ETV Bharat / international

ಮುಗಿಯದ ಸುಡಾನ್ ಸಂಘರ್ಷ; ವೈಮಾನಿಕ, ಫಿರಂಗಿ ದಾಳಿಯಿಂದ ನಲುಗಿದ ರಾಜಧಾನಿ ಖಾರ್ಟೂಮ್

author img

By ETV Bharat Karnataka Team

Published : Sep 3, 2023, 12:44 PM IST

ಆಫ್ರಿಕಾ ಖಂಡದ ದೇಶ ಸುಡಾನ್​ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮುಂದುವರಿದಿದೆ. ವೈಮಾನಿಕ ಮತ್ತು ಫಿರಂಗಿ ದಾಳಿಗಳು ಇನ್ನಷ್ಟು ತೀವ್ರಗೊಂಡಿವೆ.

Sudanese army intensifies airstrikes
Sudanese army intensifies airstrikes

ಖಾರ್ಟೂಮ್ (ಸುಡಾನ್) : ಸುಡಾನ್ ರಾಜಧಾನಿ ಖಾರ್ಟೂಮ್​​ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮತ್ತಷ್ಟು ಭೀಕರಗೊಂಡಿದೆ. ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್​ಎಸ್​ಎಫ್​) ನೆಲೆಗಳ ಮೇಲೆ ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ತಮ್ಮ ವೈಮಾನಿಕ ಮತ್ತು ಫಿರಂಗಿ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸಿವೆ. ಖಾರ್ಟೂಮ್​​ನ ವಾಯುವ್ಯದಲ್ಲಿರುವ ಒಮ್ದುರ್​​ಮನ್ ಪ್ರದೇಶದಲ್ಲಿನ ಆರ್​ಎಸ್​ಎಫ್​ ನೆಲೆಗಳ ಮೇಲೆ ಎಸ್ಎಎಫ್ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂದು ಖಾರ್ಟೂಮ್​ನಲ್ಲಿನ ಮೂಲಗಳನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಮ್ದುರ್​​ಮನ್​ ನ ಪಶ್ಚಿಮದಲ್ಲಿರುವ ಒಂಬಡಾ ಮತ್ತು ದಾರ್ ಅಲ್ ಸಲಾಮ್ ನಂತಹ ನೆರೆಹೊರೆ ಪ್ರದೇಶಗಳು ಮತ್ತು ದಕ್ಷಿಣದಲ್ಲಿ ಅಲ್ ಸಲ್ಹಾ ನೆರೆಹೊರೆಯ ಪ್ರದೇಶಗಳ ಮೇಲೆ ತೀವ್ರ ದಾಳಿ ನಡೆಯುತ್ತಿವೆ.

ಖಾರ್ಟೂಮ್​ನ ಉತ್ತರದಲ್ಲಿರುವ ಬಹ್ರಿ ನಗರದ ಅಲ್-ಕದಾರೊ ಹೊರವಲಯದ ಆರ್​ಎಸ್​ಎಫ್​ ನೆಲೆಗಳ ಮೇಲೆ ಸೇನಾ ವಾಯುಪಡೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ದಕ್ಷಿಣ ಖಾರ್ಟೂಮ್ ತುರ್ತು ಸೇವಾ ಕೇಂದ್ರದ ವಕ್ತಾರ ಮೊಹಮ್ಮದ್ ಕಂದಾಶಾ ಶನಿವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಸೇನಾ ವಾಯುಪಡೆಯು ದಕ್ಷಿಣ ಖಾರ್ಟೂಮ್​ನ ಅಲ್-ಇಂಘಾಜ್, ಅಲ್-ಅಝಾರಿ ಮತ್ತು ಅಲ್-ಸಲಾಮಾ ಸುತ್ತಮುತ್ತಲೂ ಮೇಲೆ ತೀವ್ರ ಬಾಂಬ್ ದಾಳಿ ನಡೆಸಿದೆ ಎಂದು ವರದಿ ಮಾಡಿದ್ದಾರೆ.

"ದಕ್ಷಿಣ ಖಾರ್ಟೂಮ್ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಮುಂಜಾನೆಯಿಂದ ನಿರಂತರ ವಾಯು ಮತ್ತು ಫಿರಂಗಿ ಬಾಂಬ್ ದಾಳಿ ನಡೆಯುತ್ತಿವೆ" ಎಂದು ಕಂದಾಶಾ ಬರೆದಿದ್ದಾರೆ. ಅಲ್-ಅಝಾರಿ ಪ್ರದೆಶದ ಅಲ್-ರಾಜಿ ಆಸ್ಪತ್ರೆಯ ಬಳಿಯ ವಸತಿ ಮತ್ತು ವಾಣಿಜ್ಯ ಸ್ಥಳದ ಮೇಲೆ ನಡೆದ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಹತ್ತು ಜನ ಗಾಯಗೊಂಡಿದ್ದಾರೆ.

