ETV Bharat / sitara

ಮಹೇಶ್ ಬಾಬು ಬದಲು ರಾಕಿಭಾಯ್​​ಗೆ ಮಣೆ... ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಯಶ್

author img

By

Published : Aug 1, 2019, 12:35 PM IST

Updated : Aug 1, 2019, 12:47 PM IST

ಪುರಿ ಜಗನಾಥ್ ಅವರ ಮೋಸ್ಟ್​ ಎಕ್ಸ್​ಪೆಕ್ಟೆಡ್​ 'ಜನ ಗಣ ಮನ' ಚಿತ್ರಕ್ಕೆ ರಾಕಿಭಾಯ್​ ನಾಯಕರಾಗಲಿದ್ದಾರೆ. ಈ ಮೊದಲು 'ಜನ ಗಣ ಮನ' ಚಿತ್ರಕ್ಕೆ ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ನಾಯಕ ಎಂದು ತೀರ್ಮಾನಿಸಲಾಗಿತ್ತು.

ಚಿತ್ರಕೃಪೆ: ಇನ್​ಸ್ಟಾಗ್ರಾಂ

ಕನ್ನಡ ಚಿತ್ರರಂಗಕ್ಕೆ ದೊಡ್ಡ ಫೇಮ್​​ ತಂದುಕೊಟ್ಟ ಕೆಜಿಎಫ್​ ಸರಣಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್​​ ಯಶ್ ಬ್ಯುಸಿಯಾಗಿದ್ದಾರೆ. ಅದ್ದೂರಿಯಾಗಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ಈಗಾಗಲೇ ಭಾರತದ ಸಿನಿ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಿತ್ರ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ರಾಕಿ ಭಾಯ್ ಅಭಿಮಾನಿಗಳಿಗೆ ಸದ್ಯ ಗುಡ್​ ನ್ಯೂಸ್​ವೊಂದು ಕೇಳಿ ಬಂದಿದೆ. ಎಲ್ಲ ಅಂದುಕೊಂಡಂತಾದ್ರೆ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್​ ಯಶ್ ಮಿಂಚಲಿದ್ದಾರೆ.

ಹೌದು, ಸಕ್ಸಸ್​​ಫುಲ್​ ಡೈರೆಕ್ಟರ್​ ಪುರಿ ಜಗನಾಥ್ ಅವರ ಮೋಸ್ಟ್​ ಎಕ್ಸ್​ಪೆಕ್ಟೆಡ್​ 'ಜನ ಗಣ ಮನ' ಚಿತ್ರಕ್ಕೆ ರಾಕಿಭಾಯ್​ ನಾಯಕರಾಗಲಿದ್ದಾರೆ. ಕಳೆದ ಕೆಲ ವರ್ಷದಿಂದ ದೇಶವನ್ನೇ ಬೆಚ್ಚಿಬೀಳಿಸಿರುವ ಕ್ರೈಮ್ ಸ್ಟೋರಿಗಳ ಕಥಾ ಹಂದರದ ಈ ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್​ ಯಶ್ ನಾಯಕ ನಟ. ಈಗಾಗಲೇ ಎರಡು ಬಾರಿ ಯಶ್ ಜತೆ ಮಾತುಕತೆ ನಡೆಸಿರುವ ನಿರ್ದೇಶಕ ಪುರಿ, ಶೀಘ್ರದಲ್ಲೇ ಕೊನೆಯ ಹಂತದ ಟಾಕ್​ ನಡೆಸಲಿದ್ದಾರಂತೆ.

ಹಾಗೇ ನೋಡಿದ್ರೆ ಈ ಮೊದಲು'ಜನ ಗಣ ಮನ' ಚಿತ್ರಕ್ಕೆ ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ನಾಯಕ ಎಂದು ತೀರ್ಮಾನಿಸಲಾಗಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಚಿತ್ರತಂಡ ಇವರನ್ನು ಕೈಬಿಟ್ಟು ರಾಕಿ ಭಾಯ್​​ಗೆ ಮಣೆ ಹಾಕುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ತಮಿಳು ಹಾಗೂ ಹಿಂದಿಗೆ ಡಬ್​ ಆಗಲಿದೆಯಂತೆ.

