ETV Bharat / sitara

ಲಾಕ್​ಡೌನ್ ಸಡಿಲಿಕೆ ನಂತರ ಕಿರುತೆರೆಯಲ್ಲಿ ಸುಧಾರಣೆ...ಹೊಸ ಧಾರಾವಾಹಿಗಳ ಪ್ರಸಾರ ಆರಂಭ

author img

By

Published : Nov 19, 2020, 11:07 AM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ'ಮನಸೆಲ್ಲಾ ನೀನೆ' ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈ ಧಾರಾವಾಹಿಯಲ್ಲಿ ರಶ್ಮಿ ಪ್ರಭಾಕರ್ ನಾಯಕಿಯಾಗಿ, ಸುಜಿತ್ ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ವಾಹಿನಿಯಲ್ಲಿ ಧಾರಾವಾಹಿಯ ಪ್ರೋಮೋ ಪ್ರಸಾರವಾಗುತ್ತಿದ್ದು ನವೆಂಬರ್ 30 ರಿಂದ ಪ್ರಸಾರ ಕಾಣುತ್ತಿದೆ.

Manasella neene serial
'ಮನಸೆಲ್ಲಾ ನೀನೆ'

ಲಾಕ್​ಡೌನ್ ಸಡಿಲಿಕೆ ನಂತರ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಿಧಾನವಾಗಿ ಸುಧಾರಣೆ ಕಾಣುತ್ತಿದೆ. ಒಂದೊಂದೇ ಹೊಸ ಧಾರಾವಾಹಿಗಳು ಆರಂಭವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಇತ್ತಿಚೆಗೆ 'ಹೂಮಳೆ' ಎಂಬ ಧಾರಾವಾಹಿ ಆರಂಭವಾಗಿತ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ.

'ಮನಸೆಲ್ಲಾ ನೀನೇ' ಎಂಬ ಧಾರಾವಾಹಿ ಇದೇ ತಿಂಗಳ ಕೊನೆಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಈ ಧಾರಾವಾಹಿಯನ್ನು ಶ್ರುತಿ ನಾಯ್ಡು ನಿರ್ದೇಶಿಸುತ್ತಿದ್ದು ಧಾರಾವಾಹಿಯ ಪ್ರೋಮೋ ಕೂಡಾ ಪ್ರಸಾರವಾಗುತ್ತಿದೆ. ಕಿರುತೆರೆಪ್ರಿಯರೂ ಕೂಡಾ ಹೊಸ ಧಾರಾವಾಹಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಕಥಾನಾಯಕಿ ರಾಗಾಳಿಗೆ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮೆಹಂದಿಯೂ ನಡೆಯುತ್ತಿದೆ. ಇದರ ಮಧ್ಯೆ ಒಂದು ಮಗು ಬಂದು ರಾಗಾಳನ್ನು ಅಮ್ಮ ಎಂದು ಕರೆಯುವ ದೃಶ್ಯ ಪ್ರೋಮೋದಲ್ಲಿದೆ. ಈ ಮಗು ಯಾರು...? ನಿಜಕ್ಕೂ ಇದು ರಾಗಾಳಾ ಮಗುವಾ...? ಅಂದರೆ ನಾಯಕಿ ರಾಗಾಳಿಗೆ ಈ ಹಿಂದೆಯೇ ಮದುವೆಯಾಗಿತ್ತಾ..? ಎಂಬ ಕುತೂಹಲ ಪ್ರೋಮೋ ನೋಡಿದಾಗ ಸಹಜವಾಗಿ ಮೂಡುತ್ತದೆ. ಧಾರಾವಾಹಿ ಆರಂಭವಾದಾಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

Manasella neene serial
ಹೊಸ ಧಾರಾವಾಹಿಯಲ್ಲಿ ಸುಜಿತ್, ರಶ್ಮಿ

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ರಶ್ಮಿ ಪ್ರಭಾಕರ್ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿ ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲೂ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ''ಶ್ರುತಿ ನಾಯ್ಡು ಅವರಂತ ಖ್ಯಾತ ನಿರ್ದೇಶಕಿಯೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಪ್ರಾಜೆಕ್ಟ್​​​​​​​​​​ನಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ'' ಎಂದಿದ್ದಾರೆ ರಶ್ಮಿ. 'ಜೀವನದಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸುಜಿತ್ ಗೌಡ ಈ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಲಿದ್ದಾರೆ.

