ETV Bharat / sports

ಭಾರತದ ಸೋಲಿಗೆ ಅವರಿಬ್ಬರನ್ನು ಬೇಗ ಕಳೆದುಕೊಂಡಿದ್ದೇ ಕಾರಣ: ಸಚಿನ್

author img

By

Published : Jun 24, 2021, 3:16 PM IST

ಟೀಮ್​ ಇಂಡಿಯಾ ತನ್ನ ಪ್ರದರ್ಶನದಿಂದ ನಿರಾಶೆಗೊಳಗಾಗಿದೆ. ನಾನು ಹೇಳಿದಂತೆ ಮೊದಲ 10 ಓವರ್​ಗಳು ನಿರ್ಣಾಯಕವಾಗಿದ್ದವು ಮತ್ತು ಈ ಸಂದರ್ಭದಲ್ಲಿ ಕೇವಲ 10 ಎಸೆತಗಳ ಅಂತರದಲ್ಲಿ ಭಾರತ ಕೊಹ್ಲಿ ಮತ್ತು ಪೂಜಾರ ವಿಕೆಟ್​ ಕಳೆದುಕೊಂಡಿದ್ದು ತಂಡದ ಮೇಲೆ ಒತ್ತಡ ತಂದಿತು ಎಂದು ಸಚಿನ್​ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್

ಸೌತಾಂಪ್ಟನ್: ನಾಯಕ ವಿರಾಟ್​ ಕೊಹ್ಲಿ ಮತ್ತು 3ನೇ ಕ್ರಮಾಂಕದ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರ ಅವರನ್ನು ಕೇವಲ 2 ಓವರ್​ಗಳ ಅಂತರದಲ್ಲಿ ಕಳೆದುಕೊಂಡಿದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ದೊಡ್ಡ ಹೊಡೆತ ನೀಡಿತು ಎಂದು ಸಚಿನ್​ ತೆಂಡೂಲ್ಕರ್ ತಿಳಿಸಿದ್ದಾರೆ.

ಭಾರತದೆದುರು ಅದ್ಭುತ ಆಲ್​ರೌಂಡ್ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್ ತಂಡವನ್ನು ವಿಶ್ವದ ಅತ್ಯುತ್ತಮ ತಂಡ ಎಂದು ಸಚಿನ್ ತೆಂಡೂಲ್ಕರ್​ ತಿಳಿಸಿದ್ದಾರೆ.

  • Congrats @BLACKCAPS on winning the #WTC21. You were the superior team.#TeamIndia will be disappointed with their performance.

    As I had mentioned the first 10 overs will be crucial & 🇮🇳 lost both Kohli & Pujara in the space of 10 balls & that put a lot of pressure on the team. pic.twitter.com/YVwnRGJXXr

    — Sachin Tendulkar (@sachin_rt) June 23, 2021 " class="align-text-top noRightClick twitterSection" data=" ">

2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಅಭಿನಂದನೆಗಳು. ನಿಮ್ಮದು ಶ್ರೇಷ್ಠ ತಂಡ ಎಂದು ಸಚಿನ್ ತೆಂಡೂಲ್ಕರ್​ ಟ್ವೀಟ್ ಮಾಡಿದ್ದಾರೆ.

ಟೀಮ್​ ಇಂಡಿಯಾ ತನ್ನ ಪ್ರದರ್ಶನದಿಂದ ನಿರಾಶೆಗೊಳಗಾಗಿದೆ. ನಾನು ಹೇಳಿದಂತೆ ಮೊದಲ 10 ಓವರ್​ಗಳು ನಿರ್ಣಾಯಕವಾಗಿದ್ದವು ಮತ್ತು ಈ ಸಂದರ್ಭದಲ್ಲಿ ಕೇವಲ 10 ಎಸೆತಗಳ ಅಂತರದಲ್ಲಿ ಭಾರತ ಕೊಹ್ಲಿ ಮತ್ತು ಪೂಜಾರ ವಿಕೆಟ್​ ಕಳೆದುಕೊಂಡಿದ್ದು ತಂಡದ ಮೇಲೆ ಒತ್ತಡ ತಂದಿತು ಎಂದು ಅವರು​ ತಿಳಿಸಿದ್ದಾರೆ.

ಪೂಜಾರ ಮತ್ತು ಕೊಹ್ಲಿ ವೇಗಿ ಜೆಮೀಸನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಕೊಹ್ಲಿ 35ಬನೇ ಓವರ್​ನ 5ನೇ ಎಸೆತದಲ್ಲಿ ಔಟಾದರೆ, ಪೂಜಾರ 37ನೇ ಓವರ್​ 3ನೇ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಇವರಿಬ್ಬರ ನಂತರ ಬಂದವರಲ್ಲಿ ಪಂತ್ 41 ರನ್​ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟ್ಸ್​ಮನ್ 20ರ ಗಡಿ ದಾಟುವಲ್ಲಿ ವಿಫಲರಾದರು. ಅಲ್ಲದೆ ಈ ಪಂದ್ಯದಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್​ಮನ್ ಅರ್ಧಶತಕ ಬಾರಿಸಲು ವಿಫಲರಾದರು.

ಭಾರತ ನೀಡಿದ 139 ರನ್​ಗಳ ಗುರಿಯನ್ನು ಕಿವೀಸ್ 2 ವಿಕೆಟ್ ಕಳೆದುಕೊಂಡು ತಲುಪಿ ಚಾಂಪಿಯನ್ ಆಯಿತು.

ಇದನ್ನು ಓದಿ:ಹೆಸರು ಪ್ರಸ್ತಾಪಿಸದೆ ಈ ಆಟಗಾರನ ವಿರುದ್ಧ ಕೊಹ್ಲಿ ಪರೋಕ್ಷ ಅಸಮಾಧಾನ

ಸೌತಾಂಪ್ಟನ್: ನಾಯಕ ವಿರಾಟ್​ ಕೊಹ್ಲಿ ಮತ್ತು 3ನೇ ಕ್ರಮಾಂಕದ ಬ್ಯಾಟ್ಸ್​ಮನ್ ಚೇತೇಶ್ವರ್ ಪೂಜಾರ ಅವರನ್ನು ಕೇವಲ 2 ಓವರ್​ಗಳ ಅಂತರದಲ್ಲಿ ಕಳೆದುಕೊಂಡಿದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ದೊಡ್ಡ ಹೊಡೆತ ನೀಡಿತು ಎಂದು ಸಚಿನ್​ ತೆಂಡೂಲ್ಕರ್ ತಿಳಿಸಿದ್ದಾರೆ.

ಭಾರತದೆದುರು ಅದ್ಭುತ ಆಲ್​ರೌಂಡ್ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್ ತಂಡವನ್ನು ವಿಶ್ವದ ಅತ್ಯುತ್ತಮ ತಂಡ ಎಂದು ಸಚಿನ್ ತೆಂಡೂಲ್ಕರ್​ ತಿಳಿಸಿದ್ದಾರೆ.

  • Congrats @BLACKCAPS on winning the #WTC21. You were the superior team.#TeamIndia will be disappointed with their performance.

    As I had mentioned the first 10 overs will be crucial & 🇮🇳 lost both Kohli & Pujara in the space of 10 balls & that put a lot of pressure on the team. pic.twitter.com/YVwnRGJXXr

    — Sachin Tendulkar (@sachin_rt) June 23, 2021 " class="align-text-top noRightClick twitterSection" data=" ">

2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಅಭಿನಂದನೆಗಳು. ನಿಮ್ಮದು ಶ್ರೇಷ್ಠ ತಂಡ ಎಂದು ಸಚಿನ್ ತೆಂಡೂಲ್ಕರ್​ ಟ್ವೀಟ್ ಮಾಡಿದ್ದಾರೆ.

ಟೀಮ್​ ಇಂಡಿಯಾ ತನ್ನ ಪ್ರದರ್ಶನದಿಂದ ನಿರಾಶೆಗೊಳಗಾಗಿದೆ. ನಾನು ಹೇಳಿದಂತೆ ಮೊದಲ 10 ಓವರ್​ಗಳು ನಿರ್ಣಾಯಕವಾಗಿದ್ದವು ಮತ್ತು ಈ ಸಂದರ್ಭದಲ್ಲಿ ಕೇವಲ 10 ಎಸೆತಗಳ ಅಂತರದಲ್ಲಿ ಭಾರತ ಕೊಹ್ಲಿ ಮತ್ತು ಪೂಜಾರ ವಿಕೆಟ್​ ಕಳೆದುಕೊಂಡಿದ್ದು ತಂಡದ ಮೇಲೆ ಒತ್ತಡ ತಂದಿತು ಎಂದು ಅವರು​ ತಿಳಿಸಿದ್ದಾರೆ.

ಪೂಜಾರ ಮತ್ತು ಕೊಹ್ಲಿ ವೇಗಿ ಜೆಮೀಸನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಕೊಹ್ಲಿ 35ಬನೇ ಓವರ್​ನ 5ನೇ ಎಸೆತದಲ್ಲಿ ಔಟಾದರೆ, ಪೂಜಾರ 37ನೇ ಓವರ್​ 3ನೇ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಇವರಿಬ್ಬರ ನಂತರ ಬಂದವರಲ್ಲಿ ಪಂತ್ 41 ರನ್​ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬ್ಯಾಟ್ಸ್​ಮನ್ 20ರ ಗಡಿ ದಾಟುವಲ್ಲಿ ವಿಫಲರಾದರು. ಅಲ್ಲದೆ ಈ ಪಂದ್ಯದಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್​ಮನ್ ಅರ್ಧಶತಕ ಬಾರಿಸಲು ವಿಫಲರಾದರು.

ಭಾರತ ನೀಡಿದ 139 ರನ್​ಗಳ ಗುರಿಯನ್ನು ಕಿವೀಸ್ 2 ವಿಕೆಟ್ ಕಳೆದುಕೊಂಡು ತಲುಪಿ ಚಾಂಪಿಯನ್ ಆಯಿತು.

ಇದನ್ನು ಓದಿ:ಹೆಸರು ಪ್ರಸ್ತಾಪಿಸದೆ ಈ ಆಟಗಾರನ ವಿರುದ್ಧ ಕೊಹ್ಲಿ ಪರೋಕ್ಷ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.