ಸದ್ಯ ಯಶ್ ಕೆಜಿಎಫ್​ 2 ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಪ್ಲೀಟ್ ಆದ್ಮೇಲೆ ಪುರಿ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕನ್ನಡ ಚಿತ್ರರಂಗಕ್ಕೆ ದೊಡ್ಡ ಫೇಮ್​​ ತಂದುಕೊಟ್ಟ ಕೆಜಿಎಫ್​ ಸರಣಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್​​ ಯಶ್ ಬ್ಯುಸಿಯಾಗಿದ್ದಾರೆ. ಅದ್ದೂರಿಯಾಗಿ ನಡೆಯುತ್ತಿರುವ ಚಿತ್ರದ ಶೂಟಿಂಗ್ ಈಗಾಗಲೇ ಭಾರತದ ಸಿನಿ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಿತ್ರ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ರಾಕಿ ಭಾಯ್ ಅಭಿಮಾನಿಗಳಿಗೆ ಸದ್ಯ ಗುಡ್​ ನ್ಯೂಸ್​ವೊಂದು ಕೇಳಿ ಬಂದಿದೆ. ಎಲ್ಲ ಅಂದುಕೊಂಡಂತಾದ್ರೆ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್​ ಯಶ್ ಮಿಂಚಲಿದ್ದಾರೆ.

ಹೌದು, ಸಕ್ಸಸ್​​ಫುಲ್​ ಡೈರೆಕ್ಟರ್​ ಪುರಿ ಜಗನಾಥ್ ಅವರ ಮೋಸ್ಟ್​ ಎಕ್ಸ್​ಪೆಕ್ಟೆಡ್​ 'ಜನ ಗಣ ಮನ' ಚಿತ್ರಕ್ಕೆ ರಾಕಿಭಾಯ್​ ನಾಯಕರಾಗಲಿದ್ದಾರೆ. ಕಳೆದ ಕೆಲ ವರ್ಷದಿಂದ ದೇಶವನ್ನೇ ಬೆಚ್ಚಿಬೀಳಿಸಿರುವ ಕ್ರೈಮ್ ಸ್ಟೋರಿಗಳ ಕಥಾ ಹಂದರದ ಈ ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್​ ಯಶ್ ನಾಯಕ ನಟ. ಈಗಾಗಲೇ ಎರಡು ಬಾರಿ ಯಶ್ ಜತೆ ಮಾತುಕತೆ ನಡೆಸಿರುವ ನಿರ್ದೇಶಕ ಪುರಿ, ಶೀಘ್ರದಲ್ಲೇ ಕೊನೆಯ ಹಂತದ ಟಾಕ್​ ನಡೆಸಲಿದ್ದಾರಂತೆ.

ಹಾಗೇ ನೋಡಿದ್ರೆ ಈ ಮೊದಲು'ಜನ ಗಣ ಮನ' ಚಿತ್ರಕ್ಕೆ ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ನಾಯಕ ಎಂದು ತೀರ್ಮಾನಿಸಲಾಗಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಚಿತ್ರತಂಡ ಇವರನ್ನು ಕೈಬಿಟ್ಟು ರಾಕಿ ಭಾಯ್​​ಗೆ ಮಣೆ ಹಾಕುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ತಮಿಳು ಹಾಗೂ ಹಿಂದಿಗೆ ಡಬ್​ ಆಗಲಿದೆಯಂತೆ.

ಸದ್ಯ ಯಶ್ ಕೆಜಿಎಫ್​ 2 ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಪ್ಲೀಟ್ ಆದ್ಮೇಲೆ ಪುರಿ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

Intro:Body:Conclusion:
Last Updated : Aug 1, 2019, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.