ETV Bharat / sports

ವಿಶ್ವಕಪ್​ಗೆ ಈಗ ಜೀವ ಬಂದಿದೆ... ವಿರೇಂದ್ರ ಸೆಹ್ವಾಗ್​​ ಮಾತಿನ ಅರ್ಥವೇನು?

author img

By

Published : Jun 22, 2019, 10:03 PM IST

ವಿಶ್ವಕಪ್​ನ ಬಹುಪಾಲು ಪಂದ್ಯಗಳು ಏಕಪಕ್ಷೀಯವಾಗಿ ನಡೆಯುತ್ತಿದ್ದು, ಬಲಿಷ್ಠ ತಂಡಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲ್ಯಾಂಡ್ ಸೆಮಿಫೈನಲ್​ ತಲುಪಲಿವೆ ಎಂದು ನಿರೀಕ್ಷಿಸಲಾಗಿತ್ತು.

sehwag

ಲಂಡನ್​: ಭಾರತ ಕಂಡ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ಬಲಿಷ್ಠ ಇಂಗ್ಲೆಂಡ್​ ತಂ​ಡವನ್ನು ಮಣಿಸಿರುವುದಕ್ಕೆ ಅಭಿನಂದಿಸಿದ್ದು, ಈ ಫಲಿತಾಂಶ ವಿಶ್ವಕಪ್​ಗೆ ಜೀವ ತಂದಿದೆ ಎಂದಿದ್ದಾರೆ.

ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್​ 233 ರನ್ ಗುರಿ ತಲುಪಲಾಗದೇ ಲಂಕಾ ವಿರುದ್ಧ 20 ರನ್​ಗಳ ಸೋಲುನುಭವಿಸಿತ್ತು. ವಿಶ್ವಕಪ್​ನ ಬಹುಪಾಲು ಪಂದ್ಯಗಳು ಏಕಪಕ್ಷೀಯವಾಗಿ ನಡೆಯುತ್ತಿದ್ದು, ಬಲಿಷ್ಠ ತಂಡಗಳಾದ ಇಂಗ್ಲೆಂಡ್​​, ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲ್ಯಾಂಡ್​ ಸೆಮಿಫೈನಲ್​ ತಲುಪಲಿವೆ ಎಂದು ನಿರೀಕ್ಷಿಸಲಾಗಿತ್ತು.

ಇಂಗ್ಲೆಂಡ್​ ತಂಡ ಫೈನಲ್​ ಪ್ರವೇಶಿಸುತ್ತದೆ ಎಂದು ಕ್ರಿಕೆಟ್​ ತಜ್ಞರು ಭವಿಷ್ಯ ನುಡಿಯುತ್ತಿರುವಾಗಲೇ ಶ್ರೀಲಂಕಾದಂತಹ ಸಾಧಾರಣ ತಂಡದ ವಿರುದ್ಧವೇ ಸೋಲನುಭಿಸಿದೆ. ಇಂಗ್ಲೆಂಡ್​ ತನ್ನ ಮುಂದಿನ ಪಂದ್ಯಗಳಲ್ಲಿ ಭಲಿಷ್ಠ ತಂಡಗಳಾದ ನ್ಯೂಜಿಲ್ಯಾಂಡ್​, ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡಲಿರುವುದರಿಂದ ಟೂರ್ನಿಯಲ್ಲಿ ರೋಚಕ ಪಂದ್ಯಗಳು ನಡೆಯಲಿವೆ ಎಂಬರ್ಥದಲ್ಲಿ ಸೆಹ್ವಾಗ್​ ಟ್ವೀಟ್​​ ಮಾಡಿದ್ದಾರೆ.

