ETV Bharat / sports

World Cup 2023: ನೆದರ್​​ಲೆಂಡ್ಸ್ ವಿರುದ್ಧ ಸೋಲಿಗೆ ಕಾರಣ ಕೊಟ್ಟ ದಕ್ಷಿಣ ಆಫ್ರಿಕಾ ಕೋಚ್..

author img

By ETV Bharat Karnataka Team

Published : Oct 18, 2023, 4:02 PM IST

World Cup 2023: ನೆದರ್​​ಲೆಂಡ್ಸ್ ವಿರುದ್ಧ ತಂಡದ ಸೋಲಿಗೆ ಡೆತ್ ಓವರ್​ಗಳಲ್ಲಿ​ ಕಳಪೆ ಬೌಲಿಂಗ್ ಮತ್ತು ಆರಂಭದಲ್ಲಿ ಬ್ಯಾಟಿಂಗ್‌ ವೈಫಲ್ಯ ಕಾರಣ ಎಂದು ದಕ್ಷಿಣ ಆಫ್ರಿಕಾದ ಕೋಚ್​ ರಾಬ್ ವಾಲ್ಟರ್ ಹೇಳಿದ್ದಾರೆ.

World Cup: South Africa coach Rob Walter blames death bowling for shocking defeat to Netherlands
World Cup 2023: ನೆದರ್​​ಲೆಂಡ್ಸ್ ವಿರುದ್ಧ ಸೋಲಿಗೆ ಕಾರಣ ವಿವರಿಸಿದ ದಕ್ಷಿಣ ಆಫ್ರಿಕಾದ ಕೋಚ್

