ETV Bharat / sitara

ಜಗ್ಗೇಶ್​​​ ಬೆಳೆಸಿದ ಮರಗಳಿಗೆ ಬಿತ್ತು ಕೊಡಲಿ ಪೆಟ್ಟು...!

ತಾವು ಬೆಳೆಸಿದ ಮರಗಳಿಗೆ ಕೊಡಲಿ ಏಟು ಹಾಕಿರುವ ಬೆಸ್ಕಾಂ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನವರಸ ನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : Jun 8, 2019, 1:02 PM IST

ಜಗ್ಗೇಶ್

ಜಗ್ಗೇಶ್​​, ಬೆಂಗಳೂರಿನ ನಮ್ಮ ಮನೆಯ ಸುತ್ತಮುತ್ತಲಿನ ರಸ್ತೆ ಬದಿ ಎಂಟು ವರ್ಷಗಳ ಹಿಂದೆ ಸಸಿ ನೆಟ್ಟಿದ್ದರು. ಈಗ ಮರಗಳಾಗಿ ಬೆಳೆದು, ನೆರಳಿನ ಆಶ್ರಯ ನೀಡುತ್ತಿವೆ. ಆದರೆ, ನಿನ್ನೆ ಕಾಮಗಾರಿಯ ಹೆಸರಿನಲ್ಲಿ ಬೆಸ್ಕಾಂನವರು ಈ ಮರಗಳ ರೆಂಬೆ, ಕೊಂಬೆಗಳನ್ನು ಕಡಿದು ಹಾಕಿದ್ದಾರೆ. ಇದು ಜಗ್ಗೇಶ್ ಅವರ ಆಕ್ರೋಶಕ್ಕೆ ಕಾರಣವಾಗಿದ್ದು,ರಾಜ್ಯ ಸರ್ಕಾರ, ಎಂಎಲ್​ಎ ಹಾಗೂ ಸಚಿವರ ವಿರುದ್ಧ ಟ್ವಿಟ್ಟರ್​ಲ್ಲಿ ಹರಿಹಾಯ್ದಿದ್ದಾರೆ.

jaggesh
ಜಗ್ಗೇಶ್​ ಬೆಳೆಸಿರುವ ಮರಗಳು

ತನ್ನ ಕೊಂಬೆಗಳನ್ನು ಕತ್ತರಿಸಿಕೊಂಡು ಬೋಳಾಗಿ ನಿಂತಿರುವ ಮರಗಳನ್ನು ನೋಡಿ ಮರುಗಿರುವ ಜಗ್ಗೇಶ್​, ಸರ್ಕಾರ, ಎಂಎಲ್​​ಎ ಹಾಗೂ ಸಚಿವರು ವಿಶ್ವ ಪರಿಸರ ದಿನದಂದು ಮಾತ್ರ ಲಕ್ಷಾಂತರ ಹಣ ಖರ್ಚು ಮಾಡಿ, ಬಿಲ್ಡಪ್​, ಪಬ್ಲಿಸಿಟಿ ಪಡೆಯುತ್ತಾರೆ. ನಾನು ಒಬ್ಬ ನಟನಾಗಿ ನನ್ನ ಯೋಗ್ಯತೆ, ಶಕ್ತಿ ಇದ್ದಷ್ಟು ಶ್ರಮಿಸಿ ಮರಗಳನ್ನು ಬೆಳೆಸಿದ್ದೇನೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳಲು ನಿಮಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

jaggesh
ಜಗ್ಗೇಶ್​ ಬೆಳೆಸಿರುವ ಮರಗಳು

ಜಗ್ಗೇಶ್​​, ಬೆಂಗಳೂರಿನ ನಮ್ಮ ಮನೆಯ ಸುತ್ತಮುತ್ತಲಿನ ರಸ್ತೆ ಬದಿ ಎಂಟು ವರ್ಷಗಳ ಹಿಂದೆ ಸಸಿ ನೆಟ್ಟಿದ್ದರು. ಈಗ ಮರಗಳಾಗಿ ಬೆಳೆದು, ನೆರಳಿನ ಆಶ್ರಯ ನೀಡುತ್ತಿವೆ. ಆದರೆ, ನಿನ್ನೆ ಕಾಮಗಾರಿಯ ಹೆಸರಿನಲ್ಲಿ ಬೆಸ್ಕಾಂನವರು ಈ ಮರಗಳ ರೆಂಬೆ, ಕೊಂಬೆಗಳನ್ನು ಕಡಿದು ಹಾಕಿದ್ದಾರೆ. ಇದು ಜಗ್ಗೇಶ್ ಅವರ ಆಕ್ರೋಶಕ್ಕೆ ಕಾರಣವಾಗಿದ್ದು,ರಾಜ್ಯ ಸರ್ಕಾರ, ಎಂಎಲ್​ಎ ಹಾಗೂ ಸಚಿವರ ವಿರುದ್ಧ ಟ್ವಿಟ್ಟರ್​ಲ್ಲಿ ಹರಿಹಾಯ್ದಿದ್ದಾರೆ.

jaggesh
ಜಗ್ಗೇಶ್​ ಬೆಳೆಸಿರುವ ಮರಗಳು

ತನ್ನ ಕೊಂಬೆಗಳನ್ನು ಕತ್ತರಿಸಿಕೊಂಡು ಬೋಳಾಗಿ ನಿಂತಿರುವ ಮರಗಳನ್ನು ನೋಡಿ ಮರುಗಿರುವ ಜಗ್ಗೇಶ್​, ಸರ್ಕಾರ, ಎಂಎಲ್​​ಎ ಹಾಗೂ ಸಚಿವರು ವಿಶ್ವ ಪರಿಸರ ದಿನದಂದು ಮಾತ್ರ ಲಕ್ಷಾಂತರ ಹಣ ಖರ್ಚು ಮಾಡಿ, ಬಿಲ್ಡಪ್​, ಪಬ್ಲಿಸಿಟಿ ಪಡೆಯುತ್ತಾರೆ. ನಾನು ಒಬ್ಬ ನಟನಾಗಿ ನನ್ನ ಯೋಗ್ಯತೆ, ಶಕ್ತಿ ಇದ್ದಷ್ಟು ಶ್ರಮಿಸಿ ಮರಗಳನ್ನು ಬೆಳೆಸಿದ್ದೇನೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳಲು ನಿಮಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

jaggesh
ಜಗ್ಗೇಶ್​ ಬೆಳೆಸಿರುವ ಮರಗಳು
Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.