ETV Bharat / sports

ಐಸಿಸಿ ಎಲೈಟ್​ ಅಂಪೈರ್​ ಸಮಿತಿಗೆ ಸೇರ್ಪಡೆಗೊಂಡ ಕೇರಳದ ಅನಂತಪದ್ಮನಾಭನ್​

author img

By

Published : Aug 11, 2020, 12:20 PM IST

ಇತ್ತೀಚೆಗೆ ಭಾರತದ ಅಂಪೈರ್ ನಿತಿನ್ ಮೆನನ್ ಕೂಡ ಐಸಿಸಿ ಎಲೈಟ್ ಪ್ಯಾನಲ್‌ಗೆ ಬಡ್ತಿ ಪಡೆದಿದ್ದರು. ಇದೀಗ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಂತಸಗೊಂಡಿರುವ ಅವರು ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅನಂತಪದ್ಮನಾಭನ್​
ಅನಂತಪದ್ಮನಾಭನ್​

ತಿರುವನಂತಪುರಂ: 50 ವರ್ಷದ ಕೇರಳದ ಅನಂತ ಕೆಎನ್ ಅನಂತಪದ್ಮನಾಭನ್​ ಐಸಿಸಿ ಅಂಪೈರ್​ಗಳ ಸಮಿತಿಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಭಾರತದ ಅಂಪೈರ್ ನಿತಿನ್ ಮೆನನ್ ಕೂಡ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಬಡ್ತಿ ಪಡೆದಿದ್ದರು. ಇದೀಗ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಂತೋಷಗೊಂಡಿರುವ ಅವರು ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದೆ. ನಾನು ಆ ಹುದ್ದೆಯನ್ನು ಪಡೆಯುವನೆಂಬ ಭರವಸೆಯಿತ್ತು. ಈ ಸುದ್ದಿಯಿಂದ ತುಂಬಾ ಖುಷಿಯಾಗಿದೆ. ನಾನು ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಿದ್ದೆ. ಆದರೆ ಅನಿಲ್​ ಕುಂಬ್ಳೆ ಅದ್ಭುತ ಯಶಸ್ಸಿನ ಶಿಖರದಲ್ಲಿದ್ದರಿಂದ ನನಗೆ ಆ ಸಂದರ್ಭದಲ್ಲಿ ಅವಕಾಶ ಸಿಗಲಿಲ್ಲ. ಇಬ್ಬರು ಸಮಕಾಲೀನರಾಗಿದ್ದರಿಂದ ನಾನು ದೇಶಕ್ಕಾಗಿ ಆಡಲು ವಿಫಲನಾಗಿದ್ದೆ ಎಂದು ಕೇರಳದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.

ಐಪಿಎಲ್​ , ಜೂನಿಯರ್​ ವಿಶ್ವಕಪ್​, ರಣಜಿ ಕ್ರಿಕೆಟ್​ನಲ್ಲಿ ಅಂಪೈರ್​ ಅನುಭವ ಹೊಂದಿರುವ ಅನಂತ ಪದ್ಮನಾಭನ್​ ಕೇರಳ ಪರ 105 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 1998ರಿಂದ 2003-04ರವರೆಗೂ ಅವರು ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಅವರು ಭಾರತ ಎ ತಂಡದ ಪರವಾಗಿ ಸ್ಟಿವ್​ ವಾ ನೇತೃತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧವೂ 1998ರಲ್ಲಿ ಆಡಿದ್ದರು.

ಐಸಿಸಿಯಲ್ಲಿ ಭಾರತದ ಶ್ರೀನಿವಾಸ್​ ವೆಂಕಟರಾಘವನ್, ಸುಂದರಮ್​ ರವಿ, ಅನಿಲ್ ಚೌದರಿ, ಶಂಶುದ್ದೀನ್​, ವಿನೀತ್​ ಕುಲಕರ್ಣಿ, ಶವಿರ್​ ತಾರಾಪೊರೆ,ಅಮೀಶ್​ ಸಾಹೇಬ್​ ಹಾಗೂ ಶಂಕರ್​ ರಾಣಾ ಕಾರ್ಯ ನಿರ್ವಹಿಸಿದ್ದಾರೆ

ತಿರುವನಂತಪುರಂ: 50 ವರ್ಷದ ಕೇರಳದ ಅನಂತ ಕೆಎನ್ ಅನಂತಪದ್ಮನಾಭನ್​ ಐಸಿಸಿ ಅಂಪೈರ್​ಗಳ ಸಮಿತಿಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಭಾರತದ ಅಂಪೈರ್ ನಿತಿನ್ ಮೆನನ್ ಕೂಡ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಬಡ್ತಿ ಪಡೆದಿದ್ದರು. ಇದೀಗ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಸಂತೋಷಗೊಂಡಿರುವ ಅವರು ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದೆ. ನಾನು ಆ ಹುದ್ದೆಯನ್ನು ಪಡೆಯುವನೆಂಬ ಭರವಸೆಯಿತ್ತು. ಈ ಸುದ್ದಿಯಿಂದ ತುಂಬಾ ಖುಷಿಯಾಗಿದೆ. ನಾನು ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಿದ್ದೆ. ಆದರೆ ಅನಿಲ್​ ಕುಂಬ್ಳೆ ಅದ್ಭುತ ಯಶಸ್ಸಿನ ಶಿಖರದಲ್ಲಿದ್ದರಿಂದ ನನಗೆ ಆ ಸಂದರ್ಭದಲ್ಲಿ ಅವಕಾಶ ಸಿಗಲಿಲ್ಲ. ಇಬ್ಬರು ಸಮಕಾಲೀನರಾಗಿದ್ದರಿಂದ ನಾನು ದೇಶಕ್ಕಾಗಿ ಆಡಲು ವಿಫಲನಾಗಿದ್ದೆ ಎಂದು ಕೇರಳದ ಮಾಜಿ ನಾಯಕ ಹೇಳಿಕೊಂಡಿದ್ದಾರೆ.

ಐಪಿಎಲ್​ , ಜೂನಿಯರ್​ ವಿಶ್ವಕಪ್​, ರಣಜಿ ಕ್ರಿಕೆಟ್​ನಲ್ಲಿ ಅಂಪೈರ್​ ಅನುಭವ ಹೊಂದಿರುವ ಅನಂತ ಪದ್ಮನಾಭನ್​ ಕೇರಳ ಪರ 105 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 1998ರಿಂದ 2003-04ರವರೆಗೂ ಅವರು ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ಅವರು ಭಾರತ ಎ ತಂಡದ ಪರವಾಗಿ ಸ್ಟಿವ್​ ವಾ ನೇತೃತ್ವದ ಆಸ್ಟ್ರೇಲಿಯಾ ತಂಡದ ವಿರುದ್ಧವೂ 1998ರಲ್ಲಿ ಆಡಿದ್ದರು.

ಐಸಿಸಿಯಲ್ಲಿ ಭಾರತದ ಶ್ರೀನಿವಾಸ್​ ವೆಂಕಟರಾಘವನ್, ಸುಂದರಮ್​ ರವಿ, ಅನಿಲ್ ಚೌದರಿ, ಶಂಶುದ್ದೀನ್​, ವಿನೀತ್​ ಕುಲಕರ್ಣಿ, ಶವಿರ್​ ತಾರಾಪೊರೆ,ಅಮೀಶ್​ ಸಾಹೇಬ್​ ಹಾಗೂ ಶಂಕರ್​ ರಾಣಾ ಕಾರ್ಯ ನಿರ್ವಹಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.