ಬೆಂಗಳೂರು: ಚಲನಚಿತ್ರ ಮಂಡಳಿ ಕಿತ್ತಾಡಿಕೊಳ್ಳದೆ ಸರ್ಕಾರ ಕೊಟ್ಟ ಅನುದಾನದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದರು.
ಮಗ ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ಅವರು, ಫಿಲಂ ಸಿಟಿಗೆ 500 ಕೋಟಿ ರೂ ಸಾಕಾಗುವುದಿಲ್ಲ. ಆದರೆ ಪ್ರಾರಂಭ ಆಗೋದು ಮುಖ್ಯ. ಯಾರೇ ಮುಂದಾಳತ್ವ ವಹಿಸಿದರೂ ಫಿಲಂ ಸಿಟಿ ನಿರ್ಮಾಣವಾಗಲಿ. ಮಾತಿಗಿಂತ ಕೆಲಸ ಆರಂಭ ಆಗಬೇಕು ಎಂದರು.
ಎಲ್ಲಾದರೂ ಫಿಲಂ ಸಿಟಿ ನಿರ್ಮಾಣವಾಗಲಿ ತೊಂದರೆಯಿಲ್ಲ. ಸರ್ಕಾರ ಹಣ ಮಂಜೂರು ಮಾಡಿದೆ ಎಂದಾದರೆ ನಾಳೆಯಿಂದಲೇ ಕೆಲಸ ಶುರುವಾಗಲಿ ಎಂದರು.