ETV Bharat / jagte-raho

ಆನ್​ಲೈನ್ ದೋಖಾ.. ಹಣ ಕಳ್ಕೊಂಡವನಿಗೆ ತಪ್ಪಲಿಲ್ಲ ಅಲೆದಾಟ..

ಯುವಕನೊಬ್ಬನಿಗೆ ಯಾಮಾರಿಸಿ ಉಳಿತಾಯ ಖಾತೆಯಿಂದ ಬರೋಬ್ಬರಿ 42 ಸಾವಿರ ರೂ. ಖದೀಮರು ಎಗರಿಸಿದ ಘಟನೆ ನಗರದ ಕೊಟ್ಟೂರೇಶ್ವರ ಕ್ಯಾಂಪಿನಲ್ಲಿ ನಡೆದಿದೆ.

author img

By

Published : Dec 11, 2019, 6:10 PM IST

Online Dokha
ಯುವಕನ ಖಾತೆಯಿಂದ ಆಕ್ರಮ ಹಣ ವರ್ಗಾವಣೆ

ಗಂಗಾವತಿ: ಯುವಕನೊಬ್ಬನಿಗೆ ಯಾಮಾರಿಸಿ ಉಳಿತಾಯ ಖಾತೆಯಿಂದ ಬರೋಬ್ಬರಿ 42 ಸಾವಿರ ರೂ. ಖದೀಮರು ಎಗರಿಸಿದ ಘಟನೆ ನಗರದ ಕೊಟ್ಟೂರೇಶ್ವರ ಕ್ಯಾಂಪಿನಲ್ಲಿ ನಡೆದಿದೆ.

ಯುವಕನ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ..

ಕೊಟ್ಟೂರೇಶ್ವರ ಕ್ಯಾಂಪಿನ ನಿವಾಸಿ ಅಕ್ರಮ್ ಸಿರುಪುರ ಹಣ ಕಳೆದುಕೊಂಡ ವ್ಯಕ್ತಿ. ಇವರು ಗಂಗಾವತಿಯ ಎಸ್​ಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆದರೆ, ಯಾವುದೇ ಆನ್​ಲೈನ್ ಶಾಪಿಂಗ್, ವ್ಯವಹಾರ ಮಾಡದಿದ್ದರೂ ಈ ಯುವಕನ ಖಾತೆಯಲ್ಲಿದ್ದ 42,134 ರೂ. ಹಣ ಡ್ರಾ ಮಾಡಲಾಗಿದೆ. ಒಮ್ಮೆ ಹಣ ಡ್ರಾ ಆದ ಬಳಿಕ ಸಂದೇಶ ಬಂದಿದ್ದು, ಇದರಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಇದೆ.

ಈ ಕುರಿತಂತೆ ದೂರು ನೀಡಲು ಯುವಕ ತನ್ನ ಸ್ನೇಹಿತರೊಂದಿಗೆ ನಗರ ಠಾಣೆಗೆ ಹೋದಾಗ ಅಲ್ಲಿನ ಪೊಲೀಸರು ಇದು ನಮಗೆ ಸಂಬಂಧಿಸಿಲ್ಲ. ನೀವು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ಹೇಳಿ ಕಳಿಸಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಯುವಕ ಕೊಪ್ಪಳಕ್ಕೆ ಹೋಗಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ಮುಂದಾದಾಗ ಅಲ್ಲಿನ ಅಧಿಕಾರಿಗಳು ನೇರವಾಗಿ ದೂರು ದಾಖಲಿಸಲು ಆಗುವುದಿಲ್ಲ. ಒಮ್ಮೆ ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ದೂರು ನೀಡಿ ಎಂದು ಕಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿವೆ. ಎಲ್ಲಾ ಅಕೌಂಟ್​ಗಳಿಗೆ ಆಧಾರ್​ ಲಿಂಕ್ ಕಡ್ಡಾಯ ಎಂದು ಮಾಡಿದೆ. ಇದನ್ನೇ ವರದಾನವಾಗಿ ಬಳಿಸಿಕೊಳ್ಳುತ್ತಿರುವ ಖದೀಮರು ಅಕೌಂಟ್​ಗಳನ್ನು ಹ್ಯಾಕ್ ಮಾಡಿ, ಹಣ ಎಗರಿಸಲು ಸುಲಭವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಗಂಗಾವತಿ: ಯುವಕನೊಬ್ಬನಿಗೆ ಯಾಮಾರಿಸಿ ಉಳಿತಾಯ ಖಾತೆಯಿಂದ ಬರೋಬ್ಬರಿ 42 ಸಾವಿರ ರೂ. ಖದೀಮರು ಎಗರಿಸಿದ ಘಟನೆ ನಗರದ ಕೊಟ್ಟೂರೇಶ್ವರ ಕ್ಯಾಂಪಿನಲ್ಲಿ ನಡೆದಿದೆ.

