ETV Bharat / sitara

ಶೂಟಿಂಗ್​​​ನಿಂದ ಬ್ರೇಕ್ ಪಡೆದು ಹಿಮದ ನಡುವೆ ಎಂಜಾಯ್ ಮಾಡುತ್ತಿರುವ ತೇಜಸ್ವಿನಿ - Nannarasi Radhe actress Tejaswini Prakash

ನಟಿ ತೇಜಸ್ವಿನಿ ಈಗ ಕಾಶ್ಮೀರ ಟ್ರಿಪ್​​​ನಲ್ಲಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯ ಪಾತ್ರಧಾರಿಯಾಗಿ ನಟಿಸುತ್ತಿರುವ ತೇಜಸ್ವಿನಿ ಶೂಟಿಂಗ್​​ನಿಂದ ಬ್ರೇಕ್ ಪಡೆದು ಹಿಮದ ನಡುವೆ ಎಂಜಾಯ್ ಮಾಡುತ್ತಾ ವಿಶ್ರಾಂತಿ ಪಡೆಯುತ್ತಿದ್ದಾರೆ.

Tejaswini Prakash
ತೇಜಸ್ವಿನಿ
author img

By

Published : Feb 6, 2021, 6:40 AM IST

ಸಿನಿಮಾ, ಕಿರುತೆರೆ ಕಲಾವಿದರು ಯಾವಾಗಲೂ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಾರೆ. ಅವರಿಗೆ ಇಂತ ಸಮಯ ಎಂದೇ ಇರುವುದಿಲ್ಲ. ಕರೆ ಬಂದರೆ ಈಗಿಂದೀಗಲೇ ಲೊಕೇಶನ್​​​ಗೆ ಹೋಗಲು ರೆಡಿ ಇರಬೇಕು. ಈ ಬ್ಯುಸಿ ಶೆಡ್ಯೂಲ್ ನಡುವೆ ಸ್ವಲ್ಪ ಬಿಡುವು ದೊರೆತರೂ ಸಾಕು ಎಲ್ಲಾದರೂ ಹೊರಗೆ ಹೋಗಿ ವಿಶ್ರಾಂತಿ ಪಡೆದು ಬರೋಣ ಎನ್ನಿಸುವುದು ಗ್ಯಾರಂಟಿ.

ಇದನ್ನೂ ಓದಿ: ಬಿಎಎಫ್​ಟಿಎ ಪ್ರಶಸ್ತಿಗೆ ಆಯ್ಕೆಯಾದ ಪಿಗ್ಗಿ...ಸಂತೋಷ ಹಂಚಿಕೊಂಡ ಸಹೋದರಿ ಪರಿಣಿತಿ

ಮೋಕ್ಷಿತಾ, ರಕ್ಷ್, ರಿತ್ವಿಕ್ ಮಠದ್ ಸೇರಿ ಅನೇಕ ಕಲಾವಿದರು ಬ್ರೇಕ್ ಪಡೆದು ಮೆಚ್ಚಿನ ಸ್ಥಳಗಳಿಗೆ ತೆರಳಿ ಎಂಜಾಯ್ ಮಾಡಿ ಬಂದಿದ್ದಾರೆ. ನಟಿ ತೇಜಸ್ವಿನಿ ಪ್ರಕಾಶ್ ಕೂಡಾ ಬಿಡುವಿಲ್ಲದ ಶೂಟಿಂಗ್​​​​​​​​​​​ನಿಂದ ಬಿಡುವು ಪಡೆದು ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯ ಎಂಬ ಖಳನಾಯಕಿ ಆಗಿ ನಟಿಸುತ್ತಿರುವ ತೇಜಸ್ವಿನಿ ಪ್ರಕಾಶ್ ಈಗ ಜಾಲಿ ಮೂಡ್​​​ನಲ್ಲಿದ್ದು ಕಾಶ್ಮೀರಕ್ಕೆ ತೆರಳಿದ್ದಾರೆ. ಹಿಮದ ನಡುವೆ ಪುಟ್ಟ ಮಕ್ಕಳಂತೆ ಎಂಜಾಯ್ ಮಾಡುತ್ತಿದ್ದಾರೆ. ಕಾಶ್ಮೀರದ ರಸ್ತೆಗಳಲ್ಲಿ ಓಡಾಡಿದ್ದಾರೆ. ಅಲ್ಲಿನ ಆಹಾರವನ್ನು ಕೂಡಾ ಸವಿದಿದ್ದಾರೆ. ಪ್ರವಾಸದಲ್ಲಿದ್ದರೂ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ತೇಜಸ್ವಿನಿ ಇನ್ಸ್ಟಾಗ್ರಾಮ್​​ನಲ್ಲಿ ತಮ್ಮ ಟ್ರಿಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತೇಜಸ್ವಿನಿ ಬಿಗ್​​​ ಬಾಸ್​ ಸೀಸನ್ 5 ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ ಆ ಸಮಯದಲ್ಲಿ ತಂದೆಗೆ ಅನಾರೋಗ್ಯ ಕಾಡಿದ ಕಾರಣ ಸ್ಪರ್ಧೆಯಿಂದ ಅರ್ಧಕ್ಕೆ ಹೊರ ಬಂದಿದ್ದರು.

