ETV Bharat / sitara

ಡಿ ಬಾಸ್ ಸಿನಿಮಾ ಹಾಡಿನ ಪದವೇ ಸಿನಿಮಾ ಟೈಟಲ್ ಆಯ್ತು..! - undefined

ಸಿನಿಮಾ ಹಾಡುಗಳ ಪದಗಳನ್ನು ಹೊಸ ಸಿನಿಮಾ ಟೈಟಲ್ ಆಗಿ ಬಳಸಿಕೊಳ್ಳುವುದು ಇತ್ತೀಚೆಗೆ ಟ್ರೆಂಡ್ ಆಗಿ ಹೋಗಿದೆ. 'ಯಾರೇ ಕೂಗಾಡಲಿ', 'ಜೊತೆ ಜೊತೆಯಲಿ', 'ಲೈಫು ಇಷ್ಟೇನೆ' ಹಾಗೂ ಇನ್ನಿತರ ಸಿನಿಮಾಗಳ ಹೆಸರೇ ಇದಕ್ಕೆ ಉದಾಹರಣೆ.

ದರ್ಶನ್
author img

By

Published : Jun 19, 2019, 3:23 PM IST

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದ ಸುಮಧುರ ಹಾಡು 'ಒಂದು ಮಳೆಬಿಲ್ಲು ಒಂದು ಮಳೆ ಮೋಡ' ಹಾಡಿನ ಸಾಲಿನಿಂದ 'ಮಳೆಬಿಲ್ಲು' ಎಂಬ ಸಿನಿಮಾ ತಯಾರಾಗಿದ್ದು ಶೀಘ್ರದಲ್ಲೇ ಬಿಡುಗಡೆ ಕೂಡಾ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ , ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಹಾಗೂ ಕಾರ್ಯದರ್ಶಿ ಭಾಮಾ ಹರೀಶ್ ಅಗಮಿಸಿ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಮಳೆಬಿಲ್ಲು' ಚಿತ್ರತಂಡ

ಅಂತರ್ಜಾಲದ ಮೂಲಕ ನಿರ್ದೇಶನ ಕಲಿತಿರುವ ನಾಗರಾಜ್ ಹಿರಿಯೂರು ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ, ಹಾಗೂ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಅಣ್ಣನ ಸಿನಿಮಾ ಕ್ರೇಜ್​​​​ಗೆ ತಮ್ಮನೇ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾರೆ. ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ನಿರ್ದೇಶಕ ನಾಗರಾಜ್ ಹೆಣ್ಣನ್ನು ಮಳೆಬಿಲ್ಲಿಗೆ ಹೋಲಿಸಿದ್ದಾರೆ. ಗಂಡಿನ ಜೀವನದಲ್ಲಿ ಹೆಣ್ಣು ಇಲ್ಲದಿದ್ದರೆ ಅವರ ಜೀವನ ಖಾಲಿಯಾಗಿರುತ್ತದೆ ಎಂದು ನಾಗರಾಜ್ ಹೇಳಿದ್ದಾರೆ.

ಇನ್ನು 'ಕ' ಚಿತ್ರದ ಶರತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಡಬಲ್ ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರ ಜೊತೆ ಡ್ಯೂಯೆಟ್ ಹಾಡಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಖ್ಯಾತಿಯ ಸಂಜನಾ ಆನಂದ್, ನಯನ ಹಾಗೂ ನವನಟಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು ಆರ್​​​​​.ಎಸ್​​. ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ನಾಗರಾಜ್ ಹಿರಿಯೂರು 'ಮಳೆಬಿಲ್ಲು' ಚಿತ್ರದ ಮೂಲಕ ಸ್ಯಾಂಡಲ್​ವುಡ್​​​​ನಲ್ಲಿ ಮತ್ತೊಂದು ಪ್ರೇಮಲೋಕ ಸೃಷ್ಟಿಸಲು ಹೊರಟಿದ್ದಾರೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದ ಸುಮಧುರ ಹಾಡು 'ಒಂದು ಮಳೆಬಿಲ್ಲು ಒಂದು ಮಳೆ ಮೋಡ' ಹಾಡಿನ ಸಾಲಿನಿಂದ 'ಮಳೆಬಿಲ್ಲು' ಎಂಬ ಸಿನಿಮಾ ತಯಾರಾಗಿದ್ದು ಶೀಘ್ರದಲ್ಲೇ ಬಿಡುಗಡೆ ಕೂಡಾ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಟ್ರೇಲರ್​​ ಬಿಡುಗಡೆ ಕಾರ್ಯಕ್ರಮಕ್ಕೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ , ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಹಾಗೂ ಕಾರ್ಯದರ್ಶಿ ಭಾಮಾ ಹರೀಶ್ ಅಗಮಿಸಿ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಮಳೆಬಿಲ್ಲು' ಚಿತ್ರತಂಡ

