ETV Bharat / sports

ಗವಾಸ್ಕರ್ ತಮ್ಮ ಕಾಲದಲ್ಲಿ 'ಮುಂಬೈ ಬ್ರಾಡ್ಮನ್' ಎಂದು ಕರೆಯಿಸಿ ಕೊಳ್ಳುತ್ತಿದ್ದರು : ರವಿ ಶಾಸ್ತ್ರಿ

author img

By

Published : Jan 6, 2021, 9:32 PM IST

ಗವಾಸ್ಕರ್​ರನ್ನು ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್ ಎಂದು ನಾನು ಸುಲಭವಾಗಿ ಹೇಳುತ್ತೇನೆ. ನನಗೆ ಅವರ ನಾಯಕತ್ವದಲ್ಲಿ ಆಡಲು ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ವೆಸ್ಟ್​ ಇಂಡೀಸ್​ನಂತಹ ಪ್ರಬಲ ತಂಡದ ವಿರುದ್ಧ ಅವರು 13 ಶತಕ ಸಿಡಿಸಿರುವುದು ಅವರ ಆಟಕ್ಕೆ ಸಾಕ್ಷಿಯಾಗಿದೆ..

ಸುನೀಲ್​ ಗವಾಸ್ಕರ್​
ಸುನೀಲ್​ ಗವಾಸ್ಕರ್​

ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ಗೆ ಹಿಂದಿನ ದಿನವಾದ ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಬೌರಲ್ ಮ್ಯೂಸಿಯಂಗಾಗಿ ತಮ್ಮ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಭಾವಚಿತ್ರವನ್ನು ಅನಾವರಣಗಳಿಸಿದರು.

ಗವಾಸ್ಕರ್​ ನಾಯಕತ್ವದಲ್ಲಿ ಆಡಿರುವ ರವಿಶಾಸ್ತ್ರಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗವಾಸ್ಕರ್​ರನ್ನು ತಾವು ನೋಡಿದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್​ ಎಂದು ಶ್ಲಾಘಿಸಿದ್ದಾರೆ.

"ಗವಾಸ್ಕರ್​ರನ್ನು ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್ ಎಂದು ನಾನು ಸುಲಭವಾಗಿ ಹೇಳುತ್ತೇನೆ. ನನಗೆ ಅವರ ನಾಯಕತ್ವದಲ್ಲಿ ಆಡಲು ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ಅವರು ತಂತ್ರಗಾರಿಕೆಯ ಮಾಸ್ಟರ್​. ಅವರನ್ನು ಬೆರಗುಗೊಳಿಸುವಂತಹದ್ದೇನು ಇರಲಿಲ್ಲ. ವೆಸ್ಟ್​ ಇಂಡೀಸ್​ನಂತಹ ಪ್ರಬಲ ತಂಡದ ವಿರುದ್ಧ ಅವರು 13 ಶತಕ ಸಿಡಿಸಿರುವುದು ಅವರ ಆಟಕ್ಕೆ ಸಾಕ್ಷಿಯಾಗಿದೆ.

#TeamIndia Head Coach @RaviShastriOfc launched 'India's 71-Year Test: The Journey to Triumph in Australia', a new book by @BradmanBowral , at the @scg today.

He also unveiled a portrait of the legendary Sunil Gavaskar. pic.twitter.com/EP4UXoqHAq

— BCCI (@BCCI) January 6, 2021 ">

ಅವರ ಆ ಶತಕಗಳನ್ನು ಸಿಡಿಸುತ್ತಿದ್ದ ಸಂದರ್ಭದಲ್ಲಿ ಮುಂಬೈ ಬ್ರಾಡ್ಮನ್​ ಎಂದು ಕರೆಯಲಾಗುತ್ತಿತ್ತು. ಇಂದು ನಾನು ಅವರ ಭಾವಚಿತ್ರವನ್ನು ಇಲ್ಲಿ ಅನಾವರಣಗೊಳಿಸುತ್ತಿರುವುದು ನನಗೆ ಸಿಕ್ಕ ಗೌರವ" ಎಂದು ಬಿಸಿಸಿಐ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಕೋಚ್​ ಇದೇ ಸಂದರ್ಭದಲ್ಲಿ "ಇಂಡಿಯಾಸ್​ 71 ಇಯರ್​ ಟೆಸ್ಟ್​ : ದಿ ಜರ್ನಿ ಟು ಟ್ರಿಯಾಂಪ್​ ಇನ್‌ ಆಸ್ಟ್ರೇಲಿಯಾ" ಪುಸ್ತಕವನ್ನು ಬಿಡುಗಡೆ ಮಾಡಿದರು.

