ETV Bharat / sports

ಪಂದ್ಯ ಟೈ ಆಗಲು ಕಾರಣ ಕಿಶನ್.. ಆದ್ರೆ, ಸೂಪರ್​ ಓವರ್​ನಲ್ಲಿ ಆಡಿಸದಿರುವ ಕಾರಣ ತಿಳಿಸಿದ ರೋಹಿತ್​

author img

By

Published : Sep 29, 2020, 5:52 PM IST

ಸೂಪರ್​ ಓವರ್​ನಲ್ಲಿ ಪೊಲಾರ್ಡ್​ ಜೊತೆಗೆ ಕಿಶನ್​ ಬದಲಾಗಿ ಹಾರ್ದಿಕ್​ ಪಾಂಡ್ಯರನ್ನು ಕಳುಹಿಸಲಾಗಿತ್ತು. ಈ ಜೋಡಿ ಕೇವಲ 7 ರನ್​ಗಳಿಸಲಷ್ಟೇ ಶಕ್ತವಾಯಿತು. ಆರ್​ಸಿಬಿ 8 ರನ್​ಗಳನ್ನು ಚೇಸ್​ ಮಾಡಿ ಸುಲಭ ಜಯ ಸಾಧಿಸಿತು..

ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್​
ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್​

ದುಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋಲುತ್ತಿದ್ದ ಪಂದ್ಯವನ್ನು ತನ್ನ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈ ಆಗಲು ನೆರವಾಗಿದ್ದ ಯುವ ಬ್ಯಾಟ್ಸ್​ಮನ್​ ಇಶಾನ್ ಕಿಶನ್​ರನ್ನು ಸೂಪರ್​ ಓವರ್​ನಲ್ಲಿ ಆಡಿಸದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ಕಾರಣ ಬಹಿರಂಗಪಡಿಸಿದ್ದಾರೆ.

ಮುಂಬೈ ತಂಡ ಗೆಲ್ಲಲು ಕೊನೆಯ ನಾಲ್ಕು ಓವರ್​ಗಳಲ್ಲಿ 80 ರನ್​ಗಳ ಅವಶ್ಯಕತೆಯಿತ್ತು. ನಿಜಕ್ಕೂ ಆರ್​ಸಿಬಿಗೆ ಸುಲಭ ಜಯ ಸಿಗಬಹುದೆಂದೇ ನಿರೀಕ್ಷಿಸಲಾಗಿತ್ತು. ಆದರೆ, ಇಶಾನ್ ಕಿಶನ್ ಹಾಗೂ ಪೊಲಾರ್ಡ್​ ಪಂದ್ಯದ ಗತಿ ಬದಲಿಸಿದರು. ಈ ಜೋಡಿ 17ನೇ ಓವರ್​ನಲ್ಲಿ 27, 18ನೇ ಓವರ್​ನಲ್ಲಿ 22, 19 ಓವರ್​ನಲ್ಲಿ 12 ರನ್​ ಗಳಿಸಿತ್ತು.

ಕೊನೆಯ ಓವರ್​ನಲ್ಲಿ ಪಂದ್ಯ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ಮೊದಲೆರಡು ಎಸೆತಗಳಲ್ಲಿ ಸಿಂಗಲ್ಸ್ ಮಾತ್ರ ಬಂದಿದ್ದರಿಂದ 4 ಎಸೆತಗಳಲ್ಲಿ 17 ರನ್​ಗಳ ಅಗತ್ಯವಿತ್ತು. ಆದರೆ, ಕಿಶನ್, ಇಸುರು ಉದಾನ ಬೌಲಿಂಗ್​ನಲ್ಲಿ ಸತತ ಎರಡು ಸಿಕ್ಸರ್​ ಸಿಡಿಸಿ 5ನೇ ಎಸೆತದಲ್ಲಿ ಔಟಾದರು. ಕೊನೆಯ ಎಸೆತದಲ್ಲಿ 5 ರನ್​ಗಳ ಅವಶ್ಯಕತೆಯಿದ್ದಾಗ ಪೊಲಾರ್ಡ್​ ಫೋರ್​ ಸಿಡಿಸಿ ಪಂದ್ಯ ಟೈ ಆಗುವಂತೆ ಮಾಡಿದರು.

