ETV Bharat / sports

Cricket World Cup: ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಂಡಿಯಾಕ್ಕೆ ಬಂದ ಬಾಬರ್​ ಪಡೆ.. 2016ರ ನಂತರ ಭಾರತಕ್ಕೆ ಪಾಕ್​ ತಂಡ

author img

By ETV Bharat Karnataka Team

Published : Sep 27, 2023, 11:04 PM IST

ಪಾಕಿಸ್ತಾನ ತಂಡ ವಿಶ್ವಕಪ್​ ಹಿನ್ನೆಲೆಯಲ್ಲಿ ಇಂದು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

Etv Bharat
Etv Bharat

ಹೈದರಾಬಾದ್: ಏಕದಿನ ವಿಶ್ವಕಪ್​ಗೆ ಭಾರತ ಪ್ರವಾಸಕ್ಕೆ ವೀಸಾ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ಸೂಕ್ತ ಸಮಯಕ್ಕೆ ವೀಸಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಿರ್ವಹಣಾ ಕಮಿಟಿ​ ಮಾತ್ರ ಎರಡು ದಿನಗಳ ಹಿಂದೆ ವೀಸಾ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಐಸಿಸಿಗೂ ಪತ್ರ ಬರೆದಿದ್ದರು. ಆದರೆ ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದ್ದು ಇಂದು ತಂಡ ಭಾರತಕ್ಕೆ ಬಂದಿಳಿದಿದೆ.

ಶುಕ್ರವಾರ ಉಪ್ಪಲ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್​ನ ತನ್ನ ಮೊದಲ ಪಂದ್ಯವನ್ನು ಆಡಲಿದೆ. 1992 ರಲ್ಲಿ ನಾಯಕ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಮೆನ್ ಇನ್ ಗ್ರೀನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು 2016ರಲ್ಲಿ ಭಾರತಕ್ಕೆ ಬಂದಿತ್ತು. ಅದಾದ ನಂತರ ರಾಜತಾಂತ್ರಿಕ ಕಾರಣಗಳಿಂದ ಉಭಯ ತಂಡಗಳು ದೇಶಗಳಿಗೆ ಹೋಗಿ ಆಡಿರಲಿಲ್ಲ. ಈ ಬಾರಿಯ ಏಷ್ಯಾಕಪ್​ ಪಾಕಿಸ್ತಾನ ಆಯೋಜಿಸ ಬೇಕಾಗಿದ್ದರೂ, ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಹೈಬ್ರಿಡ್​ ಮಾದರಿಯನ್ನು ಪಂದ್ಯಗಳನ್ನು ಆಡಿಸಲಾಯಿತು.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತವೆ ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಪಾಕಿಸ್ತಾನಿ ಆಟಗಾರರು ತಮ್ಮ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಕೇವಲ ಒಂದು ದಿನದ ಸಮಯವನ್ನು ಮಾತ್ರ ಪಡೆಯುತ್ತಾರೆ. ಹಬ್ಬದ ದಿನಗಳ ನಡುವೆ ಪಾಕಿಸ್ತಾನ ತಂಡದ ಅಭ್ಯಾಸ ಪಂದ್ಯ ನಡೆಯುತ್ತಿರುವ ಕಾರಣ ಈ ಮ್ಯಾಚ್​ಗೆ ಭದ್ರತಾ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ಇಲ್ಲಾ ಎಂದು ಬಿಸಿಸಿಐ ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದೆ. ಮೊಹಮ್ಮದ್ ನವಾಜ್ ಮತ್ತು ಸಲ್ಮಾನ್ ಅಲಿ ಅಘಾ ಮಾತ್ರ ಭಾರತಕ್ಕೆ ಕ್ರಿಕೆಟ್‌ಗಾಗಿ ಭೇಟಿ ನೀಡಿದ್ದಾರೆ. ಗಾಯದ ಕಾರಣ ಬಾಬರ್ 2016 ರಲ್ಲಿ ಭಾರತದಲ್ಲಿ ಟಿ 20 ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ.

ಅಲ್ಲದೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ (ಅಕ್ಟೋಬರ್ 14), ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (ಅಕ್ಟೋಬರ್ 20), ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (ಅಕ್ಟೋಬರ್ 23) ಮತ್ತು ದಕ್ಷಿಣ ಆಫ್ರಿಕಾ (ಅಕ್ಟೋಬರ್ 27), ಈಡನ್ ಗಾರ್ಡನ್‌ನಲ್ಲಿ ಪಾಕಿಸ್ತಾನ ಆಡಲಿದೆ. ಬಾಂಗ್ಲಾದೇಶ ವಿರುದ್ಧ (ಅಕ್ಟೋಬರ್ 31), ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ (ನವೆಂಬರ್ 4) ಮತ್ತು ಈಡನ್ ಗಾರ್ಡನ್ಸ್ ಇಂಗ್ಲೆಂಡ್ ವಿರುದ್ಧ (ನವೆಂಬರ್ 11) ಪಂದ್ಯಗಳು ನಡೆಯಲಿದೆ.