ಧರ್ಮಶಾಲಾ (ಹಿಮಾಚಲ ಪ್ರದೇಶ): ಐಸಿಸಿ ಏಕದಿನ ವಿಶ್ವಕಪ್‌ ಲೀಗ್​ ಪಂದ್ಯದಲ್ಲಿ ನೆದರ್​​ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿಗೆ ತಂಡದ ಕೋಚ್​ ರಾಬ್ ವಾಲ್ಟರ್ ಪ್ರಮುಖ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ಡೆತ್ ಓವರ್​ಗಳಲ್ಲಿ​ ಬೌಲಿಂಗ್ ಮತ್ತು ಆರಂಭದಲ್ಲಿ ಬ್ಯಾಟಿಂಗ್‌ ವೈಫಲ್ಯದ ಕಾರಣದಿಂದಲೇ ಆಘಾತಕಾರಿ ಸೋಲು ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ಮಂಗಳವಾರ ಮಳೆಯ ಅಡ್ಡಿ ನಡುವೆಯೂ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್​​ಲೆಂಡ್ಸ್ ಅಚ್ಚರಿ ಗೆಲುವು ದಾಖಲಿಸಿದೆ. ಏಳನೇ ಕ್ರಮಾಂಕ್ರಮದಲ್ಲಿ ಮೈದಾನಕ್ಕಿಳಿದರೂ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಉಪಯುಕ್ತ ಹಾಗೂ ಜವಾಬ್ದಾರಿಯುತ 78 ರನ್​ಗಳ ಬ್ಯಾಟಿಂಗ್ ನೆರವಿನಿಂದ ನೆದರ್ಲ್ಯಾಂಡ್ಸ್ ತಂಡ 246 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ದಕ್ಷಿಣ ಆಫ್ರಿಕಾಗೆ ನೀಡಿತ್ತು. ನಂತರ ಬೌಲಿಂಗ್​ನಲ್ಲೂ ಮಿಂಚಿದ್ದ ಕ್ರಿಕೆಟ್​ ಜಗತ್ತಿನ 'ಅನನುಭವಿ' ಡಚ್​ ಆಟಗಾರರು ಬಲಿಷ್ಠ ಹರಿಣಗಳ ವಿರುದ್ಧ 38 ರನ್​ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ನೆದರ್‌ಲ್ಯಾಂಡ್ಸ್ ತಮ್ಮ ವಿಶ್ವಕಪ್ ಇತಿಹಾಸದಲ್ಲಿ ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧದ ಮೊದಲು ಗೆಲುವು ಹಾಗೂ ಒಟ್ಟಾರೆ ವಿಶ್ವಕಪ್​ನ ಮೂರನೇ ಜಯ ದಾಖಲಿಸಿ ಸಂಭ್ರಮಿಸಿತ್ತು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಕೋಚ್​ ರಾಬ್ ವಾಲ್ಟರ್ ಮಾತನಾಡಿ, ನೆದರ್‌ಲೆಂಡ್​ 140ಕ್ಕೆ ಏಳು ವಿಕೆಟ್​ ಕಳೆದುಕೊಂಡಾಗ ನಿಜವಾಗಿಯೂ ಆಟದ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೆವು. ಆದರೆ, ಡೆತ್​ ಓವರ್​ಗಳಲ್ಲಿ ಬೇಗ ಪಂದ್ಯವನ್ನು ಮುಗಿಸಲು ಸಾಧ್ಯವಾಗದಿರುವುದು ನಿರಾಶಾದಾಯಕವಾಗಿದೆ. ಖಂಡಿತವಾಗಿಯೂ ಇದೇ ವೇಗವು ಪಂದ್ಯವನ್ನು ಬದಲಿಸಿತು ಎಂದು ಹೇಳಿದ್ದಾರೆ. ಅಲ್ಲದೇ, ನಾವು 240 ಗುರಿ ಬೆನ್ನಟ್ಟಲು ಸಾಧ್ಯವಾಗುತ್ತಿತ್ತು. ಆದರೆ, ನಂತರ ನಮ್ಮ ಬ್ಯಾಟರ್​ಗಳು ಅತ್ಯಂತ ಕಳಪೆ ಆರಂಭಕ್ಕೆ ಕಾರಣರಾದರು. ಬಹುಶಃ ನಿಧಾನಗತಿಯ ಬಾಲ್​ ಮತ್ತು ಹಾರ್ಡ್​ ಲೆಂತ್ ಮತ್ತು ಆನ್​ ಪೇಸ್​ ಎಸೆತಗಳ ವಿಷಯದಲ್ಲಿ ನಮ್ಮಲ್ಲಿ ಸ್ವಲ್ಪ ತಪ್ಪಾಗಿರಬಹುದು. ಇದರಲ್ಲಿ ಹೆಚ್ಚಿನ ಎಕ್ಸ್​ಟ್ರಾ ರನ್​ಗಳು ನೀಡಿರುವ ಪಾಲು ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಮುಂದುವರೆದು, ವಿಶ್ವಕಪ್ ಪ್ರಾರಂಭವಾಗುವ ಮೊದಲೇ ನಾನು ಹೇಳಿದಂತೆ ಈ ಟೂರ್ನಿಯಲ್ಲಿ ಯಾವುದೇ ದುರ್ಬಲ ತಂಡಗಳಿವೆ ಎಂದು ನಾನು ಭಾವಿಸುವುದಿಲ್ಲ. ನೀವು ಸ್ವಿಚ್ ಆನ್ ಮಾಡದಿದ್ದರೆ ಮತ್ತು ಆಟದ ಪ್ರಮುಖ ಕ್ಷಣಗಳನ್ನು ಗೆಲ್ಲದಿದ್ದರೆ, ಫಲಿತಾಂಶದ ಮೂಲಕ ತಪ್ಪುಗಳನ್ನು ಕಂಡುಕೊಳ್ಳಬೇಕಾಗುತ್ತದೆ. ನಾವು ಅದನ್ನು ಮಂಗಳವಾರ ಕಲಿತಿದ್ದೇವೆ. ಪಂದ್ಯ ಗೆಲ್ಲಲು ಪ್ರತಿಯೊಬ್ಬರು ಕಾರಣವಾಗುತ್ತಾರೆ. ಈ ಪಂದ್ಯದಿಂದ ಸಾಕಷ್ಟು ಕಲಿಯುವುದಿದೆ. ನಿಸ್ಸಂಶಯವಾಗಿ ನಾವು, ಎಲ್ಲಿ ವಿಫಲರಾಗಿದ್ದೇವೆ ಎಂಬುದರ ಬಗ್ಗೆ ಸರಿಯಾದ ವಿಶ್ಲೇಷಣೆ ಮಾಡುತ್ತೇವೆ. ಗೆಲುವು ಅಥವಾ ಸೋಲು, ಅದು ನಾವು ತೆಗೆದುಕೊಳ್ಳುವ ಪಾಠಗಳಾಗಿವೆ. ಒಳ್ಳೆಯದು ಮತ್ತು ಕೆಟ್ಟದು ಎರಡನ್ನೂ ನಾವು ಮುಂದಿನ ಬಾರಿ ಉತ್ತಮವಾಗಿಸಲು ಹೇಗೆ ಬಳಸುತ್ತೇವೆ ಎಂಬುವುದು ಮುಖ್ಯ ಕೋಚ್​​ ವಿವರಿಸಿದರು.

