ETV Bharat / sports

ಮುಂಬೈ, ಚೆನ್ನೈ ಕಪ್‌ ಗೆದ್ದಿರುವುದಕ್ಕಿಂತ ಹೆಚ್ಚು ಆರ್‌ಸಿಬಿ ಕ್ವಾಲಿಫೈರ್‌ ಹಂತ ತಲುಪಿದೆ: ಕೊಹ್ಲಿ

author img

By

Published : Apr 3, 2023, 8:43 AM IST

IPL 2023: ಮುಂಬೈ ಪರ ಮೊದಲ ಪಂದ್ಯದಲ್ಲಿಯೇ ಆರ್​ಸಿಬಿ ಜಯಭೇರಿ ಬಾರಿಸಿದ್ದು ಈ ಕುರಿತು ವಿರಾಟ್​ ಕೊಹ್ಲಿ ಮಾತನಾಡಿದರು.

ವಿರಾಟ್​ ಕೊಹ್ಲಿ ರೋಹಿತ್​ ಶರ್ಮಾ
ವಿರಾಟ್​ ಕೊಹ್ಲಿ ರೋಹಿತ್​ ಶರ್ಮಾ

ಬೆಂಗಳೂರು: ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಆರ್​ಸಿಬಿ ಹೊಸ ಋತುವಿನಲ್ಲಿ ಶುಭಾರಂಭ ಮಾಡಿದೆ. ಗೆಲುವಿನ ಸಂಭ್ರಮದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್​ ವಿರಾಟ್‌ ಕೊಹ್ಲಿ, ಮುಂದಿನ ಪಂದ್ಯಗಳಲ್ಲೂ ತಂಡ ಇದೇ ವೇಗವನ್ನು ಕಾಯ್ದುಕೊಳ್ಳಲು ಗಮನಹರಿಸುತ್ತದೆ ಎಂದರು.

ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ತೋರಿರುವ ವಿರಾಟ್​ (49 ಎಸೆತಗಳಲ್ಲಿ ಅಜೇಯ 82) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (43 ಎಸೆತಗಳಲ್ಲಿ 73) ಅರ್ಧ ಶತಕಗಳನ್ನು ಸಿಡಿಸುವ ಮೂಲಕ ತಂಡವು 16ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ​ಗೆಲುವಿನ ನಿರೀಕ್ಷೆ ಹುಟ್ಟಿಸಿದೆ.

ಪಂದ್ಯದ ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್​ ಕೊಹ್ಲಿ, "ಇದು ಅದ್ಭುತ ಗೆಲುವು. ಪಂದ್ಯ ಆರಂಭಕ್ಕೂ ಮುನ್ನ ಅತ್ಯಂತ ವಿಶ್ವಾಸದಿಂದ ಕಣಕ್ಕಿಳಿದೆವು. ಇಂದಿನ ಆಟದ ಬಗ್ಗೆ ನನಗೆ ತುಂಬಾ ಸಂತಸವಿದೆ. ಮುಂಬೈ ಪರ 20ರ ಯುವಕ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಿದ್ದು, ತಂಡದ ಸ್ಕೋರ್​ ಹೆಚ್ಚಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ" ಎಂದು ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿ, "ಆರ್​ಸಿಬಿ ತಂಡವು ಮುಂಬೈ ಮತ್ತು ಚೆನ್ನೈ ತಂಡಗಳು ಕಪ್​ ಗೆದ್ದಿರುವುದಕ್ಕಿಂತಲೂ ಹೆಚ್ಚು ಬಾರಿ ​ಕ್ವಾಲಿಫೈರ್​ ಹಂತ ತಲುಪಿದೆ. ಹೀಗಾಗಿ ನಮ್ಮ ತಂಡ ಸ್ಥಿರ ಪ್ರದರ್ಶನ ತೋರುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಲು ಪ್ರಯತ್ನಿಸಿಬೇಕಿದೆ. ಹಾಗೆಯೇ ಇದೇ ವೇಗ ಕಾಯ್ದುಕೊಂಡು ಕಾರ್ಯ ವಿಧಾನ ರೂಪಿಸುತ್ತೇವೆ" ಎಂದು ತಿಳಿಸಿದರು.

"ಇಂದು ಹೊಸ ಚೆಂಡು ಸ್ವಲ್ಪ ಟ್ರಿಕ್ಕಿ ಆಗಿತ್ತು. ಆದರೂ ನಾವು ಮುಂಬೈ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸದೆವು. ಬೌಲರ್​ಗಳ ವಿಕೆಟ್​ ದಾಹ ತಣಿಸಲು ಅವಕಾಶ ಮಾಡಿಕೊಡದೇ ಬೌಲರ್​ಗಳ ಮೇಲೆ ಒತ್ತಡ ಹಾಕಿದೆವು" ಎಂದರು.

