ETV Bharat / sitara

ಸದ್ದು ಮಾಡುವ 'ಮನಸಾಗಿದೆ'.. ಹುಡ್ಕೊಂಡ್ ಹೋಗಿದ್ದಾ ಇಲ್ಲ ಹುಡುಕಿ ಬಂದಿದ್‌‌ ಪ್ರೀತಿ ಸಿಕ್ಕುತ್ತಾ!? - ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಸಿನಿಮಾದಲ್ಲಿ ಮೂರು ಆ್ಯಕ್ಷನ್ ಸಿಕ್ವೇನ್ಸ್​ಗಳನ್ನ ಕಂಪೋಸ್ ಮಾಡಲಿದ್ದಾರೆ. ಶಂಕರ್ ಛಾಯಾಗ್ರಹಣವಿರುವ ಮನಸಾಗಿದೆ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ..

Manasagide Cinema
ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ 'ಮನಸಾಗಿದೆ' ಸಿನಿಮಾ
author img

By

Published : Mar 30, 2021, 8:12 PM IST

ಮನಸಾರೆ, ಮನಾಸಲಾಜಿ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಕಮಾಲ್ ಮಾಡಿವೆ. ಇದೀಗ ಹೊಸಬರ ತಂಡವೊಂದು 'ಮನಸಾಗಿದೆ' ಎಂಬ ಶೀರ್ಷಿಕೆಯೊಂದಿಗೆ ಮುದ್ದಾದ ಲವ್ ಸ್ಟೋರಿ ಹೇಳೋಕೆ ಬರ್ತಿದೆ.

ನಿರ್ಮಾಪಕ ಎಸ್ ಚಂದ್ರಶೇಖರ್, ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, ಯುವನಟ ಅಭಯ್, ನಟಿಯರಾದ ಅಧಿರಾ, ಮೇಘಶ್ರೀ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ ಹಾಗೂ ಗೀತ ರಚನೆಕಾರ ಅರಸು ಅಂತಾರೆ ಇಂದು 'ಮನಸಾಗಿದೆ' ಸಿನಿಮಾದ ವಿಶೇಷತೆ ಹಂಚಿಕೊಂಡರು.

Manasagide Cinema
ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ 'ಮನಸಾಗಿದೆ' ಸಿನಿಮಾ

ಕೆಲವರು ಪ್ರೀತಿನ ಪಡೆಯಲೇಬೇಕು ಅಂತ ಹುಡ್ಕೊಂಡು ಹೋಗ್ತಾರೆ. ಮತ್ತೆ ಕೆಲವರಿಗೆ ಪ್ರೀತಿನೆ ಹುಡುಕಿಕೊಂಡು ಬರುತ್ತೆ. ನಮ್ಮ ಈ ಚಿತ್ರದಲ್ಲಿ ಕಥಾನಾಯಕ ಸಹ ತಾನು ಇಷ್ಟಪಟ್ಟು ಹುಡ್ಕೊಂಡು ಬಂದಂತಹ ಪ್ರೀತಿನ ಪಡಿತಾನಾ? ಅಥವಾ ತಾನು ಬಯಸದೇ ಬಳಿ ಬಂದ ಪ್ರೀತಿ ಪಡಿತಾನಾ? ಎಂಬುದೇ ಕುತೂಹಲ ಮೂಡಿಸಲಿದೆ ಎಂದು ಚಿತ್ರತಂಡ ಹೇಳಿದೆ.

ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ 'ಮನಸಾಗಿದೆ' ಸಿನಿಮಾ

ಈ ಹಿಂದೆ ಬರ್ಥ್ ಎಂಬ ಸಿನಿಮಾವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್ ತಮ್ಮ‌ ಮಗ ಅಭಯ್​ಗಾಗಿ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನ ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನ ಮಾಡುತ್ತಿದ್ದಾರೆ. ಅರಸು ಅಂತಾರೆ, ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ ಬರೆದಿರುವ ಸಾಹಿತ್ಯಕ್ಕೆ ಮಾನಸಾ ಹೊಳ್ಳ ಸಂಗೀತ ನೀಡಲಿದ್ದಾರೆ‌.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಸಿನಿಮಾದಲ್ಲಿ ಮೂರು ಆ್ಯಕ್ಷನ್ ಸಿಕ್ವೇನ್ಸ್​ಗಳನ್ನ ಕಂಪೋಸ್ ಮಾಡಲಿದ್ದಾರೆ. ಶಂಕರ್ ಛಾಯಾಗ್ರಹಣವಿರುವ ಮನಸಾಗಿದೆ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಓದಿ: ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು - ಟೈಗರ್ ಪ್ರಭಾಕರ್​ರನ್ನು ನೆನೆದ ನವರಸನಾಯಕ