Manasella neene serial
ಶ್ರುತಿ ನಾಯ್ಡು

ನವೆಂಬರ್ 30ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9-30ಕ್ಕೆ ಈ 'ಮನಸೆಲ್ಲಾ ನೀನೇ' ಧಾರಾವಾಹಿ ಪ್ರಸಾರಗೊಳ್ಳಲಿದೆ.

ಲಾಕ್​ಡೌನ್ ಸಡಿಲಿಕೆ ನಂತರ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ನಿಧಾನವಾಗಿ ಸುಧಾರಣೆ ಕಾಣುತ್ತಿದೆ. ಒಂದೊಂದೇ ಹೊಸ ಧಾರಾವಾಹಿಗಳು ಆರಂಭವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಇತ್ತಿಚೆಗೆ 'ಹೂಮಳೆ' ಎಂಬ ಧಾರಾವಾಹಿ ಆರಂಭವಾಗಿತ್ತು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ.

'ಮನಸೆಲ್ಲಾ ನೀನೇ' ಎಂಬ ಧಾರಾವಾಹಿ ಇದೇ ತಿಂಗಳ ಕೊನೆಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಈ ಧಾರಾವಾಹಿಯನ್ನು ಶ್ರುತಿ ನಾಯ್ಡು ನಿರ್ದೇಶಿಸುತ್ತಿದ್ದು ಧಾರಾವಾಹಿಯ ಪ್ರೋಮೋ ಕೂಡಾ ಪ್ರಸಾರವಾಗುತ್ತಿದೆ. ಕಿರುತೆರೆಪ್ರಿಯರೂ ಕೂಡಾ ಹೊಸ ಧಾರಾವಾಹಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. 'ಮನಸೆಲ್ಲಾ ನೀನೆ' ಧಾರಾವಾಹಿಯಲ್ಲಿ ಕಥಾನಾಯಕಿ ರಾಗಾಳಿಗೆ ಮದುವೆ ತಯಾರಿ ನಡೆದಿದೆ. ಅದ್ಧೂರಿಯಾಗಿ ಮೆಹಂದಿಯೂ ನಡೆಯುತ್ತಿದೆ. ಇದರ ಮಧ್ಯೆ ಒಂದು ಮಗು ಬಂದು ರಾಗಾಳನ್ನು ಅಮ್ಮ ಎಂದು ಕರೆಯುವ ದೃಶ್ಯ ಪ್ರೋಮೋದಲ್ಲಿದೆ. ಈ ಮಗು ಯಾರು...? ನಿಜಕ್ಕೂ ಇದು ರಾಗಾಳಾ ಮಗುವಾ...? ಅಂದರೆ ನಾಯಕಿ ರಾಗಾಳಿಗೆ ಈ ಹಿಂದೆಯೇ ಮದುವೆಯಾಗಿತ್ತಾ..? ಎಂಬ ಕುತೂಹಲ ಪ್ರೋಮೋ ನೋಡಿದಾಗ ಸಹಜವಾಗಿ ಮೂಡುತ್ತದೆ. ಧಾರಾವಾಹಿ ಆರಂಭವಾದಾಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

Manasella neene serial
ಹೊಸ ಧಾರಾವಾಹಿಯಲ್ಲಿ ಸುಜಿತ್, ರಶ್ಮಿ

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ರಶ್ಮಿ ಪ್ರಭಾಕರ್ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿ ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲೂ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ''ಶ್ರುತಿ ನಾಯ್ಡು ಅವರಂತ ಖ್ಯಾತ ನಿರ್ದೇಶಕಿಯೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಪ್ರಾಜೆಕ್ಟ್​​​​​​​​​​ನಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ'' ಎಂದಿದ್ದಾರೆ ರಶ್ಮಿ. 'ಜೀವನದಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸುಜಿತ್ ಗೌಡ ಈ ಧಾರಾವಾಹಿಯಲ್ಲಿ ನಾಯಕರಾಗಿ ನಟಿಸಲಿದ್ದಾರೆ.

Manasella neene serial
ಶ್ರುತಿ ನಾಯ್ಡು

ನವೆಂಬರ್ 30ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9-30ಕ್ಕೆ ಈ 'ಮನಸೆಲ್ಲಾ ನೀನೇ' ಧಾರಾವಾಹಿ ಪ್ರಸಾರಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.