ಆದರೆ, ಸೂಪರ್​ ಓವರ್​ನಲ್ಲಿ ಪೊಲಾರ್ಡ್​ ಜೊತೆಗೆ ಕಿಶನ್​ ಬದಲಾಗಿ ಹಾರ್ದಿಕ್​ ಪಾಂಡ್ಯರನ್ನು ಕಳುಹಿಸಲಾಗಿತ್ತು. ಈ ಜೋಡಿ ಕೇವಲ 7 ರನ್​ಗಳಿಸಲಷ್ಟೇ ಶಕ್ತವಾಯಿತು. ಆರ್​ಸಿಬಿ 8 ರನ್​ಗಳನ್ನು ಚೇಸ್​ ಮಾಡಿ ಸುಲಭ ಜಯ ಸಾಧಿಸಿತು. ಆದರೆ, ಫಾರ್ಮ್​ನಲ್ಲಿದ್ದ ಹಾಗೂ ಸೈನಿಗೆ ಉತ್ತಮ ಬೌಂಡರಿ-ಸಿಕ್ಸರ್ ಸಿಡಿಸಿದ್ದ ಕಿಶನ್​ರನ್ನು ಏಕೆ ಬ್ಯಾಟಿಂಗ್‌ಗೆ ಕಳುಹಿಸಲಿಲ್ಲ ಎಂಬುದನ್ನು ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಬಹಿರಂಗ ಪಡಿಸಿದ್ದಾರೆ.

'ಇಶಾನ್‌ ಕಿಶಾನ್‌ ಸುದೀರ್ಘ ಇನ್ನಿಂಗ್ಸ್​ ಆಡಿ ದಣಿದಿದ್ದರು. ಅವರು ಸೂಪರ್​ ಓವರ್​ ಸಂದರ್ಭದಲ್ಲಿ ಆರಾಮದಾಯಕವಾಗಿ ಕಾಣಿಸಲಿಲ್ಲ. ನಾವು ಕೂಡ ಅವರನ್ನೇ ಕಳುಹಿಸಬೇಕು ಎಂದುಕೊಂಡಿದ್ದೆವು. ಆದರೆ, ಅವರು ಫ್ರೆಶ್‌ ಆಗಿ ಕಾಣಿಸಿಲಿಲ್ಲ. ಹಾಗಾಗಿ, ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ಸಮರ್ಥರಾದ ಹಾರ್ದಿಕ್‌ ಪಾಂಡ್ಯರನ್ನು ಸೂಪರ್ ಓವರ್‌ನಲ್ಲಿ ಕಳುಹಿಸಿದೆವು. ನಾವು 7 ರನ್‌ಗಳನ್ನು ಗಳಿಸಿದ್ರೂ, ಬೌಲಿಂಗ್​ ವೇಳೆ ಬಿಟ್ಟುಕೊಟ್ಟ ಒಂದು ಅನಿರೀಕ್ಷಿತ ಬೌಂಡರಿಯಿಂದ ಪಂದ್ಯ ಸೋಲಬೇಕಾಯಿತು. ಆದರೆ, ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಿದ್ದ ರೀತಿ ಅದ್ಭುತವಾಗಿತ್ತು' ಎಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ದುಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋಲುತ್ತಿದ್ದ ಪಂದ್ಯವನ್ನು ತನ್ನ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈ ಆಗಲು ನೆರವಾಗಿದ್ದ ಯುವ ಬ್ಯಾಟ್ಸ್​ಮನ್​ ಇಶಾನ್ ಕಿಶನ್​ರನ್ನು ಸೂಪರ್​ ಓವರ್​ನಲ್ಲಿ ಆಡಿಸದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ಕಾರಣ ಬಹಿರಂಗಪಡಿಸಿದ್ದಾರೆ.

ಮುಂಬೈ ತಂಡ ಗೆಲ್ಲಲು ಕೊನೆಯ ನಾಲ್ಕು ಓವರ್​ಗಳಲ್ಲಿ 80 ರನ್​ಗಳ ಅವಶ್ಯಕತೆಯಿತ್ತು. ನಿಜಕ್ಕೂ ಆರ್​ಸಿಬಿಗೆ ಸುಲಭ ಜಯ ಸಿಗಬಹುದೆಂದೇ ನಿರೀಕ್ಷಿಸಲಾಗಿತ್ತು. ಆದರೆ, ಇಶಾನ್ ಕಿಶನ್ ಹಾಗೂ ಪೊಲಾರ್ಡ್​ ಪಂದ್ಯದ ಗತಿ ಬದಲಿಸಿದರು. ಈ ಜೋಡಿ 17ನೇ ಓವರ್​ನಲ್ಲಿ 27, 18ನೇ ಓವರ್​ನಲ್ಲಿ 22, 19 ಓವರ್​ನಲ್ಲಿ 12 ರನ್​ ಗಳಿಸಿತ್ತು.