ಅಂತರ್ಜಾಲದ ಮೂಲಕ ನಿರ್ದೇಶನ ಕಲಿತಿರುವ ನಾಗರಾಜ್ ಹಿರಿಯೂರು ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ, ಹಾಗೂ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಅಣ್ಣನ ಸಿನಿಮಾ ಕ್ರೇಜ್​​​​ಗೆ ತಮ್ಮನೇ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾರೆ. ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ನಿರ್ದೇಶಕ ನಾಗರಾಜ್ ಹೆಣ್ಣನ್ನು ಮಳೆಬಿಲ್ಲಿಗೆ ಹೋಲಿಸಿದ್ದಾರೆ. ಗಂಡಿನ ಜೀವನದಲ್ಲಿ ಹೆಣ್ಣು ಇಲ್ಲದಿದ್ದರೆ ಅವರ ಜೀವನ ಖಾಲಿಯಾಗಿರುತ್ತದೆ ಎಂದು ನಾಗರಾಜ್ ಹೇಳಿದ್ದಾರೆ.

ಇನ್ನು 'ಕ' ಚಿತ್ರದ ಶರತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಡಬಲ್ ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರ ಜೊತೆ ಡ್ಯೂಯೆಟ್ ಹಾಡಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಖ್ಯಾತಿಯ ಸಂಜನಾ ಆನಂದ್, ನಯನ ಹಾಗೂ ನವನಟಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು ಆರ್​​​​​.ಎಸ್​​. ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ನಾಗರಾಜ್ ಹಿರಿಯೂರು 'ಮಳೆಬಿಲ್ಲು' ಚಿತ್ರದ ಮೂಲಕ ಸ್ಯಾಂಡಲ್​ವುಡ್​​​​ನಲ್ಲಿ ಮತ್ತೊಂದು ಪ್ರೇಮಲೋಕ ಸೃಷ್ಟಿಸಲು ಹೊರಟಿದ್ದಾರೆ.

Intro:ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಚಿತ್ರಗಳ ಟೈಟಲ್ ಬಗೆ ಹಿಟ್ ಸಾಂಗಿನ ಪದಗಳೇ ಸ್ಪೂರ್ತಿ. ಈಗ ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಸೂಪರ್ ಹಿಟ್ ಹಾಡದ ಒಂದು ಮಳೆಬಿಲ್ಲು ಒಂದು ಮಳೆ ಮೋಡ ಹಾಡಿ ಪದವಾದ "ಮಳೆ ಬಿಲ್ಲು" ಎಂಬ ಟೈಟಲ್ ಇಟ್ಟು ಚಂದನವನದಲ್ಲಿ ಚಿತ್ರವೊಂದು ರೆಡಿಯಾಗಿದೆ.ಅಲ್ಲದೆ ಸದ್ದಿಲ್ಲದೆ ಶೂಟಂಗ್ ಮುಗಿಸಿ ಇಂದು "ಮಳೆ ಬಿಲ್ಲು" ಚಿತ್ರತಂಡ ಚಿತ್ರದ ಟ್ರೈಲರ್ ಅನ್ನು ಲಾಂಚ್ ಮಾಡಿದೆ.ಇನ್ನೂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯ ಕ್ರಮಕ್ಕೆ.ಹಿರಿಯ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ಫಿಲ್ಮ್ ಚೇಂಬರ್ ನ‌ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕಾರ್ಯದರ್ಶಿ ಭಾಮಾ ಹರೀಶ್ ಅಗಮಿಸಿ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ರು.