ಭಾರತಕ್ಕೆ ಹೊರಡುವ ಮುನ್ನ, ನಾಯಕ ಬಾಬರ್ ಅಜಮ್, "ನಾವು ಸೋತರೆ ನಾವು ತಂಡವಾಗಿ ಸೋಲುತ್ತೇವೆ ಮತ್ತು ನಾವು ಗೆದ್ದಾಗ ನಾವು ತಂಡವಾಗಿ ಗೆಲ್ಲುತ್ತೇವೆ. ಇಡೀ ತಂಡವು ಒಂದು ಕುಟುಂಬದಂತೆ ಮತ್ತು ಅಲ್ಲಿ ಪ್ರೀತಿ ಮತ್ತು ಗೌರವವಿದೆ" ಎಂದು ಹೇಳಿದ್ದರು.

"ಎಲ್ಲಾ ತಂಡಗಳಿಗೆ ಉತ್ತಮ ಭದ್ರತೆಯನ್ನು ಒದಗಿಸಲಾಗುವುದು ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗುವುದು ಎಂದು ಬಿಸಿಸಿಐ ಐಸಿಸಿಗೆ ಭರವಸೆ ನೀಡಿದೆ, ಹಾಗಾಗಿ ನಮ್ಮ ತಂಡಕ್ಕೆ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ನಮ್ಮ ತಂಡವು ಭಾರತದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಮುಖ್ಯಸ್ಥರು ಪಿಸಿಬಿ ನಿರ್ವಹಣಾ ಸಮಿತಿಯ ಝಾಕಾ ಅಶ್ರಫ್ ತಂಡದ ನಿರ್ಗಮನದ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: IND vs AUS: ಕ್ಲೀನ್​ ಸ್ವೀಪ್​ ಮುಖಭಂಗ ತಪ್ಪಿಸಿಕೊಂಡ ಆಸ್ಟ್ರೇಲಿಯಾ.. ವಿಶ್ವಕಪ್​ಗೂ ಮುನ್ನ ಸರಣಿ ಗೆದ್ದ ಭಾರತ

ಹೈದರಾಬಾದ್: ಏಕದಿನ ವಿಶ್ವಕಪ್​ಗೆ ಭಾರತ ಪ್ರವಾಸಕ್ಕೆ ವೀಸಾ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ಸೂಕ್ತ ಸಮಯಕ್ಕೆ ವೀಸಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಿರ್ವಹಣಾ ಕಮಿಟಿ​ ಮಾತ್ರ ಎರಡು ದಿನಗಳ ಹಿಂದೆ ವೀಸಾ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಐಸಿಸಿಗೂ ಪತ್ರ ಬರೆದಿದ್ದರು. ಆದರೆ ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದ್ದು ಇಂದು ತಂಡ ಭಾರತಕ್ಕೆ ಬಂದಿಳಿದಿದೆ.

