ETV Bharat / sports

ಮುಷ್ತಾಕ್ ಅಲಿ ಟಿ20: ಹಿ.ಪ್ರದೇಶ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ ತಮಿಳುನಾಡು

author img

By

Published : Jan 26, 2021, 11:00 PM IST

ಅಹ್ಮದಾಬಾದ್​ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಕ್ವಾರ್ಟರ್​ ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 135 ರನ್​ಗಳಿಸಿತ್ತು. ನಾಯಕ ರಿಷಿ ಧವನ್​ 35, ನಿತಿನ್ ಶರ್ಮಾ 26, ಅಭಿಮನ್ಯು ರಾಣ 28 ರನ್​ಗಳಸಿದ್ದರು.

ಸಯ್ಯದ್ ಮುಷ್ತಾಕ್ ಅಲಿ ಟಿ20
ಸಯ್ಯದ್ ಮುಷ್ತಾಕ್ ಅಲಿ ಟಿ20

ಅಹ್ಮದಾಬಾದ್​:ಹಿಮಾಚಲ ಪ್ರದೇಶದ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.

ಅಹ್ಮದಾಬಾದ್​ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಕ್ವಾರ್ಟರ್​ ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 135 ರನ್​ಗಳಿಸಿತ್ತು. ನಾಯಕ ರಿಷಿ ಧವನ್​ 35, ನಿತಿನ್ ಶರ್ಮಾ 26, ಅಭಿಮನ್ಯು ರಾಣ 28 ರನ್​ಗಳಸಿದ್ದರು.

ತಮಿಳುನಾಡು ಪರ ಸೋನು ಯಾದವ್​ 14ಕ್ಕೆ 3, ಸಂದೀಪ್ ವಾರಿಯರ್​ 32ಕ್ಕೆ 2, ಸಾಯಿ ಕಿಶೋರ್​ ಮತ್ತು ಎಂ.ಮೊಹಮ್ಮದ್ ತಲಾ ಒಂದು ವಿಕೆಟ್ ಪಡೆದು ಎದುರಾಳಿನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

ಇನ್ನು 136 ರನ್​ಗಳ ಸುಲಭ ಗುರಿ ಬೆನ್ನತ್ತಿದ ತಮಿಳುನಾಡು ತಂಡ 25 ರನ್​ಗಳಾಗುವಷ್ಟರಲ್ಲಿ ಎನ್​. ಜಗದೀಶನ್​ (7), ಹರಿ ನಿಶಾಂತ್​(17) ಹಾಗೂ ಅರುಣ್ ಕಾರ್ತಿಕ್​(0) ವೈಭವ್​ ಅರೋರಾ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

Tamil Nadu seal a place in the semifinals! 👏👏

The @DineshKarthik-led side kept their composure and beat Himachal by five wickets in the #SyedMushtaqAliT20 #QF2. 👌👌 #TNvHP | @TNCACricket

Scorecard 👉 https://t.co/84QeGusrRe pic.twitter.com/1Wo2N7bRQV

— BCCI Domestic (@BCCIdomestic) January 26, 2021

ನಂತರ ಬಾಬಾ ಅಪರಾಜಿತ್​ ಮತ್ತು ಸೋನು ಯಾದವ್​(16) 4ನೇ ವಿಕೆಟ್​ಗೆ 35 ರನ್​ ಸೇರಿಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಸೋನು ಯಾದವ್​ ಮತ್ತು ದಿನೇಶ್ ಕಾರ್ತಿಕ್​(2)ನ ಔಟಾದರು.

66ಕ್ಕೆ 5 ವಿಕೆಟ್​ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಬಾಬಾ ಅಪರಾಜಿತ್​ ಜೊತೆಗೂಡಿದ ಶಾರುಕ್ ಖಾನ್​ 6ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಅಪರಾಜಿತ್​ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ ಅಜೇಯ 52 ರನ್​ಗಳಿಸಿದರೆ, ಶಾರುಕ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ದಿನೇಶ್ ಕಾರ್ತಿಕ್ ಪಡೆ ನಾಳೆ ನಡೆಯುವ ಬಿಹಾರ ಮತ್ತು ರಾಜಸ್ಥಾನ ನಡುವಿನ 4ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆದ್ದ ತಂಡವನ್ನು ಶುಕ್ರವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.