ಸಿನಿಮಾ, ಕಿರುತೆರೆ ಕಲಾವಿದರು ಯಾವಾಗಲೂ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಾರೆ. ಅವರಿಗೆ ಇಂತ ಸಮಯ ಎಂದೇ ಇರುವುದಿಲ್ಲ. ಕರೆ ಬಂದರೆ ಈಗಿಂದೀಗಲೇ ಲೊಕೇಶನ್​​​ಗೆ ಹೋಗಲು ರೆಡಿ ಇರಬೇಕು. ಈ ಬ್ಯುಸಿ ಶೆಡ್ಯೂಲ್ ನಡುವೆ ಸ್ವಲ್ಪ ಬಿಡುವು ದೊರೆತರೂ ಸಾಕು ಎಲ್ಲಾದರೂ ಹೊರಗೆ ಹೋಗಿ ವಿಶ್ರಾಂತಿ ಪಡೆದು ಬರೋಣ ಎನ್ನಿಸುವುದು ಗ್ಯಾರಂಟಿ.

ಇದನ್ನೂ ಓದಿ: ಬಿಎಎಫ್​ಟಿಎ ಪ್ರಶಸ್ತಿಗೆ ಆಯ್ಕೆಯಾದ ಪಿಗ್ಗಿ...ಸಂತೋಷ ಹಂಚಿಕೊಂಡ ಸಹೋದರಿ ಪರಿಣಿತಿ

ಮೋಕ್ಷಿತಾ, ರಕ್ಷ್, ರಿತ್ವಿಕ್ ಮಠದ್ ಸೇರಿ ಅನೇಕ ಕಲಾವಿದರು ಬ್ರೇಕ್ ಪಡೆದು ಮೆಚ್ಚಿನ ಸ್ಥಳಗಳಿಗೆ ತೆರಳಿ ಎಂಜಾಯ್ ಮಾಡಿ ಬಂದಿದ್ದಾರೆ. ನಟಿ ತೇಜಸ್ವಿನಿ ಪ್ರಕಾಶ್ ಕೂಡಾ ಬಿಡುವಿಲ್ಲದ ಶೂಟಿಂಗ್​​​​​​​​​​​ನಿಂದ ಬಿಡುವು ಪಡೆದು ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯ ಎಂಬ ಖಳನಾಯಕಿ ಆಗಿ ನಟಿಸುತ್ತಿರುವ ತೇಜಸ್ವಿನಿ ಪ್ರಕಾಶ್ ಈಗ ಜಾಲಿ ಮೂಡ್​​​ನಲ್ಲಿದ್ದು ಕಾಶ್ಮೀರಕ್ಕೆ ತೆರಳಿದ್ದಾರೆ. ಹಿಮದ ನಡುವೆ ಪುಟ್ಟ ಮಕ್ಕಳಂತೆ ಎಂಜಾಯ್ ಮಾಡುತ್ತಿದ್ದಾರೆ. ಕಾಶ್ಮೀರದ ರಸ್ತೆಗಳಲ್ಲಿ ಓಡಾಡಿದ್ದಾರೆ. ಅಲ್ಲಿನ ಆಹಾರವನ್ನು ಕೂಡಾ ಸವಿದಿದ್ದಾರೆ. ಪ್ರವಾಸದಲ್ಲಿದ್ದರೂ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ತೇಜಸ್ವಿನಿ ಇನ್ಸ್ಟಾಗ್ರಾಮ್​​ನಲ್ಲಿ ತಮ್ಮ ಟ್ರಿಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತೇಜಸ್ವಿನಿ ಬಿಗ್​​​ ಬಾಸ್​ ಸೀಸನ್ 5 ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ ಆ ಸಮಯದಲ್ಲಿ ತಂದೆಗೆ ಅನಾರೋಗ್ಯ ಕಾಡಿದ ಕಾರಣ ಸ್ಪರ್ಧೆಯಿಂದ ಅರ್ಧಕ್ಕೆ ಹೊರ ಬಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.