ETV Bharat / sitara

ಆ ಕಮಲಿಗೂ, ಈ ಅಮೂಲ್ಯ ಗೌಡಗೂ ಎತ್ತಣಿಂದೆತ್ತ ಸಂಬಂಧವಯ್ಯಾ.. - ಕಮಲಿ ಖ್ಯಾತಿಯ ಅಮೂಲ್ಯ ಗೌಡ ಬಗ್ಗೆ ಒಂದಿಷ್ಟು ಮಾಹಿತಿ

ಗ್ರಾಮೀಣ ಹೆಣ್ಣು ಮಗಳು ಕಮಲಿ ಪಾತ್ರದಲ್ಲಿ ನಿಮ್ಮೆಲ್ಲರನ್ನು ಸೆಳೆದಿರುವ ಈಕೆಯ ಹೆಸರು ಅಮೂಲ್ಯ ಗೌಡ. ಎರಡು ಜಡೆ ಕಟ್ಟಿ, ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಶೈಲಿಯಲ್ಲಿ ಮಾತನಾಡುವ ಕಮಲಿ ಅಭಿನಯಕ್ಕೆ ಮನಸೋಲದವರಿಲ್ಲ.

ಕಮಲಿ ಖ್ಯಾತಿಯ ಅಮೂಲ್ಯ ಗೌಡ
author img

By

Published : Oct 19, 2019, 10:55 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಕಮಲಿ' ಕೂಡಾ ಒಂದು. ಓದುವ ಮಹದಾಸೆ ಹೊತ್ತ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯಲು ಹಳ್ಳಿಯಿಂದ ನಗರಕ್ಕೆ ಬಂದು ಅಲ್ಲಿ ಏನೆಲ್ಲಾ ಕಷ್ಟ, ಅವಮಾನಗಳನ್ನು ಎದುರಿಸುತ್ತಾಳೆ ಎಂಬ ಕಥೆ ಹೊಂದಿರುವ ಧಾರಾವಾಹಿ ಇದು.

amulya gowda
ಅಮೂಲ್ಯ ಗೌಡ

ಇನ್ನು, ಗ್ರಾಮೀಣ ಹೆಣ್ಣು ಮಗಳು ಕಮಲಿ ಪಾತ್ರದಲ್ಲಿ ನಿಮ್ಮೆಲ್ಲರನ್ನು ಸೆಳೆದಿರುವ ಈಕೆಯ ಹೆಸರು ಅಮೂಲ್ಯ ಗೌಡ. ಎರಡು ಜಡೆ ಕಟ್ಟಿ, ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಶೈಲಿಯಲ್ಲಿ ಮಾತನಾಡುವ ಕಮಲಿ ಅಭಿನಯಕ್ಕೆ ಮನಸೋಲದವರಿಲ್ಲ. ಅರಮನೆ ನಗರಿ, ಮೈಸೂರಿನ ಚೆಲುವೆ ಅಮೂಲ್ಯ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸ್ವಾತಿಮುತ್ತು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಮುಂದೆ 'ಪುನರ್ ವಿವಾಹ'ದಲ್ಲಿ ಸ್ವಾತಿ ಪಾತ್ರದಲ್ಲಿ ನಟಿಸಿದ ಚೆಂದುಳ್ಳಿ ಚೆಲುವೆ ವೀಕ್ಷಕರಿಗೆ ಹತ್ತಿರವಾದದ್ದು ಉದಯ ವಾಹಿನಿ ಮೂಲಕ. 'ಅರಮನೆ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇಂದು ಸೀರಿಯಲ್ ಪ್ರಿಯರ ಪ್ರೀತಿಯ ಕಮಲಿ.

