಿತ್ತು. ಇದೀಗ ಶ್ರೇಯಸ್​ ಅಯ್ಯರ್ ಸಂಪೂರ್ಣ​ ಚೇತರಿಸಿಕೊಂಡಿರುವ ಕಾರಣ ಯುಎಇನಲ್ಲಿ ಮತ್ತೆ ಡೆಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ನಾಯಕತ್ವಕ್ಕೂ ಮರಳುವ ಸಾಧ್ಯತೆಯಿದೆ.

ಪುನಶ್ಚೇತನ ಶಿಬಿರದಲ್ಲಿ ಶ್ರೇಯಸ್​ ಅಯ್ಯರ್​ ಫಿಟ್​ನೆಸ್ ಸಾಬೀತುಪಡಿಸಿದ್ದಾರೆ. ಅವರು ಬೆಂಗಳೂರಿನ ಎನ್​ಸಿಎನಲ್ಲಿ ಒಂದು ವಾರ ಉಳಿದು ಫಿಟ್​ನೆಸ್​ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅವರ ಎಲ್ಲ ವೈದ್ಯಕೀಯ ಮತ್ತು ದೈಹಿಕ ನಿಯತಾಂಕಗಳನ್ನು ಆಧರಿಸಿ, ಈಗ ಸ್ಪರ್ಧಾತ್ಮಕ ಕ್ರಿಕೆಟ್​​ ಆಡಲು ಸಮರ್ಥರಾಗಿದ್ದಾರೆ ಎಂದು ಎನ್​ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೇಯಸ್​ ಅಯ್ಯರ್ ಭಾರತದ ಪರ 22 ಏಕದಿನ ಮತ್ತು 29 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತದ ಸೀಮಿತ ಓವರ್​ಗಳ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಗಿರುವ ಅವರು ಟಿ20 ವಿಶ್ವಕಪ್​ ವೇಳೆ ತಂಡಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ.

ಇದನ್ನು ಓದಿ:ಕನ್ಫರ್ಮ್​ : ಠಾಕೂರ್ 2ನೇ ಟೆಸ್ಟ್​ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ

ಬೆಂಗಳೂರು: ಇಂಗ್ಲೆಂಡ್​​ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೊಳಗಾಗಿ ಅಯ್ಯರ್​ ಸಂಪೂರ್ಣ ಚೇತರಿಸಿಕೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಾಗಿ, ಯುಎಇಯಲ್ಲಿ ಮುಂದಿನ ತಿಂಗಳಿನಿಂದ ಪುನಾರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡಲಿದ್ದಾರೆ.

26 ವರ್ಷದ ಬ್ಯಾಟ್ಸ್​ಮನ್​ ಮಾರ್ಚ್​ನಲ್ಲಿ ಇಂಗ್ಲೆಂಡ್ ​ವಿರುದ್ಧ ನಡೆದಿದ್ದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ಐಪಿಎಲ್​​ನಿಂದಲೂ ಹೊರಗುಳಿದಿದ್ದರು. ಹಾಗಾಗಿ, ಡೆಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಕಮ್‌​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ಗೆ ವಹಿಸಲಾಗಿತ್ತು. ಇದೀಗ ಶ್ರೇಯಸ್​ ಅಯ್ಯರ್ ಸಂಪೂರ್ಣ​ ಚೇತರಿಸಿಕೊಂಡಿರುವ ಕಾರಣ ಯುಎಇನಲ್ಲಿ ಮತ್ತೆ ಡೆಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ನಾಯಕತ್ವಕ್ಕೂ ಮರಳುವ ಸಾಧ್ಯತೆಯಿದೆ.

ಪುನಶ್ಚೇತನ ಶಿಬಿರದಲ್ಲಿ ಶ್ರೇಯಸ್​ ಅಯ್ಯರ್​ ಫಿಟ್​ನೆಸ್ ಸಾಬೀತುಪಡಿಸಿದ್ದಾರೆ. ಅವರು ಬೆಂಗಳೂರಿನ ಎನ್​ಸಿಎನಲ್ಲಿ ಒಂದು ವಾರ ಉಳಿದು ಫಿಟ್​ನೆಸ್​ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅವರ ಎಲ್ಲ ವೈದ್ಯಕೀಯ ಮತ್ತು ದೈಹಿಕ ನಿಯತಾಂಕಗಳನ್ನು ಆಧರಿಸಿ, ಈಗ ಸ್ಪರ್ಧಾತ್ಮಕ ಕ್ರಿಕೆಟ್​​ ಆಡಲು ಸಮರ್ಥರಾಗಿದ್ದಾರೆ ಎಂದು ಎನ್​ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೇಯಸ್​ ಅಯ್ಯರ್ ಭಾರತದ ಪರ 22 ಏಕದಿನ ಮತ್ತು 29 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತದ ಸೀಮಿತ ಓವರ್​ಗಳ ತಂಡದ ಪ್ರಮುಖ ಬ್ಯಾಟ್ಸ್​ಮನ್ ಆಗಿರುವ ಅವರು ಟಿ20 ವಿಶ್ವಕಪ್​ ವೇಳೆ ತಂಡಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ.

ಇದನ್ನು ಓದಿ:ಕನ್ಫರ್ಮ್​ : ಠಾಕೂರ್ 2ನೇ ಟೆಸ್ಟ್​ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.