ಮನಸಾರೆ, ಮನಾಸಲಾಜಿ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಕಮಾಲ್ ಮಾಡಿವೆ. ಇದೀಗ ಹೊಸಬರ ತಂಡವೊಂದು 'ಮನಸಾಗಿದೆ' ಎಂಬ ಶೀರ್ಷಿಕೆಯೊಂದಿಗೆ ಮುದ್ದಾದ ಲವ್ ಸ್ಟೋರಿ ಹೇಳೋಕೆ ಬರ್ತಿದೆ.

ನಿರ್ಮಾಪಕ ಎಸ್ ಚಂದ್ರಶೇಖರ್, ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, ಯುವನಟ ಅಭಯ್, ನಟಿಯರಾದ ಅಧಿರಾ, ಮೇಘಶ್ರೀ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕಿ ಮಾನಸಾ ಹೊಳ್ಳ ಹಾಗೂ ಗೀತ ರಚನೆಕಾರ ಅರಸು ಅಂತಾರೆ ಇಂದು 'ಮನಸಾಗಿದೆ' ಸಿನಿಮಾದ ವಿಶೇಷತೆ ಹಂಚಿಕೊಂಡರು.

Manasagide Cinema
ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ 'ಮನಸಾಗಿದೆ' ಸಿನಿಮಾ

ಕೆಲವರು ಪ್ರೀತಿನ ಪಡೆಯಲೇಬೇಕು ಅಂತ ಹುಡ್ಕೊಂಡು ಹೋಗ್ತಾರೆ. ಮತ್ತೆ ಕೆಲವರಿಗೆ ಪ್ರೀತಿನೆ ಹುಡುಕಿಕೊಂಡು ಬರುತ್ತೆ. ನಮ್ಮ ಈ ಚಿತ್ರದಲ್ಲಿ ಕಥಾನಾಯಕ ಸಹ ತಾನು ಇಷ್ಟಪಟ್ಟು ಹುಡ್ಕೊಂಡು ಬಂದಂತಹ ಪ್ರೀತಿನ ಪಡಿತಾನಾ? ಅಥವಾ ತಾನು ಬಯಸದೇ ಬಳಿ ಬಂದ ಪ್ರೀತಿ ಪಡಿತಾನಾ? ಎಂಬುದೇ ಕುತೂಹಲ ಮೂಡಿಸಲಿದೆ ಎಂದು ಚಿತ್ರತಂಡ ಹೇಳಿದೆ.

ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ 'ಮನಸಾಗಿದೆ' ಸಿನಿಮಾ

ಈ ಹಿಂದೆ ಬರ್ಥ್ ಎಂಬ ಸಿನಿಮಾವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್ ತಮ್ಮ‌ ಮಗ ಅಭಯ್​ಗಾಗಿ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನ ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನ ಮಾಡುತ್ತಿದ್ದಾರೆ. ಅರಸು ಅಂತಾರೆ, ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ ಬರೆದಿರುವ ಸಾಹಿತ್ಯಕ್ಕೆ ಮಾನಸಾ ಹೊಳ್ಳ ಸಂಗೀತ ನೀಡಲಿದ್ದಾರೆ‌.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಸಿನಿಮಾದಲ್ಲಿ ಮೂರು ಆ್ಯಕ್ಷನ್ ಸಿಕ್ವೇನ್ಸ್​ಗಳನ್ನ ಕಂಪೋಸ್ ಮಾಡಲಿದ್ದಾರೆ. ಶಂಕರ್ ಛಾಯಾಗ್ರಹಣವಿರುವ ಮನಸಾಗಿದೆ ಸಿನಿಮಾವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಓದಿ: ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು - ಟೈಗರ್ ಪ್ರಭಾಕರ್​ರನ್ನು ನೆನೆದ ನವರಸನಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.