ಇದನ್ನು ಓದಿ:ಹೊಸದನ್ನು ಕಲಿಯುವ ಅಶ್ವಿನ್ ಜಾಣ್ಮೆ​, ಜಡೇಜಾ ಬ್ಯಾಟಿಂಗ್ ಸುಧಾರಣೆ ತಂಡದ ದೊಡ್ಡ ಬಲ: ರಹಾನೆ

ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ಗೆ ಹಿಂದಿನ ದಿನವಾದ ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಬೌರಲ್ ಮ್ಯೂಸಿಯಂಗಾಗಿ ತಮ್ಮ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಭಾವಚಿತ್ರವನ್ನು ಅನಾವರಣಗಳಿಸಿದರು.

ಗವಾಸ್ಕರ್​ ನಾಯಕತ್ವದಲ್ಲಿ ಆಡಿರುವ ರವಿಶಾಸ್ತ್ರಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗವಾಸ್ಕರ್​ರನ್ನು ತಾವು ನೋಡಿದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್​ ಎಂದು ಶ್ಲಾಘಿಸಿದ್ದಾರೆ.

"ಗವಾಸ್ಕರ್​ರನ್ನು ಅತ್ಯುತ್ತಮ ಆರಂಭಿಕ ಬ್ಯಾಟ್ಸ್​ಮನ್ ಎಂದು ನಾನು ಸುಲಭವಾಗಿ ಹೇಳುತ್ತೇನೆ. ನನಗೆ ಅವರ ನಾಯಕತ್ವದಲ್ಲಿ ಆಡಲು ಅವಕಾಶ ಸಿಕ್ಕಿದ್ದು, ನನ್ನ ಸೌಭಾಗ್ಯ. ಅವರು ತಂತ್ರಗಾರಿಕೆಯ ಮಾಸ್ಟರ್​. ಅವರನ್ನು ಬೆರಗುಗೊಳಿಸುವಂತಹದ್ದೇನು ಇರಲಿಲ್ಲ. ವೆಸ್ಟ್​ ಇಂಡೀಸ್​ನಂತಹ ಪ್ರಬಲ ತಂಡದ ವಿರುದ್ಧ ಅವರು 13 ಶತಕ ಸಿಡಿಸಿರುವುದು ಅವರ ಆಟಕ್ಕೆ ಸಾಕ್ಷಿಯಾಗಿದೆ.

ಅವರ ಆ ಶತಕಗಳನ್ನು ಸಿಡಿಸುತ್ತಿದ್ದ ಸಂದರ್ಭದಲ್ಲಿ ಮುಂಬೈ ಬ್ರಾಡ್ಮನ್​ ಎಂದು ಕರೆಯಲಾಗುತ್ತಿತ್ತು. ಇಂದು ನಾನು ಅವರ ಭಾವಚಿತ್ರವನ್ನು ಇಲ್ಲಿ ಅನಾವರಣಗೊಳಿಸುತ್ತಿರುವುದು ನನಗೆ ಸಿಕ್ಕ ಗೌರವ" ಎಂದು ಬಿಸಿಸಿಐ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಕೋಚ್​ ಇದೇ ಸಂದರ್ಭದಲ್ಲಿ "ಇಂಡಿಯಾಸ್​ 71 ಇಯರ್​ ಟೆಸ್ಟ್​ : ದಿ ಜರ್ನಿ ಟು ಟ್ರಿಯಾಂಪ್​ ಇನ್‌ ಆಸ್ಟ್ರೇಲಿಯಾ" ಪುಸ್ತಕವನ್ನು ಬಿಡುಗಡೆ ಮಾಡಿದರು.

ಇದನ್ನು ಓದಿ:ಹೊಸದನ್ನು ಕಲಿಯುವ ಅಶ್ವಿನ್ ಜಾಣ್ಮೆ​, ಜಡೇಜಾ ಬ್ಯಾಟಿಂಗ್ ಸುಧಾರಣೆ ತಂಡದ ದೊಡ್ಡ ಬಲ: ರಹಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.