ETV Bharat / sports

England vs India : ಭಾರತದ ಗೆಲುವಿಗೆ ಮುಳುವಾಗುವನೇ ಮಳೆರಾಯ?

ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 278 ರನ್‌ ಗಳಿಸಿತು. ಇದರೊಂದಿಗೆ 95 ರನ್​ಗಳ ಮುನ್ನಡೆ ಪಡೆದಿತ್ತು..

author img

By

Published : Aug 8, 2021, 4:22 PM IST

England vs India
England vs India

ನ್ಯಾಟಿಂಗ್​ಹ್ಯಾಮ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವರುಣ ಆಗಮಸಿದ್ದು, ಭಾರತದ ಗೆಲುವಿಗೆ ಮುಳುವಾಗುವ ಭಯ ಅಭಿಮಾನಿಗಳ ಮನಸ್ಸಿನಲ್ಲಿ ಸೃಷ್ಟಿಯಾಗಿದೆ. ಇಂಗ್ಲೆಂಡ್ ವಿರುದ್ಧ ಗೆಲ್ಲಲು ಭಾರತಕ್ಕೆ 157 ರನ್ ಬೇಕಿದ್ದು, ಸದ್ಯ ಮಳೆಯಿಂದಾಗಿ ಪಂದ್ಯ ವಿಳಂಬವಾಗುತ್ತಿದೆ.

ವಿರಾಟ್​ ಕೊಹ್ಲಿ ಪಡೆಗೆ ಆಂಗ್ಲರು 209 ರನ್​ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್​ ನಷ್ಟಕ್ಕೆ 52 ರನ್​ ಗಳಿಸಿತ್ತು. ಉಳಿದ 157 ರನ್​ಗಳನ್ನು ಪೂರೈಸಲು ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್​ಗಳು ಉಳಿದಿವೆ. ಆದರೆ, ಮಳೆರಾಯ ಅವರ ಅವಕಾಶಗಳಿಗೆ ಅಡ್ಡಿಯಾಗುತ್ತಿದ್ದಾನೆ.

ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 278 ರನ್‌ ಗಳಿಸಿತು. ಇದರೊಂದಿಗೆ 95 ರನ್​ಗಳ ಮುನ್ನಡೆ ಪಡೆದಿತ್ತು.

ನ್ಯಾಟಿಂಗ್​ಹ್ಯಾಮ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವರುಣ ಆಗಮಸಿದ್ದು, ಭಾರತದ ಗೆಲುವಿಗೆ ಮುಳುವಾಗುವ ಭಯ ಅಭಿಮಾನಿಗಳ ಮನಸ್ಸಿನಲ್ಲಿ ಸೃಷ್ಟಿಯಾಗಿದೆ. ಇಂಗ್ಲೆಂಡ್ ವಿರುದ್ಧ ಗೆಲ್ಲಲು ಭಾರತಕ್ಕೆ 157 ರನ್ ಬೇಕಿದ್ದು, ಸದ್ಯ ಮಳೆಯಿಂದಾಗಿ ಪಂದ್ಯ ವಿಳಂಬವಾಗುತ್ತಿದೆ.

ವಿರಾಟ್​ ಕೊಹ್ಲಿ ಪಡೆಗೆ ಆಂಗ್ಲರು 209 ರನ್​ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್​ ನಷ್ಟಕ್ಕೆ 52 ರನ್​ ಗಳಿಸಿತ್ತು. ಉಳಿದ 157 ರನ್​ಗಳನ್ನು ಪೂರೈಸಲು ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್​ಗಳು ಉಳಿದಿವೆ. ಆದರೆ, ಮಳೆರಾಯ ಅವರ ಅವಕಾಶಗಳಿಗೆ ಅಡ್ಡಿಯಾಗುತ್ತಿದ್ದಾನೆ.

ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ 278 ರನ್‌ ಗಳಿಸಿತು. ಇದರೊಂದಿಗೆ 95 ರನ್​ಗಳ ಮುನ್ನಡೆ ಪಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.