ಕಮಲಿ ಖ್ಯಾತಿಯ ಅಮೂಲ್ಯ ಗೌಡ

ಕೆಲವೇ ಕೆಲವು ಧಾರಾವಾಹಿಗಳಲ್ಲಿ ಅಮೂಲ್ಯ ಅಭಿನಯಿಸಿದ್ದರೂ ಕಮಲಿಯನ್ನು ವೀಕ್ಷಕರು ಎಂದೂ ಮರೆತಿಲ್ಲ. ನಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವುದೇ ಕಲಾವಿದರಾದ ನಮಗೆ ಬಹು ದೊಡ್ಡ ಜವಾಬ್ದಾರಿ. ನಾವು ಮಾಡುವ ಪಾತ್ರ ಜನರ ಮನಸ್ಸಿಗೆ ತಲುಪಿದಾಗ ಮಾತ್ರ ನಾವು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎನ್ನುವ ಅಮೂಲ್ಯ ನಟನೆಯ ಬಗ್ಗೆ ಯಾವುದೇ ತರಬೇತಿ ಪಡೆದವರಲ್ಲ. ಸಿನಿಮಾಗಳಿಂದ ಸಾಕಷ್ಟು ಆಫರ್​​​ಗಳಿದ್ದರೂ ಸದ್ಯ ಅಮೂಲ್ಯ ಚಿತ್ತ ಏನಿದ್ದರೂ ಕಮಲಿಯತ್ತ. ಎರಡು ಕಡೆ ಏಕಕಾಲದಲ್ಲಿ ಗಮನ ಹರಿಸಲು ಕಷ್ಟ ಎಂಬುದು ಅಮೂಲ್ಯ ಅಭಿಪ್ರಾಯ. ಜೀ ಕುಟುಂಬ ಅವಾರ್ಡ್ 2019ರ ಉತ್ತಮ ನಟಿ ಪ್ರಶಸ್ತಿ ಪಡೆಯುವ ಮೂಲಕ ಜನರಿಗೆ ತಾನು ಎಷ್ಟು ಹತ್ತಿರವಾಗಿದ್ದೇನೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ ಅಮೂಲ್ಯ.

amulya gowda
ಮಾಡ್ರನ್ ಲುಕ್​ನಲ್ಲಿ ಅಮೂಲ್ಯ ಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಕಮಲಿ' ಕೂಡಾ ಒಂದು. ಓದುವ ಮಹದಾಸೆ ಹೊತ್ತ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯಲು ಹಳ್ಳಿಯಿಂದ ನಗರಕ್ಕೆ ಬಂದು ಅಲ್ಲಿ ಏನೆಲ್ಲಾ ಕಷ್ಟ, ಅವಮಾನಗಳನ್ನು ಎದುರಿಸುತ್ತಾಳೆ ಎಂಬ ಕಥೆ ಹೊಂದಿರುವ ಧಾರಾವಾಹಿ ಇದು.

amulya gowda
ಅಮೂಲ್ಯ ಗೌಡ

ಇನ್ನು, ಗ್ರಾಮೀಣ ಹೆಣ್ಣು ಮಗಳು ಕಮಲಿ ಪಾತ್ರದಲ್ಲಿ ನಿಮ್ಮೆಲ್ಲರನ್ನು ಸೆಳೆದಿರುವ ಈಕೆಯ ಹೆಸರು ಅಮೂಲ್ಯ ಗೌಡ. ಎರಡು ಜಡೆ ಕಟ್ಟಿ, ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಶೈಲಿಯಲ್ಲಿ ಮಾತನಾಡುವ ಕಮಲಿ ಅಭಿನಯಕ್ಕೆ ಮನಸೋಲದವರಿಲ್ಲ. ಅರಮನೆ ನಗರಿ, ಮೈಸೂರಿನ ಚೆಲುವೆ ಅಮೂಲ್ಯ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸ್ವಾತಿಮುತ್ತು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಮುಂದೆ 'ಪುನರ್ ವಿವಾಹ'ದಲ್ಲಿ ಸ್ವಾತಿ ಪಾತ್ರದಲ್ಲಿ ನಟಿಸಿದ ಚೆಂದುಳ್ಳಿ ಚೆಲುವೆ ವೀಕ್ಷಕರಿಗೆ ಹತ್ತಿರವಾದದ್ದು ಉದಯ ವಾಹಿನಿ ಮೂಲಕ. 'ಅರಮನೆ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇಂದು ಸೀರಿಯಲ್ ಪ್ರಿಯರ ಪ್ರೀತಿಯ ಕಮಲಿ.

