ETV Bharat / jagte-raho

ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ಪತಿ ಅರೆಸ್ಟ್​: ವಿಡಿಯೋ ವೈರಲ್​

author img

By

Published : Sep 20, 2020, 1:31 AM IST

ಕಟ್ಟಿಕೊಂಡ ಪತ್ನಿಯನ್ನು ಗಂಡನೊಬ್ಬ ಮನೆಯೊಳಗೆ ಕುರ್ಚಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ಕೊಡುತ್ತಿದ್ದ ಪ್ರಕರಣದಡಿ ಆತನನ್ನು ಬಂಧಿಸಲಾಗಿದೆ. ಕನ್ಯಾಕುಮಾರಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು,ಈ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿದೆ.

Man arrested for tying up wife to chair and torturing Kanyakumari
ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ

ಕನ್ಯಾಕುಮಾರಿ: ಹೆಂಡತಿಯನ್ನು ಕುರ್ಚಿಗೆ ಕಟ್ಟಿಹಾಕಿ , ಬಾಯಿಗೆ ಬಟ್ಟೆ ತುರುಕಿ ಅಮಾನವೀಯ ರೀತಿಯಲ್ಲಿ ಹಿಂಸಿಸುತ್ತಿದ್ದ ಕ್ರೂರಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ

ಪೊಲೀಸ್​ ಮೂಲಗಳ ಪ್ರಕಾರ ಸುರೇಶ್ ರಾಜನ್ ತನ್ನ ಹೆಂಡತಿಯನ್ನು ಹೊರಗೆ ಬಿಡದೇ ಕುರ್ಚಿಗೆ ಕಟ್ಟಿಹಾಕಿ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯಿಂದ ಹೊರ ಬರುತ್ತಿದ್ದ ಆಕೆಯ ಅಳುವಿನ ಶಬ್ಧ ಕೇಳಿ ನೆರೆ ಹೊರೆ ಮನೆಯವರು ಧಾವಿಸಿದ್ದಾರೆ. ಆದರೆ ಮನೆ ಒಳಗಿನಿಂದ ಲಾಕ್​ ಆಗಿದ್ದ ಕಾರಣ ಒಳ ಹೋಗಲಾಗದೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಎಸ್​ಐ ಸುಜಿತ್​ ಆನಂದ್​ ಸ್ಥಳಕ್ಕೆ ಆಗಮಿಸಿದ್ದಾರೆ. ಬಾಗಿಲು ಒಳಗಿನಿಂದ ಲಾಕ್​ ಆಗಿದ್ದ ಕಾರಣ ಬಾಗಿಲು ಮುರಿದು ಒಳಹೋಗಿ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಮನೆಯ ಕದ ಮುರಿದು ಒಳಗೆ ಹೋಗುವುದು ಹಾಗೂ ಆರೋಪಿ ಸುರೇಶ್​ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಮನೆಯ ಹಾಲ್​ನಲ್ಲಿ ಆಕೆಯನ್ನು ಚೇರ್​ಗೆ ಕಟ್ಟಿ ಹಾಕಿರುವ ದೃಶ್ಯ ಕಂಡು ಬಂದಿದೆ, ಆಕೆಯ ಬಾಯಿಗೂ ಬಟ್ಟೆ ತುರುಕಲಾಗಿದೆ. ನಂತರ ಪೊಲೀಸರು ಆಕೆಗೆ ಕಟ್ಟಿದ್ದ ಬಟ್ಟೆಯ ಗಂಟನ್ನು ತೆಗೆದು ರಕ್ಷಿಸಿದ್ದಾರೆ. ಆರೋಪಿ ಪತಿ ಆಕೆಯ ಮೇಲೆ ಸೀಮೆಎಣ್ಣೆ ಕೂಡ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನ ಚಿತ್ರಹಿಂಸೆಯಿಂದ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸುರೇಶ್​ ರಾಜನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.307(Attempt to murder)ಅಡಿ ಆರೋಪಿ ವಿರುದ್ಧ ಕೇಸ್​ ದಾಖಲಿಸಲಾಗಿದೆ.

ಕನ್ಯಾಕುಮಾರಿ: ಹೆಂಡತಿಯನ್ನು ಕುರ್ಚಿಗೆ ಕಟ್ಟಿಹಾಕಿ , ಬಾಯಿಗೆ ಬಟ್ಟೆ ತುರುಕಿ ಅಮಾನವೀಯ ರೀತಿಯಲ್ಲಿ ಹಿಂಸಿಸುತ್ತಿದ್ದ ಕ್ರೂರಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ

ಪೊಲೀಸ್​ ಮೂಲಗಳ ಪ್ರಕಾರ ಸುರೇಶ್ ರಾಜನ್ ತನ್ನ ಹೆಂಡತಿಯನ್ನು ಹೊರಗೆ ಬಿಡದೇ ಕುರ್ಚಿಗೆ ಕಟ್ಟಿಹಾಕಿ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಮನೆಯಿಂದ ಹೊರ ಬರುತ್ತಿದ್ದ ಆಕೆಯ ಅಳುವಿನ ಶಬ್ಧ ಕೇಳಿ ನೆರೆ ಹೊರೆ ಮನೆಯವರು ಧಾವಿಸಿದ್ದಾರೆ. ಆದರೆ ಮನೆ ಒಳಗಿನಿಂದ ಲಾಕ್​ ಆಗಿದ್ದ ಕಾರಣ ಒಳ ಹೋಗಲಾಗದೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಎಸ್​ಐ ಸುಜಿತ್​ ಆನಂದ್​ ಸ್ಥಳಕ್ಕೆ ಆಗಮಿಸಿದ್ದಾರೆ. ಬಾಗಿಲು ಒಳಗಿನಿಂದ ಲಾಕ್​ ಆಗಿದ್ದ ಕಾರಣ ಬಾಗಿಲು ಮುರಿದು ಒಳಹೋಗಿ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಮನೆಯ ಕದ ಮುರಿದು ಒಳಗೆ ಹೋಗುವುದು ಹಾಗೂ ಆರೋಪಿ ಸುರೇಶ್​ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಮನೆಯ ಹಾಲ್​ನಲ್ಲಿ ಆಕೆಯನ್ನು ಚೇರ್​ಗೆ ಕಟ್ಟಿ ಹಾಕಿರುವ ದೃಶ್ಯ ಕಂಡು ಬಂದಿದೆ, ಆಕೆಯ ಬಾಯಿಗೂ ಬಟ್ಟೆ ತುರುಕಲಾಗಿದೆ. ನಂತರ ಪೊಲೀಸರು ಆಕೆಗೆ ಕಟ್ಟಿದ್ದ ಬಟ್ಟೆಯ ಗಂಟನ್ನು ತೆಗೆದು ರಕ್ಷಿಸಿದ್ದಾರೆ. ಆರೋಪಿ ಪತಿ ಆಕೆಯ ಮೇಲೆ ಸೀಮೆಎಣ್ಣೆ ಕೂಡ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನ ಚಿತ್ರಹಿಂಸೆಯಿಂದ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸುರೇಶ್​ ರಾಜನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.307(Attempt to murder)ಅಡಿ ಆರೋಪಿ ವಿರುದ್ಧ ಕೇಸ್​ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.