ಯುವಕನ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ..

ಕೊಟ್ಟೂರೇಶ್ವರ ಕ್ಯಾಂಪಿನ ನಿವಾಸಿ ಅಕ್ರಮ್ ಸಿರುಪುರ ಹಣ ಕಳೆದುಕೊಂಡ ವ್ಯಕ್ತಿ. ಇವರು ಗಂಗಾವತಿಯ ಎಸ್​ಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆದರೆ, ಯಾವುದೇ ಆನ್​ಲೈನ್ ಶಾಪಿಂಗ್, ವ್ಯವಹಾರ ಮಾಡದಿದ್ದರೂ ಈ ಯುವಕನ ಖಾತೆಯಲ್ಲಿದ್ದ 42,134 ರೂ. ಹಣ ಡ್ರಾ ಮಾಡಲಾಗಿದೆ. ಒಮ್ಮೆ ಹಣ ಡ್ರಾ ಆದ ಬಳಿಕ ಸಂದೇಶ ಬಂದಿದ್ದು, ಇದರಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಇದೆ.

ಈ ಕುರಿತಂತೆ ದೂರು ನೀಡಲು ಯುವಕ ತನ್ನ ಸ್ನೇಹಿತರೊಂದಿಗೆ ನಗರ ಠಾಣೆಗೆ ಹೋದಾಗ ಅಲ್ಲಿನ ಪೊಲೀಸರು ಇದು ನಮಗೆ ಸಂಬಂಧಿಸಿಲ್ಲ. ನೀವು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ಹೇಳಿ ಕಳಿಸಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಯುವಕ ಕೊಪ್ಪಳಕ್ಕೆ ಹೋಗಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ಮುಂದಾದಾಗ ಅಲ್ಲಿನ ಅಧಿಕಾರಿಗಳು ನೇರವಾಗಿ ದೂರು ದಾಖಲಿಸಲು ಆಗುವುದಿಲ್ಲ. ಒಮ್ಮೆ ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ದೂರು ನೀಡಿ ಎಂದು ಕಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿವೆ. ಎಲ್ಲಾ ಅಕೌಂಟ್​ಗಳಿಗೆ ಆಧಾರ್​ ಲಿಂಕ್ ಕಡ್ಡಾಯ ಎಂದು ಮಾಡಿದೆ. ಇದನ್ನೇ ವರದಾನವಾಗಿ ಬಳಿಸಿಕೊಳ್ಳುತ್ತಿರುವ ಖದೀಮರು ಅಕೌಂಟ್​ಗಳನ್ನು ಹ್ಯಾಕ್ ಮಾಡಿ, ಹಣ ಎಗರಿಸಲು ಸುಲಭವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Intro:ಆ ಯುವಕ ತಾನಾಯ್ತು, ತನ್ನ ಕೆಲಸವಾಯ್ತು ಎಂದು ಕೊಂಡಿದ್ದವ. ಸಣ್ಣಾಪುಟ ಕೆಲಸ ಮಾಡಿಕೊಂಡು ಬಂದ ಹಣವನ್ನು ತನ್ನ ಉಳಿತಾಯ ಖಾತೆಯಲ್ಲಿ ಉಳಿಸಿಕೊಂಡಿದ್ದ ಆದರೆ ಆತನಿಗೆ ಗೊತ್ತಿಲ್ಲದಂತೆ ಯಾರೋ ಯಾಮಾರಿಸಿ ಕೇವಲ ಎರಡು ನಿಮಿಷದಲ್ಲಿ ಬರೋಬ್ಬರಿ 42 ಸಾವಿರ ರೂಪಾಯಿ ಎಗರಿಸಿದ್ದಾರೆ. ಹಣ ಕಳೆದುಕೊಂಡ ಯುವಕ ಏನೆಲ್ಲಾ ಹೈರಾಣಾಗಿದ್ದಾರೆ ಈ ಸ್ಟೋರಿ ನೋಡಿ.
Body:
ಪ್ಯಾಕೇಜಿಗೆ