ಕೊನೆಯ ಓವರ್​ನಲ್ಲಿ ಪಂದ್ಯ ಗೆಲ್ಲಲು 19 ರನ್​ಗಳ ಅವಶ್ಯಕತೆಯಿತ್ತು. ಮೊದಲೆರಡು ಎಸೆತಗಳಲ್ಲಿ ಸಿಂಗಲ್ಸ್ ಮಾತ್ರ ಬಂದಿದ್ದರಿಂದ 4 ಎಸೆತಗಳಲ್ಲಿ 17 ರನ್​ಗಳ ಅಗತ್ಯವಿತ್ತು. ಆದರೆ, ಕಿಶನ್, ಇಸುರು ಉದಾನ ಬೌಲಿಂಗ್​ನಲ್ಲಿ ಸತತ ಎರಡು ಸಿಕ್ಸರ್​ ಸಿಡಿಸಿ 5ನೇ ಎಸೆತದಲ್ಲಿ ಔಟಾದರು. ಕೊನೆಯ ಎಸೆತದಲ್ಲಿ 5 ರನ್​ಗಳ ಅವಶ್ಯಕತೆಯಿದ್ದಾಗ ಪೊಲಾರ್ಡ್​ ಫೋರ್​ ಸಿಡಿಸಿ ಪಂದ್ಯ ಟೈ ಆಗುವಂತೆ ಮಾಡಿದರು.

ಆದರೆ, ಸೂಪರ್​ ಓವರ್​ನಲ್ಲಿ ಪೊಲಾರ್ಡ್​ ಜೊತೆಗೆ ಕಿಶನ್​ ಬದಲಾಗಿ ಹಾರ್ದಿಕ್​ ಪಾಂಡ್ಯರನ್ನು ಕಳುಹಿಸಲಾಗಿತ್ತು. ಈ ಜೋಡಿ ಕೇವಲ 7 ರನ್​ಗಳಿಸಲಷ್ಟೇ ಶಕ್ತವಾಯಿತು. ಆರ್​ಸಿಬಿ 8 ರನ್​ಗಳನ್ನು ಚೇಸ್​ ಮಾಡಿ ಸುಲಭ ಜಯ ಸಾಧಿಸಿತು. ಆದರೆ, ಫಾರ್ಮ್​ನಲ್ಲಿದ್ದ ಹಾಗೂ ಸೈನಿಗೆ ಉತ್ತಮ ಬೌಂಡರಿ-ಸಿಕ್ಸರ್ ಸಿಡಿಸಿದ್ದ ಕಿಶನ್​ರನ್ನು ಏಕೆ ಬ್ಯಾಟಿಂಗ್‌ಗೆ ಕಳುಹಿಸಲಿಲ್ಲ ಎಂಬುದನ್ನು ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್ ಬಹಿರಂಗ ಪಡಿಸಿದ್ದಾರೆ.

'ಇಶಾನ್‌ ಕಿಶಾನ್‌ ಸುದೀರ್ಘ ಇನ್ನಿಂಗ್ಸ್​ ಆಡಿ ದಣಿದಿದ್ದರು. ಅವರು ಸೂಪರ್​ ಓವರ್​ ಸಂದರ್ಭದಲ್ಲಿ ಆರಾಮದಾಯಕವಾಗಿ ಕಾಣಿಸಲಿಲ್ಲ. ನಾವು ಕೂಡ ಅವರನ್ನೇ ಕಳುಹಿಸಬೇಕು ಎಂದುಕೊಂಡಿದ್ದೆವು. ಆದರೆ, ಅವರು ಫ್ರೆಶ್‌ ಆಗಿ ಕಾಣಿಸಿಲಿಲ್ಲ. ಹಾಗಾಗಿ, ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ಸಮರ್ಥರಾದ ಹಾರ್ದಿಕ್‌ ಪಾಂಡ್ಯರನ್ನು ಸೂಪರ್ ಓವರ್‌ನಲ್ಲಿ ಕಳುಹಿಸಿದೆವು. ನಾವು 7 ರನ್‌ಗಳನ್ನು ಗಳಿಸಿದ್ರೂ, ಬೌಲಿಂಗ್​ ವೇಳೆ ಬಿಟ್ಟುಕೊಟ್ಟ ಒಂದು ಅನಿರೀಕ್ಷಿತ ಬೌಂಡರಿಯಿಂದ ಪಂದ್ಯ ಸೋಲಬೇಕಾಯಿತು. ಆದರೆ, ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಿದ್ದ ರೀತಿ ಅದ್ಭುತವಾಗಿತ್ತು' ಎಂದು ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.