ಶುಕ್ರವಾರ ಉಪ್ಪಲ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್​ನ ತನ್ನ ಮೊದಲ ಪಂದ್ಯವನ್ನು ಆಡಲಿದೆ. 1992 ರಲ್ಲಿ ನಾಯಕ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಮೆನ್ ಇನ್ ಗ್ರೀನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು 2016ರಲ್ಲಿ ಭಾರತಕ್ಕೆ ಬಂದಿತ್ತು. ಅದಾದ ನಂತರ ರಾಜತಾಂತ್ರಿಕ ಕಾರಣಗಳಿಂದ ಉಭಯ ತಂಡಗಳು ದೇಶಗಳಿಗೆ ಹೋಗಿ ಆಡಿರಲಿಲ್ಲ. ಈ ಬಾರಿಯ ಏಷ್ಯಾಕಪ್​ ಪಾಕಿಸ್ತಾನ ಆಯೋಜಿಸ ಬೇಕಾಗಿದ್ದರೂ, ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಹೈಬ್ರಿಡ್​ ಮಾದರಿಯನ್ನು ಪಂದ್ಯಗಳನ್ನು ಆಡಿಸಲಾಯಿತು.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತವೆ ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಪಾಕಿಸ್ತಾನಿ ಆಟಗಾರರು ತಮ್ಮ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಕೇವಲ ಒಂದು ದಿನದ ಸಮಯವನ್ನು ಮಾತ್ರ ಪಡೆಯುತ್ತಾರೆ. ಹಬ್ಬದ ದಿನಗಳ ನಡುವೆ ಪಾಕಿಸ್ತಾನ ತಂಡದ ಅಭ್ಯಾಸ ಪಂದ್ಯ ನಡೆಯುತ್ತಿರುವ ಕಾರಣ ಈ ಮ್ಯಾಚ್​ಗೆ ಭದ್ರತಾ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ಇಲ್ಲಾ ಎಂದು ಬಿಸಿಸಿಐ ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿದೆ. ಮೊಹಮ್ಮದ್ ನವಾಜ್ ಮತ್ತು ಸಲ್ಮಾನ್ ಅಲಿ ಅಘಾ ಮಾತ್ರ ಭಾರತಕ್ಕೆ ಕ್ರಿಕೆಟ್‌ಗಾಗಿ ಭೇಟಿ ನೀಡಿದ್ದಾರೆ. ಗಾಯದ ಕಾರಣ ಬಾಬರ್ 2016 ರಲ್ಲಿ ಭಾರತದಲ್ಲಿ ಟಿ 20 ವಿಶ್ವಕಪ್ ಆಡಲು ಸಾಧ್ಯವಾಗಲಿಲ್ಲ.

ಅಲ್ಲದೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ (ಅಕ್ಟೋಬರ್ 14), ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (ಅಕ್ಟೋಬರ್ 20), ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (ಅಕ್ಟೋಬರ್ 23) ಮತ್ತು ದಕ್ಷಿಣ ಆಫ್ರಿಕಾ (ಅಕ್ಟೋಬರ್ 27), ಈಡನ್ ಗಾರ್ಡನ್‌ನಲ್ಲಿ ಪಾಕಿಸ್ತಾನ ಆಡಲಿದೆ. ಬಾಂಗ್ಲಾದೇಶ ವಿರುದ್ಧ (ಅಕ್ಟೋಬರ್ 31), ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ (ನವೆಂಬರ್ 4) ಮತ್ತು ಈಡನ್ ಗಾರ್ಡನ್ಸ್ ಇಂಗ್ಲೆಂಡ್ ವಿರುದ್ಧ (ನವೆಂಬರ್ 11) ಪಂದ್ಯಗಳು ನಡೆಯಲಿದೆ.

ಭಾರತಕ್ಕೆ ಹೊರಡುವ ಮುನ್ನ, ನಾಯಕ ಬಾಬರ್ ಅಜಮ್, "ನಾವು ಸೋತರೆ ನಾವು ತಂಡವಾಗಿ ಸೋಲುತ್ತೇವೆ ಮತ್ತು ನಾವು ಗೆದ್ದಾಗ ನಾವು ತಂಡವಾಗಿ ಗೆಲ್ಲುತ್ತೇವೆ. ಇಡೀ ತಂಡವು ಒಂದು ಕುಟುಂಬದಂತೆ ಮತ್ತು ಅಲ್ಲಿ ಪ್ರೀತಿ ಮತ್ತು ಗೌರವವಿದೆ" ಎಂದು ಹೇಳಿದ್ದರು.

"ಎಲ್ಲಾ ತಂಡಗಳಿಗೆ ಉತ್ತಮ ಭದ್ರತೆಯನ್ನು ಒದಗಿಸಲಾಗುವುದು ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗುವುದು ಎಂದು ಬಿಸಿಸಿಐ ಐಸಿಸಿಗೆ ಭರವಸೆ ನೀಡಿದೆ, ಹಾಗಾಗಿ ನಮ್ಮ ತಂಡಕ್ಕೆ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ನಮ್ಮ ತಂಡವು ಭಾರತದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಮುಖ್ಯಸ್ಥರು ಪಿಸಿಬಿ ನಿರ್ವಹಣಾ ಸಮಿತಿಯ ಝಾಕಾ ಅಶ್ರಫ್ ತಂಡದ ನಿರ್ಗಮನದ ಮೊದಲು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: IND vs AUS: ಕ್ಲೀನ್​ ಸ್ವೀಪ್​ ಮುಖಭಂಗ ತಪ್ಪಿಸಿಕೊಂಡ ಆಸ್ಟ್ರೇಲಿಯಾ.. ವಿಶ್ವಕಪ್​ಗೂ ಮುನ್ನ ಸರಣಿ ಗೆದ್ದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.