ETV Bharat / sitara

ಐವರು ಗೆಳೆಯರ ಚಾರಣದ ಥ್ರಿಲ್ಲರ್, ಸಸ್ಪೆನ್ಸ್ ಕಥೆ ಹೊಂದಿದ 'ಮನರೂಪ'.. - ಸಸ್ಪೆನ್ಸ್, ಥ್ರಿಲ್ಲರ್ ಮನರೂಪ ನವೆಂಬರ್​ನಲ್ಲಿ ತೆರೆಗೆ

ಸಿಎಂಸಿಆರ್ ಬ್ಯಾನರ್ ಮೂಲಕ ಕಿರಣ್ ಹೆಗಡೆ ನಿರ್ಮಿಸಿ ನಿರ್ದೇಶಿಸಿರುವ 'ಮನರೂಪ' ಸಿನಿಮಾ ನವೆಂಬರ್​​ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಸಸ್ಪೆನ್ಸ್,​ ಥ್ರಿಲ್ಲರ್​ ಕಥೆ ಹೊಂದಿದೆ.

'ಮನರೂಪ'
author img

By

Published : Oct 19, 2019, 5:31 PM IST

ಕನ್ನಡದಲ್ಲಿ ಈವರೆಗೂ ಬಹಳಷ್ಟು ಥ್ರಿಲ್ಲರ್​ ಕಥಾವಸ್ತು ಇರುವ ಸಿನಿಮಾಗಳು ತಯಾರಾಗಿವೆ. ಅಂತಹ ಸಿನಿಮಾಗಳು ಇನ್ನೂ ಬರುತ್ತಲೇ ಇವೆ. ಇದೀಗ 'ಮನರೂಪ' ಎಂಬ ಮತ್ತೊಂದು ಸೈಕಲಾಜಿಕಲ್​,ಸಸ್ಪೆನ್ಸ್​, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ಬರುತ್ತಿದೆ.

Manaroopa
ಶೇ.90ರಷ್ಟು ಭಾಗ ಅರಣ್ಯದಲ್ಲೇ ಚಿತ್ರೀಕರಣವಾದ 'ಮನರೂಪ'

ಐವರು ಸ್ನೇಹಿತರು ಪಶ್ಚಿಮ ಘಟ್ಟದ ಚಾರಣಕ್ಕೆ ತೆರಳ್ತಾರೆ. ಅಲ್ಲಿ ಕರಡಿ ಗುಹೆಯನ್ನು ಹುಡುಕುವುದು ಅವರ ಉದ್ದೇಶವಾಗಿತ್ತೆ. ಈ ಪಯಣದಲ್ಲಿ ಹಳೆಯ ನೆನಪುಗಳು, ಸಂಬಂಧಗಳು ಅವರಿಗೆ ನೆನಪಾಗುತ್ತವೆ. ಕೊನೆಗೆ ಕರಡಿ ಗುಹೆಯಿಂದ ಹೊರಬರಲು ಪರದಾಡುವ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಿರಣ್ ಹೆಗಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಎಂಸಿಆರ್ ಬ್ಯಾನರ್ ಮೂಲಕ ಕಿರಣ್ ಹೆಗಡೆ ಅವರೇ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ. ದುರ್ಗಮ ಕಣಿವೆ, ಇಳಿಜಾರು, ಬೆಟ್ಟದ ತುದಿ, ನದಿದಂಡೆ, ಕಾಡು ಸೇರಿ ಬಹಳ ಅಪಾಯದ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆಯಂತೆ. ಸುಮಾರು ಶೇ.90 ರಷ್ಟು ಚಿತ್ರೀಕರಣ ಅರಣ್ಯ ಪ್ರದೇಶದಲ್ಲಿ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Manaroopa
'ಮನರೂಪ' ಚಿತ್ರದ ದೃಶ್ಯ

ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ದಾರ್ಥ್​ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸರವಣ ಸಂಗೀತ, ಹುಲಿವಾನ್ ನಾಗರಾಜ್ ಶಬ್ಧಗ್ರಹಣ, ಮಹಾಬಲ ಸೀತಾಳಬಾವಿ ಸಂಭಾಷಣೆ ಈ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರಲಿದೆ.