ಆನ್ಲೈನ್ ದೋಖಾ: ಹಣ ಕಳೆದುಕೊಂಡವನಿಗೆ ತಪ್ಪಲಿಲ್ಲ ಅಲೆದಾಟ
ಗಂಗಾವತಿ:
ಆ ಯುವಕ ತಾನಾಯ್ತು, ತನ್ನ ಕೆಲಸವಾಯ್ತು ಎಂದು ಕೊಂಡಿದ್ದವ. ಸಣ್ಣಾಪುಟ ಕೆಲಸ ಮಾಡಿಕೊಂಡು ಬಂದ ಹಣವನ್ನು ತನ್ನ ಉಳಿತಾಯ ಖಾತೆಯಲ್ಲಿ ಉಳಿಸಿಕೊಂಡಿದ್ದ ಆದರೆ ಆತನಿಗೆ ಗೊತ್ತಿಲ್ಲದಂತೆ ಯಾರೋ ಯಾಮಾರಿಸಿ ಕೇವಲ ಎರಡು ನಿಮಿಷದಲ್ಲಿ ಬರೋಬ್ಬರಿ 42 ಸಾವಿರ ರೂಪಾಯಿ ಎಗರಿಸಿದ್ದಾರೆ. ಹಣ ಕಳೆದುಕೊಂಡ ಯುವಕ ಏನೆಲ್ಲಾ ಹೈರಾಣಾಗಿದ್ದಾರೆ ಈ ಸ್ಟೋರಿ ನೋಡಿ.

ವಾ.ಓ1:
ಗಂಗಾವತಿ ನಗರದ ಕೊಟ್ಟೂರೇಶ್ವರ ಕ್ಯಾಂಪಿನ ನಿವಾಸಿ ಅಕ್ರಮ್ ಸಿರುಪುರ ಗಂಗಾವತಿ ಎಸ್ಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಆದರೆ ಯಾವುದೇ ವ್ಯವಹಾರ ಆನ್ಲೈನ್ ಶಾಪಿಂಗ್ ಮೊದಲಾದ ಯಾವುದೇ ವಹಿವಾಟು ಮಾಡದಿದ್ದರೂ ಈ ಯುವಕ ಖಾತೆಯಲ್ಲಿದ್ದ ಹಣದ ಪೈಕಿ ಕೇವಲ ಒಂದು ನಿಮಿಷದ ಅಂತರದಲ್ಲಿ 42,134 ರೂಪಾಯಿ ಹಣ ಡ್ರಾ ಮಾಡಲಾಗಿದೆ. ಒಮ್ಮೆ ಹಣ ಡ್ರಾ ಆದ ಬಳಿಕ ಸಂದೇಶ ಬಂದಿದೆ. ಸಂದೇಶ ಏನು ಎಂದು ನೋಡುವ ಮುನ್ನವೆ ಕ್ಷಣಾರ್ಧರದಲ್ಲಿ ಮತ್ತೊಂದು ಮೆಸೆಜ್ ಬಂದಿದೆ. ಹೀಗೆ ಒಟ್ಟು ಮೂರು ಮೆಸೇಜ್ಗಳು, ಹಣ ಡ್ರಾ ಮಾಡಿದ್ದರ ಬಗ್ಗೆ ಮಾಹಿತಿ ನೀಡಿವೆ.
ಬೈಟ್..1: ಅಕ್ರಮ ಹಣ ಕಳೆದುಕೊಂಡ ಯುವಕ (ವೈಟ್ ಶಟರ್್ ಹಾಕಿರೋರು)

ವಾ.ಓ2: ಈ ಬಗ್ಗೆ ದೂರು ನೀಡಲು ಯುವಕ ತನ್ನ ಸ್ನೇಹಿತರೊಂದಿಗೆ ನಗರಠಾಣೆಗೆ ಹೋಗಿದ್ದಾರೆ. ಆದರೆ ಅಲ್ಲಿನ ಪೊಲೀಸರು, ಇದು ತಮಗೆ ಸಂಬಂಧಿಸಿದ್ದಲ್ಲ. ನೀವು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ಹೇಳಿ ಕಳಿಸಿದ್ದಾರೆ. ಪೊಲೀಸರ ಸೂಚನೆ ಮೆರೆಗೆ ಯುವಕ ಕೊಪ್ಪಳಕ್ಕೆ ಹೋಗಿದ್ದಾರೆ. ಕೊಪ್ಪಳದ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ಹೋದಾಗ ಅಲ್ಲಿನ ಅಧಿಕಾರಿಗಳು, ನೇರವಾಗಿ ದೂರು ದಾಖಲಿಸಲಾಗದು. ಒಮ್ಮೆ ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ದೂರು ನೀಡಿ ಎಂದು ಕಳಿಸಿದ್ದಾರೆ.