ಧರ್ಮಶಾಲಾ ಸ್ಟೇಡಿಯಂನಲ್ಲಿ ಮಂಗಳವಾರ ನೆದರ್​​ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಮಳೆಯ ಕಾರಣ ಪಂದ್ಯವನ್ನು 43 ಓವರ್​ಗಳಿಗೆ ಕಡಿತ ಮಾಡಲಾಗಿತ್ತು. ಟಾಸ್​ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್​​ಲೆಂಡ್ಸ್ ನಿಗದಿತ ಓವರ್​ಗಳಲ್ಲಿ 245 ರನ್​ಗಳನ್ನು ಪೇರಿಸಿತ್ತು. ಈ ಗುರಿ ಬೆಟ್ಟನ್ನಟ್ಟಿದ್ದ ದಕ್ಷಿಣ ಆಫ್ರಿಕಾ 42.5 ಓವರ್​ಗಳಲ್ಲಿ 207 ರನ್​ಗಳಷ್ಟೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಗಿತ್ತು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್‌ನಲ್ಲಿ ನೆದರ್ಲೆಂಡ್‌ಗೆ​ ಅಚ್ಚರಿಯ ಗೆಲುವು! ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಶೆ

ಧರ್ಮಶಾಲಾ (ಹಿಮಾಚಲ ಪ್ರದೇಶ): ಐಸಿಸಿ ಏಕದಿನ ವಿಶ್ವಕಪ್‌ ಲೀಗ್​ ಪಂದ್ಯದಲ್ಲಿ ನೆದರ್​​ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿಗೆ ತಂಡದ ಕೋಚ್​ ರಾಬ್ ವಾಲ್ಟರ್ ಪ್ರಮುಖ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ. ಡೆತ್ ಓವರ್​ಗಳಲ್ಲಿ​ ಬೌಲಿಂಗ್ ಮತ್ತು ಆರಂಭದಲ್ಲಿ ಬ್ಯಾಟಿಂಗ್‌ ವೈಫಲ್ಯದ ಕಾರಣದಿಂದಲೇ ಆಘಾತಕಾರಿ ಸೋಲು ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ಮಂಗಳವಾರ ಮಳೆಯ ಅಡ್ಡಿ ನಡುವೆಯೂ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್​​ಲೆಂಡ್ಸ್ ಅಚ್ಚರಿ ಗೆಲುವು ದಾಖಲಿಸಿದೆ. ಏಳನೇ ಕ್ರಮಾಂಕ್ರಮದಲ್ಲಿ ಮೈದಾನಕ್ಕಿಳಿದರೂ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಉಪಯುಕ್ತ ಹಾಗೂ ಜವಾಬ್ದಾರಿಯುತ 78 ರನ್​ಗಳ ಬ್ಯಾಟಿಂಗ್ ನೆರವಿನಿಂದ ನೆದರ್ಲ್ಯಾಂಡ್ಸ್ ತಂಡ 246 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ದಕ್ಷಿಣ ಆಫ್ರಿಕಾಗೆ ನೀಡಿತ್ತು. ನಂತರ ಬೌಲಿಂಗ್​ನಲ್ಲೂ ಮಿಂಚಿದ್ದ ಕ್ರಿಕೆಟ್​ ಜಗತ್ತಿನ 'ಅನನುಭವಿ' ಡಚ್​ ಆಟಗಾರರು ಬಲಿಷ್ಠ ಹರಿಣಗಳ ವಿರುದ್ಧ 38 ರನ್​ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ನೆದರ್‌ಲ್ಯಾಂಡ್ಸ್ ತಮ್ಮ ವಿಶ್ವಕಪ್ ಇತಿಹಾಸದಲ್ಲಿ ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧದ ಮೊದಲು ಗೆಲುವು ಹಾಗೂ ಒಟ್ಟಾರೆ ವಿಶ್ವಕಪ್​ನ ಮೂರನೇ ಜಯ ದಾಖಲಿಸಿ ಸಂಭ್ರಮಿಸಿತ್ತು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಕೋಚ್​ ರಾಬ್ ವಾಲ್ಟರ್ ಮಾತನಾಡಿ, ನೆದರ್‌ಲೆಂಡ್​ 140ಕ್ಕೆ ಏಳು ವಿಕೆಟ್​ ಕಳೆದುಕೊಂಡಾಗ ನಿಜವಾಗಿಯೂ ಆಟದ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೆವು. ಆದರೆ, ಡೆತ್​ ಓವರ್​ಗಳಲ್ಲಿ ಬೇಗ ಪಂದ್ಯವನ್ನು ಮುಗಿಸಲು ಸಾಧ್ಯವಾಗದಿರುವುದು ನಿರಾಶಾದಾಯಕವಾಗಿದೆ. ಖಂಡಿತವಾಗಿಯೂ ಇದೇ ವೇಗವು ಪಂದ್ಯವನ್ನು ಬದಲಿಸಿತು ಎಂದು ಹೇಳಿದ್ದಾರೆ. ಅಲ್ಲದೇ, ನಾವು 240 ಗುರಿ ಬೆನ್ನಟ್ಟಲು ಸಾಧ್ಯವಾಗುತ್ತಿತ್ತು. ಆದರೆ, ನಂತರ ನಮ್ಮ ಬ್ಯಾಟರ್​ಗಳು ಅತ್ಯಂತ ಕಳಪೆ ಆರಂಭಕ್ಕೆ ಕಾರಣರಾದರು. ಬಹುಶಃ ನಿಧಾನಗತಿಯ ಬಾಲ್​ ಮತ್ತು ಹಾರ್ಡ್​ ಲೆಂತ್ ಮತ್ತು ಆನ್​ ಪೇಸ್​ ಎಸೆತಗಳ ವಿಷಯದಲ್ಲಿ ನಮ್ಮಲ್ಲಿ ಸ್ವಲ್ಪ ತಪ್ಪಾಗಿರಬಹುದು. ಇದರಲ್ಲಿ ಹೆಚ್ಚಿನ ಎಕ್ಸ್​ಟ್ರಾ ರನ್​ಗಳು ನೀಡಿರುವ ಪಾಲು ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಮುಂದುವರೆದು, ವಿಶ್ವಕಪ್ ಪ್ರಾರಂಭವಾಗುವ ಮೊದಲೇ ನಾನು ಹೇಳಿದಂತೆ ಈ ಟೂರ್ನಿಯಲ್ಲಿ ಯಾವುದೇ ದುರ್ಬಲ ತಂಡಗಳಿವೆ ಎಂದು ನಾನು ಭಾವಿಸುವುದಿಲ್ಲ. ನೀವು ಸ್ವಿಚ್ ಆನ್ ಮಾಡದಿದ್ದರೆ ಮತ್ತು ಆಟದ ಪ್ರಮುಖ ಕ್ಷಣಗಳನ್ನು ಗೆಲ್ಲದಿದ್ದರೆ, ಫಲಿತಾಂಶದ ಮೂಲಕ ತಪ್ಪುಗಳನ್ನು ಕಂಡುಕೊಳ್ಳಬೇಕಾಗುತ್ತದೆ. ನಾವು ಅದನ್ನು ಮಂಗಳವಾರ ಕಲಿತಿದ್ದೇವೆ. ಪಂದ್ಯ ಗೆಲ್ಲಲು ಪ್ರತಿಯೊಬ್ಬರು ಕಾರಣವಾಗುತ್ತಾರೆ. ಈ ಪಂದ್ಯದಿಂದ ಸಾಕಷ್ಟು ಕಲಿಯುವುದಿದೆ. ನಿಸ್ಸಂಶಯವಾಗಿ ನಾವು, ಎಲ್ಲಿ ವಿಫಲರಾಗಿದ್ದೇವೆ ಎಂಬುದರ ಬಗ್ಗೆ ಸರಿಯಾದ ವಿಶ್ಲೇಷಣೆ ಮಾಡುತ್ತೇವೆ. ಗೆಲುವು ಅಥವಾ ಸೋಲು, ಅದು ನಾವು ತೆಗೆದುಕೊಳ್ಳುವ ಪಾಠಗಳಾಗಿವೆ. ಒಳ್ಳೆಯದು ಮತ್ತು ಕೆಟ್ಟದು ಎರಡನ್ನೂ ನಾವು ಮುಂದಿನ ಬಾರಿ ಉತ್ತಮವಾಗಿಸಲು ಹೇಗೆ ಬಳಸುತ್ತೇವೆ ಎಂಬುವುದು ಮುಖ್ಯ ಕೋಚ್​​ ವಿವರಿಸಿದರು.

ಧರ್ಮಶಾಲಾ ಸ್ಟೇಡಿಯಂನಲ್ಲಿ ಮಂಗಳವಾರ ನೆದರ್​​ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಮಳೆಯ ಕಾರಣ ಪಂದ್ಯವನ್ನು 43 ಓವರ್​ಗಳಿಗೆ ಕಡಿತ ಮಾಡಲಾಗಿತ್ತು. ಟಾಸ್​ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್​​ಲೆಂಡ್ಸ್ ನಿಗದಿತ ಓವರ್​ಗಳಲ್ಲಿ 245 ರನ್​ಗಳನ್ನು ಪೇರಿಸಿತ್ತು. ಈ ಗುರಿ ಬೆಟ್ಟನ್ನಟ್ಟಿದ್ದ ದಕ್ಷಿಣ ಆಫ್ರಿಕಾ 42.5 ಓವರ್​ಗಳಲ್ಲಿ 207 ರನ್​ಗಳಷ್ಟೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಗಿತ್ತು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್‌ನಲ್ಲಿ ನೆದರ್ಲೆಂಡ್‌ಗೆ​ ಅಚ್ಚರಿಯ ಗೆಲುವು! ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಶೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.