Manaroopa
'ಮನರೂಪ' ಚಿತ್ರದ ನಟಿ (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ಕನ್ನಡದಲ್ಲಿ ಈವರೆಗೂ ಬಹಳಷ್ಟು ಥ್ರಿಲ್ಲರ್​ ಕಥಾವಸ್ತು ಇರುವ ಸಿನಿಮಾಗಳು ತಯಾರಾಗಿವೆ. ಅಂತಹ ಸಿನಿಮಾಗಳು ಇನ್ನೂ ಬರುತ್ತಲೇ ಇವೆ. ಇದೀಗ 'ಮನರೂಪ' ಎಂಬ ಮತ್ತೊಂದು ಸೈಕಲಾಜಿಕಲ್​,ಸಸ್ಪೆನ್ಸ್​, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ಬರುತ್ತಿದೆ.

Manaroopa
ಶೇ.90ರಷ್ಟು ಭಾಗ ಅರಣ್ಯದಲ್ಲೇ ಚಿತ್ರೀಕರಣವಾದ 'ಮನರೂಪ'

ಐವರು ಸ್ನೇಹಿತರು ಪಶ್ಚಿಮ ಘಟ್ಟದ ಚಾರಣಕ್ಕೆ ತೆರಳ್ತಾರೆ. ಅಲ್ಲಿ ಕರಡಿ ಗುಹೆಯನ್ನು ಹುಡುಕುವುದು ಅವರ ಉದ್ದೇಶವಾಗಿತ್ತೆ. ಈ ಪಯಣದಲ್ಲಿ ಹಳೆಯ ನೆನಪುಗಳು, ಸಂಬಂಧಗಳು ಅವರಿಗೆ ನೆನಪಾಗುತ್ತವೆ. ಕೊನೆಗೆ ಕರಡಿ ಗುಹೆಯಿಂದ ಹೊರಬರಲು ಪರದಾಡುವ ಸನ್ನಿವೇಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಿರಣ್ ಹೆಗಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಎಂಸಿಆರ್ ಬ್ಯಾನರ್ ಮೂಲಕ ಕಿರಣ್ ಹೆಗಡೆ ಅವರೇ ಸಿನಿಮಾಗೆ ಬಂಡವಾಳ ಕೂಡ ಹೂಡಿದ್ದಾರೆ. ದುರ್ಗಮ ಕಣಿವೆ, ಇಳಿಜಾರು, ಬೆಟ್ಟದ ತುದಿ, ನದಿದಂಡೆ, ಕಾಡು ಸೇರಿ ಬಹಳ ಅಪಾಯದ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆಯಂತೆ. ಸುಮಾರು ಶೇ.90 ರಷ್ಟು ಚಿತ್ರೀಕರಣ ಅರಣ್ಯ ಪ್ರದೇಶದಲ್ಲಿ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Manaroopa
'ಮನರೂಪ' ಚಿತ್ರದ ದೃಶ್ಯ

ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ದಾರ್ಥ್​ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸರವಣ ಸಂಗೀತ, ಹುಲಿವಾನ್ ನಾಗರಾಜ್ ಶಬ್ಧಗ್ರಹಣ, ಮಹಾಬಲ ಸೀತಾಳಬಾವಿ ಸಂಭಾಷಣೆ ಈ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರಲಿದೆ.

Manaroopa
'ಮನರೂಪ' ಚಿತ್ರದ ನಟಿ (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ಮನರೂಪ ಮತ್ತೊಂದು ಕಾಡುವ ಥ್ರಿಲ್ಲರ್ ಸಿದ್ದ