  • Excellent performance from Sri Lanka to beat England.
    England have India, Australia and New Zealand to play with and will have to win 2 out of these 3.
    World Cup is alive #EngvSL

    — Virender Sehwag (@virendersehwag) June 21, 2019 " class="align-text-top noRightClick twitterSection" data=" ">

ಈಗಾಗಲೇ 10 ಅಂಕ ಹೊಂದಿರುವ ಆಸ್ಟ್ರೇಲಿಯಾಗೆ ಇನ್ನೊಂದು ಗೆಲುವು ಸಿಕ್ಕರೆ ಸಾಕು ಸೆಮಿಫೈನಲ್​ ಪ್ರವೇಶಿಸಲಿದೆ. ಇನ್ನು ನ್ಯೂಜಿಲ್ಯಾಂಡ್ ​ಕೂಡ ಒಂದು ಪಂದ್ಯ ಗೆದ್ದರೆ ಸಾಕು ರನ್​ ರೇಟ್​ ಆಧಾರದ ಮೇಲೆ ಸೆಮಿಫೈನಲ್​ ಖಚಿತಗೊಳಿಸಿಕೊಳ್ಳಲಿದೆ. ಇನ್ನು ಭಾರತ ತಂಡದ ಬಳಿ ಕೂಡ 7 ಅಂಕಗಳಿದ್ದು, ಟೂರ್ನಿಯಲ್ಲಿ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್​ ಹಾಗೂ ವಿಂಡೀಸ್ ​ ವಿರುದ್ಧ ಸೆಣಸಲಿದೆ. ಇದರಲ್ಲಿ ಇಂಗ್ಲೆಂಡ್​ ವಿರುದ್ಧ ಬಿಟ್ಟರೆ ಇನ್ನೆಲ್ಲಾ ಪಂದ್ಯಗಳಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇದೀಗ ಶ್ರೀಲಂಕಾ ಕೂಡ ಸೆಮಿಫೈನಲ್​ ರೇಸ್​ಗೆ ಎಂಟ್ರಿ ಕೊಟ್ಟಿದೆ. ಇದರ ಜೊತೆ ಬಾಂಗ್ಲಾದೇಶ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಟೂರ್ನಿ ಖಂಡಿತ ಕೂತೂಹಲ ಘಟ್ಟ ತಲುಪಲಿದೆ. ಒಟ್ಟಿನಲ್ಲಿ ಏಕಮುಖವಾಗಿ ಸಾಗುತ್ತಿದ್ದ ವಿಶ್ವಕಪ್​ ಟೂರ್ನಮೆಂಟ್​ಗೆ ಲಂಕಾ ತಂಡ ಇಂಗ್ಲೆಂಡ್​ ತಂಡವನ್ನು ಮಣಿಸುವ ಮೂಲಕ ರೋಚಕ ತಿರುವು ತಂದು ಕೊಟ್ಟಿದೆ.

ಲಂಡನ್​: ಭಾರತ ಕಂಡ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ಬಲಿಷ್ಠ ಇಂಗ್ಲೆಂಡ್​ ತಂ​ಡವನ್ನು ಮಣಿಸಿರುವುದಕ್ಕೆ ಅಭಿನಂದಿಸಿದ್ದು, ಈ ಫಲಿತಾಂಶ ವಿಶ್ವಕಪ್​ಗೆ ಜೀವ ತಂದಿದೆ ಎಂದಿದ್ದಾರೆ.

ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್​ 233 ರನ್ ಗುರಿ ತಲುಪಲಾಗದೇ ಲಂಕಾ ವಿರುದ್ಧ 20 ರನ್​ಗಳ ಸೋಲುನುಭವಿಸಿತ್ತು. ವಿಶ್ವಕಪ್​ನ ಬಹುಪಾಲು ಪಂದ್ಯಗಳು ಏಕಪಕ್ಷೀಯವಾಗಿ ನಡೆಯುತ್ತಿದ್ದು, ಬಲಿಷ್ಠ ತಂಡಗಳಾದ ಇಂಗ್ಲೆಂಡ್​​, ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲ್ಯಾಂಡ್​ ಸೆಮಿಫೈನಲ್​ ತಲುಪಲಿವೆ ಎಂದು ನಿರೀಕ್ಷಿಸಲಾಗಿತ್ತು.