ಸುಡಾನ್​ನ ರಾಜಧಾನಿ ಖಾರ್ಟೂಮ್ ವಾಸ್ತವವಾಗಿ ಮೂರು ವಿಭಿನ್ನ ಭೌಗೋಳಿಕ ಪ್ರದೇಶಗಳನ್ನು ಒಟ್ಟುಗೂಡಿಸಿದ ಮಹಾನಗರವಾಗಿದೆ. ನಗರದ ಮಧ್ಯೆ ಹಾದು ಹೋಗುವ ನೀಲಿ ಮತ್ತು ಬಿಳಿ ನೈಲ್ ನದಿಗಳ ಸಂಗಮದಿಂದ ಖಾರ್ಟೂಮ್, ಒಮ್ದುರ್ಮನ್ ಮತ್ತು ಬಹ್ರಿ ಎಂಬ ಮೂರು ನಗರಗಳಾಗಿ ಖಾರ್ಟೂಮ್ ವಿಭಜಿಸಲ್ಪಟ್ಟಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಆರ್​ಎಸ್​ಎಫ್​ ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮೂರು ನಗರಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರ ಸಾವುನೋವುಗಳಿಗೆ ಕಾರಣವಾದ ಯುದ್ಧ ವಿಮಾನಗಳ ವಿವೇಚನಾರಹಿತ ವೈಮಾನಿಕ ಬಾಂಬ್ ದಾಳಿಯನ್ನು ಖಂಡಿಸುವುದಾಗಿ ಹೇಳಿದೆ. ಅಲ್-ಸಲ್ಹಾ, ಅಲ್-ಫೆತೈಹಾಬ್ ಮತ್ತು ಒಮ್ದುರ್​ಮನ್​ನ ಒಂಬಡಾ ಮತ್ತು ಪೂರ್ವ ನೈಲ್ ಪ್ರದೇಶ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭಾರಿ ಫಿರಂಗಿ ಶೆಲ್ ದಾಳಿ ಮುಂದುವರೆದಿದೆ ಎಂದು ಆರ್​ಎಸ್​ಎಫ್​ ವರದಿ ಮಾಡಿದೆ.

ಸುಡಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಏಪ್ರಿಲ್ 15 ರಿಂದ ಸುಡಾನ್ ಖಾರ್ಟೂಮ್ ಮತ್ತು ಇತರ ಪ್ರದೇಶಗಳಲ್ಲಿ ಎಸ್ಎಎಫ್ ಮತ್ತು ಆರ್​ಎಸ್​ಎಫ್ ನಡುವೆ ನಡೆಯುತ್ತಿರುವ ಮಾರಣಾಂತಿಕ ಸಶಸ್ತ್ರ ಸಂಘರ್ಷದಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 6,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ: ಪಾಕ್ ಚುನಾವಣಾ ಆಯೋಗ

ಖಾರ್ಟೂಮ್ (ಸುಡಾನ್) : ಸುಡಾನ್ ರಾಜಧಾನಿ ಖಾರ್ಟೂಮ್​​ನಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಮತ್ತಷ್ಟು ಭೀಕರಗೊಂಡಿದೆ. ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್​ಎಸ್​ಎಫ್​) ನೆಲೆಗಳ ಮೇಲೆ ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ತಮ್ಮ ವೈಮಾನಿಕ ಮತ್ತು ಫಿರಂಗಿ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸಿವೆ. ಖಾರ್ಟೂಮ್​​ನ ವಾಯುವ್ಯದಲ್ಲಿರುವ ಒಮ್ದುರ್​​ಮನ್ ಪ್ರದೇಶದಲ್ಲಿನ ಆರ್​ಎಸ್​ಎಫ್​ ನೆಲೆಗಳ ಮೇಲೆ ಎಸ್ಎಎಫ್ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂದು ಖಾರ್ಟೂಮ್​ನಲ್ಲಿನ ಮೂಲಗಳನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಮ್ದುರ್​​ಮನ್​ ನ ಪಶ್ಚಿಮದಲ್ಲಿರುವ ಒಂಬಡಾ ಮತ್ತು ದಾರ್ ಅಲ್ ಸಲಾಮ್ ನಂತಹ ನೆರೆಹೊರೆ ಪ್ರದೇಶಗಳು ಮತ್ತು ದಕ್ಷಿಣದಲ್ಲಿ ಅಲ್ ಸಲ್ಹಾ ನೆರೆಹೊರೆಯ ಪ್ರದೇಶಗಳ ಮೇಲೆ ತೀವ್ರ ದಾಳಿ ನಡೆಯುತ್ತಿವೆ.

