ETV Bharat / sports

ಸಯ್ಯದ್​ ಮುಷ್ತಾಕ್​ ಅಲಿ ಟಿ-20: ಕ್ವಾರ್ಟರ್​​ ಫೈನಲ್​ಗೇರಿದ ಕರ್ನಾಟಕ!

author img

By

Published : Jan 20, 2021, 3:56 AM IST

ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ರನ್​ರೇಟ್ ಆಧಾರದ ಮೇಲೆ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಹಾಕಿದೆ.

Syed Mushtaq Ali Trophy
Syed Mushtaq Ali Trophy

ಹೈದರಾಬಾದ್​: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಕರ್ನಾಟಕ ತಂಡ ಕೊನೆಗೂ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದೆ.

  • Congrats to all the teams that made it to the knockouts of the #SyedMushtaqAliTrophy. It was a very tough format but the teams that qualified have shown character. Good luck, everyone. May the best team win #DoddaMathu

    — ದೊಡ್ಡ ಗಣೇಶ್ | Dodda Ganesh (@doddaganesha) January 19, 2021 " class="align-text-top noRightClick twitterSection" data=" ">

ಕರುಣ್ ನಾಯರ್​ ನೇತೃತ್ವದ ಕರ್ನಾಟಕ ತಂಡ ಜನವರಿ 18ರಂದು ಉತ್ತರ ಪ್ರದೇಶದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್​ಗಳ ಸುಲಭ ಗೆಲುವು ಕಂಡಿತ್ತು. ಈ ಮೂಲಕ ಕರ್ನಾಟಕ ತಂಡ ಎಲೈಟ್​ ಗ್ರೂಪ್​ನ 'ಎ' ಯಲ್ಲಿ ಪಂಜಾಬ್​ ಬಳಿಕ ದ್ವಿತೀಯ ಸ್ಥಾನದೊಂದಿಗೆ ಲೀಗ್​ ಹಂತದ ಸ್ಪರ್ಧೆ ಮುಗಿಸಿತ್ತು.

ಅಗ್ರಸ್ಥಾನದಲ್ಲಿರುವ ಪಂಜಾಬ್​ 5 ಪಂದ್ಯಗಳಲ್ಲಿ 5 ಗೆದ್ದು 20 ಪಾಯಿಂಟ್​ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ 5ರಲ್ಲಿ 4 ಗೆದ್ದು 16 ಪಾಯಿಂಟ್ಸ್​ ಕಲೆ ಹಾಕಿದೆ. ತಮಿಳುನಾಡು ತಂಡ ಈಗಾಗಲೇ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕಿದೆ. ಕ್ವಾರ್ಟರ್​ ಫೈನಲ್​ನ ಎಲ್ಲ ಪಂದ್ಯಗಳು ಅಹ್ಮದಾಬಾದ್​ನ ಸರ್ದಾರ್​ ಪಟೇಲ್​ ಸ್ಟೇಡಿಯಂನಲ್ಲಿ ನಡೆಯಲಿವೆ.

ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಆರು ತಂಡಗಳು ಹೆಚ್ಚಿನ ಪಾಯಿಂಟ್​ ಆಧಾರದ ಮೇಲೆ ಡೈರೆಕ್ಟ್​ ಆಗಿ ಕ್ವಾಲಿಫೈಯರ್​ ಆಗಿದ್ದು, ಉಳಿದ ಎರಡು ತಂಡಗಳು ಪಾಯಿಂಟ್ ಹಾಗೂ ಹೆಚ್ಚಿನ ರನ್​ರೇಟ್​ ಆಧಾರದ ಮೇಲೆ ಕ್ವಾಲಿಫೈಯರ್​ ಆಗಿವೆ. ರಾಜಸ್ಥಾನ ಗೆಲುವು ದಾಖಲು ಮಾಡಿದ್ದರಿಂದ ಮಧ್ಯಪ್ರದೇಶ ರನ್​ರೇಟ್ ಕಡಿಮೆಯಾಗಿದ್ದು, ಕರ್ನಾಟಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ.