ಇಂಗ್ಲೆಂಡ್​ ತಂಡ ಫೈನಲ್​ ಪ್ರವೇಶಿಸುತ್ತದೆ ಎಂದು ಕ್ರಿಕೆಟ್​ ತಜ್ಞರು ಭವಿಷ್ಯ ನುಡಿಯುತ್ತಿರುವಾಗಲೇ ಶ್ರೀಲಂಕಾದಂತಹ ಸಾಧಾರಣ ತಂಡದ ವಿರುದ್ಧವೇ ಸೋಲನುಭಿಸಿದೆ. ಇಂಗ್ಲೆಂಡ್​ ತನ್ನ ಮುಂದಿನ ಪಂದ್ಯಗಳಲ್ಲಿ ಭಲಿಷ್ಠ ತಂಡಗಳಾದ ನ್ಯೂಜಿಲ್ಯಾಂಡ್​, ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡಲಿರುವುದರಿಂದ ಟೂರ್ನಿಯಲ್ಲಿ ರೋಚಕ ಪಂದ್ಯಗಳು ನಡೆಯಲಿವೆ ಎಂಬರ್ಥದಲ್ಲಿ ಸೆಹ್ವಾಗ್​ ಟ್ವೀಟ್​​ ಮಾಡಿದ್ದಾರೆ.

  • Excellent performance from Sri Lanka to beat England.
    England have India, Australia and New Zealand to play with and will have to win 2 out of these 3.
    World Cup is alive #EngvSL

    — Virender Sehwag (@virendersehwag) June 21, 2019 " class="align-text-top noRightClick twitterSection" data=" ">

ಈಗಾಗಲೇ 10 ಅಂಕ ಹೊಂದಿರುವ ಆಸ್ಟ್ರೇಲಿಯಾಗೆ ಇನ್ನೊಂದು ಗೆಲುವು ಸಿಕ್ಕರೆ ಸಾಕು ಸೆಮಿಫೈನಲ್​ ಪ್ರವೇಶಿಸಲಿದೆ. ಇನ್ನು ನ್ಯೂಜಿಲ್ಯಾಂಡ್ ​ಕೂಡ ಒಂದು ಪಂದ್ಯ ಗೆದ್ದರೆ ಸಾಕು ರನ್​ ರೇಟ್​ ಆಧಾರದ ಮೇಲೆ ಸೆಮಿಫೈನಲ್​ ಖಚಿತಗೊಳಿಸಿಕೊಳ್ಳಲಿದೆ. ಇನ್ನು ಭಾರತ ತಂಡದ ಬಳಿ ಕೂಡ 7 ಅಂಕಗಳಿದ್ದು, ಟೂರ್ನಿಯಲ್ಲಿ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್​ ಹಾಗೂ ವಿಂಡೀಸ್ ​ ವಿರುದ್ಧ ಸೆಣಸಲಿದೆ. ಇದರಲ್ಲಿ ಇಂಗ್ಲೆಂಡ್​ ವಿರುದ್ಧ ಬಿಟ್ಟರೆ ಇನ್ನೆಲ್ಲಾ ಪಂದ್ಯಗಳಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇದೀಗ ಶ್ರೀಲಂಕಾ ಕೂಡ ಸೆಮಿಫೈನಲ್​ ರೇಸ್​ಗೆ ಎಂಟ್ರಿ ಕೊಟ್ಟಿದೆ. ಇದರ ಜೊತೆ ಬಾಂಗ್ಲಾದೇಶ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಟೂರ್ನಿ ಖಂಡಿತ ಕೂತೂಹಲ ಘಟ್ಟ ತಲುಪಲಿದೆ. ಒಟ್ಟಿನಲ್ಲಿ ಏಕಮುಖವಾಗಿ ಸಾಗುತ್ತಿದ್ದ ವಿಶ್ವಕಪ್​ ಟೂರ್ನಮೆಂಟ್​ಗೆ ಲಂಕಾ ತಂಡ ಇಂಗ್ಲೆಂಡ್​ ತಂಡವನ್ನು ಮಣಿಸುವ ಮೂಲಕ ರೋಚಕ ತಿರುವು ತಂದು ಕೊಟ್ಟಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.