ಕಮಲಿ ಖ್ಯಾತಿಯ ಅಮೂಲ್ಯ ಗೌಡ

ಕೆಲವೇ ಕೆಲವು ಧಾರಾವಾಹಿಗಳಲ್ಲಿ ಅಮೂಲ್ಯ ಅಭಿನಯಿಸಿದ್ದರೂ ಕಮಲಿಯನ್ನು ವೀಕ್ಷಕರು ಎಂದೂ ಮರೆತಿಲ್ಲ. ನಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವುದೇ ಕಲಾವಿದರಾದ ನಮಗೆ ಬಹು ದೊಡ್ಡ ಜವಾಬ್ದಾರಿ. ನಾವು ಮಾಡುವ ಪಾತ್ರ ಜನರ ಮನಸ್ಸಿಗೆ ತಲುಪಿದಾಗ ಮಾತ್ರ ನಾವು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎನ್ನುವ ಅಮೂಲ್ಯ ನಟನೆಯ ಬಗ್ಗೆ ಯಾವುದೇ ತರಬೇತಿ ಪಡೆದವರಲ್ಲ. ಸಿನಿಮಾಗಳಿಂದ ಸಾಕಷ್ಟು ಆಫರ್​​​ಗಳಿದ್ದರೂ ಸದ್ಯ ಅಮೂಲ್ಯ ಚಿತ್ತ ಏನಿದ್ದರೂ ಕಮಲಿಯತ್ತ. ಎರಡು ಕಡೆ ಏಕಕಾಲದಲ್ಲಿ ಗಮನ ಹರಿಸಲು ಕಷ್ಟ ಎಂಬುದು ಅಮೂಲ್ಯ ಅಭಿಪ್ರಾಯ. ಜೀ ಕುಟುಂಬ ಅವಾರ್ಡ್ 2019ರ ಉತ್ತಮ ನಟಿ ಪ್ರಶಸ್ತಿ ಪಡೆಯುವ ಮೂಲಕ ಜನರಿಗೆ ತಾನು ಎಷ್ಟು ಹತ್ತಿರವಾಗಿದ್ದೇನೆ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ ಅಮೂಲ್ಯ.

amulya gowda
ಮಾಡ್ರನ್ ಲುಕ್​ನಲ್ಲಿ ಅಮೂಲ್ಯ ಗೌಡ
Intro:Body:
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಕಮಲಿಯೂ ಒಂದು. ಹಳ್ಳಿಯ ಸೊಗಡಿನೀ ಧಾರಾವಾಹಿಯಲ್ಲಿ ಓದುವ ಮಹಾದಾಸೆ ಹೊತ್ತ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯುವುದಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬರುವ ಪ್ರಯತ್ನವನ್ನು ಮಾಡುತ್ತಾಳೆ. ಅವಳ ಆಸೆಯಂತೆ ನಗರಕ್ಕೆ ಬಂದಿರುವ ಆಕೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾಳೆ. ಬಂದ ಕಷ್ಟಗಳನ್ನೆಲ್ಲಾ ಎದುರಿಸುವ ಕಮಲಿ ಧಾರಾವಾಹಿಯ ಮುಖ್ಯ ಕೇಂದ್ರಬಿಂದುವೇ ಕಮಲಿ ಅರ್ಥಾತ್ ಅಮೂಲ್ಯ ಗೌಡ.

ಎರಡು ಜಡೆ ಕಟ್ಟಿ, ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿಯ ಶೈಲಿಯಲ್ಲಿ ಮಾತನಾಡುವ ಕಮಲಿಯ ಅಭಿನಯಕ್ಕೆ ಮನಸೋಲದವರಿಲ್ಲ. ಅರಮನೆ ನಗರಿ ಮೈಸೂರಿನ ಚೆಲುವೆ ಅಮೂಲ್ಯ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸ್ವಾತಿಮುತ್ತು ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಮುಂದೆ ಪುನರ್ ವಿವಾಹದಲ್ಲಿ ಸ್ವಾತಿ ಪಾತ್ರದಲ್ಲಿ ನಟಿಸಿದ ಚೆಂದುಳ್ಳಿ ಚೆಲುವೆ ವೀಕ್ಷಕರಿಗೆ ಹತ್ತಿರವಾದದ್ದು ಉದಯ ವಾಹಿನಿ ಮೂಲಕ. ಅಂದರೆ ಜದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇಂದು ಸೀರಿಯಲ್ ಪ್ರಿಯರ ಪ್ರೀತಿಯ ಕಮಲಿ!