ಖಾರ್ಟೂಮ್​ನ ಉತ್ತರದಲ್ಲಿರುವ ಬಹ್ರಿ ನಗರದ ಅಲ್-ಕದಾರೊ ಹೊರವಲಯದ ಆರ್​ಎಸ್​ಎಫ್​ ನೆಲೆಗಳ ಮೇಲೆ ಸೇನಾ ವಾಯುಪಡೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ದಕ್ಷಿಣ ಖಾರ್ಟೂಮ್ ತುರ್ತು ಸೇವಾ ಕೇಂದ್ರದ ವಕ್ತಾರ ಮೊಹಮ್ಮದ್ ಕಂದಾಶಾ ಶನಿವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಸೇನಾ ವಾಯುಪಡೆಯು ದಕ್ಷಿಣ ಖಾರ್ಟೂಮ್​ನ ಅಲ್-ಇಂಘಾಜ್, ಅಲ್-ಅಝಾರಿ ಮತ್ತು ಅಲ್-ಸಲಾಮಾ ಸುತ್ತಮುತ್ತಲೂ ಮೇಲೆ ತೀವ್ರ ಬಾಂಬ್ ದಾಳಿ ನಡೆಸಿದೆ ಎಂದು ವರದಿ ಮಾಡಿದ್ದಾರೆ.

"ದಕ್ಷಿಣ ಖಾರ್ಟೂಮ್ ಸುತ್ತಮುತ್ತಲಿನ ಪ್ರದೆಶಗಳಲ್ಲಿ ಮುಂಜಾನೆಯಿಂದ ನಿರಂತರ ವಾಯು ಮತ್ತು ಫಿರಂಗಿ ಬಾಂಬ್ ದಾಳಿ ನಡೆಯುತ್ತಿವೆ" ಎಂದು ಕಂದಾಶಾ ಬರೆದಿದ್ದಾರೆ. ಅಲ್-ಅಝಾರಿ ಪ್ರದೆಶದ ಅಲ್-ರಾಜಿ ಆಸ್ಪತ್ರೆಯ ಬಳಿಯ ವಸತಿ ಮತ್ತು ವಾಣಿಜ್ಯ ಸ್ಥಳದ ಮೇಲೆ ನಡೆದ ದಾಳಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ಹತ್ತು ಜನ ಗಾಯಗೊಂಡಿದ್ದಾರೆ.

ಸುಡಾನ್​ನ ರಾಜಧಾನಿ ಖಾರ್ಟೂಮ್ ವಾಸ್ತವವಾಗಿ ಮೂರು ವಿಭಿನ್ನ ಭೌಗೋಳಿಕ ಪ್ರದೇಶಗಳನ್ನು ಒಟ್ಟುಗೂಡಿಸಿದ ಮಹಾನಗರವಾಗಿದೆ. ನಗರದ ಮಧ್ಯೆ ಹಾದು ಹೋಗುವ ನೀಲಿ ಮತ್ತು ಬಿಳಿ ನೈಲ್ ನದಿಗಳ ಸಂಗಮದಿಂದ ಖಾರ್ಟೂಮ್, ಒಮ್ದುರ್ಮನ್ ಮತ್ತು ಬಹ್ರಿ ಎಂಬ ಮೂರು ನಗರಗಳಾಗಿ ಖಾರ್ಟೂಮ್ ವಿಭಜಿಸಲ್ಪಟ್ಟಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಆರ್​ಎಸ್​ಎಫ್​ ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮೂರು ನಗರಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರ ಸಾವುನೋವುಗಳಿಗೆ ಕಾರಣವಾದ ಯುದ್ಧ ವಿಮಾನಗಳ ವಿವೇಚನಾರಹಿತ ವೈಮಾನಿಕ ಬಾಂಬ್ ದಾಳಿಯನ್ನು ಖಂಡಿಸುವುದಾಗಿ ಹೇಳಿದೆ. ಅಲ್-ಸಲ್ಹಾ, ಅಲ್-ಫೆತೈಹಾಬ್ ಮತ್ತು ಒಮ್ದುರ್​ಮನ್​ನ ಒಂಬಡಾ ಮತ್ತು ಪೂರ್ವ ನೈಲ್ ಪ್ರದೇಶ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಭಾರಿ ಫಿರಂಗಿ ಶೆಲ್ ದಾಳಿ ಮುಂದುವರೆದಿದೆ ಎಂದು ಆರ್​ಎಸ್​ಎಫ್​ ವರದಿ ಮಾಡಿದೆ.

ಸುಡಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಏಪ್ರಿಲ್ 15 ರಿಂದ ಸುಡಾನ್ ಖಾರ್ಟೂಮ್ ಮತ್ತು ಇತರ ಪ್ರದೇಶಗಳಲ್ಲಿ ಎಸ್ಎಎಫ್ ಮತ್ತು ಆರ್​ಎಸ್​ಎಫ್ ನಡುವೆ ನಡೆಯುತ್ತಿರುವ ಮಾರಣಾಂತಿಕ ಸಶಸ್ತ್ರ ಸಂಘರ್ಷದಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 6,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ: ಪಾಕ್ ಚುನಾವಣಾ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.