ETV Bharat / sitara

ವರಮಹಾಲಕ್ಷ್ಮಿ ಹಬ್ಬದಂದು 'ಕಾಲಚಕ್ರ' ಮೊದಲ ಹಾಡು ಬಿಡುಗಡೆ

author img

By

Published : Jul 29, 2020, 12:46 PM IST

ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಾಲಚಕ್ರ' ಸಿನಿಮಾದ ಮೊದಲ ಹಾಡು ಜುಲೈ 31 ರಂದು ಸಂಜೆ 6 ಗಂಟೆಗೆ ಬಿಡುಡೆಯಾಗುತ್ತಿದೆ. ಚಿತ್ರವನ್ನು ಸುಮಂತ್ ಕ್ರಾಂತಿ ನಿರ್ದೇಶಿಸಿದ್ದಾರೆ.

Kalachakra
'ಕಾಲಚಕ್ರ'

ರಶ್ಮಿ ಫಿಲ್ಮ್ಸ್​​ ಬ್ಯಾನರ್ ಅಡಿಯಲ್ಲಿ ಸುಮಂತ್ ಕ್ರಾಂತಿ ನಿರ್ದೇಶನದ 'ಕಾಲಚಕ್ರ' ಸಿನಿಮಾದ ಮೊದಲ ಹಾಡು ವರಮಹಾಲಕ್ಷ್ಮಿ ಹಬ್ಬದಂದು , ಅಂದರೆ ಜುಲೈ 31 ರಂದು ಸಂಜೆ ಬಿಡುಗಡೆಯಾಗಲಿದೆ.

'ಕಾಲಚಕ್ರ' ಚಿತ್ರದಲ್ಲಿ ವಸಿಷ್ಠ ಎನ್​. ಸಿಂಹ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ 'ತರಗೆಲೆ ಸಂಸಾರ' ಎಂಬ ಹಾಡು ಶುಕ್ರವಾರ ಸಂಜೆ 6 ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಖ್ಯಾತ ಬಾಲಿವುಡ್​​​​​​​ ಗಾಯಕ ಕೈಲಾಶ್​​​​​​​​​​ ಕೇರ್ ಹಾಡಿದ್ದಾರೆ‌. ಗುರುಕಿರಣ್ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  • " class="align-text-top noRightClick twitterSection" data="">

ಸುಮಂತ್ ಕ್ರಾಂತಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು ಹಾಗೂ ಇನ್ನಿತರ ಕಡೆ ಚಿತ್ರೀಕರಣ ನಡೆದಿದೆ. ಲಾಕ್ ಡೌನ್​​​​ಗೂ ಮುನ್ನ ನಡೆದಿದ್ದ ಅದ್ದೂರಿ

ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​​​​​​​​​​​ 'ಕಾಲಚಕ್ರ' ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಕಾಲಚಕ್ರ'ದ ಟೀಸರ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಈ ಚಿತ್ರಕ್ಕೆ ಎಲ್​​.ಎಂ. ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ. ಕೆರೆ ಅವರ ಕಲಾ‌ ನಿರ್ದೇಶನವಿದೆ. ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್. ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

ರಶ್ಮಿ ಫಿಲ್ಮ್ಸ್​​ ಬ್ಯಾನರ್ ಅಡಿಯಲ್ಲಿ ಸುಮಂತ್ ಕ್ರಾಂತಿ ನಿರ್ದೇಶನದ 'ಕಾಲಚಕ್ರ' ಸಿನಿಮಾದ ಮೊದಲ ಹಾಡು ವರಮಹಾಲಕ್ಷ್ಮಿ ಹಬ್ಬದಂದು , ಅಂದರೆ ಜುಲೈ 31 ರಂದು ಸಂಜೆ ಬಿಡುಗಡೆಯಾಗಲಿದೆ.

'ಕಾಲಚಕ್ರ' ಚಿತ್ರದಲ್ಲಿ ವಸಿಷ್ಠ ಎನ್​. ಸಿಂಹ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ 'ತರಗೆಲೆ ಸಂಸಾರ' ಎಂಬ ಹಾಡು ಶುಕ್ರವಾರ ಸಂಜೆ 6 ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಖ್ಯಾತ ಬಾಲಿವುಡ್​​​​​​​ ಗಾಯಕ ಕೈಲಾಶ್​​​​​​​​​​ ಕೇರ್ ಹಾಡಿದ್ದಾರೆ‌. ಗುರುಕಿರಣ್ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  • " class="align-text-top noRightClick twitterSection" data="">

ಸುಮಂತ್ ಕ್ರಾಂತಿ ಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು ಹಾಗೂ ಇನ್ನಿತರ ಕಡೆ ಚಿತ್ರೀಕರಣ ನಡೆದಿದೆ. ಲಾಕ್ ಡೌನ್​​​​ಗೂ ಮುನ್ನ ನಡೆದಿದ್ದ ಅದ್ದೂರಿ

ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​​​​​​​​​​​​ 'ಕಾಲಚಕ್ರ' ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. 'ಕಾಲಚಕ್ರ'ದ ಟೀಸರ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಈ ಚಿತ್ರಕ್ಕೆ ಎಲ್​​.ಎಂ. ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ. ಕೆರೆ ಅವರ ಕಲಾ‌ ನಿರ್ದೇಶನವಿದೆ. ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್. ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.