ಈಗಾಗಲೇ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಮೂಲ್ಯ ಅಭಿನಯಿಸಿದ್ದರೂ ಕಮಲಿಯನ್ನು ವೀಕ್ಷಕರು ಎಂದು ಮರೆತಿಲ್ಲ. ಮುಗ್ದ ಹಳ್ಳಿ ಹುಡುಗಿಯಾಗಿ ಮನೋಜ್ಞ ವಾಗಿ ಅಭಿನಯಿಸುತ್ತಿರುವ ಅಮೂಲ್ಯ ಅಭಿನಯಕ್ಕೆ ಮನಸೋಲದವರಿಲ್ಲ.

ನಟ ಅಥವಾ ನಟಿ ಎಂದು ಆದ ಮತ್ತೆ ನಮಗೆ ಕೊಟ್ಟಿರುವ ಪಾತ್ರಗಳಿಗೆ ಜೀವ ತುಂಬುವುದೊಂದೇ ಕಲಾವಿದಗಿರುವ ಬಹುದೊಡ್ಡ ಜವಾಬ್ದಾರಿ. ನಾವು ಮಾಡುವ ಪಾತ್ರ ಜನರ ಮನಸ್ಸಿಗೆ ತಲುಪಿದಾಗ ಮಾತ್ರವ ನಾವು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎನ್ನುವ ಅಮೂಲ್ಯ ನಟನೆಯ ಬಗ್ಗೆ ಯಾವುದೇ ತರಬೇತಿ ಪಡೆದವರಲ್ಲ.

ಸಿನಿಮಾಗಳಿಂದ ಸಾಕಷ್ಟು ಆಫರ್ ಗಳು ಅಮೂಲ್ಯ ಅವರಿಗೆ ಬರುತ್ತಿದ್ದರು ಸದ್ಯ ಅವರ ಚಿತ್ತ ಏನಿದ್ದರೂ ಕಮಲಿಯತ್ತ! ಎರಡು ಕಡೆ ಏಕಕಾಲದಲ್ಲಿ ಗಮನ ಹರಿಸಲು ಕಷ್ಟ ಎಂದು ಹೇಳುವ ಅಮೂಲ್ಯ ಅವರಿಗೆ ಯಾವುದೇ ಪಾತ್ರವಾಗಿರಲಿ, ವೀಕ್ಷಕರಿಗೆ ಅದು ತಲುಪುವುದು ಮುಖ್ಯ ಎಂಬುದೊಂದೇ ಆಸೆ. ಅರಮನೆ ಧಾರಾವಾಹಿಯ ಹಿತಳಾಗಿ ನಟನಾ ರಂಗದಲ್ಲಿ ಗುರುತಿಸಿಕೊಂಡಿರುವ ಅಮೂಲ್ಯ ಸದ್ಯ ಕಮಲಿ ಎಂದೇ ಜನಪ್ರಿಯ. ಸಂತಸದ ಸುದ್ದಿಯೆಂದರೆ ವೀಕ್ಷಕರು ಕೂಡಾ ಅವರನ್ನು ಸ್ವೀಕರಿಸಿಯಾಗಿದೆ. ಅದಕ್ಕೆ ಝೀ ಕುಟುಂಬ ಅವಾರ್ಡ್ 2019 ರ ಬೆಸ್ಟ್ ಆಕ್ಟ್ರೆಸ್ ಪ್ರಶಸ್ತಿಯನ್ನು ಇವರು ಪಡೆದಿರಿವುದೇ ಸಾಕ್ಷಿ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.