ಇಶಾ ಫೌಂಡೇಶನ್ ಅಧ್ಯಕ್ಷ ಸದ್ಗುರು ಜಗ್ಗಿ ವಾಸುದೇವ್ ಅವರು ಆಯೋಜಿಸಿರುವ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ನದಿಯನ್ನು ಉಳಿಸೋ ಸಲುವಾಗಿ ಹಸಿರು ಬೆಳೆಸೋ ಉದ್ದೇಶದಿಂದ ಆರಂಭವಾಗಿರೋ ಕಾವೇರಿ ಕೂಗು ಅಭಿಯಾನಕ್ಕೆ ಈಗಾಗಲೇ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್ ಸ್ಟಾರ್ ಗಳು ಸಾಥ್ ನೀಡುತ್ತಿದ್ದಾರೆ.
ಈಗಾಗಲೇ ಕಾವೇರಿ ಕೂಗು ಅಭಿಯಾನದ ಬೈಕ್ ರ್ಯಾಲಿ ಕರ್ನಾಟಕದಿಂದ ತಮಿಳುನಾಡಿಗೆ ಹೊರಟಾಗಿದೆ. ಕಾವೇರಿ ಕೂಗಿಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಕೈ ಜೋಡಿಸಿದ್ದಾರೆ.
ಕಾವೇರಿ ಉಳಿವಿಗೆ ಒಂದಾಗೋಣ ಬನ್ನಿ ಎಂದು ವಿಡಿಯೋ ಮೂಲಕ ಕರೆ ನೀಡಿದ್ದಾರೆ. ಅಲ್ಲದೆ ಸದ್ಗುರು ಜಗ್ಗಿ ವಾಸುದೇವ್ ಅವರು ಆರಂಭಿಸಿರೋ ಈ ಅಭಿಯಾನಕ್ಕೆ ಬೆಂಬಲ ನೀಡಿ ಹಾಗೂ ಎಲ್ಲರೂ ಸಹ ಗಿಡಗಳನ್ನು ನೆಟ್ಟು ಕಾವೇರಿ ನದಿಯನ್ನು ಕಾಪಾಡೋಣ. ಮುಂದಿನ ಪೀಳಿಗೆಯನ್ನು ರಕ್ಷಿಸೋಣ ಎಂದು ವಿಡಿಯೋ ಮೂಲಕ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನವಿ ಮಾಡಿದ್ದಾರೆ.