ಕ್ವಾರ್ಟರ್​ಫೈನಲ್​ಗೆ ತಲುಪಿದ ತಂಡಗಳು

ಬಿಹಾರ,ಚಂಡೀಗಢ,ಹರಿಯಾಣ,ರಾಜಸ್ಥಾನ,ಬರೋಡಾ,ತಮಿಳುನಾಡು,ಪಂಜಾಬ್​, ಕರ್ನಾಟಕ

ಹೈದರಾಬಾದ್​: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಕರ್ನಾಟಕ ತಂಡ ಕೊನೆಗೂ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗಿದೆ.

  • Congrats to all the teams that made it to the knockouts of the #SyedMushtaqAliTrophy. It was a very tough format but the teams that qualified have shown character. Good luck, everyone. May the best team win #DoddaMathu

    — ದೊಡ್ಡ ಗಣೇಶ್ | Dodda Ganesh (@doddaganesha) January 19, 2021 " class="align-text-top noRightClick twitterSection" data=" ">

ಕರುಣ್ ನಾಯರ್​ ನೇತೃತ್ವದ ಕರ್ನಾಟಕ ತಂಡ ಜನವರಿ 18ರಂದು ಉತ್ತರ ಪ್ರದೇಶದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 5 ವಿಕೆಟ್​ಗಳ ಸುಲಭ ಗೆಲುವು ಕಂಡಿತ್ತು. ಈ ಮೂಲಕ ಕರ್ನಾಟಕ ತಂಡ ಎಲೈಟ್​ ಗ್ರೂಪ್​ನ 'ಎ' ಯಲ್ಲಿ ಪಂಜಾಬ್​ ಬಳಿಕ ದ್ವಿತೀಯ ಸ್ಥಾನದೊಂದಿಗೆ ಲೀಗ್​ ಹಂತದ ಸ್ಪರ್ಧೆ ಮುಗಿಸಿತ್ತು.

ಅಗ್ರಸ್ಥಾನದಲ್ಲಿರುವ ಪಂಜಾಬ್​ 5 ಪಂದ್ಯಗಳಲ್ಲಿ 5 ಗೆದ್ದು 20 ಪಾಯಿಂಟ್​ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ 5ರಲ್ಲಿ 4 ಗೆದ್ದು 16 ಪಾಯಿಂಟ್ಸ್​ ಕಲೆ ಹಾಕಿದೆ. ತಮಿಳುನಾಡು ತಂಡ ಈಗಾಗಲೇ ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಹಾಕಿದೆ. ಕ್ವಾರ್ಟರ್​ ಫೈನಲ್​ನ ಎಲ್ಲ ಪಂದ್ಯಗಳು ಅಹ್ಮದಾಬಾದ್​ನ ಸರ್ದಾರ್​ ಪಟೇಲ್​ ಸ್ಟೇಡಿಯಂನಲ್ಲಿ ನಡೆಯಲಿವೆ.

ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಆರು ತಂಡಗಳು ಹೆಚ್ಚಿನ ಪಾಯಿಂಟ್​ ಆಧಾರದ ಮೇಲೆ ಡೈರೆಕ್ಟ್​ ಆಗಿ ಕ್ವಾಲಿಫೈಯರ್​ ಆಗಿದ್ದು, ಉಳಿದ ಎರಡು ತಂಡಗಳು ಪಾಯಿಂಟ್ ಹಾಗೂ ಹೆಚ್ಚಿನ ರನ್​ರೇಟ್​ ಆಧಾರದ ಮೇಲೆ ಕ್ವಾಲಿಫೈಯರ್​ ಆಗಿವೆ. ರಾಜಸ್ಥಾನ ಗೆಲುವು ದಾಖಲು ಮಾಡಿದ್ದರಿಂದ ಮಧ್ಯಪ್ರದೇಶ ರನ್​ರೇಟ್ ಕಡಿಮೆಯಾಗಿದ್ದು, ಕರ್ನಾಟಕ ಮುಂದಿನ ಹಂತಕ್ಕೆ ಅವಕಾಶ ಪಡೆದುಕೊಂಡಿದೆ.

ಕ್ವಾರ್ಟರ್​ಫೈನಲ್​ಗೆ ತಲುಪಿದ ತಂಡಗಳು

ಬಿಹಾರ,ಚಂಡೀಗಢ,ಹರಿಯಾಣ,ರಾಜಸ್ಥಾನ,ಬರೋಡಾ,ತಮಿಳುನಾಡು,ಪಂಜಾಬ್​, ಕರ್ನಾಟಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.