Body:ಇನ್ನೂ " ಮಳೆ ಬಿಲ್ಲು " ಚಿತ್ರವನ್ನು ಗೂಗಲ್ ಮುಂಖಾಂತರ ಡೈರೆಕ್ಷನ್ ವಿದ್ಯೆಯ ಕಲಿತಿರುವ ನಾಗರಾಜ್ ಹಿರಿಯೂರು ಕಥೆ ಚಿತ್ರಕಥೆ, ಸಂಭಾಷಣೆ, ಹಾಗೂ ಸಾಹಿತ್ಯ ಬರೆಯುವುದರ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ.ಇನ್ನೂ ಅಣ್ಣನ ಸಿನಿಮಾ ಹುಚ್ಚಿಗೆ ತಮ್ಮನೆ ಹಣ ಹೂಡಿದ್ದಾರೆ.ಇನ್ನೂ ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ನಿರ್ದೇಶಕ ನಾಗರಾಜ್ ಹೆಣ್ಣನ್ನು ಮಳೆಬಿಲ್ಲಿಗೆ ಹೊಲಿಸಿದ್ದಾರೆ.ಗಂಡು ಮಕ್ಕಳ ಜೀವನ ಮಳೆಬಿಲ್ಲೆಂಬ ಹೆಣ್ಣು ಇಲ್ಲದಿದ್ದರೆ ನಮ್ಮ ಬದುಕು ಬ್ಲಾಕ್ ಅಂಡ್ ವೈಟ್ ವೈಟ್ ಆಗಿರುತ್ತದೆ.ಅದ್ರೆ ಹೆಣ್ಣೆಂಬ ಮಳೆಬಿಲ್ಲು ಜನಜೀವನಕ್ಕೆ ಎಂಟ್ರಿ ಕೊಟ್ರೆ ವರ್ಣರಂಜಿತ ವಾಗುತ್ತದೆ. ಅದೇ ಕನಸುಗಾರ ರವಿಚಂದ್ರನ್ ಅವರ ಕೈಗೆ ಹೂ ಸಿಕ್ಕಿದರೆ ಒಂದು ಪ್ರೇಮ ಲೋಕವನ್ನೇ ಸೃಷ್ಟಿಸುತ್ತಾರೆ.ಅದೇ ರೀತಿ ಮಾತುಗಾರ ನಿರ್ದೇಶಕ ಯೋಗರಾಜ್ ಭಟ್ ಅವರ ಬೊಗಸೆಲಿ ನೀರಿದ್ದರೆ ಮುಂಗಾರು ಮಳೆ . ಪ್ರೇಮಲೋಕ ಮುಂಗಾರುಮಳೆಯ ಸಮಾಗಮವೇ ಮಳೆಬಿಲ್ಲು ಎಂದು ಪೊಯೆಟಿಕ್ ಆಗಿ ನಿರ್ದೇಶಕ ನಾಗರಾಜ್ ಹಿರಿಯೂರು ಚಿತ್ರದ ಓನ್ಲೈನ್ ಹೇಳಿದರು. ಇನ್ನು ಚಿತ್ರದಲ್ಲಿ "ಕಾ" ಚಿತ್ರದಲ್ಲಿ ನಟಿಸಿದ್ದ ಶರತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಶರತ್ ಡಬಲ್ ಶೆಡ್ ನಲ್ಲಿ ಕಾಣಿಸಿದ್ದು.ಮೂರು ನಾಯಕಿಯರ ಜೊತೆ ಡುಯೆಟ್ ಹಾಡಿದ್ದಾರೆ. ಕೆಮಿಷ್ಟ್ರಿ ಆಫ್ ಕರಿಯಪ್ಪ ಖ್ಯಾತಿಯಸಂಜನಾ ಆನಂದ್ , ನಯನ ಹಾಗೂ ನವ ನಟಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಅಲ್ಲದೆ ಚಿತ್ರದಲ್ಲಿ ಬರೋಬರಿ ಹತ್ತು ಹಾಡುಗಳಿದ್ದು ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದು .ನಿರ್ದೇಶಕ ನಾಗರಾಜ್ ಹಿರಿಯೂರು " ಮಳೆ ಬಿಲ್ಲು " ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಪ್ರೇಮಲೋಕ ಸೃಷ್ಟಿಸಲು ಹೊರಟಿದ್ದಾರೆ...

ಸತೀಶ ಎಂಬಿ


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.