ETV Bharat / sitara

ಕೊನೆಗೂ ಕಾಲ ಕೂಡಿಬಂತು...ಚಿಕ್ಕಣ್ಣನಿಗೆ ಒಲಿದ ದೊಡ್ಡ ಅದೃಷ್ಟ - ಹಾಸ್ಯನಟ

ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಅವರ ಅದೃಷ್ಟದ ಬಾಗಿಲು ತೆರೆದಿದೆ. ಇವರು ಫುಲ್​ಪ್ಲೆಡ್ಜ್​ ಹೀರೋ ಆಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ಚಿಕ್ಕಣ್ಣ
author img

By

Published : Jun 24, 2019, 11:54 AM IST

ಹಾಸ್ಯನಟ ಚಿಕ್ಕಣ್ಣ ನಾಯಕ ನಟನಾಗಿ ಪರಿಚಯವಾಗುತ್ತಿದ್ದಾರೆ. ಇದುವರೆಗೂ ಸಹಕಲಾವಿದನಾಗಿ ರಂಜಿಸುತ್ತಿದ್ದ ಈ ಪ್ರತಿಭೆ ಈಗ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಹಾಗೇ ನೋಡಿದ್ರೆ ನಗೆ ನಟ ಚಿಕ್ಕಣ್ಣ ಈಗಾಗಲೇ ಹೀರೋ ಆಗಿ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. ಈ ಹಿಂದೆ ಸಾಕಷ್ಟು ಜನ ನಿರ್ಮಾಪಕ - ನಿರ್ದೇಶಕರು ಇವರನ್ನು ನಾಯಕನನ್ನಾಗಿ ಮಾಡಲು ಮುಂದೆ ಬಂದಿದ್ದರು. ಆದರೆ, ಚಿಕ್ಕಣ್ಣನೇ ಮನಸ್ಸು ಮಾಡಿರಲಿಲ್ಲ. ಕೊನೆಗೂ ಅವರು ಚಿತ್ರವೊಂದಕ್ಕೆ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಈ ಚಿತ್ರಕ್ಕೆ ಮಂಜು ಮಾಂಡವ್ಯ ನಿರ್ದೇಶನ ಮಾಡಲಿದ್ದು, ಉಮಾಪತಿ ಫಿಲ್ಮ್​ ಬ್ಯಾನರ್​​ನಡಿ ಈ ಸಿನಿಮಾ ರೆಡಿಯಾಗಲಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಮಂಜು ಮಾಂಡವ್ಯ. ಚಿಕ್ಕಣ್ಣ ಜತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಸ್ವತಃ ಮಂಜು ಮಾಂಡವ್ಯ ಅವರೇ ಖಚಿತಪಡಿಸಿದ್ದಾರೆ.

ಇನ್ನೂ ಹೆಸರಡಿದ ಈ ಚಿತ್ರ ಇದೇ ಅಕ್ಟೋಬರ್​ನಲ್ಲಿ ಸೆಟ್ಟೇರಲಿದೆ. ಸದ್ಯ ಚಿಕ್ಕಣ್ಣ ತಮ್ಮಇತರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಂಜು ಕೂಡ ತಮ್ಮ ಭರತ್ ಬಾಹುಬಲಿ ಚಿತ್ರದ ಬಿಡುಗಡೆಯಲ್ಲಿ ಗಮನ ಹರಿಸುತ್ತಿದ್ದಾರೆ. ಇತ್ತ ನಿರ್ಮಾಪಕ ಉಮಾಪತಿ ಕೂಡ ದರ್ಶನ್ ಅವರ ರಾಬರ್ಟ್​ ಮೂವಿಯಲ್ಲಿ ತೊಡಗಿಕೊಂಡಿದ್ದಾರೆ.

ಇನ್ನು ಕನ್ನಡದಲ್ಲಿ ಕಾಮಿಡಿ ಕಲಾವಿದರು ನಟರಾಗಿ ಬಡ್ತಿ ಪಡೆಯುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಶರಣ್​, ಕೋಮಲ್ ಅವರು ಹೀರೋಗಳಾಗಿದ್ದಾರೆ. ಈಗ ಚಿಕ್ಕಣ್ಣ ಸರದಿ.

ಹಾಸ್ಯನಟ ಚಿಕ್ಕಣ್ಣ ನಾಯಕ ನಟನಾಗಿ ಪರಿಚಯವಾಗುತ್ತಿದ್ದಾರೆ. ಇದುವರೆಗೂ ಸಹಕಲಾವಿದನಾಗಿ ರಂಜಿಸುತ್ತಿದ್ದ ಈ ಪ್ರತಿಭೆ ಈಗ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಹಾಗೇ ನೋಡಿದ್ರೆ ನಗೆ ನಟ ಚಿಕ್ಕಣ್ಣ ಈಗಾಗಲೇ ಹೀರೋ ಆಗಿ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. ಈ ಹಿಂದೆ ಸಾಕಷ್ಟು ಜನ ನಿರ್ಮಾಪಕ - ನಿರ್ದೇಶಕರು ಇವರನ್ನು ನಾಯಕನನ್ನಾಗಿ ಮಾಡಲು ಮುಂದೆ ಬಂದಿದ್ದರು. ಆದರೆ, ಚಿಕ್ಕಣ್ಣನೇ ಮನಸ್ಸು ಮಾಡಿರಲಿಲ್ಲ. ಕೊನೆಗೂ ಅವರು ಚಿತ್ರವೊಂದಕ್ಕೆ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಈ ಚಿತ್ರಕ್ಕೆ ಮಂಜು ಮಾಂಡವ್ಯ ನಿರ್ದೇಶನ ಮಾಡಲಿದ್ದು, ಉಮಾಪತಿ ಫಿಲ್ಮ್​ ಬ್ಯಾನರ್​​ನಡಿ ಈ ಸಿನಿಮಾ ರೆಡಿಯಾಗಲಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಮಂಜು ಮಾಂಡವ್ಯ. ಚಿಕ್ಕಣ್ಣ ಜತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಸ್ವತಃ ಮಂಜು ಮಾಂಡವ್ಯ ಅವರೇ ಖಚಿತಪಡಿಸಿದ್ದಾರೆ.

ಇನ್ನೂ ಹೆಸರಡಿದ ಈ ಚಿತ್ರ ಇದೇ ಅಕ್ಟೋಬರ್​ನಲ್ಲಿ ಸೆಟ್ಟೇರಲಿದೆ. ಸದ್ಯ ಚಿಕ್ಕಣ್ಣ ತಮ್ಮಇತರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಂಜು ಕೂಡ ತಮ್ಮ ಭರತ್ ಬಾಹುಬಲಿ ಚಿತ್ರದ ಬಿಡುಗಡೆಯಲ್ಲಿ ಗಮನ ಹರಿಸುತ್ತಿದ್ದಾರೆ. ಇತ್ತ ನಿರ್ಮಾಪಕ ಉಮಾಪತಿ ಕೂಡ ದರ್ಶನ್ ಅವರ ರಾಬರ್ಟ್​ ಮೂವಿಯಲ್ಲಿ ತೊಡಗಿಕೊಂಡಿದ್ದಾರೆ.

ಇನ್ನು ಕನ್ನಡದಲ್ಲಿ ಕಾಮಿಡಿ ಕಲಾವಿದರು ನಟರಾಗಿ ಬಡ್ತಿ ಪಡೆಯುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಶರಣ್​, ಕೋಮಲ್ ಅವರು ಹೀರೋಗಳಾಗಿದ್ದಾರೆ. ಈಗ ಚಿಕ್ಕಣ್ಣ ಸರದಿ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.