ಬೈಟ್..2: ರೋಹಿತ್, ಹಣ ಕಳೆದುಕೊಂಡವನ ಸ್ನೇಹಿತ (ರೆಡ್ ಶಟರ್್ ಹಾಕಿರೋ ವ್ಯಕ್ತಿ)

ವಾ.ಓ3: ಹಣ ಕಳೆದುಕೊಂಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಹಣ ಪಡೆದವರು ಯಾರು ಎಲ್ಲಿ ಎಂದು ಮೂಲ ಪತ್ತೆ ಹಚ್ಚಲು ಗಂಗಾವತಿ-ಕೊಪ್ಪಳದ ಪೊಲೀಸ್, ಸೈಬರ್ ಕ್ರೈಂ ಎಂದು ಅಲೆದಾಡಬೇಕಿರುವುದು ಯುವಕ ಅಕ್ರಮ್ನಿಗೆ ಬೇಸರ ತರಿಸಿದೆ. ಅಕ್ಷರಸ್ಥರು, ವ್ಯವಹಾರಿಕ ಜ್ಞಾನ ಇರುವ ನಮ್ಮಂಥವರಿಗೆ ಈ ರೀತಿಯಾದರೆ ಪಾಪ ಗ್ರಾಮೀಣ ಭಾಗದ ಅಮಾಯಕ ಜನರ ಪರಿಸ್ಥಿತಿ ಹೇಗಾಗಬಾರದು...? ಯಾರೇ ಹಣ ಕಳೆದುಕೊಂಡಿದ್ದರೂ ಒಂದು ಕೌಂಟರ್ನಲ್ಲಿ ದೂರು ಸ್ವೀಕರಿಸಿ, ಸಂಬಂಧಿತರಿಗೆ ರವಾನಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬುವುದು ಯುವಕರ ಒತ್ತಾಯ.

ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸಕರ್ಾರಗಳು ಸಾಕಷ್ಟು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿದೆ. ಎಲ್ಲಾ ಅಕೌಂಟ್ಗಳಿಗೆ ಆಧಾರ ಲಿಂಕ್ ಕಡ್ಡಾಯ, ಎಲ್ಲಾ ಸಕರ್ಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಹೀಗೆ ಎಲ್ಲೆಡೆ ಆಧಾರ್ ಲಿಂಕ್ ಮಾಡುತ್ತಿರುವುದರಿಂದ ಮಾಹಿತಿ ಸೋರಿಕೆಯಾಗುತ್ತಿದೆ. ಇದನ್ನೆ ವರದಾನವಾಗಿ ಬಳಿಸಿಕೊಳ್ಳುತ್ತಿರುವ ಖದೀಮರು, ಅಕೌಂಟ್ಗಳನ್ನು ಹ್ಯಾಕ್ ಮಾಡಿ ಹಣ ಎಗುರಿಸಲು ಸುಲಭವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Conclusion:ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸಕರ್ಾರಗಳು ಸಾಕಷ್ಟು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿದೆ. ಎಲ್ಲಾ ಅಕೌಂಟ್ಗಳಿಗೆ ಆಧಾರ ಲಿಂಕ್ ಕಡ್ಡಾಯ, ಎಲ್ಲಾ ಸಕರ್ಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಹೀಗೆ ಎಲ್ಲೆಡೆ ಆಧಾರ್ ಲಿಂಕ್ ಮಾಡುತ್ತಿರುವುದರಿಂದ ಮಾಹಿತಿ ಸೋರಿಕೆಯಾಗುತ್ತಿದೆ. ಇದನ್ನೆ ವರದಾನವಾಗಿ ಬಳಿಸಿಕೊಳ್ಳುತ್ತಿರುವ ಖದೀಮರು, ಅಕೌಂಟ್ಗಳನ್ನು ಹ್ಯಾಕ್ ಮಾಡಿ ಹಣ ಎಗುರಿಸಲು ಸುಲಭವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.