ಇದನ್ನು ಓದಿ:ಮುಷ್ತಾಕ್​ ಅಲಿ ಟ್ರೋಫಿ: ಕರ್ನಾಟಕ ಮಣಿಸಿ ಸೆಮೀಸ್​ಗೆ ಎಂಟ್ರಿ ಕೊಟ್ಟ ಪಂಜಾಬ್​

ಅಹ್ಮದಾಬಾದ್​:ಹಿಮಾಚಲ ಪ್ರದೇಶದ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ತಮಿಳುನಾಡು ತಂಡ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.

ಅಹ್ಮದಾಬಾದ್​ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ 2ನೇ ಕ್ವಾರ್ಟರ್​ ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 135 ರನ್​ಗಳಿಸಿತ್ತು. ನಾಯಕ ರಿಷಿ ಧವನ್​ 35, ನಿತಿನ್ ಶರ್ಮಾ 26, ಅಭಿಮನ್ಯು ರಾಣ 28 ರನ್​ಗಳಸಿದ್ದರು.

ತಮಿಳುನಾಡು ಪರ ಸೋನು ಯಾದವ್​ 14ಕ್ಕೆ 3, ಸಂದೀಪ್ ವಾರಿಯರ್​ 32ಕ್ಕೆ 2, ಸಾಯಿ ಕಿಶೋರ್​ ಮತ್ತು ಎಂ.ಮೊಹಮ್ಮದ್ ತಲಾ ಒಂದು ವಿಕೆಟ್ ಪಡೆದು ಎದುರಾಳಿನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

ಇನ್ನು 136 ರನ್​ಗಳ ಸುಲಭ ಗುರಿ ಬೆನ್ನತ್ತಿದ ತಮಿಳುನಾಡು ತಂಡ 25 ರನ್​ಗಳಾಗುವಷ್ಟರಲ್ಲಿ ಎನ್​. ಜಗದೀಶನ್​ (7), ಹರಿ ನಿಶಾಂತ್​(17) ಹಾಗೂ ಅರುಣ್ ಕಾರ್ತಿಕ್​(0) ವೈಭವ್​ ಅರೋರಾ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ನಂತರ ಬಾಬಾ ಅಪರಾಜಿತ್​ ಮತ್ತು ಸೋನು ಯಾದವ್​(16) 4ನೇ ವಿಕೆಟ್​ಗೆ 35 ರನ್​ ಸೇರಿಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಸೋನು ಯಾದವ್​ ಮತ್ತು ದಿನೇಶ್ ಕಾರ್ತಿಕ್​(2)ನ ಔಟಾದರು.

66ಕ್ಕೆ 5 ವಿಕೆಟ್​ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಬಾಬಾ ಅಪರಾಜಿತ್​ ಜೊತೆಗೂಡಿದ ಶಾರುಕ್ ಖಾನ್​ 6ನೇ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ದಾಟಿಸಿದರು.

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಅಪರಾಜಿತ್​ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ ಅಜೇಯ 52 ರನ್​ಗಳಿಸಿದರೆ, ಶಾರುಕ್ ಕೇವಲ 19 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ದಿನೇಶ್ ಕಾರ್ತಿಕ್ ಪಡೆ ನಾಳೆ ನಡೆಯುವ ಬಿಹಾರ ಮತ್ತು ರಾಜಸ್ಥಾನ ನಡುವಿನ 4ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆದ್ದ ತಂಡವನ್ನು ಶುಕ್ರವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ.

ಇದನ್ನು ಓದಿ:ಮುಷ್ತಾಕ್​ ಅಲಿ ಟ್ರೋಫಿ: ಕರ್ನಾಟಕ ಮಣಿಸಿ ಸೆಮೀಸ್​ಗೆ ಎಂಟ್ರಿ ಕೊಟ್ಟ ಪಂಜಾಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.