"ತಂಡದ ಪರ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಕರಣ್​ ಶರ್ಮಾ ಉತ್ತಮ ಬೌಲಿಂಗ್​ ಮಾಡಿ ಎಡಗೈ ಆಟಗಾರರನ್ನು ಪೆವಿಲಿಯನ್​ಗಟ್ಟಿದರು. ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗಲೂ ಕರಣ್​ ಸಿಕ್ಸರ್ ಹೊಡೆಯಲು ಆಗದ ಹಾಗೆಯೇ ಬೌಲಿಂಗ್​ ಮಾಡುತ್ತಿದ್ದರು" ಎಂದು ವಿರಾಟ್​ ಹೇಳಿದರು.

ಕೊಹ್ಲಿ ಮತ್ತು ಡು ಪ್ಲೆಸಿಸ್ 148 ರನ್​ಗಳ ಜೊತೆಯಾಟವಾಡಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಡುಪ್ಲೆಸಿಸ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, ಮೊದಲ ಪಂದ್ಯದಲ್ಲೇ ಸೋಲಿನ ಮೂಲಕ ಟೂರ್ನಿ ಆರಂಭಿಸಿರುವ ಮುಂಬೈ ನಾಯಕ ರೋಹಿತ್​ ಶರ್ಮಾ ಮಾತನಾಡಿ, "ಈ ಟ್ರ್ಯಾಕ್​ನಲ್ಲಿ ತಂಡಕ್ಕೆ ಇನ್ನೂ 30-40 ರನ್​ಗಳ ಅವಶ್ಯಕತೆ ಇತ್ತು. ಅಲ್ಲದೇ ಸರಿಯಾದ ಯೋಜನೆಗಳನ್ನು ರೂಪಿಸುವಲ್ಲಿ ಬೌಲರ್​ಗಳು ವಿಫಲರಾದರು" ಎಂದು ಹೇಳಿದರು.

"ಪವರ್​ ಪ್ಲೇನಲ್ಲಿ ತಂಡ ಉತ್ತಮ ಆರಂಭವನ್ನು ಕಾಣಲಿಲ್ಲ. ಆದರೆ, ತಿಲಕ್ ಮತ್ತು ಇತರೆ ಕೆಲವು ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ, ನಾವು ಬೌಲಿಂಗ್​ ವಿಭಾಗದಲ್ಲಿ ಎಡವಿದೆವು. ಅಲ್ಲದೇ ಇದು ಬ್ಯಾಟಿಂಗ್​ಗೆ ಉತ್ತಮ ಪಿಚ್​ ಆಗಿತ್ತು" ಎಂದು ರೋಹಿತ್ ಹೇಳಿದರು.

ಇದನ್ನೂ ಓದಿ: ವಿರಾಟ್​-ಡುಪ್ಲೆಸಿಸ್​ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ

ಬೆಂಗಳೂರು: ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಆರ್​ಸಿಬಿ ಹೊಸ ಋತುವಿನಲ್ಲಿ ಶುಭಾರಂಭ ಮಾಡಿದೆ. ಗೆಲುವಿನ ಸಂಭ್ರಮದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್​ ವಿರಾಟ್‌ ಕೊಹ್ಲಿ, ಮುಂದಿನ ಪಂದ್ಯಗಳಲ್ಲೂ ತಂಡ ಇದೇ ವೇಗವನ್ನು ಕಾಯ್ದುಕೊಳ್ಳಲು ಗಮನಹರಿಸುತ್ತದೆ ಎಂದರು.

ಆರ್​ಸಿಬಿ ಪರ ಭರ್ಜರಿ ಪ್ರದರ್ಶನ ತೋರಿರುವ ವಿರಾಟ್​ (49 ಎಸೆತಗಳಲ್ಲಿ ಅಜೇಯ 82) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (43 ಎಸೆತಗಳಲ್ಲಿ 73) ಅರ್ಧ ಶತಕಗಳನ್ನು ಸಿಡಿಸುವ ಮೂಲಕ ತಂಡವು 16ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ​ಗೆಲುವಿನ ನಿರೀಕ್ಷೆ ಹುಟ್ಟಿಸಿದೆ.

