ಹೈದರಾಬಾದ್: ವ್ಯಕ್ತಿಯೋರ್ವನನ್ನು ತುಂಡು ತುಂಡಾಗಿ ಕತ್ತರಿಸಿ ಏಳು ಪ್ಲಾಸ್ಟಿಕ್ ಬಕೆಟ್ನಲ್ಲಿ ತುಂಬಿಸಿಟ್ಟಿದ್ದ ಘಟನೆ ತೆಲಂಗಾಣದ ಮಲ್ಕಜ್ಗಿರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿ ಬಕೆಟ್ಗಳಲ್ಲಿ ತುಂಬಿಸಿ ಪುತ್ರ ಕಿಶನ್ ಪರಾರಿಯಾಗಿದ್ದ. ಈ ಕೊಲೆ ಶುಕ್ರವಾರ ನಡೆದಿದ್ದು, ಘಟನೆ ಭಾನುವಾರದಂದು ಪೊಲೀಸರಿಗೆ ತಿಳಿದಿದೆ. ಕೊಲೆಯ ವಿಷಯವನ್ನು ಮುಚ್ಚಿಡುವಂತೆ ತನ್ನ ತಾಯಿ ಹಾಗೂ ಸಹೋದರಿಗೆ ಕಿಶನ್ ಬೆದರಿಕೆ ಹಾಕಿದ್ದ ಎನ್ನುವ ವಿಚಾರ ವಿಚಾರಣೆ ವೇಳೆ ಗೊತ್ತಾಗಿದೆ.
ನಿರುದ್ಯೋಗಿಯಾಗಿದ್ದ ಕಿಶನ್ ತನ್ನ 80 ವರ್ಷದ ತಂದೆಯನ್ನು ಹಣದ ವಿಚಾರಕ್ಕೆ ಕೊಲೆ ಮಾಡಿದ್ದು, ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಕಿಶನ್ ತಾಯಿ ಹಾಗೂ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.