ಕನ್ನಡದಲ್ಲಿ 6-5=2 ಸಿನಿಮಾ ಇಂದ ಅನೇಕ ಹಾರರ್ ಸಿನಿಮಗಳು ಬಂದು ಹೋದವು, ಆದರೆ ಥ್ರಿಲ್ಲರ್ ಕಥಾ ವಸ್ತುಗಳು ಆಗಾಗ್ಗೆ ಬರುತ್ತಲೇ ಇದೆ. ಈಗ ಮತ್ತೊಂದು ಮನರೂಪ – ದುರ್ಗಮ ಅರಣ್ಯದಲ್ಲಿ ಯುವ ಪೀಳಿಗೆ ತಮ್ಮ ಭಾವನೆಗಳನ್ನ ಶೋದಿಸಲು ಹೊರಟಾಗ ಅನೇಕ ತವಕ ತಲ್ಲಣಗಳನ್ನು ಎದುರಿಸುತ್ತಾರೆ. ಅದೇ ಮನರೂಪ ಸೈಕಲಾಜಿಕಲ್ ಥ್ರಿಲ್ಲರ್. ಗೊತ್ತು ಪರಿಚಯ ಇಲ್ಲದ ಸ್ಥಳಗಳಲ್ಲಿ ಹೇಗೆ ನಿಭಾಯಿಸುತ್ತಾರೆ. ಕರಡಿ ಗುಹೆಯಲ್ಲಿ ಅವರ ಪರದಾಟ ಇದೆ. ಗುಮ್ಮ ಎಂಬ ವಿಚಾರದೊಂದಿಗೆ ಈ ಯುವಕರ ಗಮನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಸಿ ಎಂ ಸಿ ಆರ್ ಮೂವೀಸ್ ಹೇಳುತ್ತದೆ.

ಬಹಳ ಕಷ್ಟಕರ ಪ್ರದೇಶಗಳಲ್ಲಿ ಚಿತ್ರೀಕರಣವನ್ನು ಮನರೂಪ ಚಿತ್ರ ತಂಡ ಮಾಡಿದೆ ಎಂದು ನಿರ್ದೇಶಕ ಕಿರಣ್ ಹೆಗಡೆ ವಿವರಿಸುತ್ತಾರೆ. ದುರ್ಗಮ ಕಣಿವೆ, ಇಳಿಜಾರು, ಪೊಡೆಗಳು, ಬೆಟ್ಟದ ತುದಿ, ನದಿ ದಂಡೆ, ಕಾಡಿನ ನಿಗೂಡತೆ ಅವರು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. 90 ಪರ್ಸೆಂಟ್ ಭಾಗ ಚಿತ್ರೀಕರಣ ಅರಣ್ಯ ಪ್ರದೇಶದಲ್ಲಿ ನಡೆಯುತ್ತದೆ.

ಇದು ಪಶ್ಚಿಮ ಘಟ್ಟಕ್ಕೆ ಚಾರಣಕ್ಕೆ ಹೋಗುವ ಸ್ನೇಹಿತರ ಪಯಣ. ಐವರು ಕರಡಿ ಗುಹೆ ಹುಡುಕಲು ಹೋಗುತ್ತಾರೆ. ಈ ಪಯಣದಲ್ಲಿ ಹಳೆಯ ನೆನಪುಗಳು, ಸಂಬಂದಗಳು ಅವರಲ್ಲಿ ಇಣುಕುತ್ತದೆ. ಕೊನೆಗೆ ಕರಡಿ ಗುಹೆ ಇಂದ ಆಚೆ ಬರಲು ಪರದಾಡುವ ಸನ್ನಿವೇಶಗಳು ಸಹ ಈ ಚಿತ್ರದಲ್ಲಿದೆ.

ದಿಲೀಪ್ ಕುಮಾರ್, ಅನುಷ ರಾವ್, ನಿಶ ಬಿ ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ದರ್ತ್ ಮುಖ್ಯ ತಾರಗಣದಲ್ಲಿದ್ದಾರೆ. ಗೋವಿಂದ ರಾಜ್ ಛಾಯಾಗ್ರಹಣ, ಸರವಣ ಸಂಗೀತ, ಹುಲಿವಾನ್ ನಾಗರಾಜ್ ಶಬ್ದ ಗ್ರಹಣ, ಮಹಾಬಲ ಸಿತಳಭಾವಿ ಸಂಭಾಷಣೆ ಒದಗಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಈ ಥ್ರಿಲ್ಲರ್ ಕಥಾ ಉಳ್ಳ ಮನರೂಪ ಪ್ರೇಕ್ಷಕರ ಮುಂದೆ ಬರಲಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.