ಪಂದ್ಯದ ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್​ ಕೊಹ್ಲಿ, "ಇದು ಅದ್ಭುತ ಗೆಲುವು. ಪಂದ್ಯ ಆರಂಭಕ್ಕೂ ಮುನ್ನ ಅತ್ಯಂತ ವಿಶ್ವಾಸದಿಂದ ಕಣಕ್ಕಿಳಿದೆವು. ಇಂದಿನ ಆಟದ ಬಗ್ಗೆ ನನಗೆ ತುಂಬಾ ಸಂತಸವಿದೆ. ಮುಂಬೈ ಪರ 20ರ ಯುವಕ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಿದ್ದು, ತಂಡದ ಸ್ಕೋರ್​ ಹೆಚ್ಚಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ" ಎಂದು ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿ, "ಆರ್​ಸಿಬಿ ತಂಡವು ಮುಂಬೈ ಮತ್ತು ಚೆನ್ನೈ ತಂಡಗಳು ಕಪ್​ ಗೆದ್ದಿರುವುದಕ್ಕಿಂತಲೂ ಹೆಚ್ಚು ಬಾರಿ ​ಕ್ವಾಲಿಫೈರ್​ ಹಂತ ತಲುಪಿದೆ. ಹೀಗಾಗಿ ನಮ್ಮ ತಂಡ ಸ್ಥಿರ ಪ್ರದರ್ಶನ ತೋರುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಲು ಪ್ರಯತ್ನಿಸಿಬೇಕಿದೆ. ಹಾಗೆಯೇ ಇದೇ ವೇಗ ಕಾಯ್ದುಕೊಂಡು ಕಾರ್ಯ ವಿಧಾನ ರೂಪಿಸುತ್ತೇವೆ" ಎಂದು ತಿಳಿಸಿದರು.

"ಇಂದು ಹೊಸ ಚೆಂಡು ಸ್ವಲ್ಪ ಟ್ರಿಕ್ಕಿ ಆಗಿತ್ತು. ಆದರೂ ನಾವು ಮುಂಬೈ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸದೆವು. ಬೌಲರ್​ಗಳ ವಿಕೆಟ್​ ದಾಹ ತಣಿಸಲು ಅವಕಾಶ ಮಾಡಿಕೊಡದೇ ಬೌಲರ್​ಗಳ ಮೇಲೆ ಒತ್ತಡ ಹಾಕಿದೆವು" ಎಂದರು.

"ತಂಡದ ಪರ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಕರಣ್​ ಶರ್ಮಾ ಉತ್ತಮ ಬೌಲಿಂಗ್​ ಮಾಡಿ ಎಡಗೈ ಆಟಗಾರರನ್ನು ಪೆವಿಲಿಯನ್​ಗಟ್ಟಿದರು. ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗಲೂ ಕರಣ್​ ಸಿಕ್ಸರ್ ಹೊಡೆಯಲು ಆಗದ ಹಾಗೆಯೇ ಬೌಲಿಂಗ್​ ಮಾಡುತ್ತಿದ್ದರು" ಎಂದು ವಿರಾಟ್​ ಹೇಳಿದರು.

ಕೊಹ್ಲಿ ಮತ್ತು ಡು ಪ್ಲೆಸಿಸ್ 148 ರನ್​ಗಳ ಜೊತೆಯಾಟವಾಡಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಡುಪ್ಲೆಸಿಸ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, ಮೊದಲ ಪಂದ್ಯದಲ್ಲೇ ಸೋಲಿನ ಮೂಲಕ ಟೂರ್ನಿ ಆರಂಭಿಸಿರುವ ಮುಂಬೈ ನಾಯಕ ರೋಹಿತ್​ ಶರ್ಮಾ ಮಾತನಾಡಿ, "ಈ ಟ್ರ್ಯಾಕ್​ನಲ್ಲಿ ತಂಡಕ್ಕೆ ಇನ್ನೂ 30-40 ರನ್​ಗಳ ಅವಶ್ಯಕತೆ ಇತ್ತು. ಅಲ್ಲದೇ ಸರಿಯಾದ ಯೋಜನೆಗಳನ್ನು ರೂಪಿಸುವಲ್ಲಿ ಬೌಲರ್​ಗಳು ವಿಫಲರಾದರು" ಎಂದು ಹೇಳಿದರು.

"ಪವರ್​ ಪ್ಲೇನಲ್ಲಿ ತಂಡ ಉತ್ತಮ ಆರಂಭವನ್ನು ಕಾಣಲಿಲ್ಲ. ಆದರೆ, ತಿಲಕ್ ಮತ್ತು ಇತರೆ ಕೆಲವು ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ, ನಾವು ಬೌಲಿಂಗ್​ ವಿಭಾಗದಲ್ಲಿ ಎಡವಿದೆವು. ಅಲ್ಲದೇ ಇದು ಬ್ಯಾಟಿಂಗ್​ಗೆ ಉತ್ತಮ ಪಿಚ್​ ಆಗಿತ್ತು" ಎಂದು ರೋಹಿತ್ ಹೇಳಿದರು.

ಇದನ್ನೂ ಓದಿ: ವಿರಾಟ್​-ಡುಪ್